ಬೊಜ್ಜಿನ ಸಮಸ್ಯೆ ತಡೆಯಲು ಉತ್ತಮ ಅಡುಗೆ ಎಣ್ಣೆಯನ್ನು ಆಯ್ಕೆ ಮಾಡುವುದು ಹೇಗೆ?
ಅಡುಗೆಗೆ ಬಳಸುವ ಎಣ್ಣೆಯನ್ನು ಕಡಿಮೆ ಮಾಡಬೇಕು ಇದರಿಂದ ಬೊಜ್ಜಿನ ಸಮಸ್ಯೆಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸಬಹುದು. ಅಡುಗೆ ಎಣ್ಣೆಯನ್ನು ಖರೀದಿಸುವಾಗಲೇ ಶೇಕಡಾ 10 ರಷ್ಟು ಕಡಿಮೆ ಎಣ್ಣೆಯನ್ನು ಮನೆಗೆ ತನ್ನಿ. ಸ್ಥೂಲಕಾಯತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಒಂದು ಪ್ರಮುಖ ಹೆಜ್ಜೆ ಜೊತೆಗೆ ಪ್ರಾಯೋಗಿಕ ಕ್ರಮವಾಗಿದೆ. ನಮ್ಮ ಆಹಾರ ಪದ್ಧತಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ, ನಾವು ನಮ್ಮ ಭವಿಷ್ಯವನ್ನು ಸದೃಢ ಮತ್ತು ರೋಗ ಮುಕ್ತವಾಗಿಸಬಹುದು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವು ಕೈ ಜೋಡಿಸಬೇಕಾಗಿದೆ. ಹಾಗಾದರೆ ಆರೋಗ್ಯಕರ ಅಡುಗೆ ಎಣ್ಣೆಯನ್ನು ಆಯ್ಕೆ ಮಾಡುವುದು ಹೇಗೆ? ಯಾವ ರೀತಿ ಎಣ್ಣೆ ಬೊಜ್ಜಿನ ಸಮಸ್ಯೆಯಿಂದ ನಮ್ಮನ್ನು ದೂರವಿಡುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಬೊಜ್ಜಿನ (Obesity) ಸಮಸ್ಯೆ ಹೆಚ್ಚಳಗೊಂಡಿದ್ದು ಬರುಬರುತ್ತಾ ಈ ಪ್ರಕರಣಗಳ ಪ್ರಮಾಣ ದ್ವಿಗುಣಗೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಈ ಬಗ್ಗೆ ವಿಶೇಷ ಕಾಳಜಿ ವಹಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಬೊಜ್ಜಿನ ವಿರುದ್ಧ ಸಮರ ಸಾರಿದ್ದಾರೆ. ದೇಶದಲ್ಲಿ ಏರುತ್ತಿರುವ ಸ್ಥೂಲಕಾಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ಹಾಕುತ್ತಿದ್ದಾರೆ. ಅವರು ಮನ್ಕಿಬಾತ್ನಲ್ಲಿ ಹೇಳಿದಂತೆ ಬೊಜ್ಜಿನ ವಿರುದ್ಧದ ಹೋರಾಟವನ್ನು ಬಲಪಡಿಸಲು ಮತ್ತು ಆಹಾರದಲ್ಲಿ ತೈಲ ಬಳಕೆಯನ್ನು ಕಡಿಮೆ ಮಾಡುವ ಕುರಿತು ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಅದಲ್ಲದೆ ಅಡುಗೆ ಎಣ್ಣೆ ಬಳಕೆಯನ್ನು ಶೇಕಡಾ 10 ರಷ್ಟು ಕಡಿತಗೊಳಿಸುವಂತೆ ಜನರಿಗೆ ಕರೆ ನೀಡಿದ್ದರು. ಇದು ನಮಗೆ ತಿಳಿದಿರುವ ವಿಚಾರ ಆದರೆ ಈ ಬಗ್ಗೆ ನಾವು ಸರಿಯಾಗಿ ತಿಳಿದುಕೊಂಡು ನಮ್ಮ ಆಹಾರದಲ್ಲಿ ಅಡುಗೆ ಎಣ್ಣೆಯ ಆಯ್ಕೆ ಮತ್ತು ಅವುಗಳ ಬಳಸುವ ಪ್ರಮಾಣದಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ.
ಏಕೆಂದರೆ, ನಮ್ಮಲ್ಲಿ ಪ್ರತಿ ಎಂಟು ಜನರಲ್ಲಿ ಒಬ್ಬರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ವರ್ಷಗಳಲ್ಲಿ ಸ್ಥೂಲಕಾಯತೆಯ ಪ್ರಕರಣಗಳು ದ್ವಿಗುಣಗೊಂಡಿವೆ. ಇನ್ನೂ ಆತಂಕಕಾರಿ ಸಂಗತಿಯೆಂದರೆ ಈ ಸಮಸ್ಯೆ ಮಕ್ಕಳಲ್ಲಿಯೂ ನಾಲ್ಕು ಪಟ್ಟು ಹೆಚ್ಚಾಗಿದೆ. ಅಧಿಕ ತೂಕ ಅಥವಾ ಬೊಜ್ಜು ಅನೇಕ ರೀತಿಯ ಸಮಸ್ಯೆಗಳು ಮತ್ತು ರೋಗಗಳಿಗೆ ಕಾರಣವಾಗುತ್ತದೆ ಹಾಗಾಗಿ ಅಡುಗೆಗೆ ಬಳಸುವ ಎಣ್ಣೆಯನ್ನು ಕಡಿಮೆ ಮಾಡಬೇಕು ಇದರಿಂದ ಬೊಜ್ಜಿನ ಸಮಸ್ಯೆಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸಬಹುದು. ಅಡುಗೆ ಎಣ್ಣೆಯನ್ನು ಖರೀದಿಸುವಾಗಲೇ ಶೇಕಡಾ 10 ರಷ್ಟು ಕಡಿಮೆ ಎಣ್ಣೆಯನ್ನು ಮನೆಗೆ ತನ್ನಿ. ಸ್ಥೂಲಕಾಯತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಒಂದು ಪ್ರಮುಖ ಹೆಜ್ಜೆ ಜೊತೆಗೆ ಪ್ರಾಯೋಗಿಕ ಕ್ರಮವಾಗಿದೆ. ನಮ್ಮ ಆಹಾರ ಪದ್ಧತಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ, ನಾವು ನಮ್ಮ ಭವಿಷ್ಯವನ್ನು ಸದೃಢ ಮತ್ತು ರೋಗ ಮುಕ್ತವಾಗಿಸಬಹುದು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವು ಕೈ ಜೋಡಿಸಬೇಕಾಗಿದೆ. ಹಾಗಾದರೆ ಆರೋಗ್ಯಕರ ಅಡುಗೆ ಎಣ್ಣೆಯನ್ನು ಆಯ್ಕೆ ಮಾಡುವುದು ಹೇಗೆ? ಯಾವ ರೀತಿ ಎಣ್ಣೆ ಬೊಜ್ಜಿನ ಸಮಸ್ಯೆಯಿಂದ ನಮ್ಮನ್ನು ದೂರವಿಡುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಪುರುಷ ಮತ್ತು ಮಹಿಳೆಯರಲ್ಲಿ ಹೆಚ್ಚುತ್ತಿದೆ ಬೊಜ್ಜಿನ ಸಮಸ್ಯೆ
ಪ್ರಧಾನಿ ಮೋದಿಯವರ ಈ ಕಾಳಜಿಯನ್ನು ಹೃದ್ರೋಗ ತಜ್ಞರು, ಆಹಾರ ತಜ್ಞರು ಮತ್ತು ಇತರ ಆರೋಗ್ಯ ತಜ್ಞರು ಶ್ಲಾಘಿಸಿದ್ದಾರೆ. ಎಣ್ಣೆಯ ಅತಿಯಾದ ಸೇವನೆ, ವಿಶೇಷವಾಗಿ ಅನಾರೋಗ್ಯಕರ ಎಣ್ಣೆಗಳು, ಅಧಿಕ ತೂಕ, ಬೊಜ್ಜು, ಟೈಪ್ 2 ಮಧುಮೇಹ, ಅಧಿಕ ರಕ್ತದೊತ್ತಡ, ಅಸಹಜ ಲಿಪಿಡ್ ಮಟ್ಟಗಳು, ಹೃದಯಾಘಾತ, ಪಾರ್ಶ್ವವಾಯು, ಕೆಲವು ಕ್ಯಾನ್ಸರ್ಗಳು ಮತ್ತು ಅಕಾಲಿಕ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದು ಸತ್ಯವಾಗಿದೆ. ಅದರಲ್ಲಿಯೂ ಈ ಸಮಸ್ಯೆ ನಮ್ಮ ದೇಶದಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ 2024 ರಲ್ಲಿ ಪ್ರಕಟವಾದ ಲ್ಯಾನ್ಸೆಟ್ ಅಧ್ಯಯನವು ಭಾರತದಲ್ಲಿ ಮಹಿಳೆಯರಲ್ಲಿ ಸ್ಥೂಲಕಾಯತೆಯ ಹರಡುವಿಕೆಯು ಶೇಕಡಾ 1.2 ರಿಂದ 9.8 ಕ್ಕೆ ಮತ್ತು ಪುರುಷರಲ್ಲಿ ಶೇಕಡಾ 0.5 ರಿಂದ 5.4 ಕ್ಕೆ ಏರಿದೆ ಎಂದು ಕಂಡು ಹಿಡಿದಿದೆ. ಹಾಗಾಗಿ 2023- 24ರ ಸಮೀಕ್ಷೆ ಪ್ರಕಾರ ಭಾರತದ ಯುವ ಜನಸಂಖ್ಯೆಯ ಆರೋಗ್ಯದ ಗುಣಮಟ್ಟವನ್ನು ಸುಧಾರಿಸುವುದು ನಿರ್ಣಾಯಕವಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5 ರ ಪ್ರಕಾರ, ಅಖಿಲ ಭಾರತ ಮಟ್ಟದಲ್ಲಿ, ಗ್ರಾಮೀಣ ಭಾರತಕ್ಕಿಂತ ನಗರ ಭಾರತದಲ್ಲಿ ಸ್ಥೂಲಕಾಯತೆಯ ಘಟನೆಗಳು ಗಮನಾರ್ಹವಾಗಿ ಹೆಚ್ಚಾಗಿರುವುದನ್ನು ದೃಢಪಡಿಸಿದೆ.
ಉತ್ತಮ ತೈಲವನ್ನು ಆಯ್ಕೆ ಮಾಡುವುದು ಹೇಗೆ?
ಐಸಿಎಂಆರ್ ಮಾರ್ಗಸೂಚಿಗಳ ಪ್ರಕಾರ, ಆರೋಗ್ಯವಂತ ವಯಸ್ಕರು ದಿನಕ್ಕೆ 15- 20 ಮಿಲಿಗಿಂತ ಹೆಚ್ಚು ಎಣ್ಣೆಯನ್ನು ಸೇವಿಸಬಾರದು. ಮಾರುಕಟ್ಟೆಯಲ್ಲಿನ ವಿವಿಧ ಎಣ್ಣೆಗಳಿಂದ ಆಯ್ಕೆ ಮಾಡುವಾಗ, ಸ್ಯಾಚುರೇಟೆಡ್ ಕೊಬ್ಬುಗಳಿಂದ ಸಮೃದ್ಧವಾಗಿರುವ ಎಣ್ಣೆಗಳನ್ನು ಖರೀದಿಸಬಾರದು ಏಕೆಂದರೆ ಅವುಗಳನ್ನು ಅತ್ಯಂತ ಅನಾರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರತಿ ಚಮಚಕ್ಕೆ 4 ಗ್ರಾಂಗಿಂತ ಕಡಿಮೆ ಸ್ಯಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುವ ಎಣ್ಣೆಗಳನ್ನು ಆಯ್ಕೆ ಮಾಡಲು ಶಿಫಾರಸು ಮಾಡುತ್ತದೆ. ತಾಳೆ ಎಣ್ಣೆ ಮತ್ತು ಹೈಡ್ರೋಜನೀಕರಿಸಿದ ಸಸ್ಯಜನ್ಯ ಎಣ್ಣೆಗಳ ಆಯ್ಕೆ ಒಳ್ಳೆಯದು. ಆದರೆ ಸ್ಯಾಚುರೇಟೆಡ್ ಕೊಬ್ಬುಗಳು ಹೆಚ್ಚಾಗಿದ್ದಲ್ಲಿ ಎಲ್ಡಿಎಲ್ ಅಥವಾ ‘ಕೆಟ್ಟ ಕೊಲೆಸ್ಟ್ರಾಲ್’ ಅನ್ನು ಹೆಚ್ಚಿಸುತ್ತದೆ ಮತ್ತು ಅಥೆರೋಜೆನಿಕ್ ಆಗಿದೆ ಇದು ಪಾರ್ಶ್ವವಾಯು ಅಥವಾ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಈ ಸಸ್ಯಜನ್ಯ ಎಣ್ಣೆಗಳು ಸುರಕ್ಷಿತವಾಗಿದ್ದರೂ, ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ (ಶಿಫಾರಸು ಮಾಡಿದ ಭತ್ಯೆಗಿಂತ ಹೆಚ್ಚು), ಅವು ದೀರ್ಘಕಾಲದ ಉರಿಯೂತ ಮತ್ತು ಚಯಾಪಚಯ ಅಸ್ವಸ್ಥತೆಗಳಿಗೆ ಕಾರಣವಾಗುತ್ತವೆ.
ಆಲಿವ್ ಎಣ್ಣೆ ಆರೋಗ್ಯಕರ ಅಡುಗೆ ಎಣ್ಣೆ ಎಂಬುದು ಹಲವು ಆರೋಗ್ಯ ತಜ್ಞರ ಅಭಿಪ್ರಾಯ. ಇದಕ್ಕೆ ಕಾರಣವೆನೆಂದರೆ ಆಲಿವ್ ಎಣ್ಣೆಯು ಪಾಲಿಅನ್ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು ಸೇರಿದಂತೆ ಆರೋಗ್ಯಕರ ಕೊಬ್ಬುಗಳಿಂದ ತುಂಬಿದೆ, ಇದು ಕೆಟ್ಟ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಇದು ಪಾಲಿಫಿನಾಲ್ಗಳು, ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿದೆ, ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ತೆಂಗಿನ ಎಣ್ಣೆ, ತುಪ್ಪ ಒಳ್ಳೆಯದು
ಜೊತೆಗೆ ಎಲ್ಲರಿಗೂ ಸುಲಭವಾಗಿ ಲಭ್ಯವಾಗಿರುವ ಟ್ರೈಗ್ಲಿಸರೈಡ್ಗಳನ್ನು ಒಳಗೊಂಡಿರುವ ತೆಂಗಿನ ಎಣ್ಣೆ ಅತ್ಯುತ್ತಮ ಆಯ್ಕೆಯಾಗಿದೆ. ಅಲ್ಲದೆ, ಸಾಸಿವೆ ಎಣ್ಣೆ ಮತ್ತು ಕಡಲೆಕಾಯಿ ಎಣ್ಣೆ ಆರೋಗ್ಯಕರ ಎಣ್ಣೆಯ ಆಯ್ಕೆಗಳಾಗಿವೆ. ಇವುಗಳ ಜೊತೆಗೆ ಆವಕಾಡೊ, ಕನೋಲಾ, ಕಡಲೆಕಾಯಿ, ಕುಸುಬೆ, ಸೋಯಾಬೀನ್, ದ್ರಾಕ್ಷಿಬೀಜ ಮತ್ತು ಸೂರ್ಯಕಾಂತಿ ಎಣ್ಣೆಗಳನ್ನು ಕೂಡ ಸೇರಿಸಿಕೊಳ್ಳಬಹುದು. ಅದೇ ರೀತಿ ತುಪ್ಪವನ್ನು ಮಿತವಾಗಿ ಬಳಕೆ ಮಾಡಬಹುದು. ಆದರೆ ಇವುಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಬೇಕು. ಆಗ ಮಾತ್ರ ತೂಕ ನಿಯಂತ್ರಣ ಮಾಡಬಹುದು ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ: ಹೊಟ್ಟೆ ಎಷ್ಟೇ ದಪ್ಪವಿದ್ದರೂ ಕರಗಿಸಲು ಇಲ್ಲಿದೆ ಸರಳ ಉಪಾಯ
ಎಣ್ಣೆಯನ್ನು ಮತ್ತೆ ಮತ್ತೆ ಬಿಸಿ ಮಾಡಬಾರದು ಏಕೆ?
ಅಪೊಲೊ ಆಸ್ಪತ್ರೆಯ ಡಾ. ಕುಮಾರ್ ಅವರು ಹೇಳುವ ಪ್ರಕಾರ, “ಸಾಮಾನ್ಯವಾಗಿ ಒಮ್ಮೆ ಉಪಯೋಗಿಸಿದ ಎಣ್ಣೆಗಳನ್ನು ಮತ್ತೆ ಬಿಸಿ ಮಾಡಬಾರದು. ಬಳಸಿದ ಎಣ್ಣೆಯನ್ನು ಮತ್ತೆ ಬಿಸಿ ಮಾಡಿ ಅಡುಗೆಗೆ ಪದೇ ಪದೇ ಬಳಸಿದರೆ, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಆರೋಗ್ಯ ಅಪಾಯಗಳು ಹೆಚ್ಚಾಗುತ್ತವೆ. ಬೀದಿ ಬದಿ ವ್ಯಾಪಾರಿಗಳು, ಕೆಲವು ರೆಸ್ಟೋರೆಂಟ್ಗಳು ಮತ್ತು ಕೆಲವು ಮನೆಗಳಲ್ಲಿ ಈ ಅಭ್ಯಾಸ ಸಾಮಾನ್ಯವಾಗಿದೆ ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ” ಎಂದು ಅವರು ಹೇಳಿದ್ದಾರೆ.
ಆಹಾರ ತಜ್ಞ ಸಮಂತ್ ಅವರು ಹೇಳುವ ಪ್ರಕಾರ, “ಎಣ್ಣೆಯನ್ನು ಬಿಸಿ ಮಾಡುವುದರಿಂದ ಅಣುಗಳ ರಾಸಾಯನಿಕ ವಿಭಜನೆಯು ಟ್ರಾನ್ಸ್ ಕೊಬ್ಬುಗಳು, ಫ್ರೀ ರಾಡಿಕಲ್ಗಳು ಮತ್ತು ಅಕ್ರಿಲಾಮೈಡ್ನಂತಹ ಹಾನಿಕಾರಕ ಘಟಕಗಳನ್ನು ಸೃಷ್ಟಿಸುತ್ತದೆ, ಇದು ಫ್ರೀ ರಾಡಿಕಲ್ಗಳಿಂದ ಸೃಷ್ಟಿಯಾದ ಅತಿಯಾದ ಆಕ್ಸಿಡೇಟಿವ್ ಒತ್ತಡದಿಂದಾಗಿ ದೀರ್ಘಕಾಲದ ಉರಿಯೂತ ಮತ್ತು ಕೋಶ ಹಾನಿಯಂತಹ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. “ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಮೂಲಕ ಹೃದಯದ ಅಪಾಯವನ್ನು ಹೆಚ್ಚಿಸುತ್ತದೆ. ಇದು ನರವೈಜ್ಞಾನಿಕ ಕಾಯಿಲೆಗಳು, ಕೆಲವು ಕ್ಯಾನ್ಸರ್ಗಳು ಮತ್ತು ಯಕೃತ್ತಿನ ಹಾನಿಗೆ ಸಂಬಂಧಿಸಿದ ವಿಷಕಾರಿ ಆಲ್ಡಿಹೈಡ್ಗಳನ್ನು ಸಹ ಉತ್ಪಾದಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:06 am, Thu, 27 February 25