AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ಮಹಾ ಸಂಚಿಕೆ ಘೋಷಣೆ  ಮಾಡಿದ ‘ಸೀತಾ ರಾಮ’ ಧಾರಾವಾಹಿ ತಂಡ; ಯಾವಾಗ?

ಮಹಾ ಸಂಚಿಕೆ ಪ್ರಸಾರ ಕಂಡರೆ ವೀಕ್ಷಕರಿಗೆ ಖುಷಿ ಆಗುತ್ತದೆ. ಒಂದೇ ದಿನ ಎರಡು ಎಪಿಸೋಡ್​ಗಳನ್ನು ನೋಡುವ ಅವಕಾಶ ಸಿಗುತ್ತದೆ. ಅಂದರೆ, ಮಹಾ ಸಂಚಿಕೆ ಇರುವ ಧಾರಾವಾಹಿ ಒಂದು ಗಂಟೆಗಳ ಕಾಲ ಪ್ರಸಾರ ಕಾಣುತ್ತದೆ. ಈಗ ‘ಸೀತಾ ರಾಮ’ ಧಾರಾವಾಹಿ ಇಂದು (ಅಕ್ಟೋಬರ್ 2) ಮಹಾ ಸಂಚಿಕೆ ಪ್ರಸಾರ ಮಾಡಲಿದೆ.

ಮತ್ತೊಂದು ಮಹಾ ಸಂಚಿಕೆ ಘೋಷಣೆ  ಮಾಡಿದ ‘ಸೀತಾ ರಾಮ’ ಧಾರಾವಾಹಿ ತಂಡ; ಯಾವಾಗ?
ಸೀತಾ ರಾಮ
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 02, 2023 | 8:12 AM

Share

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಸೀತಾ ರಾಮ’ (Seetha Raama Serial) ಧಾರಾವಾಹಿ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಈ ಧಾರಾವಾಹಿ 50ನೇ ಸಂಚಿಕೆಯನ್ನು ಪೂರ್ಣಗೊಳಿಸಿದೆ. ಭಾವನಾತ್ಮಕವಾಗಿ ಧಾರಾವಾಹಿ ಎಲ್ಲರನ್ನೂ ಸೆಳೆದುಕೊಳ್ಳುತ್ತಿದೆ. ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ರೀತು ಸಿಂಗ್, ಮುಖ್ಯಮಂತ್ರಿ ಚಂದ್ರು, ಪೂಜಾ ಲೋಕೇಶ್ ಮೊದಲಾದವರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈಗ ಧಾರಾವಾಹಿ ಮಹಾ ಸಂಚಿಕೆ ಪ್ರಸಾರ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದೆ.

ಮಹಾ ಸಂಚಿಕೆ ಪ್ರಸಾರ ಕಂಡರೆ ವೀಕ್ಷಕರಿಗೆ ಖುಷಿ ಆಗುತ್ತದೆ. ಒಂದೇ ದಿನ ಎರಡು ಎಪಿಸೋಡ್​ಗಳನ್ನು ನೋಡುವ ಅವಕಾಶ ಸಿಗುತ್ತದೆ. ಅಂದರೆ, ಮಹಾ ಸಂಚಿಕೆ ಇರುವ ಧಾರಾವಾಹಿ ಒಂದು ಗಂಟೆಗಳ ಕಾಲ ಪ್ರಸಾರ ಕಾಣುತ್ತದೆ. ಈಗ ‘ಸೀತಾ ರಾಮ’ ಧಾರಾವಾಹಿ ಇಂದು (ಅಕ್ಟೋಬರ್ 2) ಮಹಾ ಸಂಚಿಕೆ ಪ್ರಸಾರ ಮಾಡಲಿದೆ. ಈ ವಿಚಾರ ಕೇಳಿ ‘ಸೀತಾ ರಾಮ’ ಧಾರಾವಾಹಿ ವೀಕ್ಷಕರು ಖುಷಿಪಟ್ಟಿದ್ದಾರೆ. ರಾತ್ರಿ 9:30ರಿಂದ 10:30ರವರೆಗೆ ಧಾರಾವಾಹಿ ಪ್ರಸಾರ ಕಾಣಲಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ.

‘ಸೀತಾ ರಾಮ ನಡುವಿನ ಮುನಿಸು ಕರಗಿಸೋಕೆ ಸಿಹಿ ನೆಪವೇ ಸಾಕು. ಸೀತಾ ರಾಮ 1 ಗಂಟೆಯ ಮಹಾಸಂಚಿಕೆ ಸೋಮವಾರ ರಾತ್ರಿ 9.30ಕ್ಕೆ’ ಎಂದು ಜೀ ಕನ್ನಡ ಹೊಸ ಪ್ರೋಮೋ ಹಂಚಿಕೊಂಡಿದೆ. ಈ ಎರಡು ಎಪಿಸೋಡ್​ಗಳೂ ಸಾಕಷ್ಟು ಭಾವನಾತ್ಮಕವಾಗಿ ಇರಲಿವೆ ಎಂದು ಹೇಳಲಾಗುತ್ತಿದೆ. ಇಂದು (ಅಕ್ಟೋಬರ್ 2) ಗಾಂಧಿ ಜಯಂತಿ. ಬಹುತೇಕರಿಗೆ ರಜಾ ಇರುತ್ತದೆ. ಈ ಕಾರಣದಿಂದಲೂ ಮಹಾ ಸಂಚಿಕೆ ಪ್ರಸಾರ ಕಾಣುತ್ತಿರಬಹುದು.

ಸೀತಾ ರಾಮಾ ಧಾರಾವಾಹಿ ಕಥೆಯ ಒಂದೆಳೆ..

ರಾಮ್ (ಗಗನ್ ಚಿನ್ನಪ್ಪ) ಆಗರ್ಭ ಶ್ರೀಮಂತ. ಆತ ವಿದೇಶದಲ್ಲಿ ಇದ್ದವನು. ಒಮ್ಮೆ ಭಾರತಕ್ಕೆ ಬರುತ್ತಾನೆ. ತಾತ ಸೂರಿ (ಮುಖ್ಯಮಂತ್ರಿ ಚಂದ್ರು) ಮಾತಿಗೆ ಕಟ್ಟುಬಿದ್ದು ಇಲ್ಲಿಯೇ ಉಳಿದುಕೊಳ್ಳುತ್ತಾನೆ. ಕಚೇರಿಗೆ ಹೋದಾಗ ಅಲ್ಲಿ ಆದ ಅವ್ಯವಹಾರಗಳು ಕಣ್ಣಿಗೆ ಬೀಳುತ್ತವೆ. ಈ ಅವ್ಯವಹಾರಗಳ ಮಾಸ್ಟರ್ ಮೈಂಡ್ ಆತನ ಚಿಕ್ಕಮ್ಮ ಭಾರ್ಗವಿ (ಪೂಜಾ ಲೋಕೇಶ್). ಆದರೆ, ಅವಳು ಇದನ್ನು ಮುಚ್ಚಿಟ್ಟಿದ್ದಾಳೆ. ತಪ್ಪಿತಸ್ಥೆಯನ್ನು ಕಂಡು ಹಿಡಿಯಲು ರಾಮ್ ಮುಂದಾಗಿದ್ದಾನೆ.

ಇದನ್ನೂ ಓದಿ: ‘ಸೀತಾ ರಾಮ’ ಧಾರಾವಾಹಿಯಲ್ಲಿ ಜೀವದ ಗೆಳೆಯನಾಗಿ ಮಿಂಚಿದ ಅಶೋಕ; ನಟನೆಗೆ ಭರ್ಜರಿ ಮೆಚ್ಚುಗೆ

ಈಗ ಕಥೆ ಏನಾಗಿದೆ?

ಆತನಿಗೆ ಸೀತಾ (ವೈಷ್ಣವಿ ಗೌಡ) ಪರಿಚಯ ಆಗಿದೆ. ಸೀತಾಳ ಮಗಳು ಸಿಹಿಯನ್ನು (ರೀತು ಸಿಂಗ್) ರಾಮ್ ತುಂಬಾನೇ ಹಚ್ಚಿಕೊಂಡಿದ್ದಾನೆ. ಸ್ವಂತ ಮನೆಯನ್ನು ಉಳಿಸಿಕೊಳ್ಳಲು ಸೀತಾಗೆ ಅಡ್ವಾನ್ಸ್ ಸ್ಯಾಲರಿ ಬೇಕಿತ್ತು. ಇದನ್ನು ರಾಮ್ ಕೊಡಿಸಲು ಮುಂದೆ ಬಂದಿದ್ದ. ಆದರೆ, ಅದು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ ಭಾರ್ಗವಿಯಿಂದ ಆಕೆ ಬೈಸಿಕೊಂಡಿದ್ದಾಳೆ. ಇದೇ ಸಂದರ್ಭದಲ್ಲಿ ವೈಷ್ಣವಿಗೆ ಜ್ವರ ಬಂದಿದೆ. ಆಕೆಯ ಆರೈಕೆಗೆ ರಾಮ್ ಮುಂದಾಗುತ್ತಾನೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್