ಕ್ಷಯರೋಗ ಔಷಧಿ ಸರಬರಾಜು ಸ್ಥಗಿತಗೊಳಿಸಿದ ಕೇಂದ್ರ: ಕರ್ನಾಟಕದಲ್ಲಿ ಟಿಬಿ ಔಷಧಿಗೆ ಹಾಹಾಕಾರ

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕ್ಷಯರೋಗದ ಚಿಕಿತ್ಸೆಗೆ ಬಳಸುವ ಸೈಕ್ಲೋಸೆರಿನ್​ ಮತ್ತು ಲೈನ್​ಜೋಲಿಡ್ ಔಷಧದ ಜೊತೆಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿಗಳು ಕೂಡ ಕೊರತೆ ಇದೆ. ರಾಜ್ಯದಲ್ಲಿ, ಪ್ರಸ್ತುತ, 50,000 ಕ್ಕೂ ಹೆಚ್ಚು ಜನರು ಸೂಕ್ಷ್ಮ ಟಿಬಿ ರೋಗಿಗಳಿದ್ದು, ಇವರಿಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿ ಅಗತ್ಯವಿದೆ.

ಕ್ಷಯರೋಗ ಔಷಧಿ ಸರಬರಾಜು ಸ್ಥಗಿತಗೊಳಿಸಿದ ಕೇಂದ್ರ: ಕರ್ನಾಟಕದಲ್ಲಿ ಟಿಬಿ ಔಷಧಿಗೆ ಹಾಹಾಕಾರ
ಸಾಂದರ್ಭಿಕ ಚಿತ್ರ
Follow us
| Updated By: ವಿವೇಕ ಬಿರಾದಾರ

Updated on: Sep 04, 2023 | 3:32 PM

ಕ್ಷಯರೋಗ (TB) ಚಿಕಿತ್ಸೆಗಾಗಿ ಬಳಸುವ ಸೈಕ್ಲೋಸೆರೀನ್ (Cycloserine) ಮತ್ತು ಲಿನೆಜೊಲಿಡ್​​ (Linezolid) ​ಎಂಬ ಎರಡು ಔಷಧಗಳನ್ನು ಕೇಂದ್ರ ಸರ್ಕಾರ, ಕರ್ನಾಟಕಕ್ಕೆ (Karnataka) ಕಳೆದ ಎರಡು ತಿಂಗಳಿನಿಂದ ಪೂರೈಕೆ ಮಾಡಿಲ್ಲ. ಪರಿಣಾಮ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕ್ಷಯರೋಗದ ಔಷಧಿ ಕೊರತೆ ಉಂಟಾಗಿದೆ. ರಾಜ್ಯದಲ್ಲಿ 1870 ಕ್ಷಯರೋಗಿಗಳಿದ್ದು, ಇವರಿಗೆ ​ಔಷಧಿಗಳಾದ ಸೈಕ್ಲೋಸೆರೀನ್ ಮತ್ತು ಲಿನೆಜೊಲಿಡ​​ ಔಷಧಿಗಳು ಅಗತ್ಯವಿದೆ. ಇನ್ನು ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿ ಅಗತ್ಯವಿದೆ.

ಸದ್ಯ ಸೈಕ್ಲೋಸೆರಿನ್​ ಮತ್ತು ಲೈನ್​ಜೋಲಿಡ್ ಔಷಧಿಗಳ ಅಗತ್ಯವಿದೆ. ಈ ಔಷಧಿಗಳ ಕೊರತೆಯಿಂದ ನೇರ ನಿಗಾ ಚಿಕಿತ್ಸೆ (DOTS)​ ಮತ್ತು ನೇರ ನಿಗಾ ಚಿಕಿತ್ಸೆ ​ಪ್ಲಸ್​​ ಚಿಕಿತ್ಸಾ ಕೇಂದ್ರಗಳಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸೈಕ್ಲೋಸೆರಿನ್​ ಮತ್ತು ಲೈನ್​ಜೋಲಿಡ್ ಔಷಧದ ಜೊತೆಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿಗಳು ಕೂಡ ಕೊರತೆ ಇದೆ. ರಾಜ್ಯದಲ್ಲಿ, ಪ್ರಸ್ತುತ, 50,000 ಕ್ಕೂ ಹೆಚ್ಚು ಜನರು ಸೂಕ್ಷ್ಮ ಟಿಬಿ ರೋಗದಿಂದ ಬಳಲುತ್ತಿದ್ದು, ಇವರಿಗೆ ರಿಂಪ್ಯಾಪಿಸ್ ಮತ್ತು ಪ್ಯಾರಾಜೆನೆಮಡ್ ಔಷಧಿ ಅಗತ್ಯವಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸೈಕ್ಲೋಸೆರಿನ್​, ಲೈನ್​ಜೋಲಿಡ್ ಮತ್ತು ಪ್ಯಾರಾಜೆನೆಮಡ್ ಕೊರತೆಯಿದೆ ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಪುಣೆಯಲ್ಲಿ ಕೊವಿಡ್​​ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಬೆನ್ನು ಮೂಳೆಯ ಕ್ಷಯರೋಗಕ್ಕೆ ಕಾರಣವಾಗುವ ಶಿಲೀಂಧ್ರ ಸೋಂಕು ಪತ್ತೆ

ಈಗಿರುವ ಸೈಕ್ಲೋಸೆರಿನ್​ ಮತ್ತು ಲೈನ್​ಜೋಲಿಡ್ ಔಷಧಿ ಎರಡು ವಾರಗಳವರೆಗೆ ಮಾತ್ರ ಆಗುತ್ತದೆ. ಈ ಎರಡು ಔಷಧಿಗಳು ತುಂಬಾ ದುಬಾರಿಯಾಗಿದ್ದು, ಖರೀದಿಸಲು ನಮಗೆ ಬಜೆಟ್​​ನ ಕೊರೆತೆ ಇದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಟಿಬಿ ಅಧಿಕಾರಿ ಡಾ.ಎಸ್.ನಾಗೇಶ್ ಹೇಳಿದ್ದಾರೆ.

ಈ ವರ್ಷ, ಬಿಬಿಎಂಪಿ ವ್ಯಾಪ್ತಿಯಲ್ಲಿ 14,325 ಟಿಬಿ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 4,050, ಮತ್ತು ಕಲಬುರಗಿ ಮತ್ತು ರಾಯಚೂರು ತಲಾ 3,900 ಜನರು ಕ್ಷಯರೋಗದಿಂದ ಬಳಲುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು