AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ನಿರ್ದೇಶಕನಿಗೆ ಐಶಾರಾಮಿ ಕಾರು ಕೊಟ್ಟ ವಿಜಯ್ ಸೇತುಪತಿ

Vijay Sethupathi: ವಿಜಯ್ ಸೇತುಪತಿ ನಟನೆಯ 50ನೇ ಸಿನಿಮಾ ‘ಮಹಾರಾಜ’ ನಿರ್ದೇಶಕನಿಗೆ ಭಾರಿ ದುಬಾರಿ ಹಾಗೂ ಐಶಾರಾಮಿ ಕಾರೊಂದನ್ನು ವಿಜಯ್ ಸೇತುಪತಿ ಉಡುಗೊರೆಯಾಗಿ ನೀಡಿದ್ದಾರೆ.

ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ನಿರ್ದೇಶಕನಿಗೆ ಐಶಾರಾಮಿ ಕಾರು ಕೊಟ್ಟ ವಿಜಯ್ ಸೇತುಪತಿ
 ಶ್ರೀಲಕ್ಷ್ಮೀ ಎಚ್
| Edited By: |

Updated on:Oct 17, 2024 | 2:25 PM

Share

ವಿಜಯ್ ಸೇತುಪತಿ ಭಾರತದ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರು. ನಾಯಕ, ವಿಲನ್, ಪೋಷಕ ಪಾತ್ರ, ಕಲಾತ್ಮಕ, ಕಮರ್ಶಿಯಲ್, ಬ್ರಿಜ್ ಎಲ್ಲ ರೀತಿಯ ಸಿನಿಮಾ, ಪಾತ್ರಗಳಲ್ಲಿ ನಟಿಸುವ ವಿಜಯ್ ಸೇತುಪತಿಗೆ ದೊಡ್ಡ ಅಭಿಮಾನಿ ವರ್ಗವೇ ಇದೆ. ಇತ್ತೀಚೆಗಷ್ಟೆ ವಿಜಯ್ ಸೇತುಪತಿ ತಮ್ಮ 50ನೇ ಸಿನಿಮಾದಲ್ಲಿ ನಟಿಸಿದರು. ಸಣ್ಣ ಬಜೆಟ್​ನ ಈ ಸಿನಿಮಾ ದೊಡ್ಡ ಹಿಟ್ ಆಗಿದ್ದು ಮಾತ್ರವೇ ಅಲ್ಲದೆ ವಿಜಯ್ ಸೇತುಪತಿಗೆ ಭಾರಿ ದೊಡ್ಡ ಲಾಭವನ್ನೂ ಮಾಡಿಕೊಟ್ಟಿತು. ವಿಶೇಷ ಏನೆಂದರೆ ಈ ಸಿನಿಮಾಕ್ಕೆ ಸೇತುಪತಿ ಬಂಡವಾಳವೂ ಹಾಕಿರಲಿಲ್ಲ ಆದರೂ ಭಾರಿ ಲಾಭವನ್ನೇ ಈ ಸಿನಿಮಾದಿಂದ ಮಾಡಿಕೊಂಡರು ಅದೇ ಕಾರಣಕ್ಕೆ ಸಿನಿಮಾದ ನಿರ್ದೇಶಕನಿಗೆ ಐಶಾರಾಮಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ವಿಜಯ್ ಸೇತುಪತಿ ‘ಮಹಾರಾಜ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಸಣ್ಣ ಬಜೆಟ್​ನ ಈ ಸಿನಿಮಾದಲ್ಲಿ ನಾಯಕನ ಪಾತ್ರದಲ್ಲಿ ವಿಜಯ್ ನಟಿಸಿದ್ದರು. ಸಿನಿಮಾ ನಿರ್ದೇಶನ ಮಾಡಿದ್ದು ನಿತಿಲನ್ ಸ್ವಾಮಿನಾಥನ್, ಮಗಳ ಮೇಲೆ ಅತ್ಯಾಚಾರ ಮಾಡಿದವನನ್ನು ಹುಡುಕುವ ತಂದೆಯ ಪಾತ್ರದಲ್ಲಿ ವಿಜಯ್ ನಟಿಸಿದ್ದರು. ಸಿನಿಮಾದ ವಿಲನ್ ಪಾತ್ರದಲ್ಲಿ ಹಿಂದಿಯ ಖ್ಯಾತ ನಿರ್ದೇಶನ ಅನುರಾಗ್ ಕಶ್ಯಪ್ ನಟಿಸಿದ್ದರು. ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು.

ಸಣ್ಣ ಬಜೆಟ್​ನ ಸಿನಿಮಾ ಆಗಿದ್ದರೂ ಸಹ ಚಿತ್ರಮಂದಿರದಲ್ಲಿಯೇ 100 ಕೋಟಿಗೂ ಹೆಚ್ಚು ಹಣ ಗಳಿಸಿತು. ನೆಟ್​ಫ್ಲಿಕ್ಸ್​, ಭಾರಿ ದೊಡ್ಡ ಮೊತ್ತ ನೀಡಿ ಸಿನಿಮಾವನ್ನು ಖರೀದಿ ಮಾಡಿತು. ನೆಟ್​ಫ್ಲಿಕ್ಸ್​ನಲ್ಲಿ ಅಂತೂ ಕೆಲವು ವಾರಗಳ ವರೆಗೆ ಈ ಸಿನಿಮಾ ಟಾಪ್​ನಲ್ಲಿತ್ತು. ಉತ್ತರ ಭಾರತದ ಜನರಂತೂ ಸಿನಿಮಾ ನೋಡಿ ದಂಗಾಗಿ ಹೋದರು. ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಪ್ರಶಂಸೆಗಳ ಸುರಿಮಳೆಯೇ ಸುರಿಯಿತು.

ಇದನ್ನೂ ಓದಿ:ಕರಣ್ ಜೋಹರ್​ಗೆ ಶುರು ಆಗಿದೆಯಾ ಗಂಭೀರ ಕಾಯಿಲೆ? ಕಳವಳ ವ್ಯಕ್ತಪಡಿಸಿದ ನೆಟ್ಟಿಗರು

ಸಿನಿಮಾದ ನಿರ್ದೇಶಕ ನಿತಿಲನ್ ಸ್ವಾಮಿನಾಥನ್​ಗೆ ವಿಜಯ್ ಸೇತುಪತಿ ಹಾಗೂ ಸಿನಿಮಾದ ನಿರ್ಮಾಪಕರಾದ ಸುಧಾನ್ ಸುಂದರಮ್ ಹಾಗೂ ಜಗದೀಶ್ ಪಳನಿಸ್ವಾಮಿ ಅವರುಗಳು ಒಟ್ಟಾಗಿ ಬಿಎಂಡಬ್ಲು ಕಾರು ನೀಡಿದ್ದಾರೆ. ಈ ಐಶಾರಾಮಿ ಕಾರಿನ ಬೆಲೆ ಸುಮಾರು 1 ಕೋಟಿ ರೂಪಾಯಿಗಳು ಎನ್ನಲಾಗುತ್ತಿದೆ. ಅಂದಹಾಗೆ ‘ಮಹಾರಾಜ’ ನಿತಿಲನ್ ಅವರ ಎರಡನೇ ಸಿನಿಮಾ ಈ ಮೊದಲು 2017 ರಲ್ಲಿ ‘ಕೊರಂಗು ಬೊಮ್ಮೈ’ ಹೆಸರಿನ ಸಿನಿಮಾ ಮಾಡಿದ್ದರು. ಆ ಸಿನಿಮಾ ಸಹ ಹಿಟ್ ಆಗಿತ್ತು. ಅದೇ ಸಿನಿಮಾವನ್ನು ಕನ್ನಡದಲ್ಲಿ ‘ಒಂಬತ್ತನೇ ದಿಕ್ಕು’ ಹೆಸರಿನಲ್ಲಿ ರೀಮೇಕ್ ಆಗಿ, ಲೂಸ್ ಮಾದ ನಾಯಕನಾಗಿ ನಟಿಸಿದ್ದರು.

ಅಂದಹಾಗೆ ಈ ಸಿನಿಮಾಕ್ಕೆ ವಿಜಯ್ ಸೇತುಪತಿ ಬಂಡವಾಳ ಹಾಕಿರಲಿಲ್ಲ, ಬಜೆಟ್ ಕಡಿಮೆ ಇದ್ದು ಸಿನಿಮಾದ ಕತೆ ಇಷ್ಟವಾದ ಕಾರಣ ಲಾಭದಲ್ಲಿ ಇಂತಿಷ್ಟು ಪಾಲು ಪಡೆದುಕೊಳ್ಳುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಇದೀಗ ಅದೇ ವಿಜಯ್ ಸೇತುಪತಿ ಪಾಲಿಗೆ ದೊಡ್ಡ ಲಾಭವಾಗಿ ಪರಿಣಿಮಿಸಿದ್ದು, ಸುಮಾರು 50 ಕೋಟಿ ರೂಪಾಯಿ ಹಣ ವಿಜಯ್ ಸೇತುಪತಿಗೆ ಈ ಸಿನಿಮಾದಿಂದ ಸಿಕ್ಕಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:06 pm, Tue, 8 October 24

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?