AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SSLC Exam: ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಆಹಾರ ಕ್ರಮ ಹೀಗಿರಲಿ: ಡಾ ರವಿಕಿರಣ ಪಟವರ್ಧನ ಶಿರಸಿ

ಎಸ್​ಎಸ್​ಎಲ್​ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಈ ಅವಧಿ ವಿದ್ಯಾರ್ಥಿಗಳಿಗೆ ಅತ್ಯಂತ ಮಹತ್ವದ್ದು. ಈ ಸಮಯದಲ್ಲಿ ಪರೀಕ್ಷೆಗೆ ತಯಾರಿಸುವ ನಡೆಸುವ ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಆದ್ದರಿಂದ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಆಹಾರ ಕ್ರಮ ಹೇಗಿರಬೇಕೆಂದು ಇಲ್ಲಿ ತಿಳಿದುಕೊಳ್ಳಿ.

SSLC Exam: ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಆಹಾರ ಕ್ರಮ ಹೀಗಿರಲಿ: ಡಾ ರವಿಕಿರಣ ಪಟವರ್ಧನ  ಶಿರಸಿ
SSLC ExamImage Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on:Mar 13, 2024 | 10:49 AM

“ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ದಿನಾಂಕ 25-03-2024 ರಿಂದ 06-04-2024 ರ ನಡುವೆ  ನಡೆಯಲಿದೆ .ಈ ಅವಧಿ ಅತ್ಯಂತ ಮಹತ್ವದ್ದು. ಈ ದಿನಗಳಲ್ಲಿ  ಮನೆಯಲ್ಲಿಯೇ ತಯಾರಾದ ಅಥವಾ  ವಸತಿ ಇರುವ ಸ್ಥಳದ ಆಹಾರವನ್ನು ಮಾತ್ರ ಸ್ವೀಕರಿಸಿ.ಎಣ್ಣೆಯಲ್ಲಿ ಕರಿದ, ಫ್ರೀಜ್ ಗಳಲ್ಲಿಯ ಜ್ಯೂಸ್​​​, ಐಸ್ಕ್ರೀಂ, ಅಲ್ಲದೇ ಹೊಸ ಪದ್ಧತಿಯ ಆಹಾರ ಸ್ವೀಕರಿಸುವುದು ಬೇಡ.ಅನ್ನ ,ಬೇಳೆಯ ಸಾರು ಸಾಂಬಾರು ಅಥವಾ ತೋವೆ, ರೊಟ್ಟಿ ಚಪಾತಿಯ ರೂಢಿಯವರು ಅದನ್ನು,ಪಲ್ಯ, ಮಜ್ಜಿಗೆ ಮೊಸರು, ಹಸಿ ತರಕಾರಿ ಊಟದಲ್ಲಿ ಇರಲಿ.ಹಾಲು ಸ್ವೀಕರಿಸುತಿದ್ದರೆ ಅದನ್ನು ಆದಷ್ಟು ಬೆಳಗಿನ ಹೊತ್ತಿನಲ್ಲಿ ಇರಲಿ.ಅತಿ ಹುಳಿ ಖಾರದ ಆಹಾರ ಬೇಡ” ಎಂದು ಆರೋಗ್ಯ ತಜ್ಞರಾದ ಶಿರಸಿಯ ಡಾ ರವಿಕಿರಣ ಪಟವರ್ಧನ ಸಲಹೆ ನೀಡಿದ್ದಾರೆ.

ನಿಮ್ಮ ಆರೋಗ್ಯ ಕಾಪಾಡುವ ನಿಯಮಿತ ಆಹಾರ ಸ್ವೀಕಾರಮಾಡಿ.ಕನಿಷ್ಟ 7 ಗಂಟೆಯಾದರೂ ಉತ್ತಮ ನಿದ್ದೆ ನಿಮ್ಮದಾಗಬೇಕು.ನಿಮ್ಮ ಮನಸ್ಸನ್ನು ಸ್ಥಿಮಿತವಾಗಿ ಇರುವಂತೆ ನೀಗಾವಹಿಸಿ.ಆತಂಕ, ಚಿಂತೆ , ಒತ್ತಡಕ್ಕೆ ಆಸ್ಪದ ಬೇಡ.ಮನೆಯಲ್ಲಿ ಅನಾವಶ್ಯಕ ಚರ್ಚೆ, ರಾಜಕೀಯ ವಿಚಾರಧಾರೆ, ಚುನಾವಣಾ ಚರ್ಚೆ,ಜಾತ್ರಾ ಚರ್ಚೆ ಕುಟುಂಬದ ಸದಸ್ಯರಿಂದಲೂ ಬೇಡ. ಪಾಲಕರು ವರ್ಷವಿಡೀ ಇಷ್ಟು ಶೇಕಡಾ ಅಂಕಗಳ ಧ್ಯಾನ ಮಾಡಿದ್ದು ಸಹಜವಾಗಿ ಇರುತ್ತದೆ, ಆದರೆ ಈ ಹತ್ತುದಿನ ಒತ್ತಡ ಬೇಡ.ಮಕ್ಕಳು ಒತ್ತಡ ರಹಿತವಾಗಿ ಇರುವಂತೆ ಮಾಡುವ ಪ್ರಯತ್ನ ನಿಮ್ಮದಾಗಲಿ.ಇತರ ಏಕಾಗ್ರತೆಗೆ ತೊಂದರೆಯಾಗುವ ವಿಚಾರಗಳು ಬೇಡ.

ಇದನ್ನೂ ಓದಿ: ಬೇಕೆ ಬೇಕು ಗ್ರೇಸ್​ ಮಾರ್ಕ್ಸ್​! ಫಿಸಿಕ್ಸ್ ಪರೀಕ್ಷೆಯಲ್ಲಿ ಪಿಯುಸಿ ಬೋರ್ಡ್ ಎಡವಿತಾ? ವಿದ್ಯಾರ್ಥಿಗಳು, ವಿಷಯ ತಜ್ಞರು ಹೇಳುವುದೇನು?

ಪ್ರತಿಯೊಂದರಲ್ಲೂ ಸಕಾರಾತ್ಮಕ ವಿಚಾರಗಳು ಇರಲಿ, ಪರೀಕ್ಷೆಗಳು ಹತ್ತಿರ ಬಂದಾಗ ಹೊಸ ಪ್ರಯೋಗ ಬೇಡ.ವಿಶೇಷವಾಗಿ ಜಾಗರಣೆ ಬೇಡ, ಈವರೆಗೆ ಮಾಡಿದ್ದು ಪ್ರಯತ್ನ.ಈ ಕೊನೆ ಕ್ಷಣದ ಪ್ರಯತ್ನಕ್ಕೆ ಕೈಹಾಕುವುದು ಬೇಡ.ಯಶಸ್ಸು, ಆರೋಗ್ಯ, ಏಕಾಗ್ರತೆ, ಸಮಾಧಾನ, ಸ್ವಲ್ಪ ವ್ಯಾಯಾಮ,ಧ್ಯಾನ,ಯೋಗ, ಸಣ್ಣ ವಾಯುವಿಹಾರ ಅವಶ್ಯಕ.

ಇನ್ನೂ ಕೆಲವು ವಿದ್ಯಾರ್ಥಿಗಳ ಅತೀ ಆತ್ಮವಿಶ್ವಾಸ ಬೇಡ.ವರ್ಗದ ಇತರ ವಿಧ್ಯಾರ್ಥಿಗಳ ಅಭ್ಯಾಸದ ಶೈಲಿಯ ಹೋಲಿಕೆ ಬೇಡ. ಹಿಂದಿನ ವರ್ಷದ ವಿದ್ಯಾರ್ಥಿಗಳ ಪರಿಣಾಮಗಳ ಚರ್ಚೆ ಬೇಡವೇ ಬೇಡ.ಅನವಶ್ಯಕ ಪ್ರಶ್ನೆ ಪತ್ರಿಕೆ, ಪರಿಣಾಮಗಳ ತಾರ್ಕಿಕ ತರ್ಕ ಬೇಡ. ಉತ್ತಮ ಯಶಸ್ಸಿನೂಂದಿಗೆ ಭಾರತದ ಉತ್ತಮ, ರಾಷ್ಟ್ರ ಭಕ್ತ ಪ್ರಜೆಗಳಾಗಿ ಎಂಬ ಶುಭ ಹಾರೈಕೆಗಳು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:46 am, Wed, 13 March 24

ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
ಯುದ್ಧ ಮಾಡದೆಯೇ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತದ 9 ನಿರ್ಧಾರಗಳಿವು..
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!