AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮವರು ಸತ್ತಂತೆ ಕನಸು ಯಾಕೆ ಬೀಳುತ್ತದೆ?; ಈ ಕನಸು ನಿಜವಾಗುತ್ತಾ?

ಯಾರಾದರೂ ಸತ್ತಂತೆ ಕನಸು ಬಿದ್ದರೆ ಅವರ ಆಯಸ್ಸು ಜಾಸ್ತಿಯಾಗುತ್ತದೆ ಎಂದು ನಮ್ಮ ಅಜ್ಜಿ-ಮುತ್ತಜ್ಜಿಯರೆಲ್ಲ ಹೇಳುತ್ತಿದ್ದರು. ಆದರೆ, ವೈಜ್ಞಾನಿಕವಾಗಿ ಈ ರೀತಿಯ ಕನಸುಗಳಿಗೆ ಏನು ಅರ್ಥವಿದೆ? ಕನಸುಗಳಿಗೆ ನಿಜವಾಗಿಯೂ ಪ್ರಾಮುಖ್ಯತೆ ಕೊಡಬೇಕಾ? ಅದು ನಮ್ಮ ಮನಸಿನ ಗೌಪ್ಯ ಭಾವನೆಯಾ? ಈ ಬಗ್ಗೆ ಇಲ್ಲಿದೆ ಮಾಹಿತಿ.

ನಿಮ್ಮವರು ಸತ್ತಂತೆ ಕನಸು ಯಾಕೆ ಬೀಳುತ್ತದೆ?; ಈ ಕನಸು ನಿಜವಾಗುತ್ತಾ?
ಸುಷ್ಮಾ ಚಕ್ರೆ
| Edited By: |

Updated on: Apr 01, 2024 | 8:58 PM

Share

ಕನಸುಗಳು ಯಾರಿಗೆ ಬೀಳುವುದಿಲ್ಲ? ಕೆಲವರು ರಾತ್ರಿ ವೇಳೆ ಕನಸು ಕಂಡರೆ ಇನ್ನು ಕೆಲವರು ಹಗಲುಗನಸು ಕಾಣುತ್ತಾರೆ. ರಾತ್ರಿ ಮಲಗಿದಾಗ ನಮಗೆ ಚಿತ್ರ-ವಿಚಿತ್ರವಾದ ಕನಸುಗಳು ಬೀಳುತ್ತವೆ. ಕೆಲವೊಮ್ಮೆ ಒಂದೇ ರೀತಿಯ ಕನಸುಗಳು ಮರುಕಳಿಸುತ್ತವೆ. ನಮಗೆ ಬೀಳುವ ಎಲ್ಲ ಕನಸಿಗೂ ಒಂದು ಅರ್ಥವಿರುತ್ತದೆ ಎಂದು ಹಿಂದಿನ ಕಾಲದವರು ಹೇಳುತ್ತಿದ್ದರು. ನಿದ್ರೆಯಲ್ಲಿದ್ದಾಗ ನಮಗೆ ತುಂಬ ಹತ್ತಿರವಾದವರು ಸತ್ತಂತೆ ಕನಸು ಬಿದ್ದರೆ ಒಂದು ಕ್ಷಣ ಗಾಬರಿಯಾಗಿ ದಢಕ್ಕೆಂದು ಎದ್ದು ಕುಳಿತುಬಿಡುತ್ತೇವೆ. ಈ ರೀತಿ ಯಾರಾದರೂ ಸತ್ತಂತೆ ಕನಸು ಬಿದ್ದರೆ ಅವರ ಆಯಸ್ಸು ಜಾಸ್ತಿಯಾಗುತ್ತದೆ ಎಂದು ನಮ್ಮ ಅಜ್ಜಿ-ಮುತ್ತಜ್ಜಿಯರೆಲ್ಲ ಹೇಳುತ್ತಿದ್ದರು. ಆದರೆ, ವೈಜ್ಞಾನಿಕವಾಗಿ ಈ ರೀತಿಯ ಕನಸುಗಳಿಗೆ ಏನು ಅರ್ಥವಿದೆ? ಕನಸುಗಳಿಗೆ ನಿಜವಾಗಿಯೂ ಪ್ರಾಮುಖ್ಯತೆ ಕೊಡಬೇಕಾ? ಅದು ನಮ್ಮ ಮನಸಿನ ಗೌಪ್ಯ ಭಾವನೆಯಾ? ಈ ಬಗ್ಗೆ ಇಲ್ಲಿದೆ ಮಾಹಿತಿ.

ಪ್ರತಿಯೊಬ್ಬರೂ ಪ್ರತಿ ರಾತ್ರಿ ಸುಮಾರು 2 ಗಂಟೆಗಳ ಕಾಲ ನಿದ್ರೆಯಲ್ಲಿ ಕನಸುಗಳನ್ನು ಕಾಣುತ್ತೇವೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಕನಸುಗಳು ನಮ್ಮ ನಿದ್ರೆಯ ಒಂದು ಭಾಗ. ಹಲವರು ತಮಗೆ ಬೀಳುವ ಕನಸಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದಿಲ್ಲ. ಇನ್ನು ಕೆಲವರು ಅದನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾರೆ. ಆದರೆ, ನಮಗೆ ಯಾರಾದರೂ ಸಾಯುತ್ತಿರುವ ಕನಸು ಬಿದ್ದರೆ ಅದು ನಮ್ಮ ದೈಹಿಕ ಮತ್ತು ಮಾನಸಿಕ ಪರಿಸ್ಥಿತಿಯ ಸೂಚಕವಾಗಿರುತ್ತದೆ.

ಇದನ್ನೂ ಓದಿ: ದಿನಕ್ಕೆ 6 ಗಂಟೆಗಿಂತ ಕಡಿಮೆ ನಿದ್ರೆ ಮಾಡ್ತೀರಾ?; ಹೃದಯದ ಬಗ್ಗೆ ಇರಲಿ ಎಚ್ಚರ

ಇನ್ಫೈನೈಟ್ ರಿಕವರಿಯಲ್ಲಿ ಕ್ಲಿನಿಕಲ್ ಮನಶ್ಶಾಸ್ತ್ರಜ್ಞರಾಗಿರುವ ಕೆರೊಲಿನಾ ಎಸ್ಟೆವೆಜ್ ಪ್ರಕಾರ, ನಮ್ಮ ಕನಸುಗಳು ಅಸ್ಥಿರವಾಗಬಹುದು. ಆದರೆ ಅದು ಅಂತಿಮವಾಗಿ ನಮ್ಮಲ್ಲಿನ ಪಾಸಿಟಿವ್ ಬದಲಾವಣೆ ಮತ್ತು ಭವಿಷ್ಯವನ್ನು ಪ್ರತಿನಿಧಿಸುತ್ತದೆ. ನಮ್ಮ ಕನಸುಗಳನ್ನು ಅರ್ಥೈಸಲು ಹಲವು ಸಿದ್ಧಾಂತಗಳಿವೆ. ಕನಸುಗಳ ವ್ಯಾಖ್ಯಾನವು ಪ್ರಾಚೀನ ಇತಿಹಾಸಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಹಿಪ್ಪೊಕ್ರೇಟ್ಸ್‌ನಂತಹ ವ್ಯಕ್ತಿಗಳು ನಮ್ಮ ಕನಸುಗಳು ನಾವು ಹೊಂದಿರಬಹುದಾದ ಕಾಯಿಲೆಯನ್ನು ಸಂಕೇತಿಸುತ್ತವೆ ಎಂದು ಹೇಳಿದ್ದರು. ಮನೋವಿಶ್ಲೇಷಣೆಯ ಸಂಸ್ಥಾಪಕ ಸಿಗ್ಮಂಡ್ ಫ್ರಾಯ್ಡ್, ಕನಸುಗಳು ನಮ್ಮ ಸುಪ್ತಾವಸ್ಥೆಯ ಪ್ರಚೋದನೆಗಳು ಮತ್ತು ಭಾವನಾತ್ಮಕ ಸಂಘರ್ಷಗಳ ಸಂಕೇತವೆಂದು ಹೇಳಿದ್ದರು. ಸಾವಿನ ಬಗ್ಗೆ ಕನಸು ಬಿದ್ದಾಗ ಆ ಕನಸು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹಾಗೂ ಆಯಾ ಸಂದರ್ಭದ ಮೇಲೆ ಆಧರಿಸಿ ವಿಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾತ್ರಿ ಬಿದ್ದ ಕನಸು ಬೆಳಗ್ಗೆ ಎದ್ದಕೂಡಲೆ ಮರೆತು ಹೋಗೋದೇಕೆ?

ನಾವು ನಮ್ಮ ಆತ್ಮೀಯರು ಸಾಯುವ ಕನಸು ಕಂಡರೆ ಅದು ನಮ್ಮ ನಡುವಿನ ಸಂಬಂಧ ಅಂತ್ಯಗೊಳ್ಳುವುದರ ಸಂಕೇತವಾಗಿರಬಹುದು. ಇನ್ನು ಕೆಲವೊಮ್ಮೆ ನಿಮ್ಮ ಉದ್ಯೋಗವನ್ನು ಬದಲಾಯಿಸುವಾಗಲೂ ಸಾವಿನ ಕನಸು ಬೀಳಬಹುದು. ಕೆಲವೊಮ್ಮೆ ನಾವು ಯಾರನ್ನಾದರೂ ಕಳೆದುಕೊಳ್ಳುವ ಆತಂಕದಲ್ಲಿದ್ದಾಗ, ಯಾವುದಾದರೂ ಒಂದು ಸಂಬಂಧ ನಮ್ಮಿಂದ ದೂರವಾಗುತ್ತಿದೆ ಎಂಬ ಪರಿಸ್ಥಿತಿ ಉಂಟಾದಾಗಲೂ ಈ ರೀತಿಯ ಕನಸುಗಳು ಬೀಳುತ್ತವೆ. ಕನಸುಗಳು ಹಲವು ಸಂಕೇತಗಳನ್ನು ನಮಗೆ ಸೂಚ್ಯವಾಗಿ ನೀಡುತ್ತದೆ ಎಂಬುದು ಸುಳ್ಳಲ್ಲ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ