AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲರೂ ಒಟ್ಟಾಗಿ ಸೇರಿ ಡೆಂಗ್ಯೂ ವಿರುದ್ಧ ಹೋರಾಡೋಣ ಅಭಿಯಾನಕ್ಕೆ ಚಾಲನೆ : ಸಾಥ್ ನೀಡಿದ ಟಿವಿ9 ನೆಟ್‌ವರ್ಕ್

ಇತ್ತೀಚೆಗಿನ ದಿನಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಟಿವಿ9 ನೆಟ್‌ವರ್ಕ್, ಆಲ್ ಔಟ್ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ಸಹಯೋಗದೊಂದಿಗೆ ವಿಶ್ವ ಡೆಂಗ್ಯೂ ದಿನ 2025 ರಂದು ಎಲ್ಲರೂ ಒಟ್ಟಾಗಿ ಸೇರಿ ಡೆಂಗ್ಯೂ ವಿರುದ್ಧ ಹೋರಾಡೋಣ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ಮೂಲಕ ಆರೋಗ್ಯದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನಕ್ಕೆ ಮುಂದಾಗಿದ್ದು, ಡೆಂಗ್ಯೂ ವಿರುದ್ಧ ಜಾಗೃತಿ ಮೂಡಿಸುವುದು ಈ ಅಭಿಯಾನದ ಪ್ರಮುಖ ಗುರಿಯಾಗಿದೆ, ಈ ಅಭಿಯಾನದ ವಿಶೇಷತೆಯೇನು? ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ಎಲ್ಲರೂ ಒಟ್ಟಾಗಿ ಸೇರಿ ಡೆಂಗ್ಯೂ ವಿರುದ್ಧ ಹೋರಾಡೋಣ ಅಭಿಯಾನಕ್ಕೆ ಚಾಲನೆ : ಸಾಥ್ ನೀಡಿದ ಟಿವಿ9 ನೆಟ್‌ವರ್ಕ್
ಒಟ್ಟಾಗಿ ಸೇರಿ ಡೆಂಗ್ಯೂ ವಿರುದ್ಧ ಹೋರಾಡೋಣ - ಅಭಿಯಾನ
ಸಾಯಿನಂದಾ
| Edited By: |

Updated on:Jun 16, 2025 | 4:10 PM

Share

ದೆಹಲಿ, ಜೂನ್ 16: ಮಳೆಗಾಲ ಆರಂಭವಾಗುತ್ತಿದ್ದಂತೆ ಡೆಂಗ್ಯೂ (Dengue) ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಹೌದು, ಭಾರತದಲ್ಲಿ ಪ್ರತಿ ವರ್ಷ ಎರಡು ಲಕ್ಷಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗುತ್ತಿದೆ. ಇದೀಗ ಟಿವಿ9 ನೆಟ್ವರ್ಕ್ ಡೆಂಗ್ಯೂ ವಿರುದ್ಧ ಹೋರಾಡಲು ಹೆಜ್ಜೆ ಇಟ್ಟಿದೆ. ಹೌದು, ವಿಶ್ವ ಡೆಂಗ್ಯೂ ದಿನ 2025 ( World Dengue Day 2025) ರ ಸಂದರ್ಭದಲ್ಲಿ, ಟಿವಿ9ನೆಟ್ ವರ್ಕ್, ಆಲ್ ಔಟ್ ಮತ್ತು ಭಾರತೀಯ ವೈದ್ಯಕೀಯ ಸಂಘ (TV9 Network, All Out, Indian Medical Association) ದ ಸಹಯೋಗದೊಂದಿಗೆ ‘ ಎಲ್ಲರೂ ಒಟ್ಟಾಗಿ ಸೇರಿ ಡೆಂಗ್ಯೂ ವಿರುದ್ಧ ಹೋರಾಡೋಣ (Saath Ladenge Dengue Se) ಅಭಿಯಾನವನ್ನು ಪ್ರಾರಂಭಿಸಿದೆ. ಇದರಲ್ಲಿ ಆರು ಪ್ರಾದೇಶಿಕ ಚಾನೆಲ್‌ಗಳು ಒಳಗೊಂಡಂತೆ , ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ತಜ್ಞರಿಂದ ಸಲಹೆ ಹಾಗೂ ರಾಷ್ಟ್ರೀಯ ಪ್ಯಾನಲ್ ಚರ್ಚೆಗಳ ಮೂಲಕ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವ ಪ್ರಮುಖ ಗುರಿಯನ್ನು ಹೊಂದಿದೆ, ಹಾಗಾದ್ರೆ ಈ ಅಭಿಯಾನದ ವಿಶೇಷತೆಗಳೇನು? ಏನೆಲ್ಲಾ ಗುರಿಯನ್ನು ಹೊಂದಿದೆ ಎನ್ನುವ ಮಾಹಿತಿಯನ್ನು ನೀವಿಲ್ಲಿ ತಿಳಿದುಕೊಳ್ಳಿ.

ಟಿವಿ9 ನೆಟ್‌ವರ್ಕ್‌ನ ಚೀಫ್ ರೆವೆನ್ಯೂ ಆಫೀಸರ್ ಅಮಿತ್ ತ್ರಿಪಾಠಿ ಮಾತನಾಡಿ, ಅರ್ಥಪೂರ್ಣ ಬದಲಾವಣೆಯನ್ನು ತರಲು ಮಾಧ್ಯಮದ ಶಕ್ತಿಯನ್ನು ಬಳಸುವುದರಲ್ಲಿ ನಾವು ನಂಬಿಕೆ ಇಡುತ್ತೇವೆ. ಆಲ್ ಔಟ್ ಜೊತೆಗಿನ ನಮ್ಮ ಪಾಲುದಾರಿಕೆಯಲ್ಲಿ , ನಾವು ಕೇವಲ ಅಭಿಯಾನವನ್ನು ಪ್ರಸಾರ ಮಾಡುತ್ತಿಲ್ಲ, ಮಾಹಿತಿ ನೀಡುವುದರೊಂದಿಗೆ ಡೆಂಗ್ಯೂ ವಿರುದ್ಧ ಹೋರಾಡಲು ರಾಷ್ಟ್ರವ್ಯಾಪಿ ಆಂದೋಲನವನ್ನು ಸಕ್ರಿಯಗೊಳಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಟಿವಿ9 ನೆಟ್‌ವರ್ಕ್‌ನ ಚೀಫ್ ಗ್ರೋಥ್ ಆಫೀಸರ್ ಶಕ್ತಿಮ್ ದಾಸ್ ಜಾಗೃತಿಯು ತಡೆಗಟ್ಟುವಿಕೆಯ ಮೊದಲ ಹೆಜ್ಜೆಯಾಗಿದೆ. ಡೆಂಗ್ಯೂ ವಿರುದ್ಧ ಒಟ್ಟಾಗಿ ಹೊರಡೋಣ ಹಾಗೂ ಆಲ್ ಔಟ್’ ಉಪಕ್ರಮದೊಂದಿಗೆ ನಾವು ಭಾರತದಾದ್ಯಂತ ಕುಟುಂಬಗಳನ್ನು ಸಬಲೀಕರಣಗೊಳಿಸಲು ಹಾಗೂ ವೈದ್ಯಕೀಯ ಒಳನೋಟವನ್ನು ಹೆಚ್ಚಿನ ಪ್ರಭಾವ ಬೀರುವ ಸಲುವಾಗಿ ಈ ಅಭಿಯಾನದೊಂದಿಗೆ ಸಜ್ಜಾಗಿದ್ದೇವೆ. ಇದು ಸಾರ್ವಜನಿಕರ ಆರೋಗ್ಯ ಪರಿವರ್ತನೆಗೆ ಹೇಗೆ ಉತ್ತೇಜನ ನೀಡುತ್ತದೆ ಎಂಬುದಕ್ಕೆ ಈ ಅಭಿಯಾನವು ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
ಗ್ಯಾಸ್ಟ್ರಿಕ್ ಅಥವಾ ಹೃದಯಾಘಾತ; ಎದೆನೋವನ್ನು ಗುರುತಿಸುವುದು ಹೇಗೆ?
Image
ಪ್ರತಿದಿನ 15 ನಿಮಿಷ ಸ್ಕಿಪ್ಪಿಂಗ್‌ ಮಾಡಿ ಆರೋಗ್ಯ ಸೂಪರ್ ಆಗಿರುತ್ತೆ
Image
ಬಿ12 ಅಂಶ ಕಡಿಮೆ ಆಗಿದ್ಯಾ? ಈ ಒಂದು ಹಣ್ಣನ್ನು ಸೇವನೆ ಮಾಡಿ
Image
ಈ ಆಹಾರ ಹೃದಯಕ್ಕೆ ಒಳ್ಳೆಯದಲ್ಲ ಎಷ್ಟೇ ಇಷ್ಟವಾಗಿದ್ದರೂ ತಿನ್ನಬೇಡಿ

ಬ್ರಿಲಿಯನ್ ಕನ್ಸ್ಯೂಮರ್ ಪ್ರಾಡಕ್ಟ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಓ , ರತನ್‌ಜಿತ್ ದಾಸ್ ಮಾತನಾಡಿ, “ಆಲ್ ಔಟ್ ಯಾವಾಗಲೂ ಸೊಳ್ಳೆಗಳು ಮತ್ತು ಅವುಗಳಿಂದ ಹರಡುವ ರೋಗಗಳಿಂದ ಕುಟುಂಬಗಳನ್ನು ರಕ್ಷಿಸಲು ನಿಂತಿದೆ. ಭಾರತದಲ್ಲಿ ಇಂದಿಗೂ ರೋಗಕಾರಕಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿಯ ಕೊರತೆಯಿದೆ. ಡೆಂಗ್ಯೂ ಹೆಚ್ಚುತ್ತಿರುವಂತೆ, ಜನರಿಗೆ ಮಾಹಿತಿ ನೀಡುವ ಹಾಗೂ ಸಾಮೂಹಿಕ ಜಾಗೃತಿ ಮೂಡಿಸಲು ವಿಶ್ವಾಸಾರ್ಹ ಪಾಲುದಾರರೊಂದಿಗೆ ಕೆಲಸ ಮಾಡುವ ಅಗತ್ಯವಿದೆ. ಈ ಆಲ್ ಔಟ್‌ನ ಎಲ್ಲರೂ ಒಟ್ಟಾಗಿ ಸೇರಿ ಡೆಂಗ್ಯೂ ವಿರುದ್ಧ ಹೋರಾಡೋಣ ಈ ಅಭಿಯಾನವು ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.

ವಿಡಿಯೋ ಇಲ್ಲಿದೆ ನೋಡಿ:

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನ್ಯಾಷನಲ್ ಪ್ರೆಸಿಡೆಂಟ್ ಡಾ. ದಿಲೀಪ್ ಭಾನುಶಾಲಿ, “ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು ಸಾರ್ವಜನಿಕ ಆರೋಗ್ಯದ ಮೊದಲ ಆದ್ಯತೆಯಾಗಿದೆ. ಡೆಂಗ್ಯೂನಂತಹ ರೋಗಗಳನ್ನು ವ್ಯಕ್ತಿಯಿಂದ ಪ್ರತ್ಯೇಕವಾಗಿ ನಿಭಾಯಿಸಲು ಸಾಧ್ಯವಿಲ್ಲ. ಇದಕ್ಕೆ ಸಾಮೂಹಿಕವಾಗಿ ಹೋರಾಡುವ ಹಾಗೂ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮಾಹಿತಿಯನ್ನು ಮನೆಗಳಿಗೆ ತಲುಪಲು ಈ ಉಪಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘವು ಭಾಗಿಯಾಗಿರುವುದಕ್ಕೆ ಹೆಮ್ಮೆಪಡುತ್ತದೆ ಎಂದು ಹೇಳಿದ್ದಾರೆ.

ಅಭಿಯಾನದ ಮೂಲ ಉದ್ದೇಶವೇನು? ಭಾರತದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಭೀತಿಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅದನ್ನು ಎದುರಿಸಲು ನಾಗರಿಕರನ್ನು ಸಜ್ಜುಗೊಳಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಭಾರತದಾದ್ಯಂತ ಡೆಂಗ್ಯೂ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚುತ್ತಿರುವುದರಿಂದ, ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ರಾತ್ರಿಯಲ್ಲಿ ಸೊಳ್ಳೆಗಳು ಕಿರಿಕಿರಿ ಉಂಟುಮಾಡುವುದಲ್ಲದೆ, ಡೆಂಗ್ಯೂ, ಮಲೇರಿಯಾ, ಚಿಕೂನ್‌ಗುನ್ಯಾ ಮತ್ತು ಫೈಲೇರಿಯಾಸಿಸ್‌ನಂತಹ ಮಾರಕ ರೋಗಗಳ ವಾಹಕಗಳಾಗಿರುವುದರಿಂದ ಸೊಳ್ಳೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಅಭಿಯಾನದ ಪಾತ್ರ ಬಹುದೊಡ್ಡದು.

ಇದನ್ನೂ ಓದಿ : National Dengue Day 2025: ಬಿಸಿಲು, ಮಳೆಯಾದಾಗ ಹೆಚ್ಚಾಗುತ್ತೆ ಡೆಂಗ್ಯೂ ಪ್ರಕರಣ! ಮಕ್ಕಳ ಆರೋಗ್ಯದ ಮೇಲಿರಲಿ ಎಚ್ಚರ

ಈ ಅಭಿಯಾನದಲ್ಲಿ ಏನೆಲ್ಲಾ ವಿಶೇಷತೆಗಳಿರಲಿದೆ?

  • ಎಲ್ಲರೂ ಒಟ್ಟಾಗಿ ಸೇರಿ ಡೆಂಗ್ಯೂ ವಿರುದ್ಧ ಹೋರಾಡೋಣ ಅಭಿಯಾನವು ಆರು ಪ್ರಾದೇಶಿಕ ವಾಹಿನಿಗಳಾದ ಟಿವಿ9 ಭಾರತವರ್ಷ (ಹಿಂದಿ), ಟಿವಿ9 ಕನ್ನಡ, ಟಿವಿ9 ತೆಲುಗು, ಟಿವಿ9 ಮರಾಠಿ, ಟಿವಿ9 ಬಾಂಗ್ಲಾ ಮತ್ತು ಟಿವಿ9 ಗುಜರಾತಿಯಲ್ಲಿ ಪ್ರಸಾರವಾಗುತ್ತಿದೆ. ಇದು ಡೆಂಗ್ಯೂ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಮಾಹಿತಿಯನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
  •  ಈ ಅಭಿಯಾನ ಮತ್ತೊಂದು ವಿಶೇಷತೆಯೆಂದರೆ ಟಿವಿ9 ನ ವಿಶ್ವಾಸಾರ್ಹ ನಿರೂಪಕರು ಪ್ರಸ್ತುತಪಡಿಸಿದ ಆಲ್ ಔಟ್ ಸಹ-ಬ್ರಾಂಡೆಡ್ ಕಿರು ವೀಡಿಯೊಗಳನ್ನು ರಚಿಸಿ ಡೆಂಗ್ಯೂವಿನ ರೋಗಲಕ್ಷಣಗಳು, ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.
  •  ಡೆಂಗ್ಯೂವನ್ನು ತಡೆಗಟ್ಟುವ ಕ್ರಮಗಳ ಕುರಿತು ಮಾಹಿತಿಯನ್ನು ಒದಗಿಸಲು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸದಸ್ಯರಾಗಿರುವ ವೈದ್ಯರು ಈ ಸರಣಿಯಲ್ಲಿ ಭಾಗವಹಿಸಿ ಮಾಹಿತಿ ನೀಡುತ್ತಾರೆ.
  •  ಡೆಂಗ್ಯೂವಿನಿಂದ ಸಾರ್ವಜನಿಕ ಆರೋಗ್ಯದ ಪರಿಣಾಮ ಹಾಗೂತಡೆಗಟ್ಟುವ ಕ್ರಮಗಳ ಬಗ್ಗೆ ವಿಚಾರ ಸಂಕಿರಣದಲ್ಲಿ ಹಿರಿಯ ಐಎಂಎ ಪ್ರತಿನಿಧಿಗಳು, ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ಹೆಸರಾಂತ ವೈದ್ಯರು ಭಾಗವಹಿಸಿ ಜನಸಾಮಾನ್ಯರಿಗೆ ಮಾಹಿತಿ ನೀಡುತ್ತಾರೆ.
  • ಡೆಂಗ್ಯೂ ವಿರುದ್ಧ ಹೋರಾಡುವ ಈ ಅಭಿಯಾನಕ್ಕೆ ಡಿಜಿಟಲ್ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ. ಈ ಅಭಿಯಾನವನ್ನು ಟಿವಿ9 ನೆಟ್‌ವರ್ಕ್‌ನ ವೆಬ್‌ಸೈಟ್‌ಗಳು, ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಎಕ್ಸ್ ಮತ್ತು ಲಿಂಕ್ಡ್‌ಇನ್‌ನಲ್ಲಿಯೂ ಮಾಹಿತಿಯನ್ನು ಒದಗಿಸಲಾಗುತ್ತದೆ. ಲೇಖನ, ರೀಲ್ಸ್ ಮೂಲಕ ಜನರಿಗೆ ಹಾಗೂ ಯುವಪೀಳಿಗೆಗೆ ಮಾಹಿತಿ ತಲುಪಿಸುವ ಪ್ರಯತ್ನವಿದಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:37 pm, Mon, 16 June 25

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್