AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಷಯರೋಗ ಔಷಧಿ ಸರಬರಾಜು ಸ್ಥಗಿತಗೊಳಿಸಿದ ಕೇಂದ್ರ: ಕರ್ನಾಟಕದಲ್ಲಿ ಟಿಬಿ ಔಷಧಿಗೆ ಹಾಹಾಕಾರ

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕ್ಷಯರೋಗದ ಚಿಕಿತ್ಸೆಗೆ ಬಳಸುವ ಸೈಕ್ಲೋಸೆರಿನ್​ ಮತ್ತು ಲೈನ್​ಜೋಲಿಡ್ ಔಷಧದ ಜೊತೆಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿಗಳು ಕೂಡ ಕೊರತೆ ಇದೆ. ರಾಜ್ಯದಲ್ಲಿ, ಪ್ರಸ್ತುತ, 50,000 ಕ್ಕೂ ಹೆಚ್ಚು ಜನರು ಸೂಕ್ಷ್ಮ ಟಿಬಿ ರೋಗಿಗಳಿದ್ದು, ಇವರಿಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿ ಅಗತ್ಯವಿದೆ.

ಕ್ಷಯರೋಗ ಔಷಧಿ ಸರಬರಾಜು ಸ್ಥಗಿತಗೊಳಿಸಿದ ಕೇಂದ್ರ: ಕರ್ನಾಟಕದಲ್ಲಿ ಟಿಬಿ ಔಷಧಿಗೆ ಹಾಹಾಕಾರ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Sep 04, 2023 | 3:32 PM

Share

ಕ್ಷಯರೋಗ (TB) ಚಿಕಿತ್ಸೆಗಾಗಿ ಬಳಸುವ ಸೈಕ್ಲೋಸೆರೀನ್ (Cycloserine) ಮತ್ತು ಲಿನೆಜೊಲಿಡ್​​ (Linezolid) ​ಎಂಬ ಎರಡು ಔಷಧಗಳನ್ನು ಕೇಂದ್ರ ಸರ್ಕಾರ, ಕರ್ನಾಟಕಕ್ಕೆ (Karnataka) ಕಳೆದ ಎರಡು ತಿಂಗಳಿನಿಂದ ಪೂರೈಕೆ ಮಾಡಿಲ್ಲ. ಪರಿಣಾಮ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕ್ಷಯರೋಗದ ಔಷಧಿ ಕೊರತೆ ಉಂಟಾಗಿದೆ. ರಾಜ್ಯದಲ್ಲಿ 1870 ಕ್ಷಯರೋಗಿಗಳಿದ್ದು, ಇವರಿಗೆ ​ಔಷಧಿಗಳಾದ ಸೈಕ್ಲೋಸೆರೀನ್ ಮತ್ತು ಲಿನೆಜೊಲಿಡ​​ ಔಷಧಿಗಳು ಅಗತ್ಯವಿದೆ. ಇನ್ನು ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿ ಅಗತ್ಯವಿದೆ.

ಸದ್ಯ ಸೈಕ್ಲೋಸೆರಿನ್​ ಮತ್ತು ಲೈನ್​ಜೋಲಿಡ್ ಔಷಧಿಗಳ ಅಗತ್ಯವಿದೆ. ಈ ಔಷಧಿಗಳ ಕೊರತೆಯಿಂದ ನೇರ ನಿಗಾ ಚಿಕಿತ್ಸೆ (DOTS)​ ಮತ್ತು ನೇರ ನಿಗಾ ಚಿಕಿತ್ಸೆ ​ಪ್ಲಸ್​​ ಚಿಕಿತ್ಸಾ ಕೇಂದ್ರಗಳಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸೈಕ್ಲೋಸೆರಿನ್​ ಮತ್ತು ಲೈನ್​ಜೋಲಿಡ್ ಔಷಧದ ಜೊತೆಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿಗಳು ಕೂಡ ಕೊರತೆ ಇದೆ. ರಾಜ್ಯದಲ್ಲಿ, ಪ್ರಸ್ತುತ, 50,000 ಕ್ಕೂ ಹೆಚ್ಚು ಜನರು ಸೂಕ್ಷ್ಮ ಟಿಬಿ ರೋಗದಿಂದ ಬಳಲುತ್ತಿದ್ದು, ಇವರಿಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿ ಅಗತ್ಯವಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸೈಕ್ಲೋಸೆರಿನ್​, ಲೈನ್​ಜೋಲಿಡ್ ಮತ್ತು ಪ್ಯಾರಾಜೆನೆಮಡ್ ಕೊರತೆಯಿದೆ ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಪುಣೆಯಲ್ಲಿ ಕೊವಿಡ್​​ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಬೆನ್ನು ಮೂಳೆಯ ಕ್ಷಯರೋಗಕ್ಕೆ ಕಾರಣವಾಗುವ ಶಿಲೀಂಧ್ರ ಸೋಂಕು ಪತ್ತೆ

ಈಗಿರುವ ಸೈಕ್ಲೋಸೆರಿನ್​ ಮತ್ತು ಲೈನ್​ಜೋಲಿಡ್ ಔಷಧಿ ಎರಡು ವಾರಗಳವರೆಗೆ ಮಾತ್ರ ಆಗುತ್ತದೆ. ಈ ಎರಡು ಔಷಧಿಗಳು ತುಂಬಾ ದುಬಾರಿಯಾಗಿದ್ದು, ಖರೀದಿಸಲು ನಮಗೆ ಬಜೆಟ್​​ನ ಕೊರೆತೆ ಇದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಟಿಬಿ ಅಧಿಕಾರಿ ಡಾ.ಎಸ್.ನಾಗೇಶ್ ಹೇಳಿದ್ದಾರೆ.

ಈ ವರ್ಷ, ಬಿಬಿಎಂಪಿ ವ್ಯಾಪ್ತಿಯಲ್ಲಿ 14,325 ಟಿಬಿ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 4,050, ಮತ್ತು ಕಲಬುರಗಿ ಮತ್ತು ರಾಯಚೂರು ತಲಾ 3,900 ಜನರು ಕ್ಷಯರೋಗದಿಂದ ಬಳಲುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್