AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇಂಥ ಅಭಿಮಾನಿ ಪಡೆಯಲು ಪುಣ್ಯ ಮಾಡಿರಬೇಕು’: ಕಾಫಿ ನಾಡು ಚಂದು ಬಗ್ಗೆ ಶಿವಣ್ಣನ ಮಾತು

Shivarajkumar | Coffee Nadu Chandu: ಶಿವರಾಜ್​ಕುಮಾರ್​ ಅವರನ್ನು ಭೇಟಿ ಮಾಡಬೇಕು ಎಂದು ಕಾಫಿ ನಾಡು ಚಂದು ಎಲ್ಲಿಲ್ಲದ ಸರ್ಕಸ್​ ಮಾಡಿದ್ದರು. ಕಡೆಗೂ ಜೀ ಕನ್ನಡ ವೇದಿಕೆ ಮೂಲಕ ಅವರ ಆಸೆ ಈಡೇರಿದೆ.

‘ಇಂಥ ಅಭಿಮಾನಿ ಪಡೆಯಲು ಪುಣ್ಯ ಮಾಡಿರಬೇಕು’: ಕಾಫಿ ನಾಡು ಚಂದು ಬಗ್ಗೆ ಶಿವಣ್ಣನ ಮಾತು
ಕಾಫಿ ನಾಡು ಚಂದು, ಶಿವರಾಜ್​ಕುಮಾರ್​
TV9 Web
| Updated By: ಮದನ್​ ಕುಮಾರ್​|

Updated on: Aug 26, 2022 | 7:42 AM

Share

ಡಿಫರೆಂಟ್​ ರೀಲ್ಸ್​ ಮೂಲಕ ಸೆನ್ಸೇಷನ್​ ಸೃಷ್ಟಿ ಮಾಡಿರುವ ಕಾಫಿ ನಾಡು ಚಂದು (Coffee Nadu Chandu) ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಫೇಮಸ್​ ಆಗಿದ್ದಾರೆ. ಅನೇಕರ ಜನ್ಮದಿನಕ್ಕೆ ಅವರು ವಿಶ್​ ಮಾಡುವ ಶೈಲಿಯೇ ಟ್ರೆಂಡ್​ ಆಗಿದೆ. ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಲಕ್ಷಾಂತರ ಮಂದಿ ಕಾಫಿ ನಾಡು ಚಂದು ಸ್ಟೈಲ್​ ಕಾಪಿ ಮಾಡಿದ್ದಾರೆ. ಇಷ್ಟೆಲ್ಲ ಫೇಮಸ್​ ಆಗಿರುವ ಅವರಿಗೆ ಒಂದು ದೊಡ್ಡ ಆಸೆ ಇತ್ತು. ಶಿವರಾಜ್​ಕುಮಾರ್ (Shivarajkumar)​ ಅವರನ್ನು ಭೇಟಿ ಮಾಡಬೇಕು ಎಂದು ಚಂದು ಹಲವು ದಿನಗಳಿಂದ ಹಂಬಲಿಸುತ್ತಿದ್ದರು. ಈಗ ಆ ಕಾಲ ಕೂಡಿಬಂದಿದೆ. ಜೀ ಕನ್ನಡದ ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ (Dance Karnataka Dance) ವೇದಿಕೆ ಮೇಲೆ ಚಂದು ಅವರನ್ನು ಶಿವಣ್ಣ ಭೇಟಿ ಆಗಿದ್ದಾರೆ. ಅಷ್ಟೇ ಅಲ್ಲದೇ, ‘ಇಂಥ ಅಭಿಯಾನಿಯನ್ನು ಪಡೆಯೋಕೆ ಬಹಳ ಪುಣ್ಯ ಮಾಡಿರಬೇಕು’ ಎಂದು ‘ಹ್ಯಾಟ್ರಿಕ್​ ಹೀರೋ’ ಹೇಳಿದ್ದಾರೆ.

ಕಾಫಿ ನಾಡು ಚಂದು ನೀಡಿದ ಸಡನ್​ ಎಂಟ್ರಿ ನೋಡಿ ಕಾರ್ಯಕ್ರಮದ ಜಡ್ಜ್​ ಆದ ರಕ್ಷಿತಾ ಪ್ರೇಮ್​ ಅವರಿಗೆ ಅಚ್ಚರಿ ಆಗಿದೆ. ಇದೇ ಭಾನುವಾರ ಸಂಜೆ 7 ಗಂಟೆಗೆ ಈ ಎಪಿಸೋಡ್​ ಪ್ರಸಾರ ಆಗಲಿದೆ. ಅದರ ಪ್ರೋಮೋವನ್ನು ಕಾಫಿ ನಾಡು ಚಂದು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೇದಿಕೆ ಮೇಲೆ ಚಂದು ಬಗ್ಗೆ ಶಿವಣ್ಣ ಮನಸಾರೆ ಮಾತನಾಡಿದ್ದಾರೆ. ಅಲ್ಲದೇ ಅವರನ್ನು ತಬ್ಬಿಕೊಂಡು ಆತ್ಮೀಯತೆ ತೋರಿದ್ದಾರೆ. ನೆಚ್ಚಿನ ನಟನ ಜೊತೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಚಂದು ಖುಷಿಪಟ್ಟಿದ್ದಾರೆ.

ಇದನ್ನೂ ಓದಿ
Image
Coffee Nadu Chandu: ಈಡೇರಿತು ಕಾಫಿ ನಾಡು ಚಂದು ಆಸೆ; ಶಿವಣ್ಣನ ಭೇಟಿ ಮಾಡಿದ ವೈರಲ್​ ಸ್ಟಾರ್​ಗೆ ಅನುಶ್ರೀ ಸಾಥ್​
Image
‘ಕಾಫಿ ನಾಡು ಚಂದು ಬಿಗ್ ಬಾಸ್‌ಗೆ ಹೋಗಬೇಕು’ ಅಭಿಯಾನ ಶುರು; ಸ್ವತಃ ಬೆಂಬಲ ನೀಡಿದ ವೈರಲ್ ಸಿಂಗರ್!
Image
Coffee Nadu Chandu: ‘ಅನುಶ್ರೀ ಅಕ್ಕ.. ಅನುಶ್ರೀ ಅಕ್ಕ’ ಅಂತ ವಿಶೇಷ ಬೇಡಿಕೆ ಇಟ್ಟ ಕಾಫಿ ನಾಡು ಚಂದು; ಇದನ್ನು ಶಿವಣ್ಣ ಈಡೇರಿಸ್ತಾರಾ?
Image
Coffee Nadu Chandu: ‘ಕಾಫಿ ನಾಡು ಚಂದು ಬಿಗ್​ ಬಾಸ್​ಗೆ ಬರಲಿ’: ಪರಮೇಶ್ವರ್​ ಗುಂಡ್ಕಲ್​ ಬಳಿ ಬೇಡಿಕೆ ಇಟ್ಟ ಫ್ಯಾನ್ಸ್​

ಶಿವರಾಜ್​ಕುಮಾರ್​ ಅವರನ್ನು ಭೇಟಿ ಮಾಡಬೇಕು ಎಂದು ಚಂದು ಅವರು ಎಲ್ಲಿಲ್ಲದ ಸರ್ಕಸ್​ ಮಾಡಿದ್ದರು. ಅನೇಕ ಮಕ್ಕಳಿಂದ ಆ ಬಗ್ಗೆ ಸಾಂಗ್​ ಮಾಡಿಸಿ ಪೋಸ್ಟ್​ ಮಾಡಿದ್ದರು. ಒಂದು ರೀಲ್ಸ್​ ಮೂಲಕ ನಿರೂಪಕಿ ಅನುಶ್ರೀ ಬಳಿಯೂ ರಿಕ್ವೆಸ್ಟ್​ ಮಾಡಿಕೊಂಡಿದ್ದರು. ಕಡೆಗೂ ಅವರ ಆಸೆ ಈಡೇರಿದೆ. ‘ಚಂದು ಅವರ ತಪ್ಪಸ್ಸಿಗೆ ವರ ಸಿಕ್ಕಿತು’ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ‘ಜೀ ಕನ್ನಡದ ವೇದಿಕೆವರೆಗೆ ಬಂದಾಯಿತು. ಇನ್ನೇನಿದ್ದರೂ ಸಿನಿಮಾದಲ್ಲಿ ನಟಿಸೋದು ಮಾತ್ರ ಬಾಕಿ’ ಎಂದು ಚಂದು ಫಾಲೋವರ್ಸ್ ಅಭಿಪ್ರಾಯಪಟ್ಟಿದ್ದಾರೆ.

ದಿನದಿಂದ ದಿನಕ್ಕೆ ಕಾಫಿ ನಾಡು ಚಂದು ಅವರನ್ನು ಫಾಲೋ ಮಾಡುವವರ​ ಸಂಖ್ಯೆ ಹೆಚ್ಚುತ್ತಿದೆ. ಆರಂಭದಲ್ಲಿ ಅವರನ್ನು ಕೆಲವೇ ಕೆಲವು ಮಂದಿ ಫಾಲೋ ಮಾಡುತ್ತಿದ್ದರು. ಈಗ ಬರೋಬ್ಬರಿ 3.80 ಲಕ್ಷ ಫಾಲೋವರ್ಸ್​ ಇದ್ದಾರೆ. ಚಂದು ಮಾಡುವ ಎಲ್ಲ ವಿಡಿಯೋಗಳೂ ವೈರಲ್​ ಆಗುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!