ರಾತ್ರೋರಾತ್ರಿ ಬಿಗ್ ಬಾಸ್​ ಮನೆ ಅಸ್ತವ್ಯಸ್ತ; ಮಾಸ್ಕ್ ಧರಿಸಿದ ವ್ಯಕ್ತಿಗಳಿಂದ ವಸ್ತುಗಳಿಗೆ ಹಾನಿ

‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಡಿಫರೆಂಟ್​ ಎನಿಸಿಕೊಂಡಿದ್ದು ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್​ನಿಂದಾಗಿ. ಇಷ್ಟು ದಿನ ಅದೇ ಕಾನ್ಸೆಪ್ಟ್​ ಅಡಿಯಲ್ಲಿ ಟಾಸ್ಕ್​ಗಳು ನಡೆಯುತ್ತಿದ್ದವು. ಆದರೆ ಈಗ ರಾತ್ರೋರಾತ್ರಿ ನರಕದ ಗಡಿಯನ್ನು ಮುರಿಯಲಾಗಿದೆ. ನರಕದಲ್ಲಿ ಇದ್ದ ವಸ್ತುಗಳನ್ನು ಒಡೆದು ಹಾಕಲಾಗಿದೆ. ಬಿಗ್​ ಬಾಸ್​ ಮನೆಯಲ್ಲಿ ಏಕಾಏಕಿ ಈ ಬದಲಾವಣೆಗಳನ್ನು ಮಾಡಲಾಗಿದೆ.

ರಾತ್ರೋರಾತ್ರಿ ಬಿಗ್ ಬಾಸ್​ ಮನೆ ಅಸ್ತವ್ಯಸ್ತ; ಮಾಸ್ಕ್ ಧರಿಸಿದ ವ್ಯಕ್ತಿಗಳಿಂದ ವಸ್ತುಗಳಿಗೆ ಹಾನಿ
ಬಿಗ್ ಬಾಸ್​ ಕನ್ನಡ ಸೀಸನ್​ 11

Updated on: Oct 11, 2024 | 11:27 PM

ದೊಡ್ಡದಾಗಿ ಸೈರನ್ ಕೂಗಿತು. ಅದನ್ನು ಕೇಳಿದಾಗ ಎಲ್ಲ ಸದಸ್ಯರಿಗೂ ಶಾಕ್ ಆಯಿತು. ಬಿಗ್​ ಬಾಸ್​ ಮನೆಯ ಒಳಗೆ ದೊಡ್ಡ ಕ್ರೇನ್​ ಬಂತು. ಅದರಿಂದ ಒಂದಷ್ಟು ಜನರು ಬಂದು ಮನೆಯೊಳಗಿನ ವಸ್ತುಗಳಿಗೆ ಹಾನಿ ಮಾಡಲು ಆರಂಭಿಸಿದರು. ಈ ಹಿಂದಿನ ಯಾವುದೇ ಸೀಸನ್​ಗಳಲ್ಲೂ ಈ ರೀತಿ ಆಗಿರಲಿಲ್ಲ. ಹಾಗಾಗಿ ಎಲ್ಲರಿಗೂ ಅಚ್ಚರಿ ಆಗಿದೆ. ಸ್ವರ್ಗ ಮತ್ತು ನರಕದ ನಡುವೆ ಇದ್ದ ಗೋಡೆಯನ್ನು ಒಡೆಯಲಾಯಿತು. ನರಕದ ಒಳಗಿನ ವಸ್ತುಗಳನ್ನು ಒಡೆಯಲಾಯಿತು. ಹಾಗಾದರೆ ಇನ್ಮೇಲೆ ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್​ ಇರುವುದಿಲ್ಲವಾ ಎಂಬ ಪ್ರಶ್ನೆ ಮೂಡಿತು.

ನೋಡನೋಡುತ್ತಿದ್ದಂತೆಯೇ ನರಕದ ಗೋಡೆಗಳನ್ನು ಮುರಿದು ಹಾಕಲಾಯಿತು. ಗೋಲ್ಡ್​ ಸುರೇಶ್​, ಐಶ್ವರ್ಯಾ ಮುಂತಾದವರು ಒಂದು ಕ್ಷಣ ಗಾಬರಿ ಆದರು. ಜಗದೀಶ್​ ಮಾತ್ರ ಎಲ್ಲವನ್ನೂ ಎಂಜಾಯ್​ ಮಾಡುತ್ತಿದ್ದರು. ಮುಂದೇನಾಗಬಹುದು ಎಂಬ ಟೆನ್ಷನ್​ ಬಹುತೇಕರಿಗೆ ಇತ್ತು. ಕಡೆಗೂ ಆಗಿದ್ದೇನು? ನರಕದ ಮನೆಯನ್ನೇ ನಾಶ ಮಾಡಲಾಯಿತು. ಬಳಿಕ ಆ ಬಗ್ಗೆ ಬಿಗ್​ ಬಾಸ್​ ವಿವರಿಸಿ ಹೇಳಿದರು.

ಇದನ್ನೂ ಓದಿ: ‘ಸುದೀಪ್​ ಮಾತಿಗೆ ಬೆಲೆ ಕೊಡ್ತೀನಿ, ಇನ್ಮೇಲೆ ಬದಲಾಗ್ತೀನಿ’: ಬಿಗ್​ ಬಾಸ್​ನಲ್ಲಿ ಜಗದೀಶ್ ನಿರ್ಧಾರ

ಇಷ್ಟು ದಿನ ಸ್ವರ್ಗ ಮತ್ತು ನರಕ ಎಂಬ ಕಾರಣದಿಂದಲೇ ಬಿಗ್​ ಬಾಸ್​ ಸ್ಪರ್ಧಿಗಳ ನಡುವೆ ಗ್ಯಾಪ್​ ಉಂಟಾಗಿತ್ತು. ನರಕದಿಂದ ಸ್ವರ್ಗಕ್ಕೆ ಹೋಗಬೇಕು ಎಂಬ ಕಾರಣದಿಂದಲೇ ಟಫ್​ ಪೈಪೋಟಿ ನೀಡಲಾಗುತ್ತಿತ್ತು. ಆದರೆ ಈಗ ಆ ಎಲ್ಲ ಜಂಜಾಟಕ್ಕೆ ಪೂರ್ಣ ವಿರಾಮ ಹಾಕಲಾಗಿದೆ. ಇನ್ಮುಂದೆ ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್​ ಇರುವುದಿಲ್ಲ. ಎಲ್ಲರೂ ಒಂದೇ ಕಡೆ ವಾಸಿಸಲಿದ್ದಾರೆ.

ಇದನ್ನೂ ಓದಿ: ‘ಸೋಲೋಕೆ ಬರ್ತೀರಿ, ನಾಚಿಕೆ ಆಗಬೇಕು’: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಕ್ಲಾಸ್​ ತೆಗೆದುಕೊಂಡ ಜಗದೀಶ್

‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ರಿಯಾಲಿಟಿ ಶೋನಲ್ಲಿ ಎರಡನೇ ಕ್ಯಾಪ್ಟನ್​ ಆಗಿ ಶಿಶಿರ್​ ಆಯ್ಕೆ ಆಗಿದ್ದಾರೆ. ಇಷ್ಟು ದಿನಗಳ ಕಾಲ ನರಕದಲ್ಲಿ ಇದ್ದು ಕಷ್ಟ ಅನುಭವಿಸಿದ್ದ ಅವರು ಈಗ ನೇರವಾಗಿ ಕ್ಯಾಪ್ಟನ್​ ರೂಮ್​ಗೆ ಕಾಲಿಟ್ಟಿದ್ದಾರೆ. ಅವರಿಗೆ ಒಂದಷ್ಟು ಸವಲತ್ತುಗಳು ಸಿಗಲಿವೆ. ಕಳೆದ ವಾರ ಕ್ಯಾಪ್ಟನ್​ ಆಗಿದ್ದ ಹಂಸಾ ಅವರು ಸಿಕ್ಕಾಪಟ್ಟೆ ಕಿರಿಕಿರಿ ಅನುಭವಿಸಿದ್ದರು. ಈಗ ಶಿಶಿರ್​ ಅವರು ಯಾವ ರೀತಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us