Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಸ್ಟರ್​ ಆನಂದ್​ ಮಗಳು ವಂಶಿಕಾ ಭರ್ಜರಿ ಶಾಪಿಂಗ್​; ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕ ಸೃಜನ್​ ಲೋಕೇಶ್​

‘ನನ್ನಮ್ಮ ಸೂಪರ್​ ಸ್ಟಾರ್’ ರಿಯಾಲಿಟಿ ಶೋ ಈ ವಾರ ತುಂಬಾನೇ ವಿಶೇಷವಾಗಿರಲಿದೆ. ಅಮ್ಮನಿಗೋಸ್ಕರ ಮಕ್ಕಳು ​ಗಿಫ್ಟ್​ ಕೊಡಬೇಕು. ಅದೂ ಅಮ್ಮನ ಸಹಾಯ ಇಲ್ಲದೆ. ವಂಶಿಕಾ ಕೂಡ ತನ್ನ ಅಮ್ಮನಿಗೆ ಗಿಫ್ಟ್​ ತರೋಕೆ ಶಾಪಿಂಗ್​ಗೆ ತೆರಳಿದ್ದಾಳೆ. ಈ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ.

ಮಾಸ್ಟರ್​ ಆನಂದ್​ ಮಗಳು ವಂಶಿಕಾ ಭರ್ಜರಿ ಶಾಪಿಂಗ್​; ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕ ಸೃಜನ್​ ಲೋಕೇಶ್​
ಸೃಜನ್​ ಲೋಕೇಶ್​-ವಂಶಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 05, 2022 | 2:37 PM

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನನ್ನಮ್ಮ ಸೂಪರ್​ ಸ್ಟಾರ್​’ (Nannamma Super Star) ಕಾರ್ಯಕ್ರಮ ಕಿರುತೆರೆ ವೀಕ್ಷಕರಿಗೆ ಇಷ್ಟವಾಗಿದೆ. ಪ್ರತಿ ಬಾರಿ ನೀಡುವ ನಾನಾ ಟಾಸ್ಕ್​ಗಳು ಗಮನ ಸೆಳೆಯುತ್ತಿವೆ. ಅದರಲ್ಲೂ ಸೆಲೆಬ್ರಿಟಿ ಮಕ್ಕಳು ಮಾಡುವ ಕೀಟಲೆಗಳು ಒಂದೆರಡಲ್ಲ. ಅವರಾಡುವ ಚೂಟಿ ಮಾತುಗಳು ವೀಕ್ಷಕರಿಗೆ ಇಷ್ಟವಾಗುತ್ತಿದೆ. ‘ನನ್ನಮ್ಮ ಸೂಪರ್​ ಸ್ಟಾರ್ ​’ ಪ್ರಸಾರ ಆರಂಭ ಆದಾಗಿನಿಂದ ನಟ-ನಿರೂಪಕ ಮಾಸ್ಟರ್​ ಆನಂದ್​ ಅವರ ಪುತ್ರಿ ವಂಶಿಕಾ (Vanshika) ಸಿಕ್ಕಾಪಟ್ಟೆ ಮಿಂಚುತ್ತಿದ್ದಾಳೆ. ಈ ಪುಟಾಣಿಯ ಮಾತುಗಳನ್ನು ಕೇಳಿ ಬೆರಗಾಗದವರೇ ಇಲ್ಲ. ಇಷ್ಟು ದೊಡ್ಡ ವೇದಿಕೆ ಏರಿದಾಗ ಯಾರಿಗಾದರೂ ಸ್ವಲ್ಪವಾದರೂ ಭಯವಾಗುತ್ತದೆ. ಆದರೆ, ವಂಶಿಕಾ ಆ ರೀತಿ ಭಯಪಟ್ಟುಕೊಂಡಿಲ್ಲ. ಅನುಭವಿ ಮಾತುಗಾರರಂತೆ ಮಾತನಾಡುತ್ತಲೇ ಇರುತ್ತಾಳೆ. ಈ ಬಾರಿ ಅವಳು ಅಮ್ಮನಿಗಾಗಿ ಶಾಪಿಂಗ್​ಗೆ ತೆರಳಿದ್ದಾಳೆ. ಆದರೆ, ಅಲ್ಲಿ ಆಕೆ ಖರೀದಿ ಮಾಡಿದ್ದು ಅಮ್ಮನಿಗಾಗಿ ಅಲ್ಲ! ಎಲ್ಲವೂ ತನಗಾಗಿ.

‘ನನ್ನಮ್ಮ ಸೂಪರ್​ ಸ್ಟಾರ್’ ರಿಯಾಲಿಟಿ ಶೋ ಈ ವಾರ ತುಂಬಾನೇ ವಿಶೇಷವಾಗಿರಲಿದೆ. ಅಮ್ಮನಿಗೋಸ್ಕರ ಮಕ್ಕಳು ​ಗಿಫ್ಟ್​ ಕೊಡಬೇಕು. ಅದೂ ಅಮ್ಮನ ಸಹಾಯ ಇಲ್ಲದೆ. ವಂಶಿಕಾ ಕೂಡ ತನ್ನ ಅಮ್ಮನಿಗೆ ಗಿಫ್ಟ್​ ತರೋಕೆ ಶಾಪಿಂಗ್​ಗೆ ತೆರಳಿದ್ದಾಳೆ. ಈ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ. ‘ಒಂದೇ ದಿನದಲ್ಲಿ ಶಾಪಿಂಗ್ ಲೋಕದ ರಾಣಿಯಾದ ವಂಶಿಕಾ’ ಎನ್ನುವ ಕ್ಯಾಪ್ಶನೊಂದಿಗೆ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಸದ್ಯ, ಈ ವಿಡಿಯೋವನ್ನು ವೀಕ್ಷಕರು ಸಾಕಷ್ಟು ಇಷ್ಟಪಟ್ಟಿದ್ದಾರೆ. ವಂಶಿಕಾ ನಡೆದುಕೊಂಡ ರೀತಿಗೆ ಎಲ್ಲರೂ ಬಿದ್ದುಬಿದ್ದು ನಕ್ಕಿದ್ದಾರೆ.

‘ಗಿಫ್ಟ್​ ತೆಗೆದುಕೊಂಡು ಬನ್ನಿ ಅಂತ ಕಳಿಸಿದ್ರೆ ಒಂದು ಟೂರ್​ ಮಾಡಿಕೊಂಡು ಬಂದಿದ್ದಾಳೆ ವಂಶಿಕಾ. ನಮಗೆ ಇವಳ ಗಿಫ್ಟ್​ ಮ್ಯಾಟರ್​ ಆಗಲೇ ಇಲ್ಲ. ಅವಳು ಟೂರ್​ಗೆ ಹೋಗಿರೋದು ಒಂದು ವಿಟಿ ಇದೆ’ ಎಂದರು ನಿರೂಪಕಿ ಅನುಪಮಾ ಗೌಡ. ಆ ಬಳಿಕ ಅವಳ ಶಾಪಿಂಗ್​ ವಿಡಿಯೋ ತೋರಿಸಲಾಯಿತು. ವಿಡಿಯೋ ಆರಂಭದಲ್ಲಿ ಮಾತನಾಡಿರುವ ವಂಶಿಕಾ, ‘ಹಾಯ್​, ಎವರಿಒನ್​. ನಾನು ಇವತ್ತು ಶಾಪಿಂಗ್​ ಮಾಡೋಕೆ ಬಂದಿದ್ದೇನೆ. ಅದು ನಂಗಲ್ಲ, ನಮ್ಮ ಅಮ್ಮನಿಗೆ. ಬನ್ನಿ ಏನೇನಿದೆ ನೋಡೋಣ’ ಎಂದು ಶಾಪಿಂಗ್​ ಕಾಂಪ್ಲೆಕ್ಸ್​ಗೆ ಎಂಟ್ರಿ ಪಡೆದಳು.

ಶಾಪಿಂಗ್​ ಕಾಂಪ್ಲೆಕ್ಸ್​ನಲ್ಲಿ ವಂಶಿಕಾ ಸಖತ್​ ಸುತ್ತಾಟ ನಡೆಸಿದ್ದಾಳೆ. ಆದರೆ, ಎಲ್ಲಿಯೂ ಅವಳ ಅಮ್ಮನಿಗೆ ಗಿಫ್ಟ್​ ಕೊಡುವ ಯಾವ ವಸ್ತುವೂ ಸಿಕ್ಕಿಲ್ಲ. ಈ ಕಾರಣಕ್ಕೆ ವಂಶಿಕಾ ತನಗಾಗಿ ಎಲ್ಲವನ್ನೂ ಕೊಂಡುಕೊಳ್ಳೋಕೆ ಶುರುಹಚ್ಚಿಕೊಂಡಳು. ಕೊನೆಯಲ್ಲಿ ವಂಶಿಕಾ ತನಗಾಗಿ ಖರೀದಿಸಿದ್ದೇ ಹೆಚ್ಚು.

‘ಕ್ಯಾಮೆರಾಮೆನ್​ಗೆ, ವಿಡಿಯೋ ಎಡಿಟ್​ ಮಾಡಿದವರಿಗೆ, ಇಲ್ಲಿದ್ದವರಿಗೆ ಎಲ್ಲರಿಗೂ ಡೌಟ್​ ಆಯ್ತು. ನೀನು ಅಮ್ಮನಿಗೆ ಗಿಫ್ಟ್​ ತರೋಕೆ ಹೋಗಿದ್ಯಾ ಅಥವಾ ನಿಂಗೆ ಗಿಫ್ಟ್​ ತರೋಕೆ ಹೋಗಿದ್ಯಾ?’ ಎಂದು ವೇದಿಕೆ ಮೇಲೆ ವಂಶಿಕಾಳನ್ನು ಪ್ರಶ್ನಿಸಿದರು ಅನುಪಮಾ ಗೌಡ. ‘ನನಗೆ ಗಿಫ್ಟ್​ ತರೋಕೆ ಹೋಗಿದ್ದೆ’ ಎಂದಳು ವಂಶಿಕಾ. ಇದನ್ನು ಕೇಳಿ ಸೃಜನ್​ ಕೂಡ ನಕ್ಕರು. ಅಲ್ಲದೆ, ಅವರು ಪಂಚಿಂಗ್​ ಡೈಲಾಗ್​ ಕೂಡ ಹೊಡೆದರು.

ಇದನ್ನೂ ಓದಿ: ‘ಬನ್ನಿ.. ಎಲ್ಲರೂ ನಮ್ ಅಣ್ಣನ ಸಿನಿಮಾ ನೋಡೋಣ’; ಮಾಸ್ಟರ್​ ಆನಂದ್​ ಮಗಳ ಪ್ರೀತಿಯ ಆಹ್ವಾನ

ನಿವೇದಿತಾ ಗೌಡ ಅವರನ್ನೇ ಮಣಿಸಿದ ಮಾತಿನ ಮಲ್ಲಿ ವಂಶಿಕಾ; ಮಾಸ್ಟರ್​ ಆನಂದ್​ ಪುತ್ರಿಯ ಮಸ್ತ್​ ಮಾತುಕತೆ

ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!