The Kerala Story: ಕೇರಳದ 32,000 ಹುಡುಗಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ ಎಂದ ಸಿನಿಮಾ ಟೀಸರ್ ಮೇಲೆ ಕೇಸ್​

The Kerala Story teaser: ‘ದಿ ಕೇರಳ ಸ್ಟೋರಿ’ ಟೀಸರ್​ ಸಖತ್​ ವೈರಲ್​ ಆಗಿದೆ. ಕೇರಳವನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಕಾರಣದಿಂದ ಈ ಟೀಸರ್​ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

The Kerala Story: ಕೇರಳದ 32,000 ಹುಡುಗಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ ಎಂದ ಸಿನಿಮಾ ಟೀಸರ್ ಮೇಲೆ ಕೇಸ್​
ಅದಾ ಶರ್ಮಾ
Follow us
| Updated By: ಮದನ್​ ಕುಮಾರ್​

Updated on:Nov 09, 2022 | 11:17 AM

ಧರ್ಮದ ವಿಚಾರವನ್ನು ಇಟ್ಟುಕೊಂಡು ಮಾಡಿದ ಸಿನಿಮಾಗಳ ಕೊರಳಿಗೆ ವಿವಾದಗಳು ಹುಟ್ಟಿಕೊಳ್ಳುವುದು ಕಾಮನ್​ ಎಂಬಂತಾಗಿದೆ. ಈಗ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಕೂಡ ಕಾಂಟ್ರವರ್ಸಿ ಸೃಷ್ಟಿ ಮಾಡಿದೆ. ಕೆಲವೇ ದಿನಗಳ ಹಿಂದೆ ಈ ಚಿತ್ರದ ಟೀಸರ್​ ಬಿಡುಗಡೆ ಮಾಡಲಾಯಿತು. ಅದರಲ್ಲಿ ಪ್ರಸ್ತಾಪ ಮಾಡಲಾದ ವಿಚಾರಗಳು ಶಾಕಿಂಗ್​ ಆಗಿವೆ. ಕೇರಳದಲ್ಲಿ 32 ಸಾವಿರ ಹುಡುಗಿಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ (Conversion) ಮಾಡಲಾಗಿದೆ ಹಾಗೂ ಅವರನ್ನು ವಿದೇಶಕ್ಕೆ ಕಳಿಸಿ ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂಬ ಡೈಲಾಗ್​ ಈ ಟೀಸರ್​ನಲ್ಲಿದೆ. ಇದು ವಿವಾದ ಹುಟ್ಟುಹಾಕಿದ್ದು, ಸೂಕ್ತ ತನಿಖೆ ನಡೆಸುವಂತೆ ಕೇರಳ ಪೊಲೀಸ್​ ಮಹಾ ನಿರ್ದೇಶಕ ಅನಿಲ್​ ಕಾಂತ್​ ಆದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಖ್ಯಾತ ನಟಿ ಅದಾ ಶರ್ಮಾ (Adah Sharma) ಅವರು ನಟಿಸಿದ್ದಾರೆ.

‘ದಿ ಕೇರಳ ಸ್ಟೋರಿ’ ಟೀಸರ್​ ಸಖತ್​ ವೈರಲ್​ ಆಗಿದೆ. ಕೇರಳವನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಕಾರಣದಿಂದ ಈ ಟೀಸರ್​ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ‘ನನ್ನ ಹೆಸರು ಶಾಲಿನಿ ಉನ್ನಿಕೃಷ್ಣನ್​ ಆಗಿತ್ತು. ನರ್ಸ್​ ಆಗಿ ಜನರ ಸೇವೆ ಮಾಡಬೇಕು ಅಂತ ನಾನು ಬಯಸಿದ್ದೆ. ಈಗ ನಾನು ಫಾತಿಮಾ ಬಾ ಎಂಬ ಐಸಿಸ್​ ಭಯೋತ್ಪಾದಕಿ ಆಗಿದ್ದೇನೆ. ಅಫ್ಘಾನಿಸ್ತಾನದ ಜೈಲಿನಲ್ಲಿ ಇದ್ದೇನೆ’ ಎಂಬ ಡೈಲಾಗ್​ನೊಂದಿಗೆ ಈ ಟೀಸರ್​ ಆರಂಭ ಆಗುತ್ತದೆ.

‘ನಾನು ಒಬ್ಬಳೇ ಅಲ್ಲ. ನನ್ನಂತಹ 32 ಸಾವಿರ ಹುಡುಗಿಯರು ಮತಾಂತರಗೊಂಡು ಸಿರಿಯಾ ಮತ್ತು ಯೆಮನ್​ ಮರುಭೂಮಿಯಲ್ಲಿ ಸತ್ತಿದ್ದಾರೆ. ಕೇರಳದಲ್ಲಿ ಓರ್ವ ಸಿಂಪಲ್​ ಹುಡುಗಿಯನ್ನು ಅಪಾಯಕಾರಿ ಟೆರೆರಿಸ್ಟ್​ ಆಗಿ ಮಾಡುವ ಭಯಂಕರ ಆಟ ನಡೆದಿದೆ. ಅದು ಕೂಡ ಬಹಿರಂಗವಾಗಿ. ಇದನ್ನು ಯಾರೂ ತಡೆಯೋದಿಲ್ಲವೇ? ಇದು ನನ್ನ ಕಥೆ. ಇದು ಆ 32 ಸಾವಿರ ಹುಡುಗಿಯರ ಕಥೆ. ಇದು ಕೇರಳದ ಕಥೆ’ ಎಂಬ ಡೈಲಾಗ್​ ಮೂಲಕ ಟೀಸರ್​ ಕೊನೆಯಾಗುತ್ತದೆ.

ಇದನ್ನೂ ಓದಿ
Image
ಭಗವದ್ಗೀತೆಯಂತಿರುವ ಪುಸ್ತಕದೊಳಗೆ ಬೈಬಲ್ -ಕುರಾನ್ ವೈಭವೀಕರಣ: ಮಲೆನಾಡಿನಲ್ಲಿ ಮತಾಂತರದ ಹೊಸ ತಂತ್ರ
Image
Population Policy: ಮತಾಂತರಗೊಂಡವರಿಗೆ ಮೀಸಲಾತಿ ಸವಲತ್ತು ಸಲ್ಲದು; ಆರ್​ಎಸ್​ಎಸ್​ ನಾಯಕ ದತ್ತಾತ್ರೇಯ ಹೊಸಬಾಳೆ
Image
ಅನ್ಯಧರ್ಮಕ್ಕೆ ಮತಾಂತರಗೊಳ್ಳುವ SC, STಯವರಿಗೆ ಮೀಸಲಾತಿ ನೀಡಬೇಡಿ: ಸರ್ಕಾರಕ್ಕೆ VHP ರಾಷ್ಟ್ರೀಯ ಕಾರ್ಯಾಧ್ಯಕ್ಷ ಮನವಿ
Image
ಯುವಕನ ಬಲವಂತದ ಮತಾಂತರ ಪ್ರಕರಣ: ಮಾಜಿ ಕಾರ್ಪೊರೇಟರ್ ಸೇರಿ ಐವರ ಬಂಧನ, ಡೈವೋರ್ಸ್​ ದಂಧೆ ಬಯಲಿಗೆ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:17 am, Wed, 9 November 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ