AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Acupuncture Therapy: ಆಕ್ಯುಪಂಕ್ಚರ್​ ಥೆರಪಿಯಿಂದ ಮಧುಮೇಹ ನಿಯಂತ್ರಣ ಸಾಧ್ಯ: ಅಧ್ಯಯನ

ಆಕ್ಯುಪಂಕ್ಚರ್​( Acupuncture) ಥೆರಪಿಯಿಂದ ಟೈಪ್-2 ಮಧುಮೇಹವನ್ನು ಗುಣಪಡಿಸಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

Acupuncture Therapy: ಆಕ್ಯುಪಂಕ್ಚರ್​ ಥೆರಪಿಯಿಂದ ಮಧುಮೇಹ ನಿಯಂತ್ರಣ ಸಾಧ್ಯ: ಅಧ್ಯಯನ
Acupuncture
TV9 Web
| Updated By: ನಯನಾ ರಾಜೀವ್|

Updated on: Aug 03, 2022 | 10:43 AM

Share

ಆಕ್ಯುಪಂಕ್ಚರ್​( Acupuncture) ಥೆರಪಿಯಿಂದ ಟೈಪ್-2 ಮಧುಮೇಹವನ್ನು ಗುಣಪಡಿಸಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಎಡಿತ್ ಕೋವಲ್ ವಿಶ್ವವಿದ್ಯಾಲಯದ ಹೊಸ ಅಧ್ಯಯನ ಪ್ರಕಾರ ಅಕ್ಯುಪಂಕ್ಚರ್ ಚಿಕಿತ್ಸೆಯು ಟೈಪ್ 2 ಮಧುಮೇಹವನ್ನು ತಪ್ಪಿಸುವ ಉಪಯುಕ್ತ ಸಾಧನವಾಗಿದೆ. ಪ್ರಿಡಿಯಾಬಿಟಿಸ್ ಹೊಂದಿರುವ 3600 ಕ್ಕೂ ಹೆಚ್ಚು ಜನರ ಮೇಲೆ ಅಕ್ಯುಪಂಕ್ಚರ್‌ನ ಥೆರಪಿಯನ್ನು ನಡೆಸಲಾಗಿತ್ತು.

ಆಕ್ಯುಪಂಕ್ಚರ್ ಥೆರಪಿ ನಡೆಸಿದ ಎರಡು ಗಂಟೆಗಳ ಬಳಿಕ ರಕ್ತದಲ್ಲಿ ಪ್ಲಾಸ್ಮಾ, ಗ್ಲೂಕೋಸ್, ಹಿಮೋಗ್ಲೋಬಿನ್ ಪ್ರಮಾಣ ಸುಧಾರಿಸುವುದು ಕಂಡುಬಂದಿದೆ. ಜೊತೆಗೆ ಪ್ರಿಡಿಯಾಬಿಟಿಸ್‌ನ ಸಂಭವದಲ್ಲಿ ಹೆಚ್ಚಿನ ಇಳಿಕೆ ಕಂಡುಬಂದಿದೆ.

ಸಂಶೋಧಕ ಮಿನ್ ಜಾಂಗ್ ಅವರು ಮಧುಮೇಹವನ್ನು ನಿವಾರಿಸಲು ಆಕ್ಯುಪಂಕ್ಚರ್ ಚಿಕಿತ್ಸೆ ಉತ್ತಮ ಎಂದು ಹೇಳಿದ್ದಾರೆ. ಇದು ಶೇ.11ರಷ್ಟು ಮಧುಮೇಹಿಗಳಲ್ಲಿ ಉತ್ತಮ ಪರಿಣಾಮ ಬೀರಿದೆ. 2045 ರ ವೇಳೆಗೆ ಸುಮಾರು 1.3 ಬಿಲಿಯನ್ ಜನರು ಮಧುಮೇಹ ಅಥವಾ ಪ್ರಿಡಿಯಾಬಿಟಿಸ್ ಹೊಂದಿರುತ್ತಾರೆ ಎಂದು ಇಂಟರ್ನ್ಯಾಷನಲ್ ಡಯಾಬಿಟಿಸ್ ಫೆಡರೇಶನ್ ಅಂದಾಜಿಸಿದೆ.

ಪ್ರಿಡಿಯಾಬಿಟಿಸ್ ಹೊಂದಿರುವ 93 ಪ್ರತಿಶತ ಜನರು 20 ವರ್ಷಗಳಲ್ಲಿ ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುತ್ತಾರೆ” ಎಂದು Ms ಜಾಂಗ್ ಹೇಳಿದರು.

ಆದರೆ ಜೀವನ ಶೈಲಿಯ ಬದಲಾವಣೆಯಿಂದಾಗಿಯೂ ಮಧುಮೇಹವನ್ನು ನಿಯಂತ್ರಿಸಬಹುದು. ಮಧುಮೇಹವು ಸಾಮಾನ್ಯವಾಗಿ ಜೀವನಶೈಲಿಯ ಅಂಶಗಳೊಂದಿಗೆ ಸಂಬಂಧ ಹೊಂದಿದ್ದರೂ, ಜೀವನದ ಇತರ ಅಂಶಗಳು ಸಹ ಪ್ರಭಾವ ಬೀರಬಹುದು ಅದರಲ್ಲಿ ಆಕ್ಯುಪಂಕ್ಚರ್ ಕೂಡ ಒಂದು.

“ನೀವು ನಿದ್ರೆಯ ಸಮಸ್ಯೆಗಳು, ಅಧಿಕ ರಕ್ತದೊತ್ತಡ, ಹೆಚ್ಚಿನ ಒತ್ತಡವನ್ನು ಅನುಭವಿಸುತ್ತಿದ್ದರೆ ಆಕ್ಯುಪಂಕ್ಚರ್ ಉತ್ತಮ ವಿಧಾನ ಎನಿಸಿಕೊಳ್ಳುತ್ತದೆ. ಮಧುಮೇಹಿಗಳು ತಮ್ಮ ಚರ್ಮದ ಸಮಸ್ಯೆಗಳನ್ನು ಹೊಂದಿರಬಹುದು, ಆದ್ದರಿಂದ ಸೂಜಿಗಳನ್ನು ಬಳಸುವುದು ಯಾವಾಗಲೂ ಸೂಕ್ತವಲ್ಲ.

ನಾವು ಆಕ್ಯುಪಂಕ್ಚರ್ ಮತ್ತು ಮಧುಮೇಹದ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಬೇಕಾಗಿದೆ ಏಕೆಂದರೆ ಪ್ರಿಡಿಯಾಬಿಟಿಸ್ ಬೆಳವಣಿಗೆಯನ್ನು ತಡೆಯಲು ನಾವು ಹೆಚ್ಚಿನ ಮಾರ್ಗಗಳನ್ನು ಕಂಡುಹಿಡಿಯಬೇಕಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್