AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಕಿ ಭಾಯ್ ಸಾವಿಗೂ ‘ಸಲಾರ್​’ ಚಿತ್ರಕ್ಕೂ ಇಲ್ಲ ಕನೆಕ್ಷನ್; ಸ್ಪಷ್ಟಪಡಿಸಿದ ಪ್ರಶಾಂತ್ ನೀಲ್

‘ಸಲಾರ್’ ಟೀಸರ್ ಬಿಡುಗಡೆ ಸಮಯಕ್ಕೂ, ‘ಕೆಜಿಎಫ್ 2’ ಚಿತ್ರದಲ್ಲಿ ರಾಕಿ ಭಾಯ್ ಸಾಯುವ ಸಮಯಕ್ಕೂ ಒಂದು ಸಂಬಂಧ ಇತ್ತು. ಇದು ಕಾಕತಾಳಿಯವೋ ಅಥವಾ ನಿಜವಾಗಲೂ ಲಿಂಕ್ ಇದೆಯೋ ಎನ್ನುವ ಅನುಮಾನ ಮೂಡಿತ್ತು. ಆದರೆ, ಈಗ ರಿಲೀಸ್ ಆಗಿರೋ ಎರಡೂ ಟ್ರೇಲರ್​ನಲ್ಲಿ ಯಾವುದೇ ಲಿಂಕ್ ಕಂಡು ಬಂದಿಲ್ಲ.

ರಾಕಿ ಭಾಯ್ ಸಾವಿಗೂ ‘ಸಲಾರ್​’ ಚಿತ್ರಕ್ಕೂ ಇಲ್ಲ ಕನೆಕ್ಷನ್; ಸ್ಪಷ್ಟಪಡಿಸಿದ ಪ್ರಶಾಂತ್ ನೀಲ್
ಪ್ರಶಾಂತ್ ನೀಲ್
Follow us
ರಾಜೇಶ್ ದುಗ್ಗುಮನೆ
|

Updated on:Dec 19, 2023 | 8:27 AM

ಪ್ರಶಾಂತ್ ನೀಲ್ (Prashanth Neel) ಅವರ ನಿರ್ದೇಶನದ ‘ಸಲಾರ್’ ಸಿನಿಮಾ ರಿಲೀಸ್​​ಗೆ ರೆಡಿ ಇದೆ. ಡಿಸೆಂಬರ್ 22ರಂದು ಈ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಕೆಜಿಎಫ್’ (KGF) ಸರಣಿಯ ಯಶಸ್ಸಿನ ಬಳಿಕ ಪ್ರಶಾಂತ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದು ಎನ್ನುವ ಕಾರಣಕ್ಕೂ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ‘ಸಲಾರ್’ ಚಿತ್ರಕ್ಕೂ ‘ಕೆಜಿಎಫ್ 2’ಗೂ ಅನೇಕರು ಕನೆಕ್ಷನ್ ಹುಡುಕಿದ್ದರು. ಆದರೆ, ಆ ರೀತಿಯ ಕನೆಕ್ಷನ್ ಇಲ್ಲ ಎಂದು ಪ್ರಶಾಂತ್ ನೀಲ್ ಅವರು ಸ್ಪಷ್ಟಪಡಿಸಿದ್ದಾರೆ.

ಮೇಕಿಂಗ್​ ನೋಡಿದ ಅನೇಕರು ‘ಸಲಾರ್’ ಹಾಗೂ ‘ಕೆಜಿಎಫ್ 2’ ಚಿತ್ರಕ್ಕೆ ಸಂಬಂಧ ಕಲ್ಪಿಸಿದ್ದರು. ‘ಸಲಾರ್’ ಟೀಸರ್ ಬಿಡುಗಡೆ ಸಮಯಕ್ಕೂ, ‘ಕೆಜಿಎಫ್ 2’ ಚಿತ್ರದಲ್ಲಿ ರಾಕಿ ಭಾಯ್ ಸಾಯುವ ಸಮಯಕ್ಕೂ ಒಂದು ಸಂಬಂಧ ಇತ್ತು. ಇದು ಕಾಕತಾಳಿಯವೋ ಅಥವಾ ನಿಜವಾಗಲೂ ಲಿಂಕ್ ಇದೆಯೋ ಎನ್ನುವ ಅನುಮಾನ ಮೂಡಿತ್ತು. ಆದರೆ, ಈಗ ರಿಲೀಸ್ ಆಗಿರೋ ಎರಡೂ ಟ್ರೇಲರ್​ನಲ್ಲಿ ಯಾವುದೇ ಲಿಂಕ್ ಕಂಡು ಬಂದಿಲ್ಲ. ಇದು ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಈಗ ಪ್ರಶಾಂತ್ ನೀಲ್ ಕಡೆಯಿಂದಲೇ ಇದಕ್ಕೆ ಸ್ಪಷ್ಟನೆ ಸಿಕ್ಕಿದೆ.

‘ಅಭಿಮಾನಿಗಳು ಹೇಳಿದ ಎಲ್ಲಾ ಸಿದ್ಧಾಂತಗಳನ್ನು ನೋಡಿದ ಬಳಿಕ ಕೆಜಿಎಫ್ ಸಿನಿಮಾ ಎಷ್ಟು ದೊಡ್ಡದು ಎಂಬುದನ್ನು ನಾನು ಅರಿತುಕೊಂಡೆ. ಜನರು ಸಲಾರ್‌ನ ಟೋನ್‌ನ ಕೆಜಿಎಫ್‌ಗೆ ಹೋಲಿಸಲು ಪ್ರಾರಂಭಿಸಿದರು. ನಾನು ಈ ರೀತಿಯ ವಿಚಾರಗಳನ್ನು ಮೊದಲೇ ಗುರುತಿಸಬೇಕಾಗಿತ್ತು. ಕೆಜಿಎಫ್ ಯೂನಿವರ್ಸ್​ಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ನಾನು ಮೊದಲೇ ಸ್ಪಷ್ಟಪಡಿಸಬೇಕಿತ್ತು’ ಎಂದಿದ್ದಾರೆ ಪ್ರಶಾಂತ್ ನೀಲ್.

‘ಕೆಜಿಎಫ್ ಎರಡನೇ ಪಾರ್ಟ್​​ ರಿಲೀಸ್​ಗೆ ಒಂದು ವರ್ಷ ಇರುವಾಗಲೇ ಸಲಾರ್ ಚಿತ್ರದ ಸ್ಕ್ರಿಪ್ಟ್​ಗಳು ರೆಡಿ ಆಗಿದ್ದವು. ಕೆಜಿಎಫ್ ಯಶಸ್ಸು ತುಂಬಾನೇ ದೊಡ್ಡದು. ಆದರೆ, ಅದು ಸಲಾರ್ ಚಿತ್ರದ ಸ್ಕ್ರಿಪ್ಟ್ ಮೇಲೆ ಯಾವುದೇ ಪ್ರಭಾವ ಬೀರಿಲ್ಲ’ ಎಂದಿದ್ದಾರೆ ಪ್ರಶಾಂತ್ ನೀಲ್.

ಇದನ್ನೂ ಓದಿ: ‘ಸಲಾರ್’ ಚಿತ್ರದಲ್ಲಿ ಅಷ್ಟೊಂದು ವೈಲೆನ್ಸ್ ಏಕೆ? ಉತ್ತರಿಸಿದ ಪ್ರಶಾಂತ್ ನೀಲ್

‘ಉಗ್ರಂ’ ಸಿನಿಮಾದಲ್ಲಿ ಫ್ರೆಂಡ್​ಶಿಪ್ ಕಥೆ ಇತ್ತು. ಇದೇ ಎಳೆಯನ್ನು ‘ಸಲಾರ್’ ಚಿತ್ರಕ್ಕೂ ಬಳಸಿದಂತಿದೆ. ಪೂರ್ತಿ ಸಿನಿಮಾ ನೋಡಿದ ಬಳಿಕವೇ ಈ ಬಗ್ಗೆ ತಿಳಿಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:07 am, Tue, 19 December 23

ಮಣ್ಣೆತ್ತಿನ ಅಮಾವಾಸ್ಯೆ ಮಹತ್ವ ಹಾಗೂ ಆಚರಣೆ ಬಗ್ಗೆ ತಿಳಿಯಿರಿ
ಮಣ್ಣೆತ್ತಿನ ಅಮಾವಾಸ್ಯೆ ಮಹತ್ವ ಹಾಗೂ ಆಚರಣೆ ಬಗ್ಗೆ ತಿಳಿಯಿರಿ
Daily Horoscope: ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
Daily Horoscope: ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ಅಬ್ಬಬ್ಬಾ...ಒಂದೇ ಬೈಕ್​​ ನಲ್ಲಿ 5 ಜನ ಸವಾರಿ, ಈ ವಿಡಿಯೋ ನೋಡ್ರಿ
ಅಬ್ಬಬ್ಬಾ...ಒಂದೇ ಬೈಕ್​​ ನಲ್ಲಿ 5 ಜನ ಸವಾರಿ, ಈ ವಿಡಿಯೋ ನೋಡ್ರಿ
ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ
ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ
ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಓಕೆ ಅಂತಾಳೆ; ಪತ್ನಿ ಬಗ್ಗೆ ಮಾತಾಡಿದ ಹಂಸಲೇಖ
ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಓಕೆ ಅಂತಾಳೆ; ಪತ್ನಿ ಬಗ್ಗೆ ಮಾತಾಡಿದ ಹಂಸಲೇಖ
ರಾಷ್ಟ್ರಪತಿಯವರನ್ನು ಭೇಟಿಯಾಗಿ ಮಸೂದೆಗಳ ಅನುಮೋದನೆ ಜ್ಞಾಪಿಸಿದೆವು: ಸಿಎಂ
ರಾಷ್ಟ್ರಪತಿಯವರನ್ನು ಭೇಟಿಯಾಗಿ ಮಸೂದೆಗಳ ಅನುಮೋದನೆ ಜ್ಞಾಪಿಸಿದೆವು: ಸಿಎಂ
ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಚಿವ
ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಚಿವ
ಈಗ ಅನುಮತಿ ನೀಡಿದರೆ ಏನು ಪ್ರಯೋಜನ? ಪತ್ರಕ್ಕೆ ಉತ್ತರ ಕೂಡ ಇಲ್ಲ: ಖರ್ಗೆ
ಈಗ ಅನುಮತಿ ನೀಡಿದರೆ ಏನು ಪ್ರಯೋಜನ? ಪತ್ರಕ್ಕೆ ಉತ್ತರ ಕೂಡ ಇಲ್ಲ: ಖರ್ಗೆ