AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepavali: ದೀಪಾವಳಿ ಸಂಭ್ರಮದ ಹಿಂದೆ ಪಟಾಕಿ ಉತ್ಪಾದಕರ ಕೊಡುಗೆ

ಪ್ರತಿ ವರ್ಷ ಇಡೀ ದೇಶವೇ ದೀಪಾವಳಿ ಹಬ್ಬಕ್ಕಾಗಿ ಕಾಯುತ್ತದೆ. ಆ ಹಬ್ಬ ಇಂದು ಬಂದೇ ಬಿಟ್ಟಿತು. ಇಂದಿನಿಂದ ದೇಶವಾಸಿಗಳು ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದು, ನಾಡಿನೆಲ್ಲೆಡೆ ಸಂಭ್ರಮ ಸಡಗರದ ವಾತಾವರಣ ಮೂಡಿದೆ.

Deepavali: ದೀಪಾವಳಿ ಸಂಭ್ರಮದ ಹಿಂದೆ ಪಟಾಕಿ ಉತ್ಪಾದಕರ ಕೊಡುಗೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Oct 24, 2022 | 7:30 AM

Share

ಬೆಳಕಿನ ಹಬ್ಬ ಎಂದೇ ಕರೆಯಲ್ಪಡುವ ದೀಪಾವಳಿ (Deepavali) ಮನೆ ಮತ್ತು ಮನಸ್ಸಿನ ಕತ್ತಲೆಯನ್ನು ಹೋಗಲಾಡಿಸಿ ಬೆಳಕು ತರುವ ಹಬ್ಬವಾಗಿದೆ. ಪ್ರತಿ ವರ್ಷ ಹೊಸತನ ತುಂಬುವ ಹಬ್ಬ ದೀಪಾವಳಿ ಆರಂಭಕ್ಕೆ ಒಂದು ವಾರ ಇರುವಾಗಲೇ ಮನೆಯಲ್ಲಿ ಸಂಭ್ರಮ ಮನೆ ಮಾಡುತ್ತದೆ. ದೀಪಾವಳಿ ಹಬ್ಬ ಇಂದಿಗೂ ಹಳೆತನದ ಬೇರಿನ ಜೊತೆಗೆ ಹೊಸತನದ ಸೊಗಡನ್ನು ಸಾಗಿಸಿಕೊಂಡು ಬರುತ್ತಿದೆ ಎಂಬುದೇ ಒಂದು ಖುಷಿಯ ವಿಚಾರ. ದೀಪಾವಳಿ ಎಂದಾಗ ಮೊದಲಿಗೆ ನೆನಪಾಗುವುದೇ ಪಟಾಕಿ ಸದ್ದು. ಊರಿನ ಒಂದಷ್ಟು ಮನೆಗಳಲ್ಲಿ ಪಟಾಕಿ ಸದ್ದು ಪ್ರತಿ ವರ್ಷ ದೀಪಾವಳಿ ದಿನ ಕಿವಿಗೆ ಬೀಳುತ್ತದೆ. ಹಬ್ಬದ ಮೆರುಗು ಹೆಚ್ಚುವುದೇ ಅಕ್ಕ ಪಕ್ಕದ ಮನೆಯಿಂದ ಕೇಳುವಂತ ಪಟಾಕಿಯ ಶಬ್ದ. ಈ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆಸಿಕೊಂಡು ಬರಲಾಗಿದೆ.

ಪಟಾಕಿ ಇಲ್ಲದ ದೀಪಾವಳಿಯನ್ನು ಇಂದಿಗೂ ಊಹಿಸಲು ಸಾಧ್ಯವಿಲ್ಲ. ದೀಪಗಳ ಬೆಳಕಿನಿಂದ ಸುಂದರಗೊಳ್ಳುವ ಈ ಹಬ್ಬದಂದು ಸಣ್ಣ ಮಕ್ಕಳಿನಿಂದ ಹಿರಿಯರವರೆಗೆ ಎಲ್ಲರೂ ಸಂಜೆ ಯಾವಾಗ ಆಗುತ್ತದೆಯೋ, ಪಟಾಕಿ ಯಾವಾಗ ಸಿಡಿಸುತ್ತೆವೋ ಎಂದು ಕಾಯುತ್ತಿರುತ್ತಾರೆ. ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬಕ್ಕೆ ವಿವಿಧ ರೀತಿಯಾದ ಪಟಾಕಿಗಳನ್ನು ತಯಾರು ಮಾಡುವ ಉತ್ಪಾದಕರ ಜೀವನ ಹೇಗೆ ಇರುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಏಕೆಂದರೆ ನಾವು ಪಟಕಿಯನ್ನು ಸುಲಭವಾಗಿ ಮರುಕಟ್ಟೆಯಿಂದ ತೆಗೆದುಕೊಳ್ಳಬಹುದು. ಅದರೆ ಪಟಾಕಿ ಮಾಡುವ ಉತ್ಪಾದಕರ ಜೀವನವೇ ಒಂದು ಕಷ್ಟದ ವಿಷಯ. ಬೆಂಕಿಯ ಮೇಲೆ ನಿಂತಾಗಿದೆ ಎಂಬ ಮಾತು ಪಟಾಕಿ ತಯಾರು ಮಾಡುವ ಉತ್ಪಾದಕರಿಗೆ ಹೋಲುತ್ತದೆ. ಅತ್ಯಂತ ಅಪಾಯವಾದ ಕಾರ್ಯವನ್ನು ಮಾಡುವ ಇವರು ಪ್ರತಿ ದಿನವು ತನ್ನ ಜೀವವನ್ನು ಕೈಯಲ್ಲಿ ಇಟ್ಟುಕೊಂಡು ತನ್ನ ಜೀವನ ಉಪಯೋಗಕ್ಕಾಗಿ ಕೆಲಸ ಮಾಡುತ್ತಾರೆ. ಜೀವ ಕೈಯಲ್ಲಿ ಹಿಡಿದುಕೊಂಡು ಪಟಾಕಿಯನ್ನು ತಯಾರಿಸಿ ಎಲ್ಲಾರಿಗೂ ವಿತರಿಸಿ ಸಂತೋಷವನ್ನು ಹಂಚುವವರೆ ಪಟಾಕಿ ಉತ್ಪಾದಕರು.

ಪಟಾಕಿ ಉತ್ಪಾದನೆ ಮಾಡುವುದು ಕೂಡ ಸುಲಭದ ಕೆಲಸ ಅಲ್ಲ ಅದಕ್ಕೆ ಅಷ್ಟೇ ಜಾಗರೂಕತೆ ಕೂಡ ವಹಿಸಬೇಕು. ಪಟಾಕಿ ಉತ್ಪಾದನೆ ಮಾಡುವುದು ಒಂದು ಕಲೆ. ಅನೇಕ ಸಂದರ್ಭದಲ್ಲಿ ಪಟಾಕಿ ತಯಾರಿಸುವಾಗ ಅಪಾಯ ಎದುರಾದ ಉದಾಹರಣೆಗಳನ್ನು ನೀವು ನೋಡಿರಬಹುದು. ಅದರೆ ಅವರಿಗೆ ಜೀವನ ನಡೆಯುವುದೇ ಅ ಕೆಲಸದ ಮೂಲಕ. ಎಷ್ಟು ಕಷ್ಟವಾದರು ಅತ್ಯಂತ ನಿಷ್ಟೆಯಿಂದ ಪಟಾಕಿ ತಯಾರಿಸುತ್ತಾರೆ. ಅದಾಗ್ಯೂ ಪರಿಸರದ ಹಿತದೃಷ್ಟಿಯಿಂದ ಪರಿಸರ ಸ್ನೇಹಿ ಪಟಾಕಿಗಳನ್ನು ಬಳಿಕೆ ಮಾಡುವುದರೊಂದಿಗೆ ಮಿತವಾಗಿ ಸಿಡಿಮದ್ದು ಸಿಡಿಸಿ ಸಂಭ್ರಮಿಸಬೇಕಾಗಿದೆ. ಇದು ಪರಿಸರದ ಹಾಗೂ ಅಕ್ಕಪಕ್ಕದವರ ಆರೋಗ್ಯದ ಕಾಳಜಿ ದೃಷ್ಟಿಯಿಂದ ಉತ್ತಮ.

ಪುಟಾಣಿಗಳಿಗೆ, ಚಿನ್ನರಿಗೆ ಸುರು ಸುರು ಬತ್ತಿ, ನೆಲಚಕ್ರ, ದುರ್ಸು ಹೀಗೆ ಶಬ್ದ ಇಲ್ಲದ ಪಟಾಕಿಗಳೆಂದರೆ ಇಷ್ಟ. ಯುವಕರಾದರೆ ಗರ್ನಲ್, ಮಾಲೆ ಪಟಾಕಿ ಅಂತ ಅದನ್ನೇ ಸಿಡಿಸುತ್ತಾರೆ. ಹಿರಿಯರಾದರೆ ಅವುಗಳನ್ನು ನೋಡಿ ಸಂಭ್ರಮಿಸುತ್ತಾರೆ. ಹೀಗೆ ದೀಪಾವಳಿಯನ್ನು ಮೆರಗನ್ನು ಹೆಚ್ಚಿಸುವ ಪಟಾಕಿಯಿಂದ ಸಂಭ್ರಮವು ಇದೆ. ಎಚ್ಚರ ತಪ್ಪಿದರೆ ಅಪಾಯವು ಕಟ್ಟಿಟ್ಟ ಬುತ್ತಿ. ಹೀಗಾಗಿ ಅತ್ಯಂತ ಜಾಗರೂಕತೆಯಿಂದ ಪಟಾಕಿ ಹಚ್ಚಿ ದೀಪಾವಳಿಯನ್ನು ಸಂಭ್ರಮಿಸಿ.

ಲೇಖನ: ದಿಶಾ ಗೌಡ, ಸುಳ್ಯ

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್