AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Conjunctivitis: ನಿಮ್ಮ ಮಗುವನ್ನು ಕಣ್ಣಿನ ಸೋಂಕಿನಿಂದ ರಕ್ಷಿಸುವುದು ಹೇಗೆ? ಇಲ್ಲಿದೆ ಸಲಹೆ

ಶಾಲಾ ದಿನಗಳಲ್ಲಿ "ಗುಲಾಬಿ ಕಣ್ಣು" ಎಂದು ಕರೆಯಲ್ಪಡುವ ಕಂಜಂಕ್ಟಿವಿಟಿಸ್ ನಂತಹ ಸಾಂಕ್ರಾಮಿಕ ಕಣ್ಣಿನ ಸೋಂಕು, ಶಾಲಾ ಪರಿಸರದಲ್ಲಿ ಮಕ್ಕಳಲ್ಲಿ ವೇಗವಾಗಿ ಹರಡುತ್ತದೆ. ನಿಮ್ಮ ಮಗು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿ ಇರಲು ಈ ಕಣ್ಣಿನ ಸೋಂಕಿನಿಂದ ಅವರನ್ನು ರಕ್ಷಿಸುವುದು ಅತ್ಯಗತ್ಯ. ನಿಮ್ಮ ಮಗುವನ್ನು ರಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ.

Conjunctivitis: ನಿಮ್ಮ ಮಗುವನ್ನು ಕಣ್ಣಿನ ಸೋಂಕಿನಿಂದ ರಕ್ಷಿಸುವುದು ಹೇಗೆ? ಇಲ್ಲಿದೆ ಸಲಹೆ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 04, 2023 | 7:06 PM

Share

ಇತ್ತೀಚಿನ ದಿನಗಳಲ್ಲಿ ಎಲ್ಲ ಕಡೆಯಲ್ಲಿಯೂ ತೀವ್ರವಾದ ಕಣ್ಣಿನ ಸೋಂಕಿನ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಹಾಗಾಗಿ ನಾವು ಆದಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಇನ್ನು ಮಕ್ಕಳು ಶಾಲೆಗೆ ಹೋಗುವುದರಿಂದ ಪೋಷಕರಿಗೆ ಅವರ ಆರೋಗ್ಯದ ಬಗ್ಗೆ ಹೆಚ್ಚಾಗಿ ಆತಂಕವಿರುತ್ತದೆ. ಏಕೆಂದರೆ ಪೋಷಕರಿಗೇ ಮಗುವಿನ ಆರೋಗ್ಯ ಮತ್ತು ಯೋಗಕ್ಷೇಮವು ಅತ್ಯಂತ ಮಹತ್ವದ್ದಾಗಿದೆ. ಶಾಲಾ ದಿನಗಳಲ್ಲಿ “ಗುಲಾಬಿ ಕಣ್ಣು” ಎಂದು ಕರೆಯಲ್ಪಡುವ ಕಂಜಂಕ್ಟಿವಿಟಿಸ್ ನಂತಹ ಸಾಂಕ್ರಾಮಿಕ ಕಣ್ಣಿನ ಸೋಂಕು, ಶಾಲಾ ಪರಿಸರದಲ್ಲಿ ಮಕ್ಕಳಲ್ಲಿ ವೇಗವಾಗಿ ಹರಡುತ್ತದೆ. ನಿಮ್ಮ ಮಗು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿ ಇರಲು ಈ ಕಣ್ಣಿನ ಸೋಂಕಿನಿಂದ ಅವರನ್ನು ರಕ್ಷಿಸುವುದು ಅತ್ಯಗತ್ಯ. ಹಾಗಾಗಿ ನಿಮ್ಮ ಶಾಲೆಗೆ ಹೋಗುವ ಮಗುವನ್ನು ಕಂಜಂಕ್ಟಿವಿಟಿಸ್ ನಿಂದ ರಕ್ಷಿಸುವ ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

ಕಂಜಂಕ್ಟಿವಿಟಿಸ್ ಎಂಬುದು ಕಣ್ಣಿನ ಬಿಳಿ ಭಾಗವನ್ನು ಆವರಿಸುವ ಮತ್ತು ಕಣ್ಣುರೆಪ್ಪೆಗಳ ಒಳ ಮೇಲ್ಮೈಯನ್ನು ಉಂಟಾಗುವ ಉರಿಯೂತವಾಗಿದೆ. ಈ ಸ್ಥಿತಿಯು ಅಲರ್ಜಿ ಅಥವಾ ಕಿರಿಕಿರಿ ಉಂಟುಮಾಡಬಹುದು. ಹಾಗಾಗಿ ಪ್ರತಿಯೊಂದಕ್ಕೂ ನಿರ್ದಿಷ್ಟ ಆರೈಕೆ ಮತ್ತು ತಡೆಗಟ್ಟುವ ತಂತ್ರಗಳು ಬೇಕಾಗುತ್ತವೆ.

ಕಂಜಂಕ್ಟಿವಿಟಿಸ್ ನ (ಗುಲಾಬಿ ಕಣ್ಣು) ಲಕ್ಷಣಗಳು:

-ಕಣ್ಣುಗಳ ಬಿಳಿಭಾಗದಲ್ಲಿ ಕೆಂಪು ಅಥವಾ ಗುಲಾಬಿಯಾಗುವುದು.

-ಕಣ್ಣಿನಿಂದ ನೀರು ಬರುತ್ತಲಿರುವುದು

-ತುರಿಕೆ ಮತ್ತು ಕಿರಿಕಿರಿ

-ಮಸುಕಾದ ದೃಷ್ಟಿ (ಅಪರೂಪವಾಗಿ)

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾಂಜಂಕ್ಟಿವಿಟಿಸ್ ಪ್ರಕರಣ ಹೆಚ್ಚಳ ; ಪೋಷಕರಲ್ಲಿ ಹೆಚ್ಚಿದ ಆತಂಕ

ನಿಮ್ಮ ಮಗುವನ್ನು ರಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ

-ತಿನ್ನುವ ಮೊದಲು ಮತ್ತು ವಿಶ್ರಾಂತಿ ಕೊಠಡಿಗೆ ಹೋಗಿ ಬಂದಾಗ ಕಣ್ಣುಗಳನ್ನು ಸ್ಪರ್ಶಿಸಬಾರದು ಎಂದು ಹೇಳಿ ಕೊಡಬೇಕು. ಬಳಿಕ 20 ಸೆಕೆಂಡುಗಳ ಕಾಲ ಸಾಬೂನು ಮತ್ತು ನೀರಿನಿಂದ ಕೈ ತೊಳೆಯಬೇಕು. ನೀರು ಮತ್ತು ಸಾಬೂನು ಲಭ್ಯವಿಲ್ಲದಿದ್ದಾಗ ಹ್ಯಾಂಡ್ ಸ್ಯಾನಿಟೈಜರ್ ಬಳಕೆ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿ.

-ತೊಳೆಯದ ಕೈಗಳಿಂದ ಕಣ್ಣುಗಳನ್ನು ಪದೇ ಪದೇ ಸ್ಪರ್ಶಿಸುವುದನ್ನು ತಪ್ಪಿಸಲು ನಿಮ್ಮ ಮಗುವಿಗೆ ಕಲಿಸಿ, ಏಕೆಂದರೆ ಇದರಿಂದ ಸೋಂಕು ಹರಡಬಹುದು ಮತ್ತು ಕಣ್ಣುಗಳಿಗೆ ಕಿರಿಕಿರಿ ಉಂಟಾಗಬಹುದು.

-ಟವೆಲ್ ಗಳು, ಸ್ಪೆಕ್ಟ್ಸ್ ಅಥವಾ ಕಾಂಟ್ಯಾಕ್ಟ್ ಲೆನ್ಸ್ ಗಳಂತಹ ವೈಯಕ್ತಿಕ ವಸ್ತುಗಳನ್ನು ತಮ್ಮ ಸಹಪಾಠಿಗಳೊಂದಿಗೆ ಹಂಚಿಕೊಳ್ಳದಂತೆ ನಿಮ್ಮ ಮಗುವಿಗೆ ಸಲಹೆ ನೀಡಿ. ನಿಮ್ಮ ಮಗು ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಧರಿಸಿದರೆ, ಅವುಗಳನ್ನು ಸ್ವಚ್ಛಗೊಳಿಸುವುದು ಮತ್ತು ಸೂಕ್ತವಾಗಿ ಸಂಗ್ರಹಿಸುವುದು ಮತ್ತು ಕಂಜಂಕ್ಟಿವಿಟಿಸ್ ಪ್ರಸಂಗದ ಸಮಯದಲ್ಲಿ ಅವುಗಳನ್ನು ಧರಿಸದಿರುವುದು ಸೇರಿದಂತೆ ಸರಿಯಾದ ನೈರ್ಮಲ್ಯ ಅಭ್ಯಾಸಗಳನ್ನು ಅವರು ಅನುಸರಿಸುತ್ತಾರಾ ಎಂದು ತಿಳಿದುಕೊಳ್ಳಿ ಇಲ್ಲವಾದಲ್ಲಿ ಸಿರಿಯಾದ ಕ್ರಮಗಳ ಬಗ್ಗೆ ಅವರಿಗೆ ತಿಳಿಸಿ.

-ನಿಮ್ಮ ಮಗು ಕ್ರೀಡೆ ಅಥವಾ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಕೆಲವೊಮ್ಮೆ ಸೋಂಕುಗಳಿಗೆ ಕಾರಣವಾಗಬಹುದು ಹಾಗಾಗಿ ಅದನ್ನು ತಡೆಗಟ್ಟಲು ಯಾವಾಗಲೂ ಕನ್ನಡಕ ಧರಿಸಲು ಮಕ್ಕಳಿಗೆ ತರಬೇತಿ ನೀಡಿ.

-ನಿಮ್ಮ ಮಗುವಿನಲ್ಲಿ ಕಂಜಂಕ್ಟಿವಿಟಿಸ್ ರೋಗಲಕ್ಷಣಗಳು ಕಂಡುಬಂದರೆ ತಕ್ಷಣ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ. ಅವರು ಕಂಜಂಕ್ಟಿವಿಟಿಸ್ ಪ್ರಕಾರವನ್ನು ಪತ್ತೆಹಚ್ಚಬಹುದು ಮತ್ತು ಅದರ ಹರಡುವಿಕೆಯನ್ನು ತಪ್ಪಿಸಲು ಸೂಕ್ತ ಚಿಕಿತ್ಸೆ ಅಥವಾ ತಡೆಗಟ್ಟುವ ಕ್ರಮಗಳನ್ನು ಶಿಫಾರಸು ಮಾಡಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ