AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಜೊತೆ ಕೆಲಸ ಮಾಡುವಾಸೆ: ರಿಷಬ್ ಎದುರು ಬೇಡಿಕೆ ಇಟ್ಟ ವಿಜಯ್

Vijay Sethupathi-Rishab Shetty: ವಿಜಯ್ ಸೇತುಪತಿ ತಮಿಳಿನ ಸ್ಟಾರ್ ನಟ, ತಮಿಳು ಮಾತ್ರವೇ ಅಲ್ಲದೆ ತೆಲುಗು, ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಪೋಷಕ ನಟ, ನಾಯಕ ನಟ, ವಿಲನ್ ಅವರು ಮಾಡದ ಪಾತ್ರಗಳಿಲ್ಲ. ಭಾರತದ ಅತ್ಯುತ್ತಮ ನಟರಲ್ಲಿ ವಿಜಯ್ ಸೇತುಪತಿ ಸಹ ಒಬ್ಬರು. ಇತ್ತೀಚೆಗೆ ವೇದಿಕೆಯೊಂದರಲ್ಲಿ ರಿಷಬ್ ಶೆಟ್ಟಿ ಅವರನ್ನು ಭೇಟಿಯಾದ ವಿಜಯ್ ಸೇತುಪತಿ, ಎಲ್ಲರೆದುರು, ‘ನನಗೆ ನಿಮ್ಮ ಜೊತೆ ನಟಿಸುವ ಆಸೆಯಿದೆ’ ಎಂದಿದ್ದಾರೆ. ವಿಜಯ್ ಅವರ ಬೇಡಿಕೆಗೆ ರಿಷಬ್ ಶೆಟ್ಟಿ ಸಹ ಧನಾತ್ಮಕವಾಗಿ ಸ್ಪಂದಿಸಿದ್ದಾರೆ.

ನಿಮ್ಮ ಜೊತೆ ಕೆಲಸ ಮಾಡುವಾಸೆ: ರಿಷಬ್ ಎದುರು ಬೇಡಿಕೆ ಇಟ್ಟ ವಿಜಯ್
Rishab Vijay
ಮಂಜುನಾಥ ಸಿ.
|

Updated on: Mar 22, 2026 | 3:13 PM

Share

ವಿಜಯ್ ಸೇತುಪತಿ (Vijay Sethupathi) ತಮಿಳಿನ ಸ್ಟಾರ್ ನಟ, ತಮಿಳು ಮಾತ್ರವೇ ಅಲ್ಲದೆ ತೆಲುಗು, ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಪೋಷಕ ನಟ, ನಾಯಕ ನಟ, ವಿಲನ್ ಅವರು ಮಾಡದ ಪಾತ್ರಗಳಿಲ್ಲ. ಭಾರತದ ಅತ್ಯುತ್ತಮ ನಟರಲ್ಲಿ ವಿಜಯ್ ಸೇತುಪತಿ ಸಹ ಒಬ್ಬರು. ಇತ್ತೀಚೆಗೆ ವೇದಿಕೆಯೊಂದರಲ್ಲಿ ರಿಷಬ್ ಶೆಟ್ಟಿ ಅವರನ್ನು ಭೇಟಿಯಾದ ವಿಜಯ್ ಸೇತುಪತಿ, ಎಲ್ಲರೆದುರು, ‘ನನಗೆ ನಿಮ್ಮ ಜೊತೆ ನಟಿಸುವ ಆಸೆಯಿದೆ’ ಎಂದಿದ್ದಾರೆ. ವಿಜಯ್ ಅವರ ಬೇಡಿಕೆಗೆ ರಿಷಬ್ ಶೆಟ್ಟಿ ಸಹ ಧನಾತ್ಮಕವಾಗಿ ಸ್ಪಂದಿಸಿದ್ದಾರೆ.

ಗಲಾಟ ಗ್ಲೋರಿಯಸ್ ಐಕಾನ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ವಿಜಯ್ ಅವರಿಗೆ ಪ್ರಶಸ್ತಿಗೆ ನೀಡಲಾಯ್ತು. ಈ ವೇಳೆ ವೇದಿಕೆ ಮೇಲೆ ರಿಷಬ್ ಶೆಟ್ಟಿ ಸಹ ಹಾಜರಿದ್ದರು, ಮೊದಲು ಮಾತನಾಡಿದ ವಿಜಯ್ ಸೇತುಪತಿ, ‘ನಾನು ಕಾಂತಾರ ಸಿನಿಮಾ ನೋಡಿ ರಿಷಬ್ ಅವರಿಗೆ ಕರೆ ಮಾಡಿದೆ, ನನಗೆ ಆ ಸಿನಿಮಾ ಬಹಳ ಇಷ್ಟವಾಯ್ತು. ಆ ಸಿನಿಮಾ ಒಂದು ರೀತಿ ಜೀವ ತುಂಬಿದಂತಿತ್ತು. ಆ ಜೀವನವನ್ನು ನೋಡಿ, ಅನುಭವಿಸಿದವರಿಗೆ ಮಾತ್ರವೇ ಅಂಥಹಾ ಸಿನಿಮಾ ಮಾಡಲು ಸಾಧ್ಯ. ಅವರನ್ನು ಬಿಟ್ಟು ಇನ್ಯಾರೂ ಸಹ ಮಾಡಲು ಸಾಧ್ಯವಿಲ್ಲ ಎನಿಸುವಂತೆ ಆ ಸಿನಿಮಾನಲ್ಲಿ ಅವರು ನಟಿಸಿದ್ದಾರೆ. ನಾನು ಕರೆ ಮಾಡಿದಾಗ ಪರಿಚಯ ಮಾಡಿಕೊಂಡೆ, ಆದರೆ ಅವರು ಸರ್, ನೀವು ನನಗೆ ಚೆನ್ನಾಗಿ ಗೊತ್ತು, ಎಂದಾಗ ನನಗೆ ಖುಷಿ ಆಯ್ತು’ ಎಂದಿದ್ದಾರೆ.

ಮುಂದುವರೆದು ಮಾತನಾಡಿ, ‘ನಾನು ಸಹ ನಿಮ್ಮ ರೀತಿಯಲ್ಲೇ 2004 ರಲ್ಲಿ ನಟನಾ ವೃತ್ತಿ ಆರಂಭಿಸಿದೆ. ನೀವು ಸಿನಿಮಾದ ಎಲ್ಲ ವಿಭಾಗಗಳನ್ನೂ ಕಲಿತು, ಎಲ್ಲದರಲ್ಲೂ ಯಶಸ್ವಿ ಆಗಿದ್ದೀರಿ, ನಿಮ್ಮಿಂದ ಪ್ರಶಸ್ತಿ ಪಡೆದಿದ್ದು ಸಂತೋಷ’ ಎಂದರು. ಬಳಿಕ ‘ನನಗೆ ನಿಮ್ಮೊಂದಿಗೆ ಕೆಲಸ ಮಾಡುವ ಆಸೆ ಇದೆ. ವೇದಿಕೆ ಮೇಲಿದ್ದೇವೆ ಎಂದು ಈ ಮಾತು ಹೇಳುತ್ತಿಲ್ಲ, ಖಂಡಿತ ನಿಮ್ಮೊಂದಿಗೆ ನಟಿಸುವ ಆಸೆ ಇದೆ’ ಎಂದರು.

ಇದನ್ನೂ ಓದಿ:ಮಣಿರತ್ನಂ ಹೊಸ ಚಿತ್ರದಲ್ಲಿ ಸಾಯಿ ಪಲ್ಲವಿ, ವಿಜಯ್ ಸೇತುಪತಿ ಜೋಡಿ

ಬಳಿಕ ಮಾತನಾಡಿದ ರಿಷಬ್ ಶೆಟ್ಟಿ, ‘ಸರ್ (ವಿಜಯ್ ಸೇತುಪತಿ) ಅವರ ಟೀಂನ ಕಾರ್ತಿಕ್ ಸುಬ್ಬರಾಜು, ಬಾಬಿ ಇನ್ನೂ ಹಲವರು ಮೊದಲಿನಿಂದಲೂ ನನಗೆ ಪರಿಚಯ, ಬೆಂಗಳೂರಿನಲ್ಲಿ ಹಲವು ಬಾರಿ ಅವರನ್ನು ಭೇಟಿ ಮಾಡಿದ್ದೆ. ಕಾಂತಾರ’ ಸಿನಿಮಾ ನೋಡಿ ವಿಜಯ್ ಸೇತುಪತಿ ಅವರು ನನಗೆ ಕರೆ ಮಾಡಿ ಇಂಗ್ಲೀಷ್​​ನಲ್ಲಿ ಮಾತನಾಡಿದರು. ಆದರೆ ನಾನು ತಮಿಳಿನಲ್ಲಿ ಉತ್ತರಿಸಿದೆ. ಆ ಬಳಿಕ ನಮ್ಮ ಮಾತು ತಮಿಳಿನಲ್ಲಿಯೇ ಮುಂದುವರೆಯಿತು. ನಾನು ಅವರ ಸಿನಿಮಾಗಳು, ಸಂದರ್ಶನಗಳನ್ನೆಲ್ಲ ಕೇಳಿದ್ದೇನೆ. ವಡಿವೇಲು ಕಾಮಿಡಿ ಡೈಲಾಗ್ ಇದೆಯಲ್ಲ, ‘ವೈ ಬ್ಲಡ್, ಸೇಮ್ ಬ್ಲಡ್’ ಅದೇ ರೀತಿ’ ಎಂದರು.

‘ವಿಜಯ್ ಸೇತುಪತಿ ಅವರ ‘ವಿಕ್ರಂ ವೇದ’, ‘ಪಿಜ್ಜಾ’, ‘ನಾನುಮ್ ರೌಡಿ ದಾ’ ಸಿನಿಮಾಗಳು ನನಗೆ ಬಹಳ ಇಷ್ಟವಾದ ಸಿನಿಮಾಗಳು’ ಎಂದರು. ಬಳಿಕ ವಿಜಯ್ ಸೇತುಪತಿ ಅವರು, ರಿಷಬ್ ಶೆಟ್ಟಿ ಅವರಿಗೆ ಕತ್ತಿಯೊಂದನ್ನು ನೀಡಿ ಗೌರವಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us