AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಷಯರೋಗ ಔಷಧಿ ಸರಬರಾಜು ಸ್ಥಗಿತಗೊಳಿಸಿದ ಕೇಂದ್ರ: ಕರ್ನಾಟಕದಲ್ಲಿ ಟಿಬಿ ಔಷಧಿಗೆ ಹಾಹಾಕಾರ

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕ್ಷಯರೋಗದ ಚಿಕಿತ್ಸೆಗೆ ಬಳಸುವ ಸೈಕ್ಲೋಸೆರಿನ್​ ಮತ್ತು ಲೈನ್​ಜೋಲಿಡ್ ಔಷಧದ ಜೊತೆಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿಗಳು ಕೂಡ ಕೊರತೆ ಇದೆ. ರಾಜ್ಯದಲ್ಲಿ, ಪ್ರಸ್ತುತ, 50,000 ಕ್ಕೂ ಹೆಚ್ಚು ಜನರು ಸೂಕ್ಷ್ಮ ಟಿಬಿ ರೋಗಿಗಳಿದ್ದು, ಇವರಿಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿ ಅಗತ್ಯವಿದೆ.

ಕ್ಷಯರೋಗ ಔಷಧಿ ಸರಬರಾಜು ಸ್ಥಗಿತಗೊಳಿಸಿದ ಕೇಂದ್ರ: ಕರ್ನಾಟಕದಲ್ಲಿ ಟಿಬಿ ಔಷಧಿಗೆ ಹಾಹಾಕಾರ
ಸಾಂದರ್ಭಿಕ ಚಿತ್ರ
TV9 Web
| Updated By: ವಿವೇಕ ಬಿರಾದಾರ|

Updated on: Sep 04, 2023 | 3:32 PM

Share

ಕ್ಷಯರೋಗ (TB) ಚಿಕಿತ್ಸೆಗಾಗಿ ಬಳಸುವ ಸೈಕ್ಲೋಸೆರೀನ್ (Cycloserine) ಮತ್ತು ಲಿನೆಜೊಲಿಡ್​​ (Linezolid) ​ಎಂಬ ಎರಡು ಔಷಧಗಳನ್ನು ಕೇಂದ್ರ ಸರ್ಕಾರ, ಕರ್ನಾಟಕಕ್ಕೆ (Karnataka) ಕಳೆದ ಎರಡು ತಿಂಗಳಿನಿಂದ ಪೂರೈಕೆ ಮಾಡಿಲ್ಲ. ಪರಿಣಾಮ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕ್ಷಯರೋಗದ ಔಷಧಿ ಕೊರತೆ ಉಂಟಾಗಿದೆ. ರಾಜ್ಯದಲ್ಲಿ 1870 ಕ್ಷಯರೋಗಿಗಳಿದ್ದು, ಇವರಿಗೆ ​ಔಷಧಿಗಳಾದ ಸೈಕ್ಲೋಸೆರೀನ್ ಮತ್ತು ಲಿನೆಜೊಲಿಡ​​ ಔಷಧಿಗಳು ಅಗತ್ಯವಿದೆ. ಇನ್ನು ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿ ಅಗತ್ಯವಿದೆ.

ಸದ್ಯ ಸೈಕ್ಲೋಸೆರಿನ್​ ಮತ್ತು ಲೈನ್​ಜೋಲಿಡ್ ಔಷಧಿಗಳ ಅಗತ್ಯವಿದೆ. ಈ ಔಷಧಿಗಳ ಕೊರತೆಯಿಂದ ನೇರ ನಿಗಾ ಚಿಕಿತ್ಸೆ (DOTS)​ ಮತ್ತು ನೇರ ನಿಗಾ ಚಿಕಿತ್ಸೆ ​ಪ್ಲಸ್​​ ಚಿಕಿತ್ಸಾ ಕೇಂದ್ರಗಳಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸೈಕ್ಲೋಸೆರಿನ್​ ಮತ್ತು ಲೈನ್​ಜೋಲಿಡ್ ಔಷಧದ ಜೊತೆಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿಗಳು ಕೂಡ ಕೊರತೆ ಇದೆ. ರಾಜ್ಯದಲ್ಲಿ, ಪ್ರಸ್ತುತ, 50,000 ಕ್ಕೂ ಹೆಚ್ಚು ಜನರು ಸೂಕ್ಷ್ಮ ಟಿಬಿ ರೋಗದಿಂದ ಬಳಲುತ್ತಿದ್ದು, ಇವರಿಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿ ಅಗತ್ಯವಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸೈಕ್ಲೋಸೆರಿನ್​, ಲೈನ್​ಜೋಲಿಡ್ ಮತ್ತು ಪ್ಯಾರಾಜೆನೆಮಡ್ ಕೊರತೆಯಿದೆ ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಪುಣೆಯಲ್ಲಿ ಕೊವಿಡ್​​ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಬೆನ್ನು ಮೂಳೆಯ ಕ್ಷಯರೋಗಕ್ಕೆ ಕಾರಣವಾಗುವ ಶಿಲೀಂಧ್ರ ಸೋಂಕು ಪತ್ತೆ

ಈಗಿರುವ ಸೈಕ್ಲೋಸೆರಿನ್​ ಮತ್ತು ಲೈನ್​ಜೋಲಿಡ್ ಔಷಧಿ ಎರಡು ವಾರಗಳವರೆಗೆ ಮಾತ್ರ ಆಗುತ್ತದೆ. ಈ ಎರಡು ಔಷಧಿಗಳು ತುಂಬಾ ದುಬಾರಿಯಾಗಿದ್ದು, ಖರೀದಿಸಲು ನಮಗೆ ಬಜೆಟ್​​ನ ಕೊರೆತೆ ಇದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಟಿಬಿ ಅಧಿಕಾರಿ ಡಾ.ಎಸ್.ನಾಗೇಶ್ ಹೇಳಿದ್ದಾರೆ.

ಈ ವರ್ಷ, ಬಿಬಿಎಂಪಿ ವ್ಯಾಪ್ತಿಯಲ್ಲಿ 14,325 ಟಿಬಿ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 4,050, ಮತ್ತು ಕಲಬುರಗಿ ಮತ್ತು ರಾಯಚೂರು ತಲಾ 3,900 ಜನರು ಕ್ಷಯರೋಗದಿಂದ ಬಳಲುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್