Heat Wave: ಬಿಸಿಗಾಳಿಯಿಂದ ತತ್ತರಿಸಿದ ಯುರೋಪ್, ತಾಪಮಾನ ಬದಲಾವಣೆ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತೆ?

ಬಿಸಿಗಾಳಿಯ ಹೊಡೆತಕ್ಕೆ ಐರೋಪ್ಯ ರಾಷ್ಟ್ರಗಳು ನಲುಗುತ್ತಿವೆ. ಯುರೋಪ್ ಖಂಡದ ಬಹುತೇಕ ದೇಶಗಳಿಗೆ ಈ ಬಿಸಿಗಾಳಿ ಆವರಿಸುತ್ತಿದೆ.

Heat Wave: ಬಿಸಿಗಾಳಿಯಿಂದ ತತ್ತರಿಸಿದ ಯುರೋಪ್, ತಾಪಮಾನ ಬದಲಾವಣೆ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತೆ?
Climate ChangeImage Credit source: Timesnow
Follow us
| Updated By: ನಯನಾ ರಾಜೀವ್

Updated on: Aug 14, 2022 | 9:55 AM

ಬಿಸಿಗಾಳಿಯ ಹೊಡೆತಕ್ಕೆ ಐರೋಪ್ಯ ರಾಷ್ಟ್ರಗಳು ನಲುಗುತ್ತಿವೆ. ಯುರೋಪ್ ಖಂಡದ ಬಹುತೇಕ ದೇಶಗಳಿಗೆ ಈ ಬಿಸಿಗಾಳಿ ಆವರಿಸುತ್ತಿದೆ. ಬಿಸಿಲಿನ ತಾಪಕ್ಕೆ ಜನರು ರಸ್ತೆಯಲ್ಲೇ ಕುಸಿದು ಬೀಳುವಷ್ಟು ತೀವ್ರತೆ ಇದೆ. ಈ ವರ್ಷ ತಾಪಮಾನವು ಫ್ರಾನ್ಸ್, ಸ್ಪೇನ್, ಪೋರ್ಚುಗಲ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಅತಿ ಹೆಚ್ಚು ಏರಿಕೆ ಕಂಡಿದೆ.

ಸಾಮಾನ್ಯವಾಗಿ ಈ ಅವಧಿಯಲ್ಲಿ ಯುರೋಪ್​ನಾದ್ಯಂತ ಉಷ್ಣಾಂಶವು 18 ಡಿಗ್ರಿ ಸೆಲ್ಸಿಯಸ್​ನಿಂದ 26 ಡಿಗ್ರಿ ಸೆಲ್ಸಿಯಸ್​ನಷ್ಟು ಇರುತ್ತದೆ. ಕಡುಬೇಸಿಗೆ ಅವಧಿಯಲ್ಲಿ ಉಷ್ಣಾಂಶವು 20 ಡಿಗ್ರಿ ಸೆಲ್ಸಿಯಸ್​ನಿಂದ 30 ಡಿಗ್ರಿ ಸೆಲ್ಸಿಯಸ್​ನಷ್ಟು ಇರುತ್ತದೆ.

ಜುಲೈ ಅಂತ್ಯದಲ್ಲಿ 20ಕ್ಕೂ ಹೆಚ್ಚು ದೇಶಗಳಲ್ಲಿ ಉಷ್ಣಾಂಶ 30 ಡಿಗ್ರಿಯಿಂದ 40 ಡಿಗ್ರಿ ಆಸುಪಾಸಿನಲ್ಲಿರುತ್ತದೆ. ಆದರೆ ಈ ಬಾರಿ ಜುಲೈ ಅಂತ್ಯದ ವೇಳೆಗೆ ಸಾಕಷ್ಟು ದೇಶಗಳಲ್ಲಿ 45 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ದಾಖಲಾಗಿತ್ತು, ಇದೀಗ ಮತ್ತಷ್ಟು ಏರಿಕೆ ಕಂಡಿದೆ ಎಂದು ಹೇಳಲಾಗುತ್ತಿದೆ.

ಈಗ, ಫ್ರಾನ್ಸ್‌ನಲ್ಲಿ ಕಾಡ್ಗಿಚ್ಚುಗಳು ದಕ್ಷಿಣದಿಂದ ದೇಶದ ನೈಋತ್ಯ ಭಾಗಗಳಿಗೆ ಉಲ್ಬಣಗೊಳ್ಳುತ್ತಿವೆ, ಸ್ಪೇನ್, ಇಟಲಿ ಮತ್ತು ಯುಕೆ ಸಹ ಬಳಲುತ್ತಿವೆ. ಇಟಲಿಯ ಕೆಲವು ಫಾರ್ಮ್‌ಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಶೇ.80ರಷ್ಟು ಫಸಲು ನಷ್ಟವಾಗಿದೆ. ಮಣ್ಣು ಮಳೆಯನ್ನು ಹೀರಿಕೊಳ್ಳಲು ವಿಫಲವಾಗಿದೆ ಮತ್ತು ಇದು ಪ್ರವಾಹ ಮತ್ತು ಭೂಕುಸಿತಕ್ಕೂ ಕಾರಣವಾಯಿತು.

ಯುರೋಪ್​ನಲ್ಲಿ ಬೇಸಿಗೆಯು ಜುಲೈನ ಮಧ್ಯದ ನಂತರ ಆರಂಭವಾಗುತ್ತದೆ. ಆಗಸ್ಟ್ ಸೆಪ್ಟೆಂಬರ್​ನಲ್ಲಿ ಕಡುಬೇಸಿಗೆ ಇರುತ್ತದೆ. ಆದರೆ, ಜುಲೈ ಮೂರನೇ ವಾರದ ವೇಳೆಗೆ ಗರಿಷ್ಠ ಉಷ್ಣಾಂಶವು ದೀರ್ಘಾವಧಿ ಸರಾಸರಿ ಮೀರಿದೆ.

ಒಂದು ಅಧ್ಯಯನದ ಪ್ರಕಾರ, ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಜನರ ನಿದ್ರೆಯ ಮಾದರಿಯ ಮೇಲೆ ಪರಿಣಾಮ ಬೀರಬಹುದು. ಇದು ನಿದ್ರಿಸುವುದು ಮತ್ತು ಸಾಕಷ್ಟು ವಿಶ್ರಾಂತಿ ಪಡೆಯಲು ಸಾಧ್ಯವಾಗದಿರಬಹುದು.

ಇದರ ಪರಿಣಾಮ ಮನಸ್ಥಿತಿಯ ಮೇಲೆ ಬೀರಬಹುದು, ಕಿರಿಕಿರಿ ಮತ್ತು ತೂಕ ಹೆಚ್ಚಾಗುವುದು, ಇನ್ಸುಲಿನ್ ಪ್ರತಿರೋಧ ಮತ್ತು ಒತ್ತಡ-ಆಹಾರ ಪದ್ಧತಿಯಿಂದಾಗಿ ಮಧುಮೇಹವನ್ನು ಉಂಟುಮಾಡಬಹುದು. ವಿಪರೀತ ಹವಾಮಾನ ಪರಿಸ್ಥಿತಿಗಳು ಸಾಂಕ್ರಾಮಿಕ ರೋಗಗಳು ಮತ್ತು ನೀರಿನಿಂದ ಹರಡುವ ರೋಗಗಳಿಗೆ ಕಾರಣವಾಗಬಹುದು ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. -ಮಕ್ಕಳು

-ಗರ್ಭಿಣಿಯರು

-ಜನರು ನಿರ್ಜಲೀಕರಣಕ್ಕೆ ಹೆಚ್ಚು ಒಳಗಾಗುತ್ತಾರೆ

-ಹೃದಯ ರೋಗಿಗಳು

-ಶ್ವಾಸಕೋಶದ ಕಾಯಿಲೆ ಇರುವ ರೋಗಿಗಳು

ಏರುತ್ತಿರುವ ತಾಪಮಾನದ ನಡುವೆ ಸುರಕ್ಷಿತವಾಗಿರುವುದು ಹೇಗೆ? ತಾಪಮಾನವು ಸಾಮಾನ್ಯ ಅಥವಾ ಸಹಿಸಬಹುದಾದ ಮಟ್ಟಕ್ಕಿಂತ ಹೆಚ್ಚುತ್ತಿರುವಾಗ, ರೋಗದ ಅಪಾಯದಿಂದ ರಕ್ಷಿಸಲು ಕೆಲವು ಕ್ರಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.

-ಸಾಕಷ್ಟು ನೀರು ಕುಡಿಯುವುದು

-ಸಡಿಲವಾದ ಬಟ್ಟೆಯನ್ನು ಧರಿಸುವುದು

-ಗರಿಷ್ಠ ಶಾಖದ ಸಮಯದಲ್ಲಿ ಹೊರಗೆ ಹೋಗಬಾರದು

-ಯಾವಾಗಲೂ ಸನ್‌ಸ್ಕ್ರೀನ್ ಹಚ್ಚಿ

-ಹೊರಗೆ ತುಂಬಾ ಬಿಸಿಯಾಗಿದ್ದರೆ ಕೊಡೆ ಒಯ್ಯುವುದು

ಆರೋಗ್ಯದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ