AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೌತಮಿಗಾಗಿ ಕಣ್ಣೀರು ಹಾಕುತ್ತಾ, ಕುಟುಂಬದವರಿಗೆ ಕ್ಷಮೆ ಕೇಳಿದ ಉಗ್ರಂ ಮಂಜು

ಉಗ್ರಂ ಮಂಜು ಹಾಗೂ ಗೌತಮಿ ಜಾದವ್ ಅವರು ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಆಪ್ತತೆ ಬೆಳೆಸಿಕೊಂಡಿದ್ದಾರೆ. ಈಗಂತೂ ಗೌತಮಿಗಾಗಿ ಉಗ್ರಂ ಮಂಜು ಅವರು ಕಣ್ಣೀರು ಹಾಕಿದ್ದಾರೆ. ಸಂಕ್ರಾಂತಿ ಸ್ಪೆಷಲ್ ಎಪಿಸೋಡ್​ನಲ್ಲಿ ಮಂಜು ಅವರು ಗೌತಮಿ ಬಗ್ಗೆ ಮಾತನಾಡಿದರು. ಈ ವೇಳೆ ಅವರು ಸಖತ್ ಎಮೋಷನಲ್ ಆದರು.

ಗೌತಮಿಗಾಗಿ ಕಣ್ಣೀರು ಹಾಕುತ್ತಾ, ಕುಟುಂಬದವರಿಗೆ ಕ್ಷಮೆ ಕೇಳಿದ ಉಗ್ರಂ ಮಂಜು
Ugram Manju
ಮದನ್​ ಕುಮಾರ್​
|

Updated on: Jan 15, 2025 | 10:24 PM

Share

ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸುವ ಉಗ್ರಂ ಮಂಜು ಅವರು ಬಿಗ್ ಬಾಸ್ ಮನೆಯೊಳಗೆ ಗೌತಮಿ ಜಾದವ್ ಎದುರು ಮೆತ್ತಗಾಗಿದ್ದಾರೆ. ಮೊದಲಿದ್ದ ಆರ್ಭಟ ಕಾಣಿಸುತ್ತಲೇ ಇಲ್ಲ. ಗೌತಮಿ ವಿಚಾರದಲ್ಲಿ ಉಗ್ರಂ ಮಂಜು ಅವರು ತುಂಬ ಬದಲಾಗಿದ್ದಾರೆ ಎಂದರೆ ತಪ್ಪಿಲ್ಲ. ಇಬ್ಬರ ನಡುವೆ ಎಷ್ಟರಮಟ್ಟಿಗೆ ಆಪ್ತತೆ ಬೆಳೆದಿದೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಬುಧವಾರದ (ಜನವರಿ 15) ಸಂಚಿಕೆಯಲ್ಲಿ ಗೌತಮಿ ಬಗ್ಗೆ ಮಾತನಾಡುವಾಗ ಉಗ್ರಂ ಮಂಜು ಅವರು ಭಾವುಕರಾದರು. ಎಲ್ಲರ ಎದುರು ಅವರು ಅತ್ತರು. ನಟಿ ತಾರಾ ಕೂಡ ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ಇದ್ದರು.

ಸಂಕ್ರಾಂತಿ ವಿಶೇಷ ಸಂಚಿಕೆಯ ಸಲುವಾಗಿ ಹಿರಿಯ ನಟಿ ತಾರಾ ಅವರು ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಬಂದಿದ್ದರು. ಎಲ್ಲರಿಗೂ ಅವರು ಹಬ್ಬದ ಊಟ ಮತ್ತು ಎಳ್ಳು-ಬೆಲ್ಲ ನೀಡಿದರು. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಬೇಕು. ನಮ್ಮ ನಡುವೆ ಇರುವ ಮನಸ್ತಾಪವನ್ನು ಇಲ್ಲಿಯೇ ಸರಿಪಡಿಸಿಕೊಳ್ಳೋಣ ಎಂದು ಹೇಳಿದ ತಾರಾ ಅವರು ಸ್ಪರ್ಧಿಗಳಿಗೆ ಮನದ ಮಾತು ಹಂಚಿಕೊಳ್ಳಲು ಅವಕಾಶ ನೀಡಿದರು.

ಉಗ್ರಂ ಮಂಜು ಅವರು ಎಲ್ಲರ ಎದುರು ನಿಂತು ಗೌತಮಿಯ ಕುರಿತು ಹೇಳಿದರು. ತಮಗೆ ಗೌತಮಿ ಜೊತೆ ಆಪ್ತತೆ ಬೆಳೆಯಲು ಕಾರಣ ಏನು ಎಂಬುದನ್ನು ಕೂಡ ವಿವರಿಸಿದರು. ತಮ್ಮ ಬಗ್ಗೆ ಕಾಳಜಿ ತೋರಿದ್ದರಿಂದ ಈ ರೀತಿ ಸ್ನೇಹ ಬೆಳೆಯಿತು ಎಂದು ಮಂಜು ಹೇಳಿದರು. ‘ತಂಗಿಯರು ಮದುವೆ ಆಗಿ ಹೋದ ಬಳಿಕ ನಾನು ಒಂಟಿಯಾಗಿದ್ದೆ. ಊಟದ ವಿಚಾರದಲ್ಲಿ ಯಾರಾದರೂ ಕಾಳಜಿ ತೋರಿಸಿದರೆ ಎಮೋಷನಲ್ ಆಗುತ್ತೇನೆ’ ಎಂದು ಉಗ್ರಂ ಮಂಜು ಅವರು ಹೇಳಿದರು.

ಇದನ್ನೂ ಓದಿ: ಮತ್ತೆ ಒಂದಾದ ಮಂಜು, ಮೋಕ್ಷಿತಾ, ಗೌತಮಿ; ಇದೇನು ಹೊಸ ಡ್ರಾಮಾ?

ಗೌತಮಿ ಜೊತೆ ಉಗ್ರಂ ಮಂಜು ಕ್ಲೋಸ್ ಆಗಿದ್ದರಿಂದ ಕೆಲವರಿಗೆ ಬೇಸರ ಆಗಿರಬಹುದು. ಸ್ನೇಹದಿಂದಾಗಿ ಗೌತಮಿಯ ಆಟದ ಮೇಲೆ ಕೂಡ ಪರಿಣಾಮ ಬೀರಿರಬಹುದು. ಇದರಿಂದಾಗಿ ಗೌತಮಿ ಅವರ ಕುಟುಂಬಕ್ಕೆ ಹಾಗೂ ಅವರನ್ನು ಇಷ್ಟಪಡುವವರಿಗೆ ನೋವಾಗಿರಬಹುದು. ಹಾಗಾಗಿ ಗೌತಮಿಯ ಕುಟುಂಬದವರಿಗೆ ಉಗ್ರಂ ಮಂಜು ಕ್ಷಮೆ ಕೇಳಿದರು. ಮಂಜು ಅವರು ಭಾವುಕವಾಗಿ ಮಾತನಾಡಿದ್ದರಿಂದ ಗೌತಮಿ ಕೂಡ ಕಣ್ಣೀರು ಹಾಕಿದ್ದಾರೆ. ಇಬ್ಬರೂ ತಮ್ಮ ನಡುವಿನ ಸ್ನೇಹವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಅನೇಕ ಬಾರಿ ಅವರಿಗೆ ಸಾಧ್ಯವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು