‘ಮಗಳೆಂದು ಕಲ್ಪಿಸಿಕೊಂಡವಳ ಜೊತೆ ಅಂಥ ಕೆಲಸ ಮಾಡಲ್ಲ’; ಕೃತಿ ಶೆಟ್ಟಿ ಬಗ್ಗೆ ವಿಜಯ್​ ಸೇತುಪತಿ ಖಡಕ್​ ನಿರ್ಧಾರ

ಕೃತಿ ಶೆಟ್ಟಿ ಜೊತೆ ಹೀರೋ​ ಆಗಿ ನಟಿಸುವಂತೆ ಹೊಸ ಚಿತ್ರತಂಡದವರು ವಿಜಯ್​ ಸೇತುಪತಿಗೆ ಆಫರ್​ ನೀಡಿದ್ದರು. ಅದನ್ನು ಮುಲಾಜಿಲ್ಲದೇ ಅವರು ತಿರಸ್ಕರಿಸಿದ್ದಾರೆ.

‘ಮಗಳೆಂದು ಕಲ್ಪಿಸಿಕೊಂಡವಳ ಜೊತೆ ಅಂಥ ಕೆಲಸ ಮಾಡಲ್ಲ’; ಕೃತಿ ಶೆಟ್ಟಿ ಬಗ್ಗೆ ವಿಜಯ್​ ಸೇತುಪತಿ ಖಡಕ್​ ನಿರ್ಧಾರ
ವಿಜಯ್​ ಸೇತುಪತಿ, ಕೃತಿ ಶೆಟ್ಟಿ
Follow us
| Updated By: ಮದನ್​ ಕುಮಾರ್​

Updated on:Sep 06, 2021 | 8:21 AM

ದಕ್ಷಿಣ ಭಾರತದ ಸ್ಟಾರ್​ ನಟ ವಿಜಯ್​ ಸೇತುಪತಿ ಅವರಿಗೆ ದೊಡ್ಡಮಟ್ಟದ ಬೇಡಿಕೆ ಇದೆ. ಅವರ ಕಾಲ್​ಶೀಟ್​ಗಾಗಿ ನಿರ್ಮಾಪಕರು ಸಾಲುಗಟ್ಟಿ ನಿಲ್ಲುತ್ತಾರೆ. ಹೀರೋ, ವಿಲನ್​, ಪೋಷಕ ಪಾತ್ರ ಹೀಗೆ ಯಾವುದಾದರೂ ಸರಿ ಅದಕ್ಕೆ ನ್ಯಾಯ ಒದಗಿಸುವ ಕಲಾವಿದ ವಿಜಯ್​ ಸೇತುಪತಿ. ಒಟ್ಟಿನಲ್ಲಿ ಅವರ ಪಾತ್ರಕ್ಕೆ ಮಹತ್ವ ಇದ್ದರೆ ಅವರು ಖಂಡಿತಾ ಒಪ್ಪಿಕೊಳ್ಳುತ್ತಾರೆ. ಹಾಗಿದ್ದರೂ ಕೂಡ ಅವರು ಇತ್ತೀಚೆಗೆ ಒಂದು ಸಿನಿಮಾವನ್ನು ರಿಜೆಕ್ಟ್​ ಮಾಡಿದ್ದಾರೆ. ಆ ಚಿತ್ರಕ್ಕೆ ಕೃತಿ ಶೆಟ್ಟಿ ಹೀರೋಯಿನ್​. ತಾವು ಆ ಸಿನಿಮಾವನ್ನು ಒಪ್ಪಿಕೊಳ್ಳದೇ ಇರಲು ಕಾರಣ ಏನು ಎಂಬುದನ್ನು ವಿಜಯ್​ ಸೇತುಪತಿ ವಿವರಿಸಿದ್ದಾರೆ.

ವಿಜಯ್​ ಸೇತುಪತಿ ನಟನೆಯ ‘ಲಾಭಂ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆ ಚಿತ್ರದ ಪ್ರಚಾರ ಕಾರ್ಯದ ವೇಳೆ ನೀಡಿದ ಸಂದರ್ಶನದಲ್ಲಿ ಅವರು ಕೃತಿ ಶೆಟ್ಟಿ ವಿಚಾರ ಬಾಯಿ ಬಿಟ್ಟಿದ್ದಾರೆ. ‘ಉಪ್ಪೆನಾ’ ಸಿನಿಮಾದಲ್ಲಿ ಕೃತಿ ಶೆಟ್ಟಿ ಮತ್ತು ವಿಜಯ್​ ಸೇತುಪತಿ ನಟಿಸಿದ್ದರು. ತಂದೆ-ಮಗಳ ಪಾತ್ರದಲ್ಲಿ ಅವರಿಬ್ಬರ ಕಾಂಬಿನೇಷನ್​ ಎಲ್ಲರಿಗೂ ಇಷ್ಟ ಆಗಿತ್ತು. ಅದೇ ಕೃತಿ ಜೊತೆ ಹೀರೋ​ ಆಗಿ ನಟಿಸುವಂತೆ ಹೊಸ ಚಿತ್ರತಂಡದವರು ವಿಜಯ್​ ಸೇತುಪತಿಗೆ ಆಫರ್​ ನೀಡಿದ್ದರಂತೆ. ಅದನ್ನು ಮುಲಾಜಿಲ್ಲದೇ ಅವರು ತಿರಸ್ಕರಿಸಿದ್ದಾರೆ.

‘ಕೃತಿಯನ್ನು ನಾನು ಮಗಳೆಂದು ಕಲ್ಪಿಸಿಕೊಂಡಿದ್ದೇನೆ. ಒಮ್ಮೆ ಮಗಳು ಎಂದುಕೊಂಡವಳ ಜೊತೆ ರೊಮ್ಯಾನ್ಸ್​ ಮಾಡಲು ಹೇಗೆ ಸಾಧ್ಯ? ಹೊಸ ಸಿನಿಮಾದವರು ನಮ್ಮ ಉಪ್ಪೆನಾ ಚಿತ್ರವನ್ನು ನೋಡಿರಲಿಲ್ಲ. ಹಾಗಾಗಿ ಅವರು ಈ ಆಫರ್​ ನೀಡಿದರು. ಆದರೆ ನಾನು ಆ ಪಾತ್ರ ಮಾಡುವುದಿಲ್ಲ ಅಂತ ಹೇಳಿದೆ. ಈಗ ಮಾತ್ರವಲ್ಲ, ಇಡೀ ಜೀವನದಲ್ಲೇ ಅದು ಸಾಧ್ಯವಿಲ್ಲ. ಉಪ್ಪೆನಾ ಸಿನಿಮಾದ ಕ್ಲೈಮ್ಯಾಕ್ಸ್​ ಶೂಟಿಂಗ್​ ವೇಳೆ ಕೃತಿಗೆ ನಾನು ಸ್ಪಷ್ಟವಾಗಿ ಹೇಳಿದ್ದೆ. ನಾನು ನಿನ್ನ ತಂದೆ ಅಂತ ತಿಳಿದುಕೋ. ಆಗ ನನ್ನ ಮಗನಿಗೆ 15 ವರ್ಷ ವಯಸ್ಸು. ಕೃತಿ ಕೂಡ 16 ಅಥವಾ 17ರ ಪ್ರಾಯದವಳು. ಆಕೆ ನನ್ನ ಮಗಳಿದ್ದಂತೆ’ ಎಂದು ವಿಜಯ್​ ಸೇತುಪತಿ ಹೇಳಿದ್ದಾರೆ.

ಸದ್ಯ ವಿಜಯ್​ ಸೇತುಪತಿ ಕೈಯಲ್ಲಿ ಹಲವಾರು ಸಿನಿಮಾಗಳಿವೆ. 12ಕ್ಕೂ ಅಧಿಕ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ಅತಿ ಹೆಚ್ಚು ಬ್ಯುಸಿಯಾಗಿರುವ ನಟರ ಸಾಲಿನಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ. ತಾಪ್ಸಿ ಪನ್ನು ಜೊತೆ ಅವರು ನಟಿಸಿರುವ ‘ಅನಬೆಲ್​ ಸೇತುಪತಿ’ ಚಿತ್ರ ಸೆ.17ರಂದು ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ನಲ್ಲಿ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ:

ಬೆಂಗಳೂರಲ್ಲಿ ಜೊತೆಯಾಗಿ ಏನು ಮಾಡ್ತಿದ್ದಾರೆ ತಮನ್ನಾ-ವಿಜಯ್​ ಸೇತುಪತಿ? ಇದು ಸಿನಿಮಾ ಸಮಾಚಾರ ಅಲ್ಲವೇ ಅಲ್ಲ

ಕನ್ನಡದಲ್ಲಿ ಬರ್ತಿದೆ ವಿಜಯ್​ ಸೇತುಪತಿ-ತಾಪ್ಸಿ ಪನ್ನು ಸಿನಿಮಾ; ಸೆ.17ರಂದು ‘ಅನಬೆಲ್​ ಸೇತುಪತಿ’ ರಿಲೀಸ್​

Published On - 8:10 am, Mon, 6 September 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ