AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ಮಹಾ ಸಂಚಿಕೆ ಘೋಷಣೆ  ಮಾಡಿದ ‘ಸೀತಾ ರಾಮ’ ಧಾರಾವಾಹಿ ತಂಡ; ಯಾವಾಗ?

ಮಹಾ ಸಂಚಿಕೆ ಪ್ರಸಾರ ಕಂಡರೆ ವೀಕ್ಷಕರಿಗೆ ಖುಷಿ ಆಗುತ್ತದೆ. ಒಂದೇ ದಿನ ಎರಡು ಎಪಿಸೋಡ್​ಗಳನ್ನು ನೋಡುವ ಅವಕಾಶ ಸಿಗುತ್ತದೆ. ಅಂದರೆ, ಮಹಾ ಸಂಚಿಕೆ ಇರುವ ಧಾರಾವಾಹಿ ಒಂದು ಗಂಟೆಗಳ ಕಾಲ ಪ್ರಸಾರ ಕಾಣುತ್ತದೆ. ಈಗ ‘ಸೀತಾ ರಾಮ’ ಧಾರಾವಾಹಿ ಇಂದು (ಅಕ್ಟೋಬರ್ 2) ಮಹಾ ಸಂಚಿಕೆ ಪ್ರಸಾರ ಮಾಡಲಿದೆ.

ಮತ್ತೊಂದು ಮಹಾ ಸಂಚಿಕೆ ಘೋಷಣೆ  ಮಾಡಿದ ‘ಸೀತಾ ರಾಮ’ ಧಾರಾವಾಹಿ ತಂಡ; ಯಾವಾಗ?
ಸೀತಾ ರಾಮ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Oct 02, 2023 | 8:12 AM

Share

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಸೀತಾ ರಾಮ’ (Seetha Raama Serial) ಧಾರಾವಾಹಿ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಈ ಧಾರಾವಾಹಿ 50ನೇ ಸಂಚಿಕೆಯನ್ನು ಪೂರ್ಣಗೊಳಿಸಿದೆ. ಭಾವನಾತ್ಮಕವಾಗಿ ಧಾರಾವಾಹಿ ಎಲ್ಲರನ್ನೂ ಸೆಳೆದುಕೊಳ್ಳುತ್ತಿದೆ. ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ರೀತು ಸಿಂಗ್, ಮುಖ್ಯಮಂತ್ರಿ ಚಂದ್ರು, ಪೂಜಾ ಲೋಕೇಶ್ ಮೊದಲಾದವರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈಗ ಧಾರಾವಾಹಿ ಮಹಾ ಸಂಚಿಕೆ ಪ್ರಸಾರ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದೆ.

ಮಹಾ ಸಂಚಿಕೆ ಪ್ರಸಾರ ಕಂಡರೆ ವೀಕ್ಷಕರಿಗೆ ಖುಷಿ ಆಗುತ್ತದೆ. ಒಂದೇ ದಿನ ಎರಡು ಎಪಿಸೋಡ್​ಗಳನ್ನು ನೋಡುವ ಅವಕಾಶ ಸಿಗುತ್ತದೆ. ಅಂದರೆ, ಮಹಾ ಸಂಚಿಕೆ ಇರುವ ಧಾರಾವಾಹಿ ಒಂದು ಗಂಟೆಗಳ ಕಾಲ ಪ್ರಸಾರ ಕಾಣುತ್ತದೆ. ಈಗ ‘ಸೀತಾ ರಾಮ’ ಧಾರಾವಾಹಿ ಇಂದು (ಅಕ್ಟೋಬರ್ 2) ಮಹಾ ಸಂಚಿಕೆ ಪ್ರಸಾರ ಮಾಡಲಿದೆ. ಈ ವಿಚಾರ ಕೇಳಿ ‘ಸೀತಾ ರಾಮ’ ಧಾರಾವಾಹಿ ವೀಕ್ಷಕರು ಖುಷಿಪಟ್ಟಿದ್ದಾರೆ. ರಾತ್ರಿ 9:30ರಿಂದ 10:30ರವರೆಗೆ ಧಾರಾವಾಹಿ ಪ್ರಸಾರ ಕಾಣಲಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ.

‘ಸೀತಾ ರಾಮ ನಡುವಿನ ಮುನಿಸು ಕರಗಿಸೋಕೆ ಸಿಹಿ ನೆಪವೇ ಸಾಕು. ಸೀತಾ ರಾಮ 1 ಗಂಟೆಯ ಮಹಾಸಂಚಿಕೆ ಸೋಮವಾರ ರಾತ್ರಿ 9.30ಕ್ಕೆ’ ಎಂದು ಜೀ ಕನ್ನಡ ಹೊಸ ಪ್ರೋಮೋ ಹಂಚಿಕೊಂಡಿದೆ. ಈ ಎರಡು ಎಪಿಸೋಡ್​ಗಳೂ ಸಾಕಷ್ಟು ಭಾವನಾತ್ಮಕವಾಗಿ ಇರಲಿವೆ ಎಂದು ಹೇಳಲಾಗುತ್ತಿದೆ. ಇಂದು (ಅಕ್ಟೋಬರ್ 2) ಗಾಂಧಿ ಜಯಂತಿ. ಬಹುತೇಕರಿಗೆ ರಜಾ ಇರುತ್ತದೆ. ಈ ಕಾರಣದಿಂದಲೂ ಮಹಾ ಸಂಚಿಕೆ ಪ್ರಸಾರ ಕಾಣುತ್ತಿರಬಹುದು.

ಸೀತಾ ರಾಮಾ ಧಾರಾವಾಹಿ ಕಥೆಯ ಒಂದೆಳೆ..

ರಾಮ್ (ಗಗನ್ ಚಿನ್ನಪ್ಪ) ಆಗರ್ಭ ಶ್ರೀಮಂತ. ಆತ ವಿದೇಶದಲ್ಲಿ ಇದ್ದವನು. ಒಮ್ಮೆ ಭಾರತಕ್ಕೆ ಬರುತ್ತಾನೆ. ತಾತ ಸೂರಿ (ಮುಖ್ಯಮಂತ್ರಿ ಚಂದ್ರು) ಮಾತಿಗೆ ಕಟ್ಟುಬಿದ್ದು ಇಲ್ಲಿಯೇ ಉಳಿದುಕೊಳ್ಳುತ್ತಾನೆ. ಕಚೇರಿಗೆ ಹೋದಾಗ ಅಲ್ಲಿ ಆದ ಅವ್ಯವಹಾರಗಳು ಕಣ್ಣಿಗೆ ಬೀಳುತ್ತವೆ. ಈ ಅವ್ಯವಹಾರಗಳ ಮಾಸ್ಟರ್ ಮೈಂಡ್ ಆತನ ಚಿಕ್ಕಮ್ಮ ಭಾರ್ಗವಿ (ಪೂಜಾ ಲೋಕೇಶ್). ಆದರೆ, ಅವಳು ಇದನ್ನು ಮುಚ್ಚಿಟ್ಟಿದ್ದಾಳೆ. ತಪ್ಪಿತಸ್ಥೆಯನ್ನು ಕಂಡು ಹಿಡಿಯಲು ರಾಮ್ ಮುಂದಾಗಿದ್ದಾನೆ.

ಇದನ್ನೂ ಓದಿ: ‘ಸೀತಾ ರಾಮ’ ಧಾರಾವಾಹಿಯಲ್ಲಿ ಜೀವದ ಗೆಳೆಯನಾಗಿ ಮಿಂಚಿದ ಅಶೋಕ; ನಟನೆಗೆ ಭರ್ಜರಿ ಮೆಚ್ಚುಗೆ

ಈಗ ಕಥೆ ಏನಾಗಿದೆ?

ಆತನಿಗೆ ಸೀತಾ (ವೈಷ್ಣವಿ ಗೌಡ) ಪರಿಚಯ ಆಗಿದೆ. ಸೀತಾಳ ಮಗಳು ಸಿಹಿಯನ್ನು (ರೀತು ಸಿಂಗ್) ರಾಮ್ ತುಂಬಾನೇ ಹಚ್ಚಿಕೊಂಡಿದ್ದಾನೆ. ಸ್ವಂತ ಮನೆಯನ್ನು ಉಳಿಸಿಕೊಳ್ಳಲು ಸೀತಾಗೆ ಅಡ್ವಾನ್ಸ್ ಸ್ಯಾಲರಿ ಬೇಕಿತ್ತು. ಇದನ್ನು ರಾಮ್ ಕೊಡಿಸಲು ಮುಂದೆ ಬಂದಿದ್ದ. ಆದರೆ, ಅದು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ ಭಾರ್ಗವಿಯಿಂದ ಆಕೆ ಬೈಸಿಕೊಂಡಿದ್ದಾಳೆ. ಇದೇ ಸಂದರ್ಭದಲ್ಲಿ ವೈಷ್ಣವಿಗೆ ಜ್ವರ ಬಂದಿದೆ. ಆಕೆಯ ಆರೈಕೆಗೆ ರಾಮ್ ಮುಂದಾಗುತ್ತಾನೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್