
ಬಿಗ್ ಬಾಸ್ನಲ್ಲಿ (Bigg Boss) ಕಳೆದ ವಾರ ಭರ್ಜರಿ ಫೈಟ್ ಏರ್ಪಟ್ಟಿತ್ತು. ಎರಡು ಟೀಂಗಳ ಕ್ಯಾಪ್ಟನ್ಗಳ ಮಧ್ಯೆಯೇ ಜಿದ್ದು ಮೂಡಿದ್ದರಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಯಿತು. ಟಾಸ್ಕ್ ಎಲ್ಲವೂ ಹಾಳಾಯಿತು ಎಂದು ಅನೇಕರು ಬೇಸರ ಹೊರಹಾಕಿದರು. ಈ ವಿಚಾರಕ್ಕೆ ಸಂಬಂಧಿಸಿ ವಿನಯ್ ಹಾಗೂ ನಮ್ರತಾಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ಗುಂಪುಗಾರಿಕೆ ಹಾಗೆಯೇ ಮುಂದುವರಿದಿರಬಹುದು. ಆದರೆ, ಕೋಪ, ಪಿತೂರಿ ಕೊಂಚ ಕಡಿಮೆ ಆಗಿದೆ. ವಿನಯ್ ಆ್ಯಂಡ್ ಗ್ಯಾಂಗ್ನಲ್ಲಿ ಭಯ ಎದ್ದು ಕಾಣುತ್ತಿದೆ.
ಬಿಗ್ ಬಾಸ್ನಲ್ಲಿ ವಿಶೇಷ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ನಲ್ಲಿ ಗೆದ್ದರೆ ಒಬ್ಬರನ್ನು ಸೇವ್ ಮಾಡಬೇಕು ಎನ್ನುವ ಆದೇಶ ಬರುತ್ತದೆ. ಪ್ರತಾಪ್ ಅವರ ತಂಡ ಎರಡಕ್ಕೆ ಎರಡು ಮ್ಯಾಚ್ ಗೆದ್ದಿತ್ತು. ಈ ವೇಳೆ ಪ್ರತಾಪ್ ಮೊದಲು ಭಾಗ್ಯಶ್ರೀ ಅವರನ್ನು ಸೇವ್ ಮಾಡಿದರು. ಎರಡನೇ ಬಾರಿಗೆ ಸಂಗೀತಾ ಅವರನ್ನು ರಕ್ಷಿಸಿದರು. ಮೂರನೇ ಮ್ಯಾಚ್ ಕೂಡ ಪ್ರತಾಪ್ ತಂಡವೇ ಗೆದ್ದಿದೆ. ಈ ವೇಳೆ ಅವರು ಯಾರನ್ನು ಸೇವ್ ಮಾಡಬಹುದು ಎನ್ನುವ ಕುತೂಹಲ ಮೂಡಿತು.
ವಜ್ರಕಾಯ ತಂಡದಲ್ಲಿರುವ ಈಶಾನಿಗೆ ತಾವು ಹೊರಹೋಗುವ ಭಯ ಕಾಡಿದೆ. ಹೀಗಾಗಿ, ಅವರಿಗೆ ನಾಮಿನೇಷನ್ನಿಂದ ಸೇವ್ ಆಗಬೇಕಿದೆ. ಪ್ರತಾಪ್ಗೆ ಈಗ ಒಬ್ಬರನ್ನು ಸೇವ್ ಮಾಡುವ ಅಧಿಕಾರ ಇರುವುದರಿಂದ ಹೇಗಾದರೂ ಮಾಡಿ ಪ್ರತಾಪ್ನ ಮೈಂಡ್ವಾಶ್ ಮಾಡಬೇಕು ಎಂದು ಸಂತೋಷ್ ಪ್ಲಾನ್ ಮಾಡಿದರು. ಆದರೆ, ಇದಕ್ಕೆ ವಿನಯ್ ಹಾಗೂ ನಮ್ರತಾ ಒಪ್ಪಲಿಲ್ಲ.
‘ಮೈಕೆಲ್ಗೆ ತಂಡದ ಬಗ್ಗೆಯೇ ಅಸಮಾಧಾನ ಇದೆ. ಅವನ ಬಳಿ ಹೋಗಿ ನಾವು ಸೇವ್ ಮಾಡುವ ವಿಚಾರದ ಬಗ್ಗೆ ಪ್ರಸ್ತಾಪ ಇಡಬಹುದು. ತಂಡದ ಜೊತೆ ಹೋಗಿ ಮಾತನಾಡಿ ಎಂದು ಹೇಳಬಹುದು’ ಎಂದಿದ್ದಾರೆ ಸಂತೋಷ್. ‘ಬೇಡ ಮಗಾ.. ಅದು ಮ್ಯಾಚ್ ಫಿಕ್ಸಿಂಗ್ ಆಗುತ್ತದೆ. ಆ ರೀತಿ ಮಾಡೋದು ಬೇಡ’ ಎಂದರು ವಿನಯ್. ಆ ಬಳಿಕ ಸಂತೋಷ್ ಸುಮ್ಮನಾದರು.
ಇದನ್ನೂ ಓದಿ: ಪ್ರತಾಪ್ಗೆ ಗಾಳ ಹಾಕಿದ ಸಂತೋಷ್, ವಿನಯ್, ಸ್ನೇಹಿತ್; ಇದು ಸುಲಭಕ್ಕೆ ಬೀಳೋ ಮೀನಲ್ಲ
ಸಂತೋಷ್ ಅವರು ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ಇಷ್ಟ ಆಗುತ್ತಿಲ್ಲ. ಅವರು ಶಕುನಿ ರೀತಿ ವರ್ತಿಸುತ್ತಿದ್ದಾರೆ ಎನ್ನುವ ಅಭಿಪ್ರಾಯ ಅನೇಕರಿಂದ ವ್ಯಕ್ತವಾಗಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅವರು ಬೇಗ ಎಲಿಮಿನೇಟ್ ಆಗಲಿ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಕಲರ್ಸ್ ಕನ್ನಡದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವಿಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ