AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ನಲ್ಲಿ ತಂದೆ ನೆನೆದು ಕಣ್ಣೀರು ಹಾಕಿದ ಶಿವಣ್ಣ; ಇದಕ್ಕೆ ಕಾರಣವಾಯ್ತು ಆ ಒಂದು ಹಾಡು

ಎಲ್ಲಾ ಚಿತ್ರಗಳ ಕೆಲಸಗಳ ಮಧ್ಯೆ ಅವರು ಕಿರುತೆರೆಯಲ್ಲೂ ಬ್ಯುಸಿ ಆಗಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​’ನ ಆರನೇ ಸೀಸನ್​ಗೆ ಜಡ್ಜ್​ ಆಗಿ ಭಾಗಿ ಆಗುತ್ತಿದ್ದಾರೆ. ಶಿವಣ್ಣ ಅವರು ಈ ಕಾರ್ಯಕ್ರಮಕ್ಕೆ ಬಂದ ದಿನದಿಂದಲೂ ಹಲವು ಭಾವನಾತ್ಮಕ ಕ್ಷಣಗಳಿಗೆ ಈ ವೇದಿಕೆ ಸಾಕ್ಷಿ ಆಗುತ್ತಿದೆ.

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ನಲ್ಲಿ ತಂದೆ ನೆನೆದು ಕಣ್ಣೀರು ಹಾಕಿದ ಶಿವಣ್ಣ; ಇದಕ್ಕೆ ಕಾರಣವಾಯ್ತು ಆ ಒಂದು ಹಾಡು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 25, 2022 | 5:28 PM

ರಾಜ್​ಕುಮಾರ್ (Rajkumar) ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಅವರ ಮಕ್ಕಳಲ್ಲಿ ಒಬ್ಬರಾದ ಶಿವರಾಜ್​ಕುಮಾರ್ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಶೀಘ್ರವೇ ಅವರು 60ನೇ ವಯಸ್ಸಿಗೆ ಕಾಲಿಡುತ್ತಿದ್ದು, ಈ ವಯಸ್ಸಿನಲ್ಲೂ ಸಾಕಷ್ಟು ಎನರ್ಜಿ ತೋರುತ್ತಿದ್ದಾರೆ. ಹಲವು ವೇದಿಕೆಗಳ ಮೇಲೆ ಶಿವರಾಜ್​ಕುಮಾರ್ (Shivarajkumar) ಅವರು ತಂದೆ ರಾಜ್​ಕುಮಾರ್ ಹಾಗೂ ತಾಯಿ ಪಾರ್ವತಮ್ಮ ಅವರನ್ನು ನೆನಪಿಸಿಕೊಳ್ಳುತ್ತಾರೆ. ಅವರನ್ನು ನೆನಪಿಸಿಕೊಂಡ ಮರುಕ್ಷಣ ಭಾವುಕರಾಗುತ್ತಾರೆ. ಈಗ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6’ ವೇದಿಕೆ ಮೇಲೆ ಶಿವರಾಜ್​ಕುಮಾರ್ ಕಣ್ಣೀರು ಹಾಕಿದ್ದಾರೆ. ಒಂದು ಹಾಡಿನಿಂದ ಅವರು ಭಾವುಕರಾಗಿದ್ದಾರೆ.

ಶಿವರಾಜ್​ಕುಮಾರ್ ಅವರು ಸ್ಯಾಂಡಲ್​ವುಡ್​ನಲ್ಲಿ ಸಖತ್​ ಬ್ಯುಸಿ ಹೀರೋ. ಒಂದಾದಮೇಲೆ ಒಂದರಂತೆ ಹಲವು ಸಿನಿಮಾಗಳನ್ನು ಅವರು ಮಾಡುತ್ತಿದ್ದಾರೆ. ಅವರ ಹಲವು ಚಿತ್ರಗಳು ಘೋಷಣೆ ಆಗಿದ್ದು, ಶೂಟಿಂಗ್ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಈ ಎಲ್ಲಾ ಚಿತ್ರಗಳ ಕೆಲಸಗಳ ಮಧ್ಯೆ ಅವರು ಕಿರುತೆರೆಯಲ್ಲೂ ಬ್ಯುಸಿ ಆಗಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​’ನ ಆರನೇ ಸೀಸನ್​ಗೆ ಜಡ್ಜ್​ ಆಗಿ ಭಾಗಿ ಆಗುತ್ತಿದ್ದಾರೆ. ಶಿವಣ್ಣ ಅವರು ಈ ಕಾರ್ಯಕ್ರಮಕ್ಕೆ ಬಂದ ದಿನದಿಂದಲೂ ಹಲವು ಭಾವನಾತ್ಮಕ ಕ್ಷಣಗಳಿಗೆ ಈ ವೇದಿಕೆ ಸಾಕ್ಷಿ ಆಗುತ್ತಿದೆ.

ಇದನ್ನೂ ಓದಿ
Image
ರಜನಿಕಾಂತ್ ಜತೆ ಶಿವಣ್ಣ ನಟನೆ; ವಿಷಯ ಖಚಿತಪಡಿಸಿ ಹೊಸ ಅಪ್​ಡೇಟ್ ನೀಡಿದ ಶಿವರಾಜ್​ಕುಮಾರ್
Image
‘ಮಗಳ ಪ್ರೊಡಕ್ಷನ್​ನಲ್ಲಿ ನಾನೂ ಒಂದು ವೆಬ್ ಸೀರಿಸ್ ಮಾಡ್ತಾ ಇದೀನಿ’; ಶಿವರಾಜ್​ಕುಮಾರ್ ಅಚ್ಚರಿಯ ಘೋಷಣೆ
Image
ಭೂಗತ ಲೋಕದ ಕಥೆಯಲ್ಲಿ ಶಿವರಾಜ್​​ಕುಮಾರ್; ‘ಓಂ’ ರೀತಿಯಲ್ಲಿ ಹೊಸ ಸಿನಿಮಾ
Image
ದುನಿಯಾ ವಿಜಯ್ ನಿರ್ದೇಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಶಿವರಾಜ್​ಕುಮಾರ್

ಶಿವರಾಜ್​ಕುಮಾರ್ ಅವರು ಈಗಲೂ ರಾಜ್​ಕುಮಾರ್​ ಅವರನ್ನು ಮಿಸ್ ಮಾಡಿಕೊಳ್ಳುತ್ತಾರೆ. ಇದನ್ನು ಅವರು ಅನೇಕ ಬಾರಿ ಹೇಳಿಕೊಂಡಿದ್ದಿದೆ. ಈಗ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6’ ವೇದಿಕೆ ಮೇಲೆ ‘ಜಗವೆ ಒಂದು ರಣ ರಂಗ..’ ಹಾಡನ್ನು ಪ್ರಸಾರ ಮಾಡಲಾಯಿತು. ಈ ಹಾಡಿಗೆ ಸ್ಪರ್ಧಿಗಳು ಡ್ಯಾನ್ಸ್ ಮಾಡಿದರು. ಮೂಲ ಹಾಡನ್ನು ಹಾಡಿದ್ದು ರಾಜ್​ಕುಮಾರ್. ಹೀಗಾಗಿ, ಶಿವಣ್ಣಗೆ ತಂದೆಯ ನೆನಪಾಯಿತು.

View this post on Instagram

A post shared by Zee Kannada (@zeekannada)

‘ಈ ಹಾಡನ್ನು ನೀವು ಪರ್ಫಾರ್ಮ್​ ಮಾಡುವಾಗ ರಣರಂಗ ಸೆಟ್​ಗೆ ಹೋದ ಹಾಗೆ ಆಯ್ತು. ಇವತ್ತು ನನ್ನ ತಂದೆಯನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಯಾವ ಘಳಿಗೆಯಲ್ಲಿ ಹಂಸಲೇಖ ಅವರು ಈ ಹಾಡನ್ನು ಬರೆದರೋ ಗೊತ್ತಿಲ್ಲ. ಅವರಿಗೋಸ್ಕರವೇ ಈ ಹಾಡನ್ನು ಬರೆದ ಹಾಗೆ ಇದೆ’ ಎಂದು ಹೇಳುತ್ತಿರುವಾಗಲೇ ಶಿವಣ್ಣ ಕಣ್ಣಲ್ಲಿ ನೀರು ಬಂತು. ಈ ಪ್ರೋಮೋವನ್ನು ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9ಕ್ಕೆ ಈ ರಿಯಾಲಿಟಿ ಶೋ ಪ್ರಸಾರವಾಗುತ್ತದೆ. ಅನುಶ್ರೀ ಅವರು ಆ್ಯಂಕರಿಂಗ್ ಮಾಡಿದರೆ, ರಕ್ಷಿತಾ ಪ್ರೇಮ್ ಜಡ್ಜ್​ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ‘ಬೈರಾಗಿ’ ಯಾತ್ರೆ: ಡಾ. ರಾಜ್​ ಹುಟ್ಟಿ ಬೆಳೆದ ಗಾಜನೂರು ನೋಡಲು ಶಿವಣ್ಣನ ಜತೆ ಹೊರಟ ಡಾಲಿ ಧನಂಜಯ

ರಾಮನಗರದಲ್ಲಿ ಶಿವರಾಜ್​ಕುಮಾರ್​ಗೆ ಭವ್ಯ ಸ್ವಾಗತ; ಇಲ್ಲಿದೆ ವಿಡಿಯೋ

ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್
ಕುಮಾರಸ್ವಾಮಿ ಮತ್ತು ಜೋಶಿಯವರನ್ನು ಚರ್ಚೆಗೆ ಕರೆಯುತ್ತಿದ್ದೇನೆ: ಪ್ರದೀಪ್
ಕುಮಾರಸ್ವಾಮಿ ಮತ್ತು ಜೋಶಿಯವರನ್ನು ಚರ್ಚೆಗೆ ಕರೆಯುತ್ತಿದ್ದೇನೆ: ಪ್ರದೀಪ್
ಭಾರತ-ಯುಎಇ ಸಹಭಾಗಿತ್ವ ಮಹತ್ವದ್ದು: ಸಚಿವ ಹರ್ದೀಪ್ ಸಿಂಗ್
ಭಾರತ-ಯುಎಇ ಸಹಭಾಗಿತ್ವ ಮಹತ್ವದ್ದು: ಸಚಿವ ಹರ್ದೀಪ್ ಸಿಂಗ್
ಈ ಬಾರಿ 11 ದಿನ ಮೈಸೂರು ದಸರಾ ಆಚರಣೆ: ವಿಶೇಷತೆ ಏನು ಗೊತ್ತಾ?
ಈ ಬಾರಿ 11 ದಿನ ಮೈಸೂರು ದಸರಾ ಆಚರಣೆ: ವಿಶೇಷತೆ ಏನು ಗೊತ್ತಾ?
ಡಿಎನ್​ಎ ಮೂಲಕ 211 ಜನರ ಗುರುತು ಪತ್ತೆ, 189 ಮೃತದೇಹಗಳ ಹಸ್ತಾಂತರ:ಡಾ. ರಾಕೇ
ಡಿಎನ್​ಎ ಮೂಲಕ 211 ಜನರ ಗುರುತು ಪತ್ತೆ, 189 ಮೃತದೇಹಗಳ ಹಸ್ತಾಂತರ:ಡಾ. ರಾಕೇ
ಅಕ್ಕಿ ಸಾಗಿಸುತ್ತಿದ್ದ ಸರಕು ಸಾಗಣೆ ವಾಹನದಲ್ಲಿ 41 ಮೂಟೆಗಳು ಪತ್ತೆ
ಅಕ್ಕಿ ಸಾಗಿಸುತ್ತಿದ್ದ ಸರಕು ಸಾಗಣೆ ವಾಹನದಲ್ಲಿ 41 ಮೂಟೆಗಳು ಪತ್ತೆ
ಒಂಟೆ ಮೇಲೆ ಮಲಗಿ ಎಕ್ಸ್​ಪ್ರೆಸ್​ವೇನಲ್ಲಿ ಸವಾರಿ ಹೊರಟ ಕುಡುಕ
ಒಂಟೆ ಮೇಲೆ ಮಲಗಿ ಎಕ್ಸ್​ಪ್ರೆಸ್​ವೇನಲ್ಲಿ ಸವಾರಿ ಹೊರಟ ಕುಡುಕ
ಯಶ್ ಲುಕ್​ನಲ್ಲಿ ಬಂದ ತುಕಾಲಿ ಸಂತೋಷ್; ನಗುವಿನ ಹೊಳೆ
ಯಶ್ ಲುಕ್​ನಲ್ಲಿ ಬಂದ ತುಕಾಲಿ ಸಂತೋಷ್; ನಗುವಿನ ಹೊಳೆ