Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೌತಮಿ ಅಪ್ಪ-ಅಮ್ಮನ ಬಗ್ಗೆ ಮಾತನಾಡಿ ನಾಲಿಗೆ ಹರಿಬಿಟ್ಟ ರಜತ್; ಅತಿಯಾಯ್ತು ಮಾತು

ರಜತ್ ಅವರ ವರ್ತನೆಗೆ ಕಳೆದ ವಾರ ಕಿಚ್ಚ ಸುದೀಪ್ ಶಿಕ್ಷೆ ನೀಡಿದ್ದರು. ಹಾಗಿದ್ದರೂ ಕೂಡ ರಜತ್ ಬದಲಾಗಿಲ್ಲ. ಈ ವಾರ ಅವರು ಗೌತಮಿ ಜಾದವ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇದರಿಂದ ಗೌತಮಿ ಅವರು ಕೋಪಗೊಂಡಿದ್ದಾರೆ. ಪಾಸಿಟಿವಿ ಮಾಯವಾಗುವ ರೀತಿಯಲ್ಲಿ ಜಗಳ ಆಡಿದ್ದಾರೆ. ಗೌತಮಿಗೆ ತಿರುಗೇಟು ನೀಡಲೇಬೇಕು ಎಂದು ರಜತ್ ಹಠ ಹಿಡಿದು ಕುಳಿತಿದ್ದಾರೆ.

ಗೌತಮಿ ಅಪ್ಪ-ಅಮ್ಮನ ಬಗ್ಗೆ ಮಾತನಾಡಿ ನಾಲಿಗೆ ಹರಿಬಿಟ್ಟ ರಜತ್; ಅತಿಯಾಯ್ತು ಮಾತು
ರಜತ್, ಗೌತಮಿ ಜಾದವ್
Follow us
ಮದನ್​ ಕುಮಾರ್​
|

Updated on: Dec 16, 2024 | 10:52 PM

ವೈಲ್ಡ್ ಕಾರ್ಡ್​ ಮೂಲಕ ಬಿಗ್ ಬಾಸ್​ ಮನೆಗೆ ಬಂದಿರುವ ರಜತ್ ಅವರು ಬಹುತೇಕ ಎಲ್ಲರ ಜೊತೆಯೂ ಕಿರಿಕ್ ಮಾಡಿಕೊಂಡಿದ್ದಾರೆ. ಬಂದ ಮೊದಲ ವಾರದಲ್ಲೇ ಗೋಲ್ಡ್ ಸುರೇಶ್​ಗೆ ಅವಾಚ್ಯ ಪದಗಳನ್ನು ಬಳಸಿ ಕೆಂಗಣ್ಣಿಗೆ ಗುರಿಯಾಗಿದ್ದ ರಜತ್, ಈಗ ಗೌತಮಿಯ ಬಗ್ಗೆ ಮಾತನಾಡಿದ್ದಾರೆ. ಮಾತಿನ ಭರದಲ್ಲಿ ಅಪ್ಪ-ಅಮ್ಮನ ವಿಚಾರವನ್ನೆಲ್ಲ ಪ್ರಸ್ತಾಪಿಸಲು ಶುರು ಮಾಡಿದ್ದಾರೆ. ಇದರಿಂದಾಗಿ ಗೌತಮಿ ಅವರಿಗೆ ಸಖತ್ ಕೋಪ ಬಂದಿದೆ. ಡಿಸೆಂಬರ್​ 16ರ ಸಂಚಿಕೆಯಲ್ಲಿ ಗೌತಮಿ ಜಾದವ್ ಮತ್ತು ರಜತ್ ಅವರು ಸಿಕ್ಕಾಪಟ್ಟೆ ಜಗಳ ಮಾಡಿಕೊಂಡಿದ್ದಾರೆ. ರಜತ್ ಅವರ ಮಾತುಗಳನ್ನು ಉಗ್ರಂ ಮಂಜು ಖಂಡಿಸಿದ್ದಾರೆ.

ಇಡೀ ಮನೆಯಲ್ಲಿ ಕ್ಲೀನ್ ಮಾಡುವ ಟಾಸ್ಕ್​ ನೀಡಲಾಗಿತ್ತು. ಈ ಟಾಸ್ಕ್ ನಿಭಾಯಿಸುವ ವೇಳೆ ಗೌತಮಿ ಜಾದವ್ ಮತ್ತು ರಜತ್ ನಡುವೆ ಜಗಳ ಆರಂಭ ಆಯಿತು. ಕೆಲಸದ ವಿಚಾರ ಬಂದಾಗ ರಜತ್ ಯಾವಾಗಲೂ ಸೋಮಾರಿತನ ಪ್ರದರ್ಶಿಸುತ್ತಾರೆ. ಕೆಲಸ ಮಾಡಲು ಹಿಂದೇಟು ಹಾಕಿದ ಅವರಿಗೆ ‘ಸುಮ್ಮನೆ ಕುಳಿತುಕೊಂಡು ಹಣ್ಣು ತಿನ್ನಿ’ ಎಂದು ಗೌತಮಿ ಜಾದವ್ ತಿರುಗೇಟು ನೀಡಿದರು. ಅಲ್ಲಿಂದ ಮಾತಿನ ಚಕಮಕಿ ಆರಂಭ ಆಯಿತು.

ತಾವು ಹಣ್ಣು ತಿನ್ನುವುದನ್ನು ಗೌತಮಿ ಜಾದವ್ ಟೀಕಿಸಿದ್ದಕ್ಕೆ ರಜತ್ ಅವರಿಗೆ ವಿಪರೀತ ಕೋಪ ಬಂತು. ಆಗ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು. ಇಷ್ಟು ದಿನ ಪಾಸಿಟಿವ್ ಮಂತ್ರ ಜಪಿಸುತ್ತಿದ್ದ ಗೌತಮಿ ಜಾದವ್ ಅವರು ರಜತ್​ಗೆ ಏಕವಚನದಲ್ಲಿ ಬೈಯ್ಯುವ ಮಟ್ಟಕ್ಕೆ ಬದಲಾದರು. ‘ಇವರ ಅಪ್ಪನ ಮನೆಯಿಂದ ತಂದವಳ ರೀತಿ ಹೇಳುತ್ತಾಳೆ’ ಎಂದು ರಜತ್ ಅವರು ಬಾಯಿಗೆ ಬಂದಂತೆ ಮಾತನಾಡಿ ಗದ್ದಲ ಎಬ್ಬಿಸಿದರು.

ಇದನ್ನೂ ಓದಿ: ‘ಗೋಲ್ಡ್ ಸುರೇಶ್​ ಸೋತಿಲ್ಲ’: ಮುಖ್ಯವಾದ ಸಂದೇಶ ನೀಡಿದ ಕಿಚ್ಚ ಸುದೀಪ್

ಮನೆ ಕ್ಲೀನ್ ಮಾಡುವ ಟಾಸ್ಕ್​ ಮುಗಿದ ಬಳಿಕ ಬಿಗ್ ಬಾಸ್ ಕಡೆಯಿಂದ ದಿನಸಿ ವಸ್ತುಗಳು ಬಂದವು. ಅದನ್ನು ನೋಡುತ್ತ ಇರುವಾಗ ‘ಇದು ಬಿಗ್ ಬಾಸ್ ಕಳಿಸಿದ್ದು ತಾನೆ? ಯಾರಾದರೂ ಅಪ್ಪನ ಮನೆಯಿಂದ ತಂದಿದ್ದೀರಾ’ ಎಂದು ರಜತ್ ಮತ್ತೊಮ್ಮೆ ಗೌತಮಿಯನ್ನು ಕೆಣಕಿದರು. ‘ಅಮ್ಮ ಅಮ್ಮನ ವಿಷಯಕ್ಕೆ ಬಂದರೆ ಸರಿ ಇರುವುದಿಲ್ಲ’ ಎಂದು ಗೌತಮಿ ಅವರು ರಜತ್​ಗೆ ವಾರ್ನಿಂಗ್ ನೀಡಿದ್ದಾರೆ. ಈ ವಿಚಾರದ ಬಗ್ಗೆ ವೀಕೆಂಡ್​ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್ ಅವರು ರಜತ್​ಗೆ ಕ್ಲಾಸ್​ ತೆಗೆದುಕೊಳ್ಳುವ ಸಾಧ್ಯತೆ ಜಾಸ್ತಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​