AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭವ್ಯಾಗೆ ಮುಖಕ್ಕೆ ಹೊಡೆದಂತೆ ಹೇಳಿದ ತ್ರಿವಿಕ್ರಂ; ಕಣ್ಣೀರು ಹಾಕುತ್ತಲೇ ಚಾಲೆಂಜ್ ಮಾಡಿದ ನಟಿ

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಮತ್ತು ತ್ರಿವಿಕ್ರಂ ಅವರ ನಡುವೆ ತೀವ್ರ ಜಗಳ ನಡೆದಿದೆ. ತ್ರಿವಿಕ್ರಂ ಅವರು ಭವ್ಯಾ ಅವರಿಗೆ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಇದರಿಂದ ಭವ್ಯಾ ಅವರಿಗೆ ಕಣ್ಣೀರು ಬಂದಿದೆ. ಭವ್ಯಾ ಅವರು ತ್ರಿವಿಕ್ರಂ ಅವರಿಗೆ ಚಾಲೆಂಜ್ ಹಾಕಿ ಹೊರನಡೆದಿದ್ದಾರೆ. ಇಬ್ಬರ ನಡುವಿನ ಜಗಳ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಭವ್ಯಾಗೆ ಮುಖಕ್ಕೆ ಹೊಡೆದಂತೆ ಹೇಳಿದ ತ್ರಿವಿಕ್ರಂ; ಕಣ್ಣೀರು ಹಾಕುತ್ತಲೇ ಚಾಲೆಂಜ್ ಮಾಡಿದ ನಟಿ
ಭವ್ಯಾ-ತ್ರಿವಿಕ್ರಂ
ರಾಜೇಶ್ ದುಗ್ಗುಮನೆ
|

Updated on: Jan 07, 2025 | 7:28 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಹಾಗೂ ತ್ರಿವಿಕ್ರಂ ಗೆಳೆತನದ ಮಧ್ಯೆ ಸಂಪೂರ್ಣವಾಗಿ ಬಿರುಕು ಮೂಡಿದೆ. ಇದು ಪದೇ ಪದೇ ಎದ್ದು ಕಾಣುತ್ತಿದೆ. ಈಗ ತ್ರಿವಿಕ್ರಂ ಅವರು ಭವ್ಯಾಗೆ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಅವರು ಅಷ್ಟು ಕಟುವಾಗಿ ನಡೆದುಕೊಂಡಿದ್ದು ನೋಡಿ ಭವ್ಯಾಗೆ ಕಣ್ಣಲ್ಲಿ ನೀರೇ ಬಂದು ಬಿಟ್ಟಿದೆ. ಇದನ್ನು ಅವರು ನಿಯಂತ್ರಿಸಿಕೊಂಡು ತ್ರಿವಿಕ್ರಂಗೆ ಚಾಲೆಂಜ್ ಹಾಕಿ ಹೊರ ಹೋಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಂ, ಮಂಜು, ಧನರಾಜ್ ಟಿಕೆಟ್ ಟು ಫಿನಾಲೆ ರೇಸ್​ನಲ್ಲಿ ಇದ್ದಾರೆ. ಭವ್ಯಾ, ಹನುಮಂತ, ಗೌತಮಿ, ಮೋಕ್ಷಿತಾ, ಚೈತ್ರಾ ಟಿಕೆಟ್​ ಟು ಹೋಮ್ ಗುಂಪಿನಲ್ಲಿ ಇದ್ದಾರೆ. ಈ ಐವರ ಪೈಕಿ ಗೇಮ್ ಆಡಿ ಒಬ್ಬರು ಗೆಲ್ಲಬೇಕು. ಆ ಬಳಿಕ ‘ಟಿಕೆಟ್ ಟು ಫಿನಾಲೆ’ ಗ್ರೂಪ್ ಸೇರಿಕೊಳ್ಳಬೇಕು. ಇದಕ್ಕೆ ಪ್ರತಿಯಾಗಿ, ‘ಟಿಕೆಟ್​ ಟು ಫಿನಾಲೆ ಗ್ರೂಪ್’ನಿಂದ ಒಬ್ಬರು ‘ಟಿಕೆಟ್​ ಟು ಹೋಂ’ ಗುಂಪನ್ನು ಸೇರಬೇಕು.

ಮಂಜು ಅವರು ಮೊದಲು ‘ಟಿಕೆಟ್ ಟು ಫಿನಾಲೆ’ ಗ್ರೂಪ್​ನಲ್ಲಿ ಇದ್ದರು. ಆ ಬಳಿಕ ಭವ್ಯಾ ಅವರು ಗೆದ್ದು, ಮಂಜುನ ಅಲ್ಲಿಗೆ ಕಳುಹಿಸಲಾಯಿತು. ಮುಂದಿನ ಸುತ್ತಿನಲ್ಲಿ ಮಂಜು ಅವರು ಗೆದ್ದರು. ಆ ವೇಳೆ ‘ಟಿಕೆಟ್ ಟು ಫಿನಾಲೆ’ ಗುಂಪಿನಲ್ಲಿದ್ದ ಒಬ್ಬರನ್ನು ಎದುರಾಳಿ ಗುಂಪಿಗೆ ಕಳುಹಿಸಬೇಕಾಗಿತ್ತು. ಆಗ ಒಬ್ಬರು ಒಂದೊಂದು ಹೆಸರನ್ನು ತೆಗೆದುಕೊಂಡರು.

ಇದನ್ನೂ ಓದಿ: ಭವ್ಯಾನ ಉತ್ತಮ ಎದುರಾಳಿಯಾಗಿ ಮಾಡಿದ ನಾನು ಎಂಬರ್ಥದಲ್ಲಿ ಮಾತನಾಡಿದ ತ್ರಿವಿಕ್ರಂ

ಭವ್ಯಾ ಅವರು ಧನರಾಜ್ ಹೆಸರು ತೆಗೆದುಕೊಂಡರೆ, ತ್ರಿವಿಕ್ರಂ ಹಾಗೂ ಧನರಾಜ್ ಭವ್ಯಾ ಹೆಸರನ್ನು ತೆಗೆದುಕೊಂಡರು. ‘ಭವ್ಯಾ ಮನರಂಜನೆ ನೀಡಿದ್ದು ಕಡಿಮೆ’ ಎಂದರು ತ್ರಿವಿಕ್ರಂ. ‘ನನಗೆ ಹೋಲಿಸಿದರೆ ನೀವು ಯಾವುದೇ ಮನರಂಜನೆ ನೀಡೇ ಇಲ್ಲ’ ಎಂದರು ಭವ್ಯಾ. ‘ಆದರೆ, ನೀನು ನನ್ನ ಹೆಸರು ತೆಗೆದುಕೊಂಡಿಲ್ಲ’ ಎಂದರು ತ್ರಿವಿಕ್ರಂ. ಈ ವೇಳೆ ಭವ್ಯಾಗೆ ಮುಖಕ್ಕೆ ಹೊಡೆದಂತೆ ಆಗಿ ಕಣ್ಣೀರು ಬಂತು. ‘ಇರಲಿ ನಾನು ಹೋಗಿ ಬರುತ್ತೇನೆ. ನನಗೂ ಅವಕಾಶ ಸಿಗುತ್ತದೆ’ ಎಂದು ಚಾಲೆಂಜ್ ಮಾಡಿ ಹೋದರು ಭವ್ಯಾ. ಸದ್ಯ ಇಬ್ಬರ ಮಧ್ಯೆ ನಡೆದ ಕಿತ್ತಾಟ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್