AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಎರಡು ಅವಮಾನಗಳಿಂದಲೇ ವಿಜಯ್ ರಾಜಕೀಯಕ್ಕೆ ಬರುವ ನಿರ್ಧಾರ ಮಾಡಿದ್ದು

Thalapathy Vijay: ವಿಜಯ್ ಅಸಲಿಗೆ ಬಹಳ ಇಂಟ್ರೋವರ್ಟ್ ಮಾದರಿ ವ್ಯಕ್ತಿ. ಹೆಚ್ಚು ಮಾತನಾಡುವುದಿಲ್ಲ, ಮೌನವಾಗಿರುವುದನ್ನೇ ಹೆಚ್ಚು ಇಷ್ಟ ಪಡುವ ವ್ಯಕ್ತಿ. ಅಂಥಹಾ ವ್ಯಕ್ತಿ ರಾಜಕಾರಣಕ್ಕೆ ಧುಮುಕುವ ನಿರ್ಧಾರ ಮಾಡಿದ್ದು ಆರಂಭದಲ್ಲಿ ಅವರ ಅಭಿಮಾನಿಗಳಿಗೇ ಆಶ್ಚರ್ಯ ಉಂಟು ಮಾಡಿತ್ತು. ಆದರೆ ವಿಜಯ್, ರಾಜಕೀಯಕ್ಕೆ ಧುಮುಕುವ ನಿರ್ಧಾರದ ಹಿಂದೆ ಅವರಿಗೆ ಆಗಿದ್ದ ಎರಡು ಅವಮಾನಗಳು ಕಾರಣ ಎನ್ನಲಾಗುತ್ತದೆ.

ಆ ಎರಡು ಅವಮಾನಗಳಿಂದಲೇ ವಿಜಯ್ ರಾಜಕೀಯಕ್ಕೆ ಬರುವ ನಿರ್ಧಾರ ಮಾಡಿದ್ದು
Thalapathy Vijay
ಮಂಜುನಾಥ ಸಿ.
|

Updated on: May 13, 2026 | 4:52 PM

Share

ದಳಪತಿ ವಿಜಯ್ (Thalapaty Vijay) ಈಗ ತಮಿಳುನಾಡಿನ ಸಿಎಂ. ತಮ್ಮನ್ನೂ ಸೇರಿ 108 ಶಾಸಕರ ಬೆಂಬಲ ಹೊಂದಿದ್ದ ವಿಜಯ್​​ಗೆ ಈಗ 144 ಶಾಸಕರು ಬೆಂಬಲ ನೀಡಿದ್ದಾರೆ. ಇದೊಂದು ಬಹಳ ಉತ್ತಮ ಸಂಖ್ಯೆ ಆಗಿದ್ದು ಸರ್ಕಾರ ಭದ್ರವಾಗಿದೆ. ವಿಜಯ್ ರಾಜಕೀಯಕ್ಕೆ ಬಂದಿದ್ದು, ಸಿಎಂ ಆಗಿದ್ದು ಎಲ್ಲವೂ ಅಚಾನಕ್ಕಾಗಿ ನಡೆದಂತೆ ಹಲವರಿಗೆ ಭಾಸವಾಗುತ್ತಿದೆ. ಆದರೆ ಇದರ ಹಿಂದೆ ವರ್ಷಗಳ ಶ್ರಮ ಮತ್ತು ಯೋಜನೆ ಇದೆ. ವಿಜಯ್ ಅಸಲಿಗೆ ಬಹಳ ಇಂಟ್ರೋವರ್ಟ್ ಮಾದರಿ ವ್ಯಕ್ತಿ. ಹೆಚ್ಚು ಮಾತನಾಡುವುದಿಲ್ಲ, ಮೌನವಾಗಿರುವುದನ್ನೇ ಹೆಚ್ಚು ಇಷ್ಟ ಪಡುವ ವ್ಯಕ್ತಿ. ಅಂಥಹಾ ವ್ಯಕ್ತಿ ರಾಜಕಾರಣಕ್ಕೆ ಧುಮುಕುವ ನಿರ್ಧಾರ ಮಾಡಿದ್ದು ಆರಂಭದಲ್ಲಿ ಅವರ ಅಭಿಮಾನಿಗಳಿಗೇ ಆಶ್ಚರ್ಯ ಉಂಟು ಮಾಡಿತ್ತು. ಆದರೆ ವಿಜಯ್, ರಾಜಕೀಯಕ್ಕೆ ಧುಮುಕುವ ನಿರ್ಧಾರದ ಹಿಂದೆ ಅವರಿಗೆ ಆಗಿದ್ದ ಎರಡು ಅವಮಾನಗಳು ಕಾರಣ ಎನ್ನಲಾಗುತ್ತದೆ.

ವಿಜಯ್ ದಶಕಗಳಿಂದಲೂ ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ನಟ. 2010ರ ವೇಳೆಗಾಗಲೇ ರಜನೀಕಾಂತ್ ಅವರ ಉತ್ತರಾಧಿಕಾರಿ ವಿಜಯ್ ಎಂಬ ಮಾತುಗಳು ಕೇಳಲಾರಂಭವಾಗಿದ್ದವು. 2011 ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆದಿತ್ತು. ಅದಾಗಲೇ ವಿಜಯ್ ಅವರು ತಮ್ಮ ಅಭಿಮಾನಿ ಸಂಘಟನೆ ‘ಮಕ್ಕಳ್ ನಿಧಿ ಮಯಂ’ ಅನ್ನು ಸ್ಥಾಪಿಸಿದ್ದು ಮಾತ್ರವಲ್ಲದೆ ಅವರ ತಂದೆ ಎಸ್ ಚಂದ್ರಶೇಖರ್, ಆ ಸಂಘಟನೆಯನ್ನು ಉತ್ತಮವಾಗಿಯೇ ಬಲಪಡಿಸಿದ್ದರು. 2011 ರ ಚುನಾವಣೆ ವೇಳೆ ಜಯಲಲಿತಾ ಅವರಿಗೆ ವಿಜಯ್ ಅವರ ಮಕ್ಕಳ್ ನಿಧಿ ಮಯಂ ಬೆಂಬಲ ನೀಡಿತು. ಜಯಲಲಿತಾ ಅವರ ಪಕ್ಷ ಗೆದ್ದು ಜಯಲಲಿತಾ ಸಿಎಂ ಸಹ ಆದರು. ವಿಜಯ್ ಅವರ ತಂದೆ ಖುದ್ದು ಹೋಗಿ ಜಯಲಲಿತಾ ಅವರನ್ನು ಭೇಟಿಯಾಗಿ ಶುಭ ಹಾರೈಸಿದ್ದರು. ಜಯಲಲಿತಾ ಅವರ ವಿಜಯ್ ಹಾಗೂ ಚಂದ್ರಶೇಖರ್ ಅವರಿಗೆ ಧನ್ಯವಾದ ಹೇಳಿದ್ದರು.

ಇದನ್ನೂ ಓದಿ:ಸಿಎಂ ಕಚೇರಿ ಅಧಿಕಾರಿಯಾಗಿ ಜ್ಯೋತಿಷಿ: ವಿಜಯ್ ವಿರುದ್ಧ ಅಸಮಾಧಾನ

ಅದಾಗಿ ಎರಡು ವರ್ಷಗಳ ಬಳಿಕ ಅಂದರೆ 2013 ರಲ್ಲಿ ವಿಜಯ್ ನಟನೆಯ ‘ತಲೈವ’ ಸಿನಿಮಾ ಬಿಡುಗಡೆಗೆ ರೆಡಿಯಾಗಿತ್ತು. ಆ ಸಿನಿಮಾದ ಟ್ಯಾಗ್​​ಲೈನ್ ‘ಟೈಮ್ ಟು ಲೀಡ್’, (ನಾಯತ್ವ ವಹಿಸಿಕೊಳ್ಳುವ ಸಮಯ) ಎಂದಾಗಿತ್ತು. ಇದು ಜಯಲಲಿತಾ ಅವರಿಗೆ ಸರಿ ಬರಲಿಲ್ಲ, ಅದಾಗಲೇ ಜಯಲಲಿತಾ ಮೇಲೆ ಭ್ರಷ್ಟಾಚಾರದ ಆರೋಪ ಬಂದು, ಪ್ರಕರಣ ಸುಪ್ರೀಂಕೋರ್ಟ್​​ನಲ್ಲಿತ್ತು. ಅಂಥಹಾ ಸಮಯದಲ್ಲಿ ವಿಜಯ್ ಅವರು ರಾಜಕೀಯ ಪ್ರೇರಿತ ಟ್ಯಾಗ್​ಲೈನ್ ಬಳಸಿ, ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆ ನೀಡಿದ್ದು, ಜಯಲಲಿತಾರಿಗೆ ಭೀತಿ ಉಂಟು ಮಾಡಿತ್ತು.

‘ತಲೈವಾ’ ಸಿನಿಮಾದ ಬಿಡುಗಡೆಗೆ ಸಮಸ್ಯೆ ನೀಡಲಾಯ್ತು, ಆದರೆ ಅದಾಗಲೇ ಸಿನಿಮಾ ವಿದೇಶದಲ್ಲಿ ಬಿಡುಗಡೆ ಆಗಿಬಿಟ್ಟಿತ್ತು. ಸಿನಿಮಾ ತಮಿಳುನಾಡಿನಲ್ಲಿ ಬಿಡುಗಡೆ ಆಗಲಿಲ್ಲವೆಂದರೆ ಪೈರಸಿ ಸಮಸ್ಯೆ ಆಗುತ್ತದೆ ಎಂದು ವಿಜಯ್ ಹಾಗೂ ‘ತಲೈವಾ’ ಸಿನಿಮಾದ ನಿರ್ದೇಶಕರು ಜಯಲಲಿತಾ ಭೇಟಿಗೆಂದು ಹೋದರು. ಆದರೆ ಅವರನ್ನು ಜಯಲಲಿತಾ ಭೇಟಿ ಸಹ ಆಗಲಿಲ್ಲ. ಕೊನೆಗೆ ವಿಜಯ್ ಬಹಿರಂಗ ಕ್ಷಮಾಪಣೆ ಕೇಳಿ, ‘ಟೈಮ್ ಟು ಲೀಡ್’ ಟ್ಯಾಗ್ ಲೈನ್ ತೆಗೆದ ಬಳಿಕ, ನಿಗದಿತ ದಿನಾಂಕದ 11 ದಿನಗಳ ನಂತರ ಸಿನಿಮಾ ಬಿಡುಗಡೆ ಮಾಡಲಾಯ್ತು. ಇದು ವಿಜಯ್ ಅವರಿಗೆ ಭಾರಿ ಅವಮಾನ ಉಂಟು ಮಾಡಿತು.

ಅದಾಗಿ ಕೆಲವೇ ದಿನಗಳ ಬಳಿಕ, 2013ರ ಸೆಪ್ಟೆಂಬರ್ ತಿಂಗಳಲ್ಲಿ ಚೆನ್ನೈನಲ್ಲಿ ಭಾರತೀಯ ಚಿತ್ರರಂಗದ 100ನೇ ವರ್ಷದ ಸಂಭ್ರಮಾಚರಣೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಇಡೀ ತಮಿಳು ಚಿತ್ರರಂಗ ಭಾಗಿ ಆಗಿತ್ತು. ವಿಜಯ್ ಅವರಿಗೆ ತಡವಾಗಿ ಆಹ್ವಾನ ತಲುಪಿತು. ಆದರೂ ವಿಜಯ್ ಬಂದಿದ್ದರು. ಆದರೆ ಅವರನ್ನು ಉದ್ದೇಶಪೂರ್ವಕವಾಗಿ ಕೊನೆಯ ಆಸನದಲ್ಲಿ ಕೂರಿಸಲಾಗಿತ್ತು. ಅಂದು ವಿಜಯ್ ಬೇಸರದಿಂದಲೇ ಆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

ಈ ಎರಡು ಅವಮಾನಗಳ ಬಳಿಕ ವಿಜಯ್ ಅವರು ರಾಜಕೀಯ ಪ್ರವೇಶದ ಬಗ್ಗೆ ಗಂಭೀರವಾದರು. ತಮ್ಮ ಅಭಿಮಾನಿ ಸಂಘಟನೆಯನ್ನು ಹೆಚ್ಚು ಬಲಗೊಳಿಸಿದರು. ಜೊತೆಗೆ ಸಿನಿಮಾಗಳ ಆಯ್ಕೆಯಲ್ಲಿ ಹೆಚ್ಚು ಎಚ್ಚರ ವಹಿಸಲು ಆರಂಭಿಸಿದರು. ರಾಜಕೀಯಕ್ಕೆ ಸಂಬಂಧಿಸಿದ ಕತೆಗಳನ್ನು ಹೆಚ್ಚು ಆಯ್ಕೆ ಮಾಡಿಕೊಂಡರು. ಸಿನಿಮಾಗಳಲ್ಲಿ ಸರ್ಕಾರಗಳನ್ನು ಟೀಕಿಸಲು ಆರಂಭಿಸಿದರು. ಬಡವರ ಪರ, ಮಹಿಳೆಯರ ಪರ ಸಂಭಾಷಣೆಗಳನ್ನು ಹೇಳಲು ಶುರು ಮಾಡಿದರು. ಕೊನೆಗೆ ಈಗ ಸಿಎಂ ಸಹ ಆಗಿದ್ದಾರೆ. ರಾಜಕಾರಣಿಗಳಿಂದ ಅವಮಾನಕ್ಕೆ ಒಳಗಾಗಿದ್ದ ವಿಜಯ್ ಈಗ ಖುದ್ದು ರಾಜಕಾರಣಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ