AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜತ್​ಗೆ ಮಾತ್ರ ಜಾಕೆಟ್ ಕಳುಹಿಸಿದ ಸುದೀಪ್? ಕಾರಣ ಏನು?

Bigg Boss Kannada: ಬಿಗ್ ಬಾಸ್ ಕನ್ನಡದಲ್ಲಿ, ಸುದೀಪ್ ಅವರು ಸ್ಪರ್ಧಿಗಳ ಆಸೆಗಳನ್ನು ಈಡೇರಿಸುವಲ್ಲಿ ಸಕ್ರಿಯ ಪಾತ್ರ ವಹಿಸುತ್ತಾರೆ. ಈ ಬಾರಿ ರಜತ್ ಎಂಬ ಸ್ಪರ್ಧಿ ಸುದೀಪ್ ಅವರು ಧರಿಸಿದ್ದ ವಿಶೇಷ ಜಾಕೆಟ್ ಕೇಳಿದ್ದರು. ಸುದೀಪ್ ಅವರು ರಜತ್‌ಗೆ ಆ ಜಾಕೆಟ್ ಅನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟರು. ರಜತ್ ತನ್ನ ಆಸೆ ಈಡೇರಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

ರಜತ್​ಗೆ ಮಾತ್ರ ಜಾಕೆಟ್ ಕಳುಹಿಸಿದ ಸುದೀಪ್? ಕಾರಣ ಏನು?
Sudeep (1)
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 24, 2025 | 10:19 PM

Share

‘ಬಿಗ್ ಬಾಸ್’ನ ಸುದೀಪ್ ಅವರು ಸಾಕಷ್ಟು ಇಷ್ಟಪಡುತ್ತಾರೆ. ಇದರ ಸ್ಪರ್ಧಿಗಳನ್ನು ಮನೆಯವರಂತೆ ನೋಡುತ್ತಾರೆ. ಈ ಕಾರಣಕ್ಕೆ ಸ್ಪರ್ಧಿಗಳ ಆಸೆಯನ್ನು ಈಡೇರಿಸಲು ಅವರು ಎಂದಿಗೂ ಹಿಂದೇಟು ಹಾಕುವುದೇ ಇಲ್ಲ ಎಂಬ ವಿಚಾರ ಅನೇಕರಿಗೆ ತಿಳಿದಿದೆ. ಈ ಸೀಸನ್​ನಲ್ಲಿ ಸುದೀಪ್ ಅವರು ಸ್ಪರ್ಧಿಗಳಿಗೆ ಅಡುಗೆ ಮಾಡಿ ಕಳುಹಿಸಿದ್ದರು. ಈಗ ರಜತ್​ಗೆ ಮತ್ತೊಂದು ಗಿಫ್ಟ್ ನೀಡಿದ್ದಾರೆ. ಅದೇನು ಎಂಬುದನ್ನು ಇಲ್ಲಿ ನೋಡೋಣ.

‘ಬಿಗ್ ಬಾಸ್’ನಲ್ಲಿ ಈ ಮೊದಲು ಚೈತ್ರಾ ಹಾಗೂ ರಜತ್​ಗೆ ಒಂದೊಂದು ಕಿವಿ ಸ್ಟಡ್​ನ ಉಡುಗೊರೆ ಆಗಿ ಕೊಟ್ಟಿದ್ದರು. ಈ ವಿಚಾರ ಅನೇಕರಿಗೆ ಅಚ್ಚರಿ ತಂದಿತ್ತು. ಇದು ಚಿನ್ನದ್ದೇ ಆಗಿತ್ತು ಅನ್ನೋದು ವಿಶೇಷ. ಈಗ ರಜತ್ ಅವರಿಗೆ ವಿಶೇಷ ಜಾಕೆಟ್ ಕೊಟ್ಟು ಕಳುಹಿಸಿದ್ದಾರೆ. ರಜತ್​ಗೆ ಮಾತ್ರ ಸುದೀಪ್ ಉಡುಗೊರೆ ಕಳುಹಿಸಿದ್ದು ಏಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕೊನೆಯ ವಾರದಲ್ಲಿ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಅವಕಾಶ ನೀಡಿದ್ದರು. ಎಲ್ಲ ಸ್ಪರ್ಧಿಗಳು ಬಂದು ತಮ್ಮಿಷ್ಟದ ಆಸೆ ಹೇಳಿಕೊಳ್ಳಬೇಕು. ಇದು ಸಾಧ್ಯ ಆದರೆ ಬಿಗ್ ಬಾಸ್ ಈಡೇರಿಸುತ್ತಾರೆ. ಭವ್ಯಾ ಅವರು ತಂದೆ ಬಿಗ್ ಬಾಸ್ ಮನೆಗೆ ಬರಬೇಕು ಎಂದು ಕೇಳಿಕೊಂಡರು. ತ್ರಿವಿಕ್ರಂ ಅವರು ಬಿಗ್ ಬಾಸ್​ನಿಂದ ಲೆಟರ್ ಕೇಳಿದರು. ರಜತ್ ಅವರು ಸುದೀಪ್ ಅವರು ಒಂದು ದಿನ ಹಾಕಿದ್ದ ವಿಶೇಷ ಕೋಟ್​ನ ಕೇಳಿದ್ದರು. ಅದರ ಬದಲು ಸುದೀಪ್ ಬೇರೆ ಕೋಟ್ ಕೊಟ್ಟು ಕಳುಹಿಸಿದ್ದಾರೆ.

ಇದನ್ನೂ ಓದಿ:ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್

ನಟ ಹಾಗೂ ಬಿಗ್ ಬಾಸ್​ನ ಮಾಜಿ ಸ್ಪರ್ಧಿ ರಾಜೀವ್ ದೊಡ್ಮನೆ ಒಳಗೆ ಬಂದರು. ‘ನಾನು ರಜತ್ ಆಸೆ ಈಡೇರಿಸಲು ಬಂದಿದ್ದೇನೆ. ಅವರು ಅಣ್ಣನ ಒಂದು ವಿಶೇಷ ಕೋಟ್ ಕೇಳಿದ್ದರು. ಅದನ್ನು ನನಗೆ ಕೊಟ್ಟು ಕಳುಹಿಸಿದ್ದಾರೆ. ಆದರೆ, ಆ ಜಾಕೆಟ್ ಅಲ್ಲ. ಸುದೀಪ್  ಅವರು ಒಂದು ಹಂತ ಮೇಲೆ ಯೋಚಿಸುತ್ತಾರೆ. ಇನಾಗರೇಷನ್ ದಿನ ಹಾಕಿದ್ದ ಜಾಕೆಟ್ ಕಳುಹಿಸಿದ್ದಾರೆ’ ಎಂದು ರಾಜೀವ್ ಹೇಳಿದರು. ಮತ್ತು ಕೋಟ್​ನ ರಜತ್​ಗೆ ಹಸ್ತಾಂತರಿಸಿದರು.

‘ಸುದೀಪ್ ಸರ್ ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಕಗಾಲ್ಲ. ಸಣ್ಣದನ್ನು ಎಕ್ಸ್​ಪೆಕ್ಟ್ ಮಾಡ್ತೀನಿ. ನೀವು ದೊಡ್ಡದನ್ನು ಕಳುಹಿಸಿ ಕೊಡ್ತೀರಿ. ಶನಿವಾರ ಇದೇ ಜಾಕೆಟ್ ಹಾಕಿಕೊಳ್ಳುತ್ತೇನೆ. ಹೊರ ಬಂದ ಬಳಿಕ ಪಾರ್ಟಿ ಮಾಡೋಣ.  ನನ್ನ ಆಸೆ ಈಡೇರಿಸಿದ್ದಕ್ಕೆ ಧನ್ಯವಾದ’ ಎಂದರು ರಜತ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್