AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Finger Nail: ನೀವು ಎಷ್ಟು ದಿನ ಬದುಕುತ್ತೀರಿ ಎಂಬುದನ್ನು ನಿಮ್ಮ ಉಗುರುಗಳು ಹೇಳುತ್ತವೆ! ಸಂಶೋಧನೆಯಿಂದ ಆಘಾತಕಾರಿ ಸಂಗತಿ ಬಹಿರಂಗ

ಉಗುರುಗಳ ಬೆಳವಣಿಗೆಯು ಜೀವಿತಾವಧಿಗೆ ಸಂಬಂಧಿಸಿದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ನಿಮ್ಮ ದೀರ್ಘಾಯುಷ್ಯದ ರಹಸ್ಯವು ನಿಮ್ಮ ಕೈಯಲ್ಲಿಯೇ ಇದೆ. ನಿಮ್ಮ ಉಗುರುಗಳು ನಿಮ್ಮ ವಯಸ್ಸು ಮತ್ತು ಆರೋಗ್ಯವನ್ನು ಹೇಳುತ್ತವೆ. ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ಸಂಶೋಧಕರು. ನಡೆಸಿದ ಅಧ್ಯಯನದಲ್ಲಿ ಈ ಸತ್ಯ ಬಹಿರಂಗಗೊಂಡಿದೆ. ಹಾಗಾದರೆ ಇದರಿಂದ ಮನುಷ್ಯನ ಸಾವು ಹೇಗೆ ನಿರ್ಧಾರವಾಗುತ್ತೆ? ಯಾರು ಹೆಚ್ಚು ಕಾಲ ಬದುಕುತ್ತಾರೆ? ಯಾರು ಬೇಗನೆ ಸಾಯುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

Finger Nail: ನೀವು ಎಷ್ಟು ದಿನ ಬದುಕುತ್ತೀರಿ ಎಂಬುದನ್ನು ನಿಮ್ಮ ಉಗುರುಗಳು ಹೇಳುತ್ತವೆ! ಸಂಶೋಧನೆಯಿಂದ ಆಘಾತಕಾರಿ ಸಂಗತಿ ಬಹಿರಂಗ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Mar 06, 2025 | 2:16 PM

Share

ಮರಣ ಯಾವಾಗ, ಹೇಗೆ ಸಂಭವಿಸುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ ಆದರೂ ಕೂಡ ನಾವು ಎಷ್ಟು ಕಾಲ ಬದುಕಬಹುದು ಎಂಬುದನ್ನು ತಿಳಿಯಲು ಪ್ರತಿಯೊಬ್ಬರೂ ಕುತೂಹಲ ಹೊಂದಿರುತ್ತಾರೆ. ಆದರೆ ನಾವು ಎಷ್ಟು ದಿನ ಬದುಕಬಹುದು ಎಂದು ಯಾರನ್ನಾದರೂ ಕೇಳಿದಾಗ, ನಮಗೆ ಸಿಗುವ ಉತ್ತರ, ಜೀವನ ಮತ್ತು ಸಾವು ಎರಡೂ ಆ ದೇವರ ಕೈಯಲ್ಲಿದೆ. ನಾವು ಅವನ ಇಚ್ಛೆಯಂತೆ ನಡೆಯುವುದು ಮಾತ್ರ ಎಂದು ತಿಳಿದವರು ಹೇಳುವುದನ್ನು ನೀವು ಹಲವು ಬಾರಿ ಕೇಳಿರಬಹುದು. ಆದರೆ ಜೀವನ ಮತ್ತು ಸಾವಿನ ನಡುವಿನ ಸಂಬಂಧ ನಿಮ್ಮ ಉಗುರುಗಳಲ್ಲಿ ಅಡಗಿದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ನಾವು ಎಷ್ಟು ಕಾಲ ಬದುಕಬಹುದು ಎಂಬುದನ್ನು ಕಂಡುಕೊಳ್ಳಬಹುದು. ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ಸಂಶೋಧಕರಾದ ಡೇವಿಡ್ ಸಿಂಕ್ಲೇರ್ ಎನ್ನುವವರು ಈ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಉಗುರುಗಳ ಬೆಳವಣಿಗೆಯ ಆಧಾರದ ಮೇಲೆ, ಮನುಷ್ಯನ ಸಾವು ನಿರ್ಧಾರವಾಗುತ್ತೆ ಒಬ್ಬ ವ್ಯಕ್ತಿಯು ಯಾವಾಗ ಸಾಯುತ್ತಾನೆ ಮತ್ತು ಅವನ ಜೀವಿತಾವಧಿ ಎಷ್ಟು ಕಾಲ ಇರುತ್ತದೆ ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ಆದರೆ ಇದಕ್ಕೆ ಉತ್ತರವನ್ನು ಈಗ ಜೆನೆಟಿಕ್ಸ್ ತಜ್ಞ ಡಾ. ಡೇವಿಡ್ ಸಿಂಕ್ಲೇರ್ ಕಂಡುಹಿಡಿದಿದ್ದಾರೆ. ಹೌದು, ಒಂದು ಅಧ್ಯಯನದ ಪ್ರಕಾರ, ಉಗುರುಗಳ ಆರೋಗ್ಯ ಮತ್ತು ಅವುಗಳ ಬೆಳವಣಿಗೆಯು ವ್ಯಕ್ತಿಯ ಜೀವಿತಾವಧಿಯನ್ನು ನಿರ್ಧರಿಸುತ್ತದೆ ಮತ್ತು ಅವನು ಯಾವಾಗ ಸಾಯುತ್ತಾನೆ ಎಂದು ಹೇಳುತ್ತದೆ ಎಂದು ಅವರು ಕಂಡುಕೊಂಡಿದ್ದಾರೆ.

ಯಾರು ಹೆಚ್ಚು ಕಾಲ ಬದುಕುತ್ತಾರೆ?

ಡಾ. ಡೇವಿಡ್ ಸಿಂಕ್ಲೇರ್ ಅವರ ಪ್ರಕಾರ, ನಿಮ್ಮ ಉಗುರುಗಳ ಆರೋಗ್ಯವು ದೇಹದಲ್ಲಿ ಹೊಸ ಜೀವಕೋಶಗಳು ರೂಪುಗೊಳ್ಳುವ ವೇಗವನ್ನು ತೋರಿಸುತ್ತದೆ ಎಂದು ಹೇಳಿದ್ದು, ಅವರ ಸಂಶೋಧನೆಯ ಪ್ರಕಾರ, ನಿಮ್ಮ ಉಗುರುಗಳು ವೇಗವಾಗಿ ಬೆಳೆಯುತ್ತಿದ್ದರೆ, ವಯಸ್ಸು ನಿಧಾನವಾಗಿ ಬೆಳೆಯುತ್ತಿದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಅಂದರೆ ನೀವು ಹೆಚ್ಚು ಕಾಲ ಬದುಕುತ್ತಿರಿ. ಹಾಗಾಗಿ ನಿಮ್ಮ ಉಗುರುಗಳ ಬೆಳವಣಿಗೆಯನ್ನು ಸರಿಯಾಗಿ ಗಮನಿಸುವುದು ಬಹಳ ಮುಖ್ಯವಾಗಿದೆ. ಇದರಿಂದ ನೀವು ಹೆಚ್ಚು ಕಾಲ ಬದುಕುತ್ತೀರೋ ಇಲ್ಲವೋ ಎಂಬುದನ್ನು ನೀವೇ ತಿಳಿದುಕೊಳ್ಳಬಹುದು.

ಇದನ್ನೂ ಓದಿ
Image
ಈಜುಕೊಳದಲ್ಲಿ ಪಲ್ಟಿ ಹೊಡೆದ 84 ರ ಹರೆಯದ ಅಜ್ಜಿ
Image
ಕುದುರೆಗೆ ಬಲವಂತವಾಗಿ ಸಿಗರೇಟ್ ಸೇದಿಸಿದ ಯುವಕರು
Image
ಚರಂಡಿಯಲ್ಲಿ ಸಿಲುಕಿದ್ದ ಹಸುವನ್ನು ರಕ್ಷಿಸಿದ ಹೃದಯವಂತ
Image
ಲೈಫ್​​ನ್ನು ಬ್ಯಾಚುರಲ್ ಇದ್ದಾಗಲೇ ಎಂಜಾಯ್ ಮಾಡಿ ಎಂದ ಪೊಲೀಸ್

ಇದನ್ನೂ ಓದಿ: ಬೇಸಿಗೆಯಲ್ಲಿ ಈ ಆಹಾರಗಳನ್ನು ತಿನ್ನಲೇಬೇಕು! ಇವುಗಳನ್ನು ತಪ್ಪಿಸುವುದು ಒಳ್ಳೆಯದು

ಯಾರು ಬೇಗನೆ ಸಾಯುತ್ತಾರೆ?

ಡಾ. ಡೇವಿಡ್ ಸಿಂಕ್ಲೇರ್ ಅವರ ಪ್ರಕಾರ, ಉಗುರುಗಳು ನಿಧಾನವಾಗಿ ಬೆಳೆಯುವವರು ಬೇಗನೆ ಸಾಯುತ್ತಾರೆ. ಆ ವ್ಯಕ್ತಿಗಳ ವಯಸ್ಸು ತುಲನಾತ್ಮಕವಾಗಿ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ. ಅಂದರೆ ಉಗುರುಗಳ ಬೆಳವಣಿಗೆಯು ವ್ಯಕ್ತಿಯು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಒಬ್ಬ ವ್ಯಕ್ತಿಯ ಉಗುರುಗಳನ್ನು ನೋಡುವ ಮೂಲಕ, ಅವನೊಳಗೆ ಬೆಳೆಯುತ್ತಿರುವ ರೋಗವನ್ನು ಸಹ ಕಂಡುಹಿಡಿಯಬಹುದು. ಹಾಗಾಗಿ ಅವುಗಳ ಬೆಳವಣಿಗೆ ವ್ಯಕ್ತಿಯ ಆಯಸ್ಸನ್ನು ಹೇಳುತ್ತದೆ ಎಂದು ಅವರು ಹೇಳಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್