AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಕೊರೊನಾವೈರಸ್‌ BF.7 ರೂಪಾಂತರಿಯ ತೀವ್ರತೆ ಗಂಭೀರವಾಗಿರಲ್ಲ: ಸಿಸಿಎಂಬಿ ನಿರ್ದೇಶಕ

ಭಾರತದಲ್ಲಿ ಕೊರೊನಾವೈರಸ್ ನ BF.7 ರೂಪಾಂತರದ ನಾಲ್ಕು ಪ್ರಕರಣಗಳನ್ನು ವರದಿ ಮಾಡಿದೆ. ನಾವು ಭಾರತದಲ್ಲಿ ದೊಡ್ಡದಾದ ಡೆಲ್ಟಾ ಅಲೆಯನ್ನು ನೋಡಿದ್ದೇವೆ. ನಂತರ ನಾವು ಲಸಿಕೆ ಪಡೆದೆವು. ಆಮೇಲೆ ಒಮಿಕ್ರಾನ್ ಅಲೆ ಬಂದಿತು ಮತ್ತು ನಾವು ಬೂಸ್ಟರ್ ಡೋಸ್​​ಗಳನ್ನು ಮುಂದುವರಿಸಿದ್ದೇವೆ.

ಭಾರತದಲ್ಲಿ ಕೊರೊನಾವೈರಸ್‌ BF.7 ರೂಪಾಂತರಿಯ ತೀವ್ರತೆ ಗಂಭೀರವಾಗಿರಲ್ಲ: ಸಿಸಿಎಂಬಿ ನಿರ್ದೇಶಕ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Dec 25, 2022 | 4:51 PM

Share

ಭಾರತದಲ್ಲಿ ಕೊರೊನಾವೈರಸ್‌ನ (Coronavirus) BF.7 ರೂಪಾಂತರದ ತೀವ್ರತೆಯು ಪ್ರಸ್ತುತ ಚೀನಾದಲ್ಲಿ ಚಾಲ್ತಿಯಲ್ಲಿರುವಷ್ಟು ಗಂಭೀರವಾಗಿರಲ್ಲ ಯಾಕೆಂದರೆ ಭಾರತೀಯರು ಈಗಾಗಲೇ  ಹಿಂಡಿನ ರೋಗನಿರೋಧಕ ಶಕ್ತಿ (herd immunity) ಹೊಂದಿದ್ದಾರೆ ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ (CCMB) ಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವ ಅಗತ್ಯವನ್ನು ಒತ್ತಿಹೇಳಿದ ಸಿಸಿಎಂಬಿ ನಿರ್ದೇಶಕ ವಿನಯ್ ಕೆ ನಂದಿಕೂರಿ, ಈ ಎಲ್ಲಾ ರೂಪಾಂತರಗಳು ರೋಗನಿರೋಧಕ ಶಕ್ತಿಯನ್ನು ತಪ್ಪಿಸುವ ಸಾಮರ್ಥ್ಯವನ್ನು ಹೊಂದಿವೆ. ಲಸಿಕೆ ಹಾಕಿದ ಮತ್ತು ಕೆಲವೊಮ್ಮೆ ಒಮಿಕ್ರಾನ್‌ನ ಹಿಂದಿನ ರೂಪಾಂತರಗಳಿಂದ ಸೋಂಕಿಗೆ ಒಳಗಾಗುವ ಜನರಿಗೆ ಸೋಂಕು ತಗಲಬಹುದು ಎಂಬ ಆತಂಕ ಯಾವಾಗಲೂ ಇರುತ್ತದೆ ಎಂದು ಹೇಳಿದರು. ಸೋಂಕಿನ ತೀವ್ರತೆ ಡೆಲ್ಟಾದಲ್ಲಿ ಇದ್ದಷ್ಟು ಅಲ್ಲ. ನಾವು ಒಂದು ಮಟ್ಟಿಗೆ ಹಿಂಡಿನ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಇದಕ್ಕೆ ಕಾರಣ. ವಾಸ್ತವವಾಗಿ ನಾವು ಹಿಂಡಿನ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದೇವೆ ಏಕೆಂದರೆ ನಾವು ಇತರ ವೈರಸ್‌ಗಳಿಗೆ ಒಡ್ಡಿಕೊಂಡಿದ್ದೇವೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ. ಭಾರತದಲ್ಲಿ ಕೊರೊನಾವೈರಸ್ ನ BF.7 ರೂಪಾಂತರದ ನಾಲ್ಕು ಪ್ರಕರಣಗಳನ್ನು ವರದಿ ಮಾಡಿದೆ. ನಾವು ಭಾರತದಲ್ಲಿ ದೊಡ್ಡದಾದ ಡೆಲ್ಟಾ ಅಲೆಯನ್ನು ನೋಡಿದ್ದೇವೆ. ನಂತರ ನಾವು ಲಸಿಕೆ ಪಡೆದೆವು. ಆಮೇಲೆ ಒಮಿಕ್ರಾನ್ ಅಲೆ ಬಂದಿತು ಮತ್ತು ನಾವು ಬೂಸ್ಟರ್ ಡೋಸ್​​ಗಳನ್ನು ಮುಂದುವರಿಸಿದ್ದೇವೆ. ನಾವು ಹಲವು ರೀತಿಯಲ್ಲಿ ಭಿನ್ನರಾಗಿದ್ದೇವೆ. ಚೀನಾದಲ್ಲಿ ಈಗ ಏನಾಗುತ್ತಿದೆಯೋ ಅದು ಭಾರತದಲ್ಲಿ ಆಗಲ್ಲ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ 201 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳು 3,397 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

ಚೀನಾ ಅನುಸರಿಸುತ್ತಿರುವ “ಶೂನ್ಯ ಕೋವಿಡ್ ನೀತಿ” ಆ ದೇಶದಲ್ಲಿ ಸೋಂಕು ಹರಡಲು ಒಂದು ಕಾರಣ. ಅದೇ ವೇಳೆ ಕಡಿಮೆ ವ್ಯಾಕ್ಸಿನೇಷನ್ ಮಟ್ಟಗಳು ತೀವ್ರತೆಗೆ ಕಾರಣವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:Corona in India: BF.7 ಕೊರೊನಾ ತಳಿ ನಿಮ್ಮ ಬಳಿ ಸುಳಿಯದಿರಲು ವೈದ್ಯರ ಈ ಸಲಹೆ ಪಾಲಿಸಿ

ಚೀನಾ ಅನುಸರಿಸುವ ಶೂನ್ಯ ಕೋವಿಡ್ ನೀತಿ ಮತ್ತು ಭಾರತದಲ್ಲಿ ಸಂಭವಿಸಿದಂತೆ ಹೆಚ್ಚಿನ ಜನರಿಗೆ ಅಲ್ಲಿ ಲಸಿಕೆ ಹಾಕಲಿಲ್ಲ. ಎಲ್ಲಾ ಹಿರಿಯರಿಗೆ ಲಸಿಕೆ ನೀಡಲಾಗುತ್ತದೆ. ಕೆಲವೊಮ್ಮೆ ಬೂಸ್ಟರ್ ಡೋಸ್ ಅನ್ನು ಸಹ ನೀಡಲಾಗುತ್ತದೆಎಂದು ಅವರು ಹೇಳಿದರು. ಈ ಹಂತದಲ್ಲಿ ಭಾರತದಲ್ಲಿ ಅಲೆ ಇರಬಹುದು ಅಥವಾ ಇಲ್ಲದಿರಬಹುದು ಎಂದು ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ಹೇಳಿರುವ ನಂದಿಕೂರಿ, ಈಗಿನಿಂದಲೇ ಅಲೆ ಬರುತ್ತಿರುವುದು ಆತಂಕಕಾರಿಯಾಗಿ ಕಾಣುತ್ತಿಲ್ಲ ಎಂದು ಹೇಳಿದರು.

ಪ್ರಸ್ತುತ ಭಾರತದಲ್ಲಿ ಕೋವಿಡ್ ಪರೀಕ್ಷೆಗಳು ಮತ್ತು ಚಿಕಿತ್ಸೆ, ಲಸಿಕೆ ಎರಡಕ್ಕೂ ಸಾಕಷ್ಟು ಸಾಮರ್ಥ್ಯವಿದೆ ಎಂದು ಅವರು ಹೇಳಿದರು.

ಮತ್ತಷ್ಟು ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?