AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

700ಕ್ಕೂ ಹೆಚ್ಚು ಚಿತ್ರಗೀತೆ ಬರೆದಿರುವ ದೊಡ್ಡರಂಗೇಗೌಡರಿಗೆ ಸಿನಿಮಾದ ನಂಟು ಸಿಕ್ಕಿದ್ದು ಒಂದು ಕಿರುಜಗಳದಿಂದ

Weekend With Ramesh: ಸುಮಾರು 700 ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ರಚಿಸಿರುವ ಸಾಹಿತಿ ದೊಡ್ಡರಂಗೇಗೌಡರಿಗೆ ಸಿನಿಮಾ ನಂಟು ದೊರೆತಿದ್ದು ಹೇಗೆ? ವೀಕೆಂಡ್ ವಿತ್ ರಮೇಶ್​ನಲ್ಲಿ ಅವರೇ ವಿವರಿಸಿದ್ದಾರೆ.

700ಕ್ಕೂ ಹೆಚ್ಚು ಚಿತ್ರಗೀತೆ ಬರೆದಿರುವ ದೊಡ್ಡರಂಗೇಗೌಡರಿಗೆ ಸಿನಿಮಾದ ನಂಟು ಸಿಕ್ಕಿದ್ದು ಒಂದು ಕಿರುಜಗಳದಿಂದ
ದೊಡ್ಡರಂಗೇಗೌಡ
ಮಂಜುನಾಥ ಸಿ.
|

Updated on:May 28, 2023 | 8:12 PM

Share

ಸಾಹಿತಿಗಳಿಗೆ ಚಲನಚಿತ್ರ ಗೀತೆಗಳ ಬಗ್ಗೆ ದಿವ್ಯ ಅಸಡ್ಡೆ, ನಿರ್ಲಕ್ಷ್ಯ ಭಾವ ಕೆಲವರಿಗೆ ಸಿಟ್ಟು ಸಹ. ಹಾಗಿದ್ದರೂ ಈ ಹಿಂದೆ ಹಾಗೂ ಈಗಲೂ ಸಹ ಕೆಲವು ಸಾಹಿತಿಗಳು ತಮ್ಮ ಸಾಹಿತ್ಯ ಪ್ರತಿಭೆಯ ಮೂಲಕ ಹಲವು ಅತ್ಯದ್ಭುತ ಚಲನಚಿತ್ರಗೀತೆಗಳನ್ನು ನೀಡಿದ್ದಾರೆ. ಕನ್ನಡ ಚಿತ್ರಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ ಅಂಥಹವರಲ್ಲಿ ಸಾಹಿತಿ ದೊಡ್ಡರಂಗೇಗೌಡರು ಸಹ ಒಬ್ಬರು. ಸುಮಾರು 700 ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ದೊಡ್ಡರಂಗೇಗೌಡರು (Doddarangegowda) ಬರೆದಿದ್ದು ಈ ಶನಿವಾರ ವೀಕೆಂಡ್ ವಿತ್ ರಮೇಶ್​ಗೆ (Weekend With Ramesh) ಅತಿಥಿಯಾಗಿ ಆಗಮಿಸಿದ್ದ ವೇಳೆ ತಮಗೆ ಸಿನಿಮಾ ನಂಟು ಹೇಗೆ ದೊರಕಿತು ಎಂಬುದರ ಬಗ್ಗೆ ಮಾತನಾಡಿದ್ದಾರೆ.

ಸಾಹಿತಿಗಳಾಗಿ ಅದಾಗಲೆ ಹೆಸರುಗಳಿಸಿದ್ದ ದೊಡ್ಡರಂಗೇಗೌಡರು ಭಾವಗೀತೆಗಳ ರಚನೆಯನ್ನು ಮಾಡುತ್ತಿದ್ದಾರೆ. ಆಗ ಈ ಭಾವಗೀತೆಗಳ ರಚಿಸುತ್ತಿದ್ದ ಕವಿಗಳ ಬಗ್ಗೆ ಸಾಹಿತ್ಯವಲಯದಲ್ಲಿ ಕೆಲವರಿಗೆ ಬಹಳ ಅಸಮಾಧಾನವಿತ್ತು. ಭಾವಗೀತೆಗಳ ಕವಿಗಳನ್ನು ಕ್ಯಾಸೆಟ್ ಕವಿಗಳೆಂದು ಕೆಲವರು ಛೇಡಿಸಿದ್ದೂ ಉಂಟು. ಅಂಥಹವರಲ್ಲಿ ರಾಮಚಂದ್ರ ಶರ್ಮಾರವರೂ ಸಹ ಒಬ್ಬರು. ರಾಮಚಂದ್ರ ಶರ್ಮಾ ಅವರು ಲಕ್ಷ್ಮಿನಾರಾಯಣಭಟ್ಟರು, ಎಚ್​ಎಸ್ ವೆಂಕಟೇಶಮೂರ್ತಿ, ದೊಡ್ಡರಂಗೇಗೌಡ ಅವರುಗಳನ್ನು ಅವರು ಸಂಗೀತಕ್ಕೆ ಹಾಡು ಬರೆಯುತ್ತಿದ್ದರಿಂದ ಲಕ್ಷ್ಮಿದಾಸ, ವೆಂಕಟೇಶದಾಸ ಹಾಗೂ ರಂಗದಾಸ ಎಂದು ಕರೆಯುತ್ತಿದ್ದರಂತೆ.

ಒಮ್ಮೆ ಬೆಂಗಳೂರು ವಿವಿಯಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ಹೀಗೆಯೇ ಕರೆದಾಗ, ಅದೇ ಕಾರ್ಯಕ್ರಮದಲ್ಲಿದ್ದ ದೊಡ್ಡರಂಗೇಗೌಡರು, ತಮಗೆ ಮಾತನಾಡುವ ಅವಕಾಶ ಬಂದಾಗ, ಹಾಡುಗಳು ಎಂಬುದು ಆದಿಕಾಲದಿಂದಲೂ ಚಾಲ್ತಿಯಲ್ಲಿವೆ ಎಂಬುದನ್ನು ಅಲ್ಲಿಯೇ ತಾವೇ ಹಾಡು ಕಟ್ಟಿ ರಾಗ ಸಂಯೋಜಿಸಿ ಹಾಡಿದರಂತೆ.

ಆ ಕಾರ್ಯಕ್ರಮದಲ್ಲಿ ಪ್ರೇಕ್ಷಕರಾಗಿ ಭಾಗವಹಿಸಿದ್ದ ನಿರ್ದೇಶಕ, ನಟ, ನಿರ್ಮಾಪಕ ಕೆಎಸ್​ಎಲ್​ ಸ್ವಾಮಿ (ರವಿ), ಅವರಿಗೆ ದೊಡ್ಡರಂಗೇಗೌಡರ ಪದ ಕಟ್ಟುವಿಕೆ ಇಷ್ಟವಾಗಿ ಅವರ ದೀಪ ಸಿನಿಮಾಕ್ಕೆ ಅವಕಾಶ ನೀಡಿದ್ದಾರೆ. ಮೊದಲಿಗೆ ಮದುವೆಯ ಕುರಿತಾಗಿ ಹಾಡೊಂದು ಬರೆಸಿಕೊಂಡಿದ್ದಾರೆ. ಅದಾದ ಬಳಿಕ ಮಾಗಿಯ ಕನಸು ಸಿನಿಮಾಕ್ಕೆ ಹಾಡು ಬರೆದುಕೊಟ್ಟಿದ್ದಾರೆ ದೊಡ್ಡರಂಗೇಗೌಡರು. ಆ ವೇಳೆಗೆ ಪುಟ್ಟಣ್ಣ ಕಣಗಾಲರು ದೊಡ್ಡರಂಗೇಗೌಡರ ಅಭಿಮಾನಿಯಾಗಿ ಅವರ ಬಹುಪಾಲು ಪ್ರಕಟಿತ ಪುಸ್ತಕಗಳನ್ನು ಖರೀದಿಸಿ ಓದಿದ್ದರಂತೆ. ದೊಡ್ಡರಂಗೇಗೌಡರ ಪ್ರಗಾತ ಕವಿತೆಯನ್ನು ಪಡುವಾರಹಳ್ಳಿ ಪಾಂಡವರು ಹೆಸರಿನ ಸಿನಿಮಾ ಮಾಡಿದ್ದಾರೆ ಪುಟ್ಟಣ್ಣ. ಆ ಸಿನಿಮಾದ ಸೂಪರ್ ಹಿಟ್ ಹಾಡುಗಳನ್ನು ಬರೆದಿರುವುದು ದೊಡ್ಡರಂಗೇಗೌಡರು.

ಇದನ್ನೂ ಓದಿ:ಪುಸ್ತಕ ಇಟ್ಟುಕೊಳ್ಳಲು ಸಹ ಸ್ಥಳವಿಲ್ಲ: ಮನೆ ಕಟ್ಟಿಕೊಳ್ಳಲಾಗದ ಬಗ್ಗೆ ಕವಿ ದೊಡ್ಡರಂಗೇಗೌಡ ಬೇಸರ

ಇನ್ನು ದೊಡ್ಡರಂಗೇಗೌಡರ ಬರೆದಿರುವ ಪರಸಂಗದ ಗೆಂಡೇತಿಮ್ಮ ಸಿನಿಮಾದ ತೇರಾ ಏರಿ ಅಂಬರದಾಗೆ ಹಾಗೂ ನೋಟದಾಗೆ ನಗೆಯಾ ಬೀರಿ ಹಾಡುಗಳಂತೂ ನೂರು ವರ್ಷವಾದರೂ ಸಾಯದ ರಚನೆಗಳು. ಪರಸಂಗದ ಗೆಂಡೆ ತಿಮ್ಮ ಕಾದಂಬರಿಯಾಗಿದ್ದು ಅಲ್ಲಿನ ಪಾತ್ರಗಳ ವ್ಯಕ್ತಿತ್ವ, ನಿಲವು, ಭವಿಷ್ಯಗಳು ಅರಿವಿದ್ದ ಕಾರಣ ಅಷ್ಟು ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಹಾಡುಗಳನ್ನು ಬರೆಯಲು ಸಾಧ್ಯವಾಯಿತು ಎಂದರು ದೊಡ್ಡರಂಗೇಗೌಡರು.

ದೊಡ್ಡರಂಗೇಗೌಡರು 700 ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದು, ಅವುಗಳಲ್ಲಿ ಕೆಲ ಸೂಪರ್ ಹಿಟ್ ಹಾಡುಗಳ ಪಟ್ಟಿ ಇಲ್ಲಿದೆ; ಅರುಣರಾಗ ಸಿನಿಮಾದ ನಡೆದಾಡೊ ಕಾಮನ ಬಿಲ್ಲೆ, ಯಾಕೋ ಏನೋ ನನ್ನದೆ ಝುಂ ಎಂದಿದೆ, ಪಡುವಾರಳ್ಳಿ ಪಾಂಡವರು ಸಿನಿಮಾದ ಜನ್ಮ ನೀಡಿದ ಭೂಮಿ ತಾಯಿಯ ಹೇಗೆ ತೊರೆಯಲಿ, ಭೂಮಿ ತಾಯಾಣೆ ನೀ ಇಷ್ಟ ಕಣೆ, ನಾ ಕಂಡೆ ನಿನ್ನ ಮಧುರ ಮಧುರ ಗಳಿಗೆಯಲಿ, ಹೂವಂತಾ ಹೃದಯವನ್ನು ಹಿಂಡಿವಿರೇಕೆ, ಅಲೆಮನೆ ಸಿನಿಮಾದ ನಮ್ಮೂರ ಮಂದಾರ ಹೂವೆ, ಅಶ್ವಮೇಧ ಸಿನಿಮಾದ ಟೈಟಲ್ ಹಾಡು, ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ, ಹೃದಯ ಗೀತೆ ಹಾಡುತಿರೆ ಮನವು ಸ್ವರ್ಗವಾಗಿದೆ, ಎಲ್ಲಿರುವೆ ಚೆಲುವೆ ಎಲ್ಲಿರುವೇ? ಇನ್ನು ಹಲವಾರು ಹಾಡುಗಳನ್ನು ದೊಡ್ಡರಂಗೇಗೌಡು ನೀಡಿದ್ದಾರೆ. ಇತ್ತೀಚೆಗಿನ ಮಾವು-ಬೇವು ಸಿನಿಮಾಕ್ಕೂ ಕೆಲವು ಅದ್ಭುತವಾದ ಹಾಡುಗಳನ್ನು ದೊಡ್ಡರಂಗೇಗೌಡರು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:30 pm, Sun, 28 May 23

ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್