AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜತ್​ಗೆ ಮಾತ್ರ ಜಾಕೆಟ್ ಕಳುಹಿಸಿದ ಸುದೀಪ್? ಕಾರಣ ಏನು?

Bigg Boss Kannada: ಬಿಗ್ ಬಾಸ್ ಕನ್ನಡದಲ್ಲಿ, ಸುದೀಪ್ ಅವರು ಸ್ಪರ್ಧಿಗಳ ಆಸೆಗಳನ್ನು ಈಡೇರಿಸುವಲ್ಲಿ ಸಕ್ರಿಯ ಪಾತ್ರ ವಹಿಸುತ್ತಾರೆ. ಈ ಬಾರಿ ರಜತ್ ಎಂಬ ಸ್ಪರ್ಧಿ ಸುದೀಪ್ ಅವರು ಧರಿಸಿದ್ದ ವಿಶೇಷ ಜಾಕೆಟ್ ಕೇಳಿದ್ದರು. ಸುದೀಪ್ ಅವರು ರಜತ್‌ಗೆ ಆ ಜಾಕೆಟ್ ಅನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟರು. ರಜತ್ ತನ್ನ ಆಸೆ ಈಡೇರಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

ರಜತ್​ಗೆ ಮಾತ್ರ ಜಾಕೆಟ್ ಕಳುಹಿಸಿದ ಸುದೀಪ್? ಕಾರಣ ಏನು?
Sudeep (1)
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Jan 24, 2025 | 10:19 PM

‘ಬಿಗ್ ಬಾಸ್’ನ ಸುದೀಪ್ ಅವರು ಸಾಕಷ್ಟು ಇಷ್ಟಪಡುತ್ತಾರೆ. ಇದರ ಸ್ಪರ್ಧಿಗಳನ್ನು ಮನೆಯವರಂತೆ ನೋಡುತ್ತಾರೆ. ಈ ಕಾರಣಕ್ಕೆ ಸ್ಪರ್ಧಿಗಳ ಆಸೆಯನ್ನು ಈಡೇರಿಸಲು ಅವರು ಎಂದಿಗೂ ಹಿಂದೇಟು ಹಾಕುವುದೇ ಇಲ್ಲ ಎಂಬ ವಿಚಾರ ಅನೇಕರಿಗೆ ತಿಳಿದಿದೆ. ಈ ಸೀಸನ್​ನಲ್ಲಿ ಸುದೀಪ್ ಅವರು ಸ್ಪರ್ಧಿಗಳಿಗೆ ಅಡುಗೆ ಮಾಡಿ ಕಳುಹಿಸಿದ್ದರು. ಈಗ ರಜತ್​ಗೆ ಮತ್ತೊಂದು ಗಿಫ್ಟ್ ನೀಡಿದ್ದಾರೆ. ಅದೇನು ಎಂಬುದನ್ನು ಇಲ್ಲಿ ನೋಡೋಣ.

‘ಬಿಗ್ ಬಾಸ್’ನಲ್ಲಿ ಈ ಮೊದಲು ಚೈತ್ರಾ ಹಾಗೂ ರಜತ್​ಗೆ ಒಂದೊಂದು ಕಿವಿ ಸ್ಟಡ್​ನ ಉಡುಗೊರೆ ಆಗಿ ಕೊಟ್ಟಿದ್ದರು. ಈ ವಿಚಾರ ಅನೇಕರಿಗೆ ಅಚ್ಚರಿ ತಂದಿತ್ತು. ಇದು ಚಿನ್ನದ್ದೇ ಆಗಿತ್ತು ಅನ್ನೋದು ವಿಶೇಷ. ಈಗ ರಜತ್ ಅವರಿಗೆ ವಿಶೇಷ ಜಾಕೆಟ್ ಕೊಟ್ಟು ಕಳುಹಿಸಿದ್ದಾರೆ. ರಜತ್​ಗೆ ಮಾತ್ರ ಸುದೀಪ್ ಉಡುಗೊರೆ ಕಳುಹಿಸಿದ್ದು ಏಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕೊನೆಯ ವಾರದಲ್ಲಿ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಅವಕಾಶ ನೀಡಿದ್ದರು. ಎಲ್ಲ ಸ್ಪರ್ಧಿಗಳು ಬಂದು ತಮ್ಮಿಷ್ಟದ ಆಸೆ ಹೇಳಿಕೊಳ್ಳಬೇಕು. ಇದು ಸಾಧ್ಯ ಆದರೆ ಬಿಗ್ ಬಾಸ್ ಈಡೇರಿಸುತ್ತಾರೆ. ಭವ್ಯಾ ಅವರು ತಂದೆ ಬಿಗ್ ಬಾಸ್ ಮನೆಗೆ ಬರಬೇಕು ಎಂದು ಕೇಳಿಕೊಂಡರು. ತ್ರಿವಿಕ್ರಂ ಅವರು ಬಿಗ್ ಬಾಸ್​ನಿಂದ ಲೆಟರ್ ಕೇಳಿದರು. ರಜತ್ ಅವರು ಸುದೀಪ್ ಅವರು ಒಂದು ದಿನ ಹಾಕಿದ್ದ ವಿಶೇಷ ಕೋಟ್​ನ ಕೇಳಿದ್ದರು. ಅದರ ಬದಲು ಸುದೀಪ್ ಬೇರೆ ಕೋಟ್ ಕೊಟ್ಟು ಕಳುಹಿಸಿದ್ದಾರೆ.

ಇದನ್ನೂ ಓದಿ:ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್

ನಟ ಹಾಗೂ ಬಿಗ್ ಬಾಸ್​ನ ಮಾಜಿ ಸ್ಪರ್ಧಿ ರಾಜೀವ್ ದೊಡ್ಮನೆ ಒಳಗೆ ಬಂದರು. ‘ನಾನು ರಜತ್ ಆಸೆ ಈಡೇರಿಸಲು ಬಂದಿದ್ದೇನೆ. ಅವರು ಅಣ್ಣನ ಒಂದು ವಿಶೇಷ ಕೋಟ್ ಕೇಳಿದ್ದರು. ಅದನ್ನು ನನಗೆ ಕೊಟ್ಟು ಕಳುಹಿಸಿದ್ದಾರೆ. ಆದರೆ, ಆ ಜಾಕೆಟ್ ಅಲ್ಲ. ಸುದೀಪ್  ಅವರು ಒಂದು ಹಂತ ಮೇಲೆ ಯೋಚಿಸುತ್ತಾರೆ. ಇನಾಗರೇಷನ್ ದಿನ ಹಾಕಿದ್ದ ಜಾಕೆಟ್ ಕಳುಹಿಸಿದ್ದಾರೆ’ ಎಂದು ರಾಜೀವ್ ಹೇಳಿದರು. ಮತ್ತು ಕೋಟ್​ನ ರಜತ್​ಗೆ ಹಸ್ತಾಂತರಿಸಿದರು.

‘ಸುದೀಪ್ ಸರ್ ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಕಗಾಲ್ಲ. ಸಣ್ಣದನ್ನು ಎಕ್ಸ್​ಪೆಕ್ಟ್ ಮಾಡ್ತೀನಿ. ನೀವು ದೊಡ್ಡದನ್ನು ಕಳುಹಿಸಿ ಕೊಡ್ತೀರಿ. ಶನಿವಾರ ಇದೇ ಜಾಕೆಟ್ ಹಾಕಿಕೊಳ್ಳುತ್ತೇನೆ. ಹೊರ ಬಂದ ಬಳಿಕ ಪಾರ್ಟಿ ಮಾಡೋಣ.  ನನ್ನ ಆಸೆ ಈಡೇರಿಸಿದ್ದಕ್ಕೆ ಧನ್ಯವಾದ’ ಎಂದರು ರಜತ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ