AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮ ಪಕ್ಕ ಕೂರುವುದೇ ದೊಡ್ಡ ಸಮಸ್ಯೆ’: ಉಗ್ರಂ ಮಂಜು ವರ್ತನೆಗೆ ಗೌತಮಿ ಬೇಸರ

ಒಂದು ಕಾಲದಲ್ಲಿ ಗೌತಮಿ ಜಾದವ್ ಅವರು ಉಗ್ರಂ ಮಂಜು ಜೊತೆಗೆ ಹೆಚ್ಚು ಕಾಲ ಕಳೆಯುತ್ತಿದ್ದರು. ಆದರೆ ಈಗ ಮಂಜು ಬಗ್ಗೆ ಗೌತಮಿ ಸಿಕ್ಕಾಪಟ್ಟೆ ತಕರಾರು ತೆಗೆಯುತ್ತಿದ್ದಾರೆ. ಮಂಗಳವಾರದ (ಡಿಸೆಂಬರ್ 17) ಸಂಚಿಕೆಯಲ್ಲಿ ಮಂಜು ಬಗ್ಗೆ ಗೌತಮಿ ಸಾಕಷ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಮಾತುಗಳಿಂದ ಎಲ್ಲರಿಗೂ ಶಾಕ್ ಆಗಿದೆ.

‘ನಿಮ್ಮ ಪಕ್ಕ ಕೂರುವುದೇ ದೊಡ್ಡ ಸಮಸ್ಯೆ’: ಉಗ್ರಂ ಮಂಜು ವರ್ತನೆಗೆ ಗೌತಮಿ ಬೇಸರ
Bigg Boss Kannada 11
ಮದನ್​ ಕುಮಾರ್​
|

Updated on: Dec 17, 2024 | 10:16 PM

Share

ಗೆಳೆಯ-ಗೆಳತಿ ಎಂದುಕೊಂಡು ಉಗ್ರಂ ಮಂಜು ಮತ್ತು ಗೌತಮಿ ಜಾದವ್ ಅವರು ತುಂಬ ಆಪ್ತತೆ ಬೆಳೆಸಿಕೊಂಡಿದ್ದರು. ಅವರ ಗೆಳೆತನದ ಬಗ್ಗೆ ಬಿಗ್ ಬಾಸ್ ಮನೆಯ ಬಹುತೇಕರು ಮಾತನಾಡಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಗೌತಮಿ ಅವರು ಮಂಜು ಬಗ್ಗೆ ಅಸಹನೆ ಬೆಳೆಸಿಕೊಂಡಿದ್ದಾರೆ. ಫಿನಾಲೆ ಹತ್ತಿರ ಆಗುತ್ತಿದ್ದಂತೆಯೇ ಗೌತಮಿ ಅವರು ವೈಯಕ್ತಿಕ ಆಟದ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಹಾಗಾಗಿ ಉಗ್ರಂ ಮಂಜು ಅವರಿಂದ ಅಂತರ ಕಾಯ್ದುಕೊಳ್ಳಲು ಗೌತಮಿ ಪ್ರಯತ್ನಿಸುತ್ತಿದ್ದಾರೆ.

ಉಗ್ರಂ ಮಂಜು ಏನೇ ಮಾತನಾಡಿದರೂ ಗೌತಮಿ ಜಾದವ್ ಅವರಿಗೆ ಈಗ ತಪ್ಪಾಗಿ ಕಾಣಿಸುತ್ತಿದೆ. ಮಂಗಳವಾರ (ಡಿ.17) ಕೂಡ ಹಾಗೆಯೇ ಆಯಿತು. ಟಾಸ್ಕ್​ನ ಉಸ್ತುವಾರಿಗಳು ಮಾತನಾಡುವಾಗ ಉಗ್ರಂ ಮಂಜು ಮಧ್ಯ ಮಾತನಾಡಲು ಪ್ರಯತ್ನಿಸಿದರು. ಅದನ್ನು ಗೌತಮಿ ಜಾದವ್ ಖಂಡಿಸಿದರು. ‘ನೀವು ಯಾಕೆ ಮಾತನಾಡುತ್ತೀರಿ? ನಾನು ಕನ್ನಡದಲ್ಲಿ ಹೇಳಿದ್ದು ನಿಮಗೆ ಅರ್ಥ ಆಗುತ್ತಿಲ್ಲ ಎನಿಸುತ್ತದೆ’ ಎಂದು ಗೌತಮಿ ಅವರು ಮಂಜು ವಿರುದ್ಧ ಗುಡುಗಿದರು.

ಗೌತಮಿ ಜಾದವ್ ಈ ರೀತಿ ನೇರವಾಗಿ ಟೀಕಿಸಿದ್ದು ಕಂಡು ಮಂಜು ಅವರಿಗೆ ಕೋಪ ಬಂತು. ‘ಹಾಗಿದ್ದರೆ ನೀವು ಕೂಡ ಮಾತನಾಡಿಬೇಡಿ’ ಎಂದು ಮಂಜು ತಿರುಗೇಟು ನೀಡಿದರು. ‘ನಿಮ್ಮ ಪಕ್ಕ ಕೂರುವುದೇ ದೊಡ್ಡ ಪ್ಲಾಬ್ಲಮ್’ ಎಂದು ಗೌತಮಿ ಅವರು ಗೊಣಗಿದರು. ಇಷ್ಟರಮಟ್ಟಿಗೆ ಅವರಿಬ್ಬರ ಸ್ನೇಹ ಹಾಳಾಗಿದೆ. ಮುಂದಿನ ದಿನಗಳಲ್ಲಿ ಪೈಪೋಟಿ ಹೆಚ್ಚಿದರೆ ಇನ್ನಷ್ಟು ವೈಮನಸ್ಸು ಶುರುವಾಗುವುದು ಗ್ಯಾರಂಟಿ.

ಇದನ್ನೂ ಓದಿ: ಗೌತಮಿ ಅಪ್ಪ-ಅಮ್ಮನ ಬಗ್ಗೆ ಮಾತನಾಡಿ ನಾಲಿಗೆ ಹರಿಬಿಟ್ಟ ರಜತ್; ಅತಿಯಾಯ್ತು ಮಾತು

‘ನಾನು ಗೌತಮಿ ಅವರನ್ನು ಈ ಮನೆಯಲ್ಲಿ ಮೆಚ್ಚಿಸಬೇಕು’ ಎಂದು ಉಗ್ರಂ ಮಂಜು ಅವರು ಸುದೀಪ್ ಎದುರಲ್ಲೇ ಹೇಳಿದ್ದರು. ಆ ಮಾತಿಗೆ ಸುದೀಪ್ ಅವರು ಎಚ್ಚರಿಕೆ ನೀಡಿದ್ದರು. ಆ ಘಟನೆ ನಡೆದ ಬಳಿಕ ಗೌತಮಿ ಜಾದವ್ ಅವರ ವರ್ತನೆ ಬದಲಾಯಿತು. ಸಾಧ್ಯವಾದಷ್ಟು ಮಂಜು ಅವರಿಂದ ದೂರ ಇರಲು ಗೌತಮಿ ಪ್ರಯತ್ನಿಸುತ್ತಿದ್ದಾರೆ. ಇವರಿಬ್ಬರ ಪೈಕಿ ಯಾರು ಫಿನಾಲೆಗೆ ಬರುತ್ತಾರೆ? ಯಾರು ಮೊದಲೇ ಔಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಪ್ರೇಕ್ಷಕರಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ವಿದ್ಯಾರ್ಥಿಗಳೇ ಗಮನಿಸಿ: SSLC ಫೇಲ್​​ ಆದವರಿಗೆ 3ನೇ ಬಾರಿ ಪರೀಕ್ಷೆ ಇರಲ್ಲ
ವಿದ್ಯಾರ್ಥಿಗಳೇ ಗಮನಿಸಿ: SSLC ಫೇಲ್​​ ಆದವರಿಗೆ 3ನೇ ಬಾರಿ ಪರೀಕ್ಷೆ ಇರಲ್ಲ