Garbhageete: ಗರ್ಭಿಣಿಯು 4ನೇ ತಿಂಗಳಿನಲ್ಲಿ ಹೇಗೆಲ್ಲಾ ಜಾಗ್ರತೆವಹಿಸಬೇಕು ಇಲ್ಲಿದೆ ಮಾಹಿತಿ

ಗರ್ಭಾವಸ್ಥೆ ಎಂಬುದು ಹೆಣ್ಣಿನ ಜೀವನದಲ್ಲಿ ನಡೆಯುವಂತಹ ಸುಂದರವಾದ ಅನುಭವಗಳ ಗುಚ್ಚವೆಂದೇ ಹೇಳಬಹುದು. ಎಷ್ಟೇ ಸಂತೋಷವಿದ್ದರೂ ಗರ್ಭಾವಸ್ಥೆಯ ಪ್ರತಿಯೊಂದು ಹಂತವನ್ನು ತುಂಬಾ ಎಚ್ಚರಿಕೆಯಿಂದ ದಾಟಬೇಕು

Garbhageete: ಗರ್ಭಿಣಿಯು  4ನೇ ತಿಂಗಳಿನಲ್ಲಿ ಹೇಗೆಲ್ಲಾ ಜಾಗ್ರತೆವಹಿಸಬೇಕು ಇಲ್ಲಿದೆ ಮಾಹಿತಿ
Kamala Bharadwaj
Follow us
| Updated By: ನಯನಾ ರಾಜೀವ್

Updated on: Jun 27, 2022 | 8:30 PM

ಗರ್ಭಾವಸ್ಥೆ ಎಂಬುದು ಹೆಣ್ಣಿನ ಜೀವನದಲ್ಲಿ ನಡೆಯುವಂತಹ ಸುಂದರವಾದ ಅನುಭವಗಳ ಗುಚ್ಚವೆಂದೇ ಹೇಳಬಹುದು. ಎಷ್ಟೇ ಸಂತೋಷವಿದ್ದರೂ ಗರ್ಭಾವಸ್ಥೆಯ ಪ್ರತಿಯೊಂದು ಹಂತವನ್ನು ತುಂಬಾ ಎಚ್ಚರಿಕೆಯಿಂದ ದಾಟಬೇಕು. ಗರ್ಭಿಣಿಯು ನಾಲ್ಕನೇ ತಿಂಗಳಲ್ಲಿ ಹೇಗಿರಬೇಕು, ಏನೇನು ಜಾಗ್ರತೆವಹಿಸಬೇಕು, ಯಾವ್ಯಾವ ಆಹಾರಗಳನ್ನು ಸೇವಿಸಬೇಕು ಎಂಬುದರ ಕುರಿತು ಯೋಗ ತಜ್ಞೆ ಕಮಲಾ ಭಾರದ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ.

ಇದನ್ನೂ ಓದಿ

ನಾಲ್ಕನೇ ತಿಂಗಳನ್ನು ನಾವು ದೌಹೃದಿನಿ ಎಂದು ಕರೆಯುತ್ತೇವೆ, ಅಂದರೆ ಮಗುವಿನ ಮನಸ್ಸು ನಾಲ್ಕನೇ ತಿಂಗಳಲ್ಲಿ ವ್ಯಕ್ತವಾಗುತ್ತದೆ. ಇದು ವಾಗ್ಭಟಾಚಾರ್ಯಯ ವ್ಯಾಖ್ಯಾನವಾಗಿದೆ. ಭ್ರೂಣದ ಬೆಳವಣಿಗೆಯಾಗುವುದು ಅತ್ಯಂತ ಮಹತ್ವದಘಟ್ಟ, ಕೊರತೆಗಳು ಆಸೆಯಾಗಿ ಕಾಡುತ್ತವೆ.

ಅದನ್ನೇ ನಾವು ಬಯಕೆ ಎನ್ನುತ್ತೇವೆ. ದೌಹೃದಿನಿ ಎಂದರೆ ಎರಡೂ ಹೃದಯಗಳುಳ್ಳವಳು ಅಂದರೆ ತಾಯಿಯದು ಹಾಗೂ ಭ್ರೂಣದ್ದು ಎಂದರ್ಥ.

  • ಮಗುವಿನ ಕಣ್ಣು, ಕಿವಿ, ಮೂಗು, ನಾಲಿಗೆ ,ಚರ್ಮ ಈ ಪಂಚೇದ್ರಿಯಗಳು ಇದೇ ಅವಧಿಯಲ್ಲಿ ಸ್ಪಷ್ಟವಾಗುತ್ತದೆ ಆದ್ದರಿಂದ ಮನಸ್ಸನ್ನು ಅರಳಿಸುವಂತಹ ಉತ್ತಮ ಸಾಹಿತ್ಯ, ಪುಸ್ತಕಗಳನ್ನು ಓದಬೇಕು, ನೋಡಬೇಕು.
  • ಹಸಿರನ್ನು ವೀಕ್ಷಿಸಬೇಕು
  • ಮನೆಯ ಒಳಗಡೆ ಹಾಗೂ ಹೊರಗಡೆ ಸ್ವಚ್ಛವಾಗಿಟ್ಟುಕೊಳ್ಳಬೇಕು
  • ಬೆಳಗ್ಗೆ ಹಾಗೂ ಸಂಜೆ ಪರಿಮಳದ ಧೂಪ ಹಾಕಬೇಕು
  • ತೀಕ್ಷ್ಣ ಸುವಾಸನೆಯ ಸುಗಂಧ ದ್ರವ್ಯಗಳು ಬಳಸುವುದು ಬೇಡ
  • ಪನ್ನೀರು ಸಿಂಪಡಿಸಿಕೊಳ್ಳುವುದು ಒಳ್ಳೆಯದು.
  • ಮಲ್ಲಿಗೆ, ಜಾಜಿ, ಸಂಪಿಗೆ ಹೂವನ್ನು ಮುಡಿದರೆ ಒಳ್ಳೆಯದು ಹಾಗಾಗಿ ನಮ್ಮಲ್ಲಿ ಮೊಗ್ಗಿನ ಜಡೆ ಹೆಣೆಯುವುದು ಸಂಪ್ರದಾಯಿಕವಾಗಿದೆ.
  • ಕರ್ಕಶ ಶಬ್ದಗಳಿಂದ ಸಾಧ್ಯವಾದಷ್ಟು ದೂರವಿರಬೇಕು, ಕಿವಿಯ ಮೇಲೆ ಬೀಳುವ ಈ ಕರ್ಕಶ ಶಬ್ದವು ಗರ್ಭಿಣಿಯ ಗ್ರಹಣ ಶಕ್ತಿಯನ್ನು ಕಡಿಮೆ ಮಾಡುತ್ತದೆ.
  • ರೇಡಿಯೋ, ಟಿವಿ, ಟೇಪ್​ರೆಕಾರ್ಡರ್ ಬಳಕೆ ಮಾಡುವುದಾದರೆ ವಾಲ್ಯೂಮ್ ಕಡಿಮೆ ಇಟ್ಟುಕೊಳ್ಳಿ.
  • ಒಂದೊಮ್ಮೆ ಹಾಗೆ ಕರ್ಕಶ ಶಬ್ದವನ್ನು ಆಲಿಸಿದರೆ ತಾಯಿ ಮಾತ್ರವಲ್ಲದೆ ಹೊಟ್ಟೆಯಲ್ಲಿರುವ ಮಗುವಿನ ಶ್ರವಣೇಂದ್ರಿಯಕ್ಕೂ ತೊಂದರೆಯಾಗಬಹುದು.
  • ಕೆಲವೊಂದು ಮಹಿಳೆಯರು ಸಿಗರೇಟ್ ಸೇವನೆ ಮಾಡುತ್ತಾರೆ. ಇದರಿಂದಲೂ ಮಗುವಿನ ಶ್ರವಣ ಸಾಮರ್ಥ್ಯ ಕುಂಟಿತಗೊಳ್ಳುವುದು.

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.

ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ. ಯೋಗದ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ