AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health: ಲಿಂಬು ನೀರು ಕುಡಿಯುವುದರಿಂದ ಎಷ್ಟೆಲ್ಲ ಉಪಯೋಗಗಳಿವೆ ನೋಡಿ..

Health: ಲಿಂಬು ನೀರು ಕುಡಿಯುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವುದನ್ನು ತಡೆಯಬಹುದು. ಕಿಡ್ನಿ ಕಲ್ಲಿನಿಂದ ಬಳಲುತ್ತಿರುವವರು ದಿನಕ್ಕೆ 125 ಎಂಎಲ್​ನಷ್ಟು ಲಿಂಬು ನೀರು ಕುಡಿಯುವುದರಿಂದ ಸಮಸ್ಯೆಯಿಂದ ಶೀಘ್ರವೇ ಮುಕ್ತಿ ಪಡೆಯಬಹುದು.

Health: ಲಿಂಬು ನೀರು ಕುಡಿಯುವುದರಿಂದ ಎಷ್ಟೆಲ್ಲ ಉಪಯೋಗಗಳಿವೆ ನೋಡಿ..
ಲಿಂಬು ನೀರು (ಸಂಗ್ರಹ ಚಿತ್ರ)
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Feb 16, 2021 | 7:30 PM

Share

ಲಿಂಬು ನೀರು ಹಲವು ರೋಗಗಳಿಗೆ ಮದ್ದು. ಕೆಲವರು ಪ್ರತಿದಿನ ಒಂದು ಲೋಟ ಲಿಂಬು ನೀರು ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಲಿಂಬು ನೀರು ಕುಡಿಯುವುದರಿಂದ ದಣಿವು ಹೋಗಿ, ಶಕ್ತಿ ಬರುತ್ತದೆ..ಅದಕ್ಕೂ ಮೀರಿ ಉತ್ಸಾಹ ಮೂಡುತ್ತದೆ ಎಂದೂ ಹೇಳಲಾಗುತ್ತದೆ. ಅದರಲ್ಲೂ ಬೇಸಿಗೆ ಬಂತೆಂದರೆ ಲಿಂಬು ನೀರಿಗೆ ಹೆಚ್ಚಿನ ಪ್ರಾಶಸ್ತ್ಯ.  ಈ ಲಿಂಬು ಎಂಬುದು ಎಲ್ಲ ಋತುಮಾನಗಳಲ್ಲೂ ಸಿಗುವ ಹಣ್ಣು.. ಅಪಾರ ಪೋಷಕಾಂಶಗಳನ್ನು ಹೊಂದಿದ್ದು, ವಿಟಮಿನ್​, ಖನಿಜಾಂಶ ಹೆಚ್ಚಾಗಿದೆ. ಹೀಗಾಗಿ ಲಿಂಬು ನೀರು ಸೇವನೆಯಿಂದ ಬಹು ಉಪಯೋಗ ಪಡೆಯಬಹುದು.

ಅದರಲ್ಲಿ ಪ್ರಮುಖವಾಗಿ ಲಿಂಬು ನೀರಿನಿಂದ ಸಿಗುವ ಉಪಯೋಗಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:

ಜೀರ್ಣಕ್ರಿಯೆ ಮತ್ತು ತೂಕ ಇಳಿಸಿಕೊಳ್ಳಲು ಸಹಕಾರಿ ಹಸಿದ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಕುಡಿಯುವ ಪದ್ಧತಿ ನಮ್ಮಲ್ಲಿ ಅನಾದಿ ಕಾಲದಿಂದಲೂ ಇದೆ. ಹೀಗೆ ಬರೀ ನೀರು ಕುಡಿಯುವ ಬದಲು ಅದಕ್ಕೆ ಲಿಂಬೆ ರಸ ಬೆರೆಸಿ ಕುಡಿದರೆ ದೇಹಕ್ಕೆ ಇನ್ನಷ್ಟು ಸ್ವಾಸ್ಥ್ಯ ಸಿಗುತ್ತದೆ. ಖಾಲಿ ಹೊಟ್ಟೆಯಲ್ಲಿ ಲಿಂಬು ನೀರು ಕುಡಿದಾಗ ಅದು ನಮ್ಮ ದೇಹದೊಳಗೆ ಆಮ್ಲದ ಹಿಮ್ಮುಖ ಹರಿವನ್ನು ತಡೆಯುತ್ತದೆ. ಜೀರ್ಣಕ್ರಿಯೆಯನ್ನು ಸರಾಗ ಮಾಡುವುದಲ್ಲದೆ, ಮಲಬದ್ಧತೆಯಾಗದಂತೆ ತಡೆಯುತ್ತದೆ. ದೇಹದೊಳಗಿನ ತ್ಯಾಜ್ಯವನ್ನು ಹೊರಹಾಕಲು ತುಂಬ ಸಹಕಾರಿ.

ಜೀರ್ಣಾಂಗ ವ್ಯವಸ್ಥೆಯಲ್ಲಿನ ವಿಷಕಾರಿ ಅಂಶವನ್ನು ಲಿಂಬು ರಸ ತೊಡೆದುಹಾಕುತ್ತದೆ. ಅಜೀರ್ಣದೊಂದಿಗೆ ಬರುವ ಹೊಟ್ಟೆ ಉಬ್ಬರ, ನೋವನ್ನು ಕಡಿಮೆ ಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ಸರಿ ಮಾಡಿ, ಕೆಟ್ಟ ಕೊಬ್ಬನ್ನು ಕರಗಿಸುತ್ತದೆ. ಈ ಮೂಲಕ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಚರ್ಮದ ಆರೋಗ್ಯ ಲಿಂಬುನೀರು ಒಂದು ಹಿತವಾದ ಸುವಾಸನೆಯುಳ್ಳ, ತಾಜಾತನ ನೀಡುವ ಪಾನೀಯ ಎಂಬುದರಲ್ಲಿ ಅನುಮಾನವಿಲ್ಲ. ಈ ಪಾನೀಯ ಕುಡಿದರೆ ದೇಹದ ದಣಿವು ನಿವಾರಣೆಯಾಗುವ ಜತೆ, ಮನಸಿಗೂ ಮುದ ಸಿಗುತ್ತದೆ. ಇದರೊಂದಿಗೆ ಚರ್ಮದ ಆರೋಗ್ಯಕ್ಕೂ ತುಂಬ ಸಹಕಾರಿಯಾಗಿದೆ. ಪ್ರತಿದಿನ ಬೆಳಗ್ಗೆ ಬೆಚ್ಚಗಿನ ಲಿಂಬು ನೀರು ಕುಡಿಯುವುದರಿಂದ ದೇಹದೊಳಗಿನ ನಂಜು ಹೊರಹೋಗಿ, ಚರ್ಮದ ಹೊಳಪು ಹೆಚ್ಚುತ್ತದೆ. ಆರೋಗ್ಯಯುತ ಚರ್ಮವನ್ನು ಪಡೆಯಬಹುದು.

ಉರಿಯೂತ, ಅನೀಮಿಯಾದಿಂದ ಮುಕ್ತಿ ಲಿಂಬು ಆ್ಯಂಟಿಆ್ಯಕ್ಸಿಡೆಂಟ್ಸ್​, ಪೊಟ್ಯಾಷಿಯಂ, ಫೋಲೇಟ್, ಫ್ಲೇವನಾಯ್ಡ್​ಗಳನ್ನು ಒಳಗೊಂಡಿದೆ. ಹಾಗೇ, ವಿಟಮಿನ್ ಬಿ ಕೂಡ ಇದರಲ್ಲಿದೆ. ಈ ಅಂಶಗಳು ನಮ್ಮ ದೇಹದಲ್ಲಿ ಆಕ್ಸಿಡೇಟಿವ್​ ಒತ್ತಡದಿಂದ ಉಂಟಾದ ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡುತ್ತವೆ. ಇನ್ನು ಲಿಂಬುವಿನಲ್ಲಿರುವ ವಿಟಮಿನ್​ ಸಿ ಆಹಾರದಲ್ಲಿರುವ ಕಬ್ಬಿಣದ ಅಂಶಗಳನ್ನು ನಮ್ಮ ದೇಹ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ರಕ್ತಹೀನತೆಯಿಂದ ಪಾರಾಗಬಹುದು.

ಮೂತ್ರಪಿಂಡದಲ್ಲಿ ಕಲ್ಲಾಗುವುದನ್ನು ತಡೆಯುತ್ತದೆ ಲಿಂಬು ನೀರು ಕುಡಿಯುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವುದನ್ನು ತಡೆಯಬಹುದು. ಕಿಡ್ನಿ ಕಲ್ಲಿನಿಂದ ಬಳಲುತ್ತಿರುವವರು ದಿನಕ್ಕೆ 125 ಎಂಎಲ್​ನಷ್ಟು ಲಿಂಬು ನೀರು ಕುಡಿಯುವುದರಿಂದ ಸಮಸ್ಯೆಯಿಂದ ಶೀಘ್ರವೇ ಮುಕ್ತಿ ಪಡೆಯಬಹುದು. ಲಿಂಬು ನೀರು ಮೂತ್ರದಲ್ಲಿ ಪಿಎಚ್​ ಮಟ್ಟವನ್ನು ಹೆಚ್ಚಿಸುವ ಮೂಲಕ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡುತ್ತದೆ.

ಇನ್ನಷ್ಟು..

Motherhood; ನಾನೆಂಬ ಪರಿಮಳದ ಹಾದಿಯಲಿ: ನಡೆಯಬೇಕಾದ ಹಾದಿ ತುಂಬಾ ದೂರವಿದೆ, ಒಟ್ಟಿಗೇ ನಡೆಯುತ್ತಿದ್ದೇವೆ…

ಕೆಲವರು ಎಷ್ಟೇ ಬುದ್ಧಿವಂತರಾದರೂ.. ಜೀವನದಲ್ಲಿ ಸಕ್ಸಸ್ ಕಾಣಲ್ಲ, ಯಾಕೆ?

Published On - 7:20 pm, Tue, 16 February 21

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು