AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯ ತಾಪಕ್ಕೆ ಮೊಸರನ್ನ; ಮೊಸರನ್ನ ಸೇವಿಸುವುದರಿಂದರಿಂದ ಆಗುವ 5 ಅದ್ಭುತ ಪ್ರಯೋಜನಗಳು

ಮೊಸರನ್ನ ದಕ್ಷಿಣ ಭಾರತದಿಂದ ಬಂದ ಸಾಂಪ್ರದಾಯಿಕ ಭಕ್ಷ್ಯಗಳಲ್ಲಿ ಒಂದಾಗಿದೆ. ಮೊಸರು ಮತ್ತು ಅನ್ನದ ಈ ಸಂಯೋಜನೆಯು ತೂಕ ಇಳಿಸಲು, ನಿಮ್ಮ ಮನಸ್ಥಿತಿಯನ್ನು ವೃದ್ಧಿಸಲು, ದೇಹವನ್ನು ಹೈಡ್ರೇಟು ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ ಮೊಸರನ್ನದಿಂದ ದೇಹಕ್ಕೆ ಆಗುವ ಪ್ರಯೋಜನಗಳ ದೀರ್ಘ ಪಟ್ಟಿ ಇಲ್ಲಿದೆ.

ಬೇಸಿಗೆಯ ತಾಪಕ್ಕೆ ಮೊಸರನ್ನ; ಮೊಸರನ್ನ ಸೇವಿಸುವುದರಿಂದರಿಂದ ಆಗುವ 5 ಅದ್ಭುತ ಪ್ರಯೋಜನಗಳು
Curd rice health benefitsImage Credit source: India.com
Follow us
ನಯನಾ ಎಸ್​ಪಿ
|

Updated on: Apr 01, 2023 | 7:00 AM

ನೀವು ಎರಡು ಅತ್ಯಂತ ಆರೋಗ್ಯಕರ ಆಹಾರ (Healthy Foods) ಪದಾರ್ಥಗಳನ್ನು ಒಂದು ಭಕ್ಷ್ಯಕ್ಕೆ ಬೆರೆಸಿದಾಗ ನೀವು ಏನು ಪಡೆಯುತ್ತೀರಿ? ಮೊಸರನ್ನ (Curd Rice) ಕೇವಲ ಆರೋಗ್ಯಕರ ಊಟದ ಆಯ್ಕೆಯಾಗಿದೆ, ಇದು ಎರಡು ಆರೋಗ್ಯಕರ ಪದಾರ್ಥಗಳ ಸಂಯೋಜನೆಯಾಗಿದೆ. ಎಲ್ಲರಿಗು ತಿಳಿದಿರುವ ಹಾಗೆ ಪ್ರಾಥಮಿಕವಾಗಿ ಮೊಸರು ಮತ್ತು ಅನ್ನವನ್ನು ಬಳಸಿ ತಯಾರಿಸಲಾಗುತ್ತದೆ. ಮೊಸರನ್ನ ಭಾರತದ ಅನೇಕ ರಾಜ್ಯದ ಜನರು ಸೇವಿಸುತ್ತಾರೆ, ಆದರೆ ಅದು ಹುಟ್ಟಿಕೊಂಡ ದಕ್ಷಿಣದ ರಾಜ್ಯಗಳಲ್ಲಿ (Southern States) ಹೆಚ್ಚು. ಬೇಸಿಗೆಯಲ್ಲಿ (Summer) ನಮ್ಮ ದೇಹವನ್ನು ತಂಪಾಗಿಸುವಲ್ಲಿ ಮೊಸರನ್ನ ಸೇವಿಸಿ. ಇದರಿಂದ ಬಹಳಷ್ಟು ಪ್ರಯೋಜನಗಳು ನಿಮ್ಮಗಾಗಲಿದೆ!

ತಯಾರಿಸಲು ತುಂಬಾ ಸುಲಭವಾದ ಪಾಕವಿಧಾನವಾಗಿ, ಮೊಸರನ್ನ ವರ್ಷಗಳಿಂದ ಸಾಮಾನ್ಯ ಮನೆಯ ಭಕ್ಷ್ಯವಾಗಿದೆ. ಮೊಸರನ್ನ ಕೆಲವೊಮ್ಮೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ನಿರ್ವಹಿಸಲು ಉತ್ತಮ ಪರಿಹಾರವಾಗಿದೆ.

ಮೊಸರು ಅನ್ನದ ಟಾಪ್ 5 ಪ್ರಯೋಜನಗಳು:

1. ತೂಕ ನಷ್ಟವನ್ನು ಉತ್ತೇಜಿಸುತ್ತದೆ:

ಫೈಬರ್ ಭರಿತ ಮೊಸರನ್ನ ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. ಮೊಸರನ್ನವನ್ನು ಸಾಮಾನ್ಯವಾಗಿ ಇತರ ಭಕ್ಷ್ಯಗಳ ಜೊತೆಗೆ ಸೇರಿಸಿ ತಿನ್ನಲು ಇಚ್ಛಿಸುವುದಿಲ್ಲ. ಆದ್ದರಿಂದ ಅನ್ನವನ್ನು ತಿನ್ನಲು ಇಷ್ಟಪಡುವವರಿಗೆ, ಮೊಸರನ್ನ ಸೇವಿಸುವುದರಿಂದ ಹೆಚ್ಚುವರಿ ಕ್ಯಾಲೊರಿಗಳಿಲ್ಲದ ಆಹಾರ ಸೇವಿಸಿದಂತಾಗುತ್ತದೆ. ನೀವು ಕಡಿಮೆ ಊಟ ಮಾಡಬೇಕು ಅಂದುಕೊಂಡರೆ ಮೊಸರನ್ನ ಬೇಸಿಗೆಯಲ್ಲಿ ಸೇವಿಸುಲು ಉತ್ತಮ ಆಯ್ಕೆಯಾಗಿದೆ.

2. ಬೇಸಿಗೆಯಲ್ಲಿ ಕೂಲ್ ಟ್ರೀಟ್:

ಮೊಸರನ್ನ ದೇಹದ ಆಂತರಿಕ ತಾಪಮಾನವನ್ನು ಕಾಪಾಡಿಕೊಳ್ಳಲು ಸಾಕಷ್ಟು ಪ್ರಯೋಜನಕಾರಿಯಾಗಿದೆ. ಇದು ಬೇಸಿಗೆಯ ತಿಂಗಳುಗಳಲ್ಲಿ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಸಾಕಷ್ಟು ಆರೋಗ್ಯಕರ ಆಹಾರವಾಗಿದೆ.

3. ಜೀರ್ಣಕ್ರಿಯೆಗೆ ಸಹಾಯಕ

ಮೊಸರನ್ನ ಪ್ರೋಬಯಾಟಿಕ್‌ಗಳ ಸಮೃದ್ಧ ಮೂಲವಾಗಿದೆ, ಇದು ಜೀರ್ಣಕಾರಿ ಆರೋಗ್ಯವನ್ನು ಉತ್ತೇಜಿಸಲು ಪ್ರಯೋಜನಕಾರಿಯಾಗಿದೆ. ಲ್ಯಾಕ್ಟೋಬಾಸಿಲಸ್ ಬಲ್ಗರಿಕಸ್ ಎಂಬ ಬ್ಯಾಕ್ಟೀರಿಯಾವು ಹೊಟ್ಟೆ ಮತ್ತು ಕರುಳಿನ ಒಳಪದರವನ್ನು ಆರೋಗ್ಯಕರವಾಗಿಡಲು ಕೆಲಸ ಮಾಡುತ್ತದೆ, ಇದು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚು ಸುಲಭಗೊಳಿಸುತ್ತದೆ.

ಮೊಸರನ್ನ ಕರುಳು ಸ್ನೇಹಿ ಬ್ಯಾಕ್ಟೀರಿಯಾದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹ ಉತ್ತಮವಾಗಿದೆ. ಇದು ನಮ್ಮ ಜೀರ್ಣಾಂಗವನ್ನು ಸುಧಾರಿಸಬಹುದು. ಇದು ಕರುಳನ್ನು ಆರೋಗ್ಯವಾಗಿಡುವ ಮೂಲಕ ಮೊಡವೆಗಳನ್ನು ಕಡಿಮೆ ಮಾಡುತ್ತದೆ ಮತ್ತು ದೋಷರಹಿತ ಚರ್ಮವನ್ನು ನೀಡುತ್ತದೆ.

ಇದನ್ನೂ ಓದಿ: ಆತಂಕ ಅಥವಾ ಪ್ಯಾನಿಕ್ ಅಟ್ಯಾಕ್ ನಿಭಾಯಿಸಲು ಇಲ್ಲಿವೆ ಮೂರು ಸಲಹೆಗಳು

4. ಶಕ್ತಿಯನ್ನು ಒದಗಿಸುತ್ತದೆ

ಅಕ್ಕಿಯಲ್ಲಿನ ಕಾರ್ಬ್ ಅಂಶದ ಬಗ್ಗೆ ಮಾತನಾಡದೆ ನೀವು ಮೊಸರನ್ನದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಮೊಸರನ್ನ, ಸಹಜವಾಗಿ, ಅಕ್ಕಿ ಆಧಾರಿತ ಭಕ್ಷ್ಯವಾಗಿ, ಕಾರ್ಬೋಹೈಡ್ರೇಟ್‌ಗಳಿಂದ ತುಂಬಿರುತ್ತದೆ. ಇದನ್ನು ಸೇವಿಸಿದಾಗ, ನಮ್ಮ ಹೊಟ್ಟೆಯಲ್ಲಿರುವ ಜೀರ್ಣಕಾರಿ ಕಿಣ್ವಗಳಿಂದ ವಿಭಜನೆಯಾಗುತ್ತದೆ ಇದು ಶಕ್ತಿಯ ಸಣ್ಣ ಪ್ಯಾಕೆಟ್‌ಗಳಾಗಿ ಬದಲಾಗುತ್ತದೆ, ಇದನ್ನು ನಮ್ಮ ಅಂಗಗಳು ಬಳಸುತ್ತವೆ.

5. ಉತ್ತಮ ಮೂಡ್ ವರ್ಧಿಸುವ ಸಾಮರ್ಥ್ಯ ಹೊಂದಿದೆ

ಮೊಸರಾನ್ನದಲ್ಲಿರುವ ಪ್ರೋಟೀನ್ ಅಂಶವು ಎಲ್ಲಾ ಉತ್ಕರ್ಷಣ ನಿರೋಧಕಗಳೊಂದಿಗೆ ಒತ್ತಡವನ್ನು ಎದುರಿಸಲು ಸಾಕಷ್ಟು ಉಪಯುಕ್ತವಾಗಿದೆ. ಉತ್ಕರ್ಷಣ ನಿರೋಧಕಗಳು ಮತ್ತು ವಿಶೇಷವಾಗಿ ಪ್ರೋಟೀನ್ಗಳು ಮೆದುಳಿನಲ್ಲಿ ಡೋಪಮೈನ್ ಎಂಬ ರಾಸಾಯನಿಕ ಸ್ರವಿಸುವಿಕೆಗೆ ಕಾರಣವಾಗಿವೆ; ಈ ರಾಸಾಯನಿಕವು ಮನಸ್ಸಿನ ಸಂತೋಷಕ್ಕೆ ಕಾರಣವಾಗುತ್ತದೆ.

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?