AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲೂಗಡ್ಡೆ ಇದ್ದಕಡೆ ಆರೋಗ್ಯ ಇರುವುದಿಲ್ಲ ಎನ್ನುವವರೇ ಹೆಚ್ಚು! ಆದರೆ ಆಲೂಗಡ್ಡೆ ಆರೋಗ್ಯಕ್ಕೆ ಪೂರಕವಾಗಿದೆ! ತಿಳಿದುಕೊಳ್ಳಿ

ಆಲೂಗಡ್ಡೆಯಲ್ಲಿ Choline ಎಂಬ ವಿಶಿಷ್ಟ ರಾಸಾಯನಿಕ ಇದ್ದು ಇದು ದೇಹದ ಮಾಂಸಖಂಡಗಳು ಸದೃಢವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಅಲ್ಲದೆ ಹಲವು ಮಾನಸಿಕ ತೊಂದರೆ, mood fluctuations ಹೋಗಲಾಡಿಸಿ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ಸಿಪ್ಪೆ ಸಮೇತ ಆಲೂಗಡ್ಡೆ ಬೇಯಿಸಿ, ನಂತರ ಸಿಪ್ಪೆ ತೆಗೆದು ಮಕ್ಕಳಿಗೆ ತಿನ್ನಿಸುವ ಪದ್ದತಿ ಇದೆ. ಇದರಿಂದ ಮಕ್ಕಳು ಸದೃಢವಾಗಿ ಬೆಳೆಯುತ್ತಾರೆ.

ಆಲೂಗಡ್ಡೆ ಇದ್ದಕಡೆ ಆರೋಗ್ಯ ಇರುವುದಿಲ್ಲ ಎನ್ನುವವರೇ ಹೆಚ್ಚು! ಆದರೆ ಆಲೂಗಡ್ಡೆ ಆರೋಗ್ಯಕ್ಕೆ ಪೂರಕವಾಗಿದೆ! ತಿಳಿದುಕೊಳ್ಳಿ
ಆಲೂಗಡ್ಡೆ ಇದ್ದಕಡೆ ಆರೋಗ್ಯ ಇರುವುದಿಲ್ಲ ಎನ್ನುವವರೇ ಹೆಚ್ಚು! ಆದರೆ ಆಲೂಗಡ್ಡೆ ಆರೋಗ್ಯಕ್ಕೆ ಪೂರಕವಾಗಿದೆ! ತಿಳಿದುಕೊಳ್ಳಿ
TV9 Web
| Updated By: ಸಾಧು ಶ್ರೀನಾಥ್​|

Updated on: Jun 28, 2022 | 6:06 AM

Share

ನಮ್ಮ ದೇಶದಲ್ಲಿ ಗೋಧಿ ಮತ್ತು ಅಕ್ಕಿಯ ನಂತರ ಅತೀ ಹೆಚ್ಚಾಗಿ ಉಪಯೋಗಿಸಲ್ಪಡುತ್ತಿರುವ ಆಹಾರ ಪದಾರ್ಥವೆಂದರೆ ಆಲೂಗಡ್ಡೆ ಅಥವ ಬಟಾಟೆ. ಜೊತೆಗೆ ನಮ್ಮ ಆರೋಗ್ಯಕ್ಕೆ ಇದರ ಸೇವನೆ ಬಗ್ಗೆ ಇರುವ ಭಿನ್ನ ಅಭಿಪ್ರಾಯಗಳು ಸಹಾ ಹೆಚ್ಚು. ಆಲೂಗಡ್ಡೆ ವಾಯು ಪದಾರ್ಥ ಎಂಬುದರಿಂದ ಹಿಡಿದು ಬೊಜ್ಜು ಹೆಚ್ಚಾಗುತ್ತೆ, ಸಕ್ಕರೆ ಖಾಯಿಲೆಯವರು ತಿನ್ನಬಾರದು ಇತ್ಯಾದಿ.. ಇತ್ಯಾದಿ.. ಹಾಗಾದರೆ ನಿಜ ಯಾವುದು..? ವಿವರವಾಗಿ ತಿಳಿದುಕೊಳ್ಳೋಣ ಬನ್ನೀ.

ಆಲೂಗಡ್ಡೆ ನೆಲದಡಿ ಬಿಡುವ ಗಡ್ಡೆ. ಸಸ್ಯ ಶಾಸ್ತ್ರೀಯ ಹೆಸರು Solanum tuberosum ಹಾಗೂ ಕುಟುಂಬ Solanaceae. ಮೂಲ ಪೆರು ದೇಶದ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತಿದ್ದ, ಸುಮಾರು 10,000 ವರ್ಷಗಳ ಇತಿಹಾಸವಿರುವ, ಇದು ಅಮೆರಿಕ ದೇಶಕ್ಕೆ ಬಂದು ನಂತರ ಇತರೆಡೆ ಪ್ರಚಾರಗೊಂಡಿತು. ಸದ್ಯ ವಿಶ್ವದಾದ್ಯಂತ 5,100 ಕ್ಕೂ ಹೆಚ್ಚು ಆಲೂಗಡ್ಡೆ ಪ್ರಭೇದಗಳಿವೆ.

ಆಲೂಗಡ್ಡೆಯಲ್ಲಿ ಅತೀ ಹೆಚ್ಚು ಪಿಷ್ಟ ( Carbohydrates ) ಇದೆ. ಹಾಗಾಗಿ ಆರೋಗ್ಯಕ್ಕೆ ಹಾನಿಕರ, ಸಕ್ಕರೆ ಖಾಯಿಲೆ ಇರುವವರು ತಿನ್ನಬಾರದು ಎಂಬುದು ಹೆಚ್ಚಿನ ಅಭಿಪ್ರಾಯ. ಆದರೆ ನಿಜವಾಗಿಯೂ ಇದರಲ್ಲಿರುವ Carbohydrates ಕೇವಲ 17 gms (ಅಕ್ಕಿಯಲ್ಲಿ 28 – 35 gms ಹಾಗೂ ಗೋದಿಯಲ್ಲಿ 18 gms ) ಈಗ ಯಾವುದು ಉತ್ತಮ ನೀವೇ ನಿರ್ದರಿಸಿ. ಆಲೂಗಡ್ಡೆಯಲ್ಲಿರುವ Cholesterol – 0% ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅಲ್ಲದೆ ರಕ್ತದೊತ್ತಡ ಹೆಚ್ಚಿಸುವ Sodium ಸಹಾ ಕೇವಲ 0%.

75 mg ನಷ್ಟು ಇರುವ Phosphorus ಹಾಗೂ ಸುಣ್ಣದ ಅಂಶ (Calcium) ನಮ್ಮ ದೇಹದ ಮೂಳೆಗಳು ಸದೃಢವಾಗಲು ಸಹಕಾರಿ. 544 mg ನಷ್ಟು ಇರುವ Potassium ನಮ್ಮ ರಕ್ತದಲ್ಲಿರುವ ಹೆಚ್ಚಿನ ಉಪ್ಪಿನಂಶವನ್ನು ಹೀರಿಕೊಂಡು ಅಧಿಕ ರಕ್ತದೊತ್ತಡ – BP – ತಗ್ಗಿಸಲು ಸಹಾಯಮಾಡುತ್ತದೆ.

ಆಲೂಗಡ್ಡೆಯಲ್ಲಿರುವ ಅಧಿಕ ನಾರಿನಂಶ (fibre) ದೇಹದಲ್ಲಿರುವ Cholesterol ಅನ್ನು ನಿಯಂತ್ರಣದಲ್ಲಿರುಸುತ್ತದೆ, ಮಲಬದ್ಧತೆ ನಿವಾರಿಸಿ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಮೊದಲೇ 0 % ಇರುವ cholesterol ಜೊತೆಗೆ Potassium, ವಿಟಮಿನ್ C, ಹಾಗೂ ವಿಟಮಿನ್ B -6 ಎಲ್ಲಾ ಸೇರಿ ನಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕ.

Choline ಎಂಬ ವಿಶಿಷ್ಟ ರಾಸಾಯನಿಕ 57 mg ನಷ್ಟು ಇದ್ದು ಇದು ದೇಹದ ಮಾಂಸಖಂಡಗಳು ಸದೃಢವಾಗಿ ಬೆಳೆಯಲು ಸಹಾಯ ಮಾಡುತ್ತದೆ, ಅಲ್ಲದೆ ಹಲವು ಮಾನಸಿಕ ತೊಂದರೆ, mood fluctuations ಹೋಗಲಾಡಿಸಿ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ಸಿಪ್ಪೆ ಸಮೇತ ಆಲೂಗಡ್ಡೆ ಬೇಯಿಸಿ, ನಂತರ ಸಿಪ್ಪೆ ತೆಗೆದು ಮಕ್ಕಳಿಗೆ ತಿನ್ನಿಸುವ ಪದ್ದತಿ ಇದೆ. ಇದರಿಂದ ಮಕ್ಕಳು ಸದೃಢವಾಗಿ ಬೆಳೆಯುತ್ತಾರೆ.

38 mg ಯಷ್ಟು ಇರುವ Folate ಅಂಶ ಕ್ಯಾನ್ಸರ್ ನಿವಾರಕವಾಗಿದ್ದು. ಜೀವ ಕಣಗಳು (Cells) ಕ್ಯಾನ್ಸರ್ ಕಣಗಳಾಗಿ ಬದಲಾಗದಂತೆ ತಡೆಯುತ್ತದೆ.

ಆಲೂಗಡ್ಡೆ ನಮ್ಮ ಚರ್ಮದ ಬಹುತೇಕ ತೊಂದರೆಗಳನ್ನು ನಿವಾರಿಸುತ್ತದೆ. ಇದರ ರಸ ತೆಗೆದು ನಿಯಮಿತವಾಗಿ ಹಚ್ಚಿಕೊಳ್ಳುತ್ತಿದ್ದರೆ ಚರ್ಮ ಸುಕ್ಕು ರಹಿತವಾಗುವುದು ಹಾಗು ಕಾಂತಿಯುತವಾಗುವುದು. ಹಳೆಯ ಕಲೆಗಳು, Sun burn ಕಲೆಗಳು, Pigmentation ನಿವಾರಿಸುವುದು. ಆಲೂಗಡ್ಡೆಯ fresh ಆದ ಸಿಪ್ಪೆಯನ್ನು ತೆಗೆದು ಹಚ್ಚಿದರೆ ಸುಟ್ಟ ಗಾಯ ಬೇಗ ವಾಸಿಯಾಗುತ್ತೆ ಮತ್ತು ಕಲೆ ಇಲ್ಲದ ಹೊಸ ಚರ್ಮ ಬರುತ್ತೆ.

ಅತ್ಯಂತ ಪ್ರಮುಖವಾಗಿ ಆಲೂಗೆಡ್ಡೆಯಲ್ಲಿ Alpha Lipoic acid ಎಂಬ ಮತ್ತೊಂದು ವಿಶಿಷ್ಟವಾದ ರಾಸಾಯನಿಕವಿದ್ದು ಇದು ರಕ್ತದಲ್ಲಿರುವ ಹೆಚ್ಚಿನ ಸಕ್ಕರೆ (Glucose ಅಂಶವನ್ನು ಹಾಗೆಯೇ ಬಿಡದೆ, ಅಂದರೆ blood sugar ಜಾಸ್ತಿಯಾಗಲು ಬಿಡದೆ ) ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಹಾಗಾಗಿ ಸಕ್ಕರೆ ಖಾಯಿಲೆ (Diabetes) ಇರುವವರು ಆಲೂಗಡ್ಡೆ ಸೇವಿಸಲು ಯಾವುದೇ ತೊಂದರೆಯಿಲ್ಲ.

ಮತ್ತೊಂದು ತಪ್ಪದೆ ಎಲ್ಲರೂ ತಿಳಿದುಕೊಳ್ಳಬೇಕಾದ ಮುಖ್ಯ ವಿಷಯವೆಂದರೆ ಆಲೂಗಡ್ಡೆಯಲ್ಲಿ ಒಟ್ಟಾರೆ 3 ಪದರಗಳಿದ್ದು ಅವು, ಹೊರ ಸಿಪ್ಪೆ, ಒಳ ಸಿಪ್ಪೆ ಮತ್ತು ಒಳಗಿನ ನೀರಿನಂಶ ಹೆಚ್ಚಿರುವ ಬರೀ ಪಿಷ್ಟವಿರುವ (Corbohydrates) ಭಾಗ. ( ಒಮ್ಮೆ ಆಲೂಗಡ್ಡೆಯನ್ನು ಬೇಯಿಸಿ, ಅದರ ಮಧ್ಯ ಭಾಗ ಕತ್ತರಿಸಿ ಗಮನಿಸಿ, ಗೊತ್ತಾಗುತ್ತದೆ)

ಹೊರ ಸಿಪ್ಪೆಯನ್ನು ತೆಗೆದು ಹಾಕಿಬಿಟ್ಟರೆ ಆಲೂಗಡ್ಡೆಯ ಪ್ರಮುಖ ಅಂಶಗಳನ್ನು ನಾಶ ಮಾಡಿ ಕೇವಲ Carbohydrates ಸೇವಿಸಿದಂತೆ. ಜೊತೆಗೆ ಹೆಚ್ಚಿನ ತಾಪಮಾನದಲ್ಲಿ ಅಂದರೆ ಎಣ್ಣೆಯಲ್ಲಿ ಆಲೂಗೆಡ್ಡೆಯನ್ನು ಕರಿದರೆ ( deep fry ಮಾಡಿದರೆ ) ಅದರಿಂದ ಆಲೂಗಡ್ಡೆಯಲ್ಲಿರುವ ಎಲ್ಲಾ ಪೌಷ್ಟಿಕಗಳೂ ನಾಶವಾಗುವುದು. ಆದ್ದರಿಂದ ಆದಷ್ಟು ಆಲೂಗೆಡ್ಡೆಯನ್ನು ಚೆನ್ನಾಗಿ ತೊಳೆದು, ಸಿಪ್ಪೆ ಸಮೇತ ಬೇಯಿಸಿ ನಂತರ ಬೇಕಾದರೆ ಸಿಪ್ಪೆ ತೆಗೆದು ಸೇವಿಸಬಹುದು.ಇನ್ನುಮುಂದೆ ಧೈರ್ಯವಾಗಿ ಆಲೂಗಡ್ಡೆ ತಿನ್ನಿ. ಆಲೂಗಡ್ಡೆ ಉಪಯೋಗಿಸುವುದರಿಂದ ದಪ್ಪ ಆಗಲ್ಲ-ಶುಗರ್ ಬರಲ್ಲ! (ಚಿತ್ರ, ಲೇಖನ : ಮಂಜುನಾಥ್ ಪ್ರಸಾದ್)

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!