AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆರ್​ಆರ್​​ಆರ್ 2’ ಮಾಡಲ್ಲ’: ನಟರ ಕಾಟಕ್ಕೆ ಹೈರಾಣಾದ ರಾಜಮೌಳಿ

SS Rajamouli: ಈಗ ಭಾರಿ ಟ್ರೆಂಡ್​ನಲ್ಲಿರುವ ಸೀಕ್ವೆಲ್ ಸಿನಿಮಾ ಟ್ರೆಂಡ್ ಅನ್ನು ಪ್ರಾರಂಭ ಮಾಡಿದ್ದೆ ಎಸ್​ಎಸ್ ರಾಜಮೌಳಿ. ಆದರೆ ಅವರೇ ಈಗ ಅದನ್ನು ಫಾಲೋ ಮಾಡುತ್ತಿಲ್ಲ. ‘ಆರ್​ಆರ್​ಆರ್ 2’ ಸಿನಿಮಾ ಮಾಡುತ್ತೀರ ಎಂದು ಕೇಳಿದ್ದಕ್ಕೆ, ಖಂಡಿತ ಇಲ್ಲ ಎಂದಿದ್ದಾರೆ. ಆದರೆ ಅದಕ್ಕೆ ಕತೆ ಇಲ್ಲದಿರುವುದು ಕಾರಣವಲ್ಲ ಬದಲಿಗೆ ನಟರು ಕಾರಣ!

‘ಆರ್​ಆರ್​​ಆರ್ 2’ ಮಾಡಲ್ಲ’: ನಟರ ಕಾಟಕ್ಕೆ ಹೈರಾಣಾದ ರಾಜಮೌಳಿ
Movie
ಮಂಜುನಾಥ ಸಿ.
|

Updated on: May 15, 2025 | 11:03 AM

Share

ಈಗ ಬಹುತೇಕ ಸಿನಿಮಾ (Cinema) ತಂಡಗಳು ಸೀಕ್ವೆಲ್ ಮಾಡುತ್ತಿವೆ. ಇದು ಹೆಚ್ಚು ಲಾಭದಾಯಕ, ಒಂದು ಹಿಟ್ ಸಿನಿಮಾದ ಹೆಸರಿಟ್ಟುಕೊಂಡು ಎರಡು ಸಿನಿಮಾಗಳನ್ನು ಹಿಟ್ ಮಾಡಿಕೊಳ್ಳುವ ಅತಿ ಬುದ್ಧಿವಂತಿದೆ. ಆದರೆ ಈ ಟ್ರೆಂಡ್​ಗೆ ಶ್ರೀಕಾರ ಹಾಕಿದ್ದು ನಿರ್ದೇಶಕ ರಾಜಮೌಳಿ (SS Rajamouli). ‘ಬಾಹುಬಲಿ’, ‘ಬಾಹುಬಲಿ 2’ ಸಿನಿಮಾ ಮೂಲಕ ಸೀಕ್ವೆಲ್ ಟ್ರೆಂಡ್​ಗೆ ಶ್ರೀಕಾರ ಹಾಕಿದ್ದರು. ಈಗ ಎಲ್ಲರೂ ಅದನ್ನೇ ಪಾಲಿಸುತ್ತಿದ್ದಾರೆ. ‘ಬಾಹುಬಲಿ’ ಬಳಿಕ ‘ಆರ್​ಆರ್​ಆರ್’ ಸಿನಿಮಾ ಮಾಡಿದರು ರಾಜಮೌಳಿ ಆ ಸಿನಿಮಾ ಸೂಪರ್ ಹಿಟ್ ಆಯ್ತು. ಆದರೆ ಇತ್ತೀಚೆಗೆ ಆ ಸಿನಿಮಾದ ಸೀಕ್ವೆಲ್ ಮಾಡುತ್ತೀರ ಎಂದು ಕೇಳಿದ್ದಕ್ಕೆ ಯಾವ ಕಾರಣಕ್ಕೂ ಮಾಡುವುದಿಲ್ಲ ಎಂದಿದ್ದಾರೆ. ಅದಕ್ಕೆ ಕತೆ ಇಲ್ಲದಿರುವುದು ಕಾರಣವಲ್ಲ ಬದಲಿಗೆ ಸಿನಿಮಾದ ನಟರು ಕಾರಣ.

ಇತ್ತೀಚೆಗಷ್ಟೆ ಲಂಡನ್​ನಲ್ಲಿ ‘ಆರ್​ಆರ್​ಆರ್’ ಸಿನಿಮಾದ ಮ್ಯೂಸಿಕಲ್ ನೈಟ್ ನಡೆದಿತ್ತು. ಈ ಕಾರ್ಯಕ್ರಮಕ್ಕೆ ರಾಮ್ ಚರಣ್, ಜೂ ಎನ್​ಟಿಆರ್, ರಾಜಮೌಳಿ ಅವರುಗಳು ಹಾಜರಾಗಿದ್ದರು. ಕಾರ್ಯಕ್ರಮದಲ್ಲಿ ರಾಮ್ ಚರಣ್ ಪತ್ನಿ ಉಪಾಸನಾ ಮತ್ತು ಜೂ ಎನ್​ಟಿಆರ್ ಪತ್ನಿ ಲಕ್ಷ್ಮಿ ಪ್ರಣತಿ ಸಹ ಇದ್ದರು. ಕಾರ್ಯಕ್ರಮದ ಬಳಿಕ ಹೋಟೆಲ್​ ರೂಂನಲ್ಲಿ ಜೂ ಎನ್​ಟಿಆರ್, ರಾಮ್ ಚರಣ್ ಅವರುಗಳು ಯಥಾವತ್ತು ರಾಜಮೌಳಿಯವರನ್ನು ಗೋಳು ಹೊಯ್ದುಕೊಂಡರು. ಇಬ್ಬರೂ ಸೇರಿ ರಾಜಮೌಳಿಗೆ ಕಚಗುಳಿ ಇಡುತ್ತಾ ಅವರನ್ನು ಸೋಫಾ ಮೇಲೆ ಬೀಳಿಸಿ, ಸೊಂಟ ಹಿಡಿದು ಎತ್ತಿ ಗೋಳು ಹೊಯ್ದುಕೊಂಡರು.

ಈ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದ ರಾಮ್ ಚರಣ್ ಪತ್ನಿ ಉಪಾಸನಾ ಕೋನಿಡೆಲ, ‘ಏನು ಸರ್, ಈಗ ‘ಆರ್​ಆರ್​ಆರ್ 2’ ಮಾಡುತ್ತೀರ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರಾಜಮೌಳಿ ಖಂಡಿತ ಇಲ್ಲ’ ಇವರ ಕಾಟ ತಾಳಲು ಸಾಧ್ಯವಿಲ್ಲ ಎಂಬರ್ಥದ ಉತ್ತರ ನೀಡಿದ್ದಾರೆ. ಸಿನಿಮಾ ಸೆಟ್​ನಲ್ಲಿಯೂ ಸಹ ರಾಮ್ ಚರಣ್ ಹಾಗೂ ಜೂ ಎನ್​ಟಿಆರ್ ಪರಸ್ಪರ ತರ್ಲೆ, ತಮಾಷೆ ಮಾಡುತ್ತಲೇ ಸಮಯ ಕಳೆದಿದ್ದರು. ರಾಮ್ ಚರಣ್-ಜೂ ಎನ್​ಟಿಆರ್ ಅವರು ‘ಆರ್​ಆರ್​ಆರ್’ ಸೆಟ್​ನಲ್ಲಿ ಮಾಡಿದ ತರ್ಲೆ, ತಮಾಷೆಯ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಹರಿದಾಡುತ್ತಿವೆ.

ಇದನ್ನೂ ಓದಿ:ಅಂದು ಬಾಕ್ಸಿಂಗ್ ಚಾಂಪಿಯನ್, ಇಂದು ರಾಮ್ ಚರಣ್​ಗೆ ಬೌನ್ಸರ್; ಯಾರಿದು?

‘ಆರ್​​ಆರ್​​ಆರ್ 2’ ಸಿನಿಮಾದ ಬಗ್ಗೆ ಈ ಹಿಂದೆ ಸಿನಿಮಾದ ಕತೆಗಾರ ವಿಜಯೇಂದ್ರಪ್ರಸಾದ್ ಮಾತನಾಡಿದ್ದರು. ‘ಆರ್​​ಆರ್​ಆರ್ 2’ ಅನ್ನು ಮಾಡಬಹುದು ಬಹಳ ಕಷ್ಟದ ಕೆಲಸ ಏನಲ್ಲ. ಕೋಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಪಾತ್ರವನ್ನು ಇನ್ನೊಂದು ರೆಸ್ಕ್ಯೂ ಆಪರೇಷನ್​ಗೆ ಹೊರ ದೇಶಕ್ಕೆ ಕಳಿಸಬಹುದು ಎಂದು ಕತೆಯ ಎಳೆಯನ್ನು ಅವರು ನೀಡಿದ್ದರು. ಆದರೆ ‘ಆರ್​ಆರ್​​ಆರ್ 2’ ನಿರ್ಮಾಣ ಮಾಡಲಾಗುತ್ತಿಲ್ಲ, ಪ್ರಸ್ತುತ ರಾಜಮೌಳಿ ಮಹೇಶ್ ಬಾಬು ಜೊತೆಗಿನ ಸಿನಿಮಾನಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ