AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hearing Loss: ಇಯರ್​ಫೋನ್​ಗಳು ವಿಶ್ವದ 100 ಕೋಟಿಗೂ ಅಧಿಕ ಯುವಕರ ಶ್ರವಣ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು: ಅಧ್ಯಯನ

ಪ್ರಕೃತಿಯನ್ನು ನೋಡಲು ಮತ್ತು ಅರ್ಥಮಾಡಿಕೊಳ್ಳಲು ಕಣ್ಣುಗಳು ಎಷ್ಟು ಅಗತ್ಯವೋ ಅದೇ ರೀತಿ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಕೇಳಲು ಕಿವಿಗಳುಕೂಡ ಅಷ್ಟೇ ಮುಖ್ಯ.

Hearing Loss: ಇಯರ್​ಫೋನ್​ಗಳು ವಿಶ್ವದ 100 ಕೋಟಿಗೂ ಅಧಿಕ ಯುವಕರ ಶ್ರವಣ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು: ಅಧ್ಯಯನ
Earphone
TV9 Web
| Edited By: |

Updated on:Nov 20, 2022 | 12:59 PM

Share

ಪ್ರಕೃತಿಯನ್ನು ನೋಡಲು ಮತ್ತು ಅರ್ಥಮಾಡಿಕೊಳ್ಳಲು ಕಣ್ಣುಗಳು ಎಷ್ಟು ಅಗತ್ಯವೋ ಅದೇ ರೀತಿ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಕೇಳಲು ಕಿವಿಗಳುಕೂಡ ಅಷ್ಟೇ ಮುಖ್ಯ. ಸಾಮಾನ್ಯವಾಗಿ ಜನರು ಹೇಳುವ ಪ್ರಕಾರ ಕಣ್ಣುಗಳು ಎಲ್ಲಿ ಕೆಲಸ ಮಾಡುವುದಿಲ್ಲವೋ ಅಲ್ಲಿ ಕಿವಿಗಳು ಕೆಲಸ ಮಾಡುತ್ತವೆ. ಕಿವಿಗೆ ದೊಡ್ಡ ಹಾನಿಯ ಹಿಂದೆ ಇಯರ್‌ಫೋನ್‌ಗಳ ಬಳಕೆ ಮತ್ತು ಜೋರಾಗಿ ಸಂಗೀತವನ್ನು ಕೇಳುವುದು ಹೆಚ್ಚಾಗಿದೆ. ಇದರಿಂದ ದೇಶವಷ್ಟೇ ಅಲ್ಲ, ವಿಶ್ವದೆಲ್ಲೆಡೆ ಹದಿಹರೆಯದವರ ಶ್ರವಣ ಸಾಮರ್ಥ್ಯ ಕುಂಠಿತವಾಗುತ್ತಿದೆ.

100 ಕೋಟಿ ಯುವಕರು ಬಾಧಿತರಾಗಬಹುದು ಬಾಧಿತ ಕಿವಿಗಳ ಶ್ರವಣ ಸಾಮರ್ಥ್ಯದ ಬಗ್ಗೆ ಅಧ್ಯಯನ ನಡೆಸಲಾಗಿದೆ. ಯುವಕರು 105 ಡೆಸಿಬಲ್‌ಗಳವರೆಗೆ ಇಯರ್​ಫೋನ್​ಗೆ ಆದ್ಯತೆ ನೀಡುತ್ತಾರೆ, ಆದರೆ ಮನರಂಜನಾ ಸ್ಥಳಗಳಲ್ಲಿ ಧ್ವನಿವರ್ಧಕಗಳ ಧ್ವನಿ 104 ರಿಂದ 112 dB ವರೆಗೆ ಇರುತ್ತದೆ.

ವಯಸ್ಕರಿಗೆ 80 ಡೆಸಿಬಲ್‌ಗಳು ಮತ್ತು ಮಕ್ಕಳಿಗೆ 75 ಡೆಸಿಬಲ್‌ಗಳು ಇರಬೇಕು. ಸಂಶೋಧನೆಯಲ್ಲಿ ಒಟ್ಟು 33 ಅಧ್ಯಯನಗಳನ್ನು ಸೇರಿಸಲಾಗಿದೆ, ಅದರಲ್ಲಿ 17 ದಾಖಲೆಗಳು ಇಯರ್​ಫೋನ್ ಮತ್ತು ಹೆಡ್‌ಫೋನ್‌ಗಳಿಗೆ ಸಂಬಂಧಿಸಿವೆ, ಆದರೆ 18 ವರದಿಗಳನ್ನು ಮನರಂಜನಾ ಸ್ಥಳಗಳಿಗೆ ಸಂಬಂಧಿಸಿದಂತೆ ಮಾಡಲಾಗಿದೆ.

ಜಾಗತಿಕವಾಗಿ ಶ್ರವಣ ದೋಷ ಹೊಂದಿರುವ ಹದಿಹರೆಯದವರು 0.67 ರಿಂದ 1.35 ಶತಕೋಟಿ ವರೆಗೆ ಇರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಅಂದರೆ, ಈ ಅಂಕಿ-ಅಂಶ 100 ಕೋಟಿ ದಾಟಬಹುದು.

BMJ ಗ್ಲೋಬಲ್ ಹೆಲ್ತ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನವು ಮಾಧ್ಯಮ ವರದಿಗಳ ಪ್ರಕಾರ, BMJ ಗ್ಲೋಬಲ್ ಹೆಲ್ತ್ ನಿಯತಕಾಲಿಕೆಯಲ್ಲಿ ಕಿವಿ ಶ್ರವಣದ ಪರಿಣಾಮದ ಬಗ್ಗೆ ಅಧ್ಯಯನವನ್ನು ಪ್ರಕಟಿಸಲಾಗಿದೆ.

ಅಧ್ಯಯನದ ಪ್ರಕಾರ, ಹೆಡ್‌ಫೋನ್‌ಗಳು ಮತ್ತು ಇಯರ್‌ಫೋನ್​ಗಳ ಬಳಕೆ ಮತ್ತು ಜೋರಾಗಿ ಸಂಗೀತವಿರುವ ಸ್ಥಳಗಳಲ್ಲಿ ಇರುವ ಕಾರಣದಿಂದಾಗಿ ಒಂದು ಶತಕೋಟಿಗೂ ಹೆಚ್ಚು ಹದಿಹರೆಯದವರು ಮತ್ತು ಯುವಕರು ಶ್ರವಣ ದೋಷದ ಅಪಾಯದಲ್ಲಿದ್ದಾರೆ.

ಎಲ್ಲಾ ದೇಶಗಳ ಸರ್ಕಾರಗಳು ಕಿವಿ ರಕ್ಷಣೆಗಾಗಿ ನೀತಿಗಳನ್ನು ರಚಿಸಬೇಕು ಎಂದು ಯುಎಸ್ ಸೌತ್ ಕೆರೊಲಿನಾದ ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧಕರು ಸೇರಿದಂತೆ ಅಂತಾರಾಷ್ಟ್ರೀಯ ತಂಡವು ಹೇಳಿದೆ. ಈ ಬಗ್ಗೆ ಜನರಿಗೂ ಅರಿವು ಮೂಡಿಸುವ ಅಗತ್ಯವಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:58 pm, Sun, 20 November 22

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್