AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gas Vs Heart Attack: ಗ್ಯಾಸ್ಟ್ರಿಕ್ ಅಥವಾ ಹೃದಯಾಘಾತ; ಎದೆನೋವನ್ನು ಗುರುತಿಸುವುದು ಹೇಗೆ?

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಜನರು ಎಲ್ಲದಕ್ಕೂ ಭಯ ಪಡುವಂತಾಗಿದೆ. ಎದೆಯಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡರೂ ಎಲ್ಲಿ ಹೃದಯಾಘಾತ ಆಗುತ್ತದೆಯೋ ಏನೋ ಎಂದು ಹೆದರುತ್ತಾರೆ. ಕೆಲವೊಮ್ಮೆ ಈ ರೀತಿಯಾಗುವುದು ಗ್ಯಾಸ್ಟ್ರಿಕ್ ನಿಂದಲೂ ಆಗಿರಬಹುದು. ಆದರೆ ಇದನ್ನು ನೀವು ನಿರ್ಲಕ್ಷ್ಯ ಮಾಡುವುದು ಕೂಡ ಒಳ್ಳೆಯದಲ್ಲ. ಹಾಗಾಗಿ ಗ್ಯಾಸ್ಟ್ರಿಕ್ ನಿಂದ ಬರುವ ಎದೆ ನೋವಿಗೂ, ಹೃದಯಾಘಾತಕ್ಕೂ ಇರುವ ವ್ಯತ್ಯಾಸವನ್ನು ಸರಿಯಾಗಿ ತಿಳಿದುಕೊಳ್ಳಿ.

Gas Vs Heart Attack: ಗ್ಯಾಸ್ಟ್ರಿಕ್ ಅಥವಾ ಹೃದಯಾಘಾತ; ಎದೆನೋವನ್ನು ಗುರುತಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jun 15, 2025 | 5:48 PM

Share

ಎದೆಯಲ್ಲಿ ಹಠಾತ್ ನೋವು ಕಾಣಿಸಿಕೊಂಡ್ರೆ ಸಾಕು ಕೆಲವರು ನಮಗೇನೋ ಆಗೇ ಹೋಯಿತು ಎಂದು ಭಾವಿಸುತ್ತಾರೆ. ತನಗೆ ಹೃದಯಾಘಾತ (Heart Attack) ಆಗಬಹುದೇನೋ ಎಂದು ಭಯ ಬೀಳುತ್ತಾರೆ. ಆದರೆ ಎಲ್ಲಾ ಎದೆಯ ನೋವುಗಳು ಹೃದಯಕ್ಕೆ ಸಂಬಂಧಿಸಿರುವುದಿಲ್ಲ. ಕೆಲವೊಮ್ಮೆ ಇಂತಹ ಸಮಸ್ಯೆಗಳು ಗ್ಯಾಸ್ಟ್ರಿಕ್ ನಿಂದಲೂ ಬರಬಹುದು. ಹೀಗಾಗಿ ಗ್ಯಾಸ್ಟ್ರಿಕ್ (Gastric) ನಿಂದ ಉಂಟಾಗಬಹುದಾದ ಸಮಸ್ಯೆಗಳು ಮತ್ತು ನಿಜವಾಗಿಯೂ ಹೃದಯದ ಸಮಸ್ಯೆ (Heart problem) ಉಂಟಾದಾಗ ದೇಹದಲ್ಲಿ ಕಂಡುಬರುವ ಲಕ್ಷಣಗಳ ನಡುವಿನ ವ್ಯತ್ಯಾಸ ತಿಳಿಸುಕೊಳ್ಳುವುದು ಅತ್ಯವಶ್ಯ.

ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುವವರರಲ್ಲಿ ಸಾಮಾನ್ಯವಾಗಿ ಹೃದಯದ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದರ ಜೊತೆಗೆ ಇನ್ನೂ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅವು ಯಾವುದೆಂದರೆ;

  •  ಹೊಟ್ಟೆ ಉಬ್ಬುವುದು, ಹೊಟ್ಟೆ ಸೀಳುವಂತೆ ಒತ್ತಡ ಅನುಭವ
  •  ಹೊಟ್ಟೆಯಲ್ಲಿ ಗಾಳಿ ಚಲಿಸುವ ಸಂವೇದನೆ
  • ಎದೆಯಲ್ಲಿ ಚುಚ್ಚುವ ಅನುಭವ ಅಥವಾ ಸಣ್ಣ ನೋವು
  • ಉಬ್ಬಸ ಅಥವಾ ಅಸ್ವಸ್ಥತೆ
  • ಉಸಿರಾಟದ ತೊಂದರೆ, ಬಿಗಿತ

ಸಾಮಾನ್ಯವಾಗಿ ಈ ಎಲ್ಲ ಲಕ್ಷಣಗಳು ಗ್ಯಾಸ್ಟ್ರಿಕ್ ಸಮಸ್ಯೆಯಿಂದಲೇ ಹೆಚ್ಚಾಗಿ ದೇಹದಲ್ಲಿ ಕಂಡು ಬರುತ್ತವೆ. ದೇಹದಿಂದ ಗ್ಯಾಸ್ ಹೊರ ಬಂದ ನಂತರ ಇವುಗಳು ತನ್ನಿಂದ ತಾನಾಗಿಯೇ ಕಡಿಮೆಯಾಗುತ್ತವೆ. ಆದ್ರೆ ಹೃದಯ ಸಂಬಂಧಿ ತೊಂದರೆಗಳಾದಾಗ ದೇಹದಲ್ಲಿ ಕಂಡುಬರುವ ಲಕ್ಷಣಗಳಲ್ಲಿ ಕೆಲವು ಇವುಗಳಿಗೆ ಸಾಮ್ಯತೆ ಇದ್ದರೂ ತುಸು ಭಿನ್ನವಾಗಿರಲಿವೆ.

ಇದನ್ನೂ ಓದಿ
Image
ಬಿ12 ಅಂಶ ಕಡಿಮೆ ಆಗಿದ್ಯಾ? ಈ ಒಂದು ಹಣ್ಣನ್ನು ಸೇವನೆ ಮಾಡಿ
Image
ಈ ಆಹಾರ ಹೃದಯಕ್ಕೆ ಒಳ್ಳೆಯದಲ್ಲ ಎಷ್ಟೇ ಇಷ್ಟವಾಗಿದ್ದರೂ ತಿನ್ನಬೇಡಿ
Image
ನಗುವಾಗ ಡಿಂಪಲ್ ಬೀಳೋದು ಅದೃಷ್ಟ ಅಲ್ಲ, ಇದಕ್ಕೆ ಈ ಆರೋಗ್ಯ ಸಮಸ್ಯೆಯೇ ಕಾರಣ
Image
ರಾತ್ರಿ ಪದೇ ಪದೇ ಎಚ್ಚರವಾಗುತ್ತಾ? ಈ ರೀತಿ ಆಗುವುದಕ್ಕೆ ಇದೇ ಕಾರಣ
  • ಎದೆಯ ಮಧ್ಯದಲ್ಲಿ ತೀವ್ರ ನೋವು, ಭುಜ, ತೋಳುಗಳು, ಕುತ್ತಿಗೆ, ದವಡೆ ಅಥವಾ ಬೆನ್ನಿಗೆ ನೋವು ಹರಡುವುದು
  • ಎದೆಯಲ್ಲಿ ಒತ್ತಡದಂತಹ ನೋವು
  • ಉಸಿರಾಟದ ತೊಂದರೆ
  • ಅತಿಯಾದ ಬೆವರುವುದು, ವಾಕರಿಕೆ ಅಥವಾ ತಲೆನೋವು
  • ತಲೆತಿರುಗುವುದು, ಬೆಳಕು ಕಾಣಿಸುವುದು ಮತ್ತು ಮಸುಕಾದ ದೃಷ್ಟಿ

ಈ ಲಕ್ಷಣಗಳು ಕಂಡುಬಂದಾಗ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ. ತುರ್ತಾಗಿ ವೈದ್ಯರನ್ನ ಸಂಪರ್ಕಿಸುವ ಅವಶ್ಯಕತೆ ಇದ್ದು, ಅಜಾಗರೂಕತೆ ಮಾಡಿದರೆ ಪ್ರಾಣಕ್ಕೂ ಕಂಟಕ ಬರುವ ಸಾಧ್ಯತೆಗಳು ಹೆಚ್ಚಾಗಿ ಇರಲಿವೆ.

ಇದನ್ನೂ ಓದಿ: ಕೇವಲ 5 ಸೆಕೆಂಡುಗಳ ಕಾಲ ಹೀಗೆ ಮಾಡಿದ್ರೆ ಗ್ಯಾಸ್​​​​ ಸಮಸ್ಯೆಯಿಂದ ಮುಕ್ತಿ

ನೀವು ಯಾವಾಗ ಜಾಗರೂಕರಾಗಿರಬೇಕು?

ಹಠಾತ್ ಎದೆಯಲ್ಲಿ ಅಸಹಜ ನೋವನ್ನು ಅನುಭವಿಸಿದರೆ, ಅದನ್ನು ಸಾಮಾನ್ಯ ಗ್ಯಾಸ್ಟ್ರಿಕ್ ಸಮಸ್ಯೆ ಎಂದು ತಳ್ಳಿಹಾಕಬೇಡಿ; ಮೊದಲು ಅದರ ತೀವ್ರತೆಯನ್ನು ನಿರ್ಣಯಿಸಿ. ನೋವು ನಿರಂತರವಾಗಿದೆಯೇ? ಬೇರೆ ಬೇರೆ ಭಾಗಕ್ಕೆ ಹರಡುತ್ತಿದೆಯೇ? ನಿಮಗೆ ವಾಕರಿಕೆ, ಬೆವರುವ ಅನುಭವ ಇದೆಯೇ? ಎಂದು ಪರೀಕ್ಷಿಸಿಕೊಳ್ಳಿ. ಈ ಪ್ರಶ್ನೆಗಳಿಗೆ ಉತ್ತರ ಹೌದು ಎಂದಾದರೆ ತಕ್ಷಣ ಸಮೀಪದ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ