AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cataract Eye: ಕಣ್ಣಿನ ಪೊರೆ ಹೋಗಲಾಡಿಸಲು ಶಸ್ತ್ರ ಚಿಕಿತ್ಸೆ ಬೇಡ ಔಷಧಿ ಸಾಕು

Cataract Eye:ಸಾಮಾನ್ಯವಾಗಿ 50 ವರ್ಷ ಮೇಲ್ಪಟ್ಟವರ ಕಣ್ಣಿನಲ್ಲಿ ಪೊರೆ( Cataract Eye) ಕಾಣಿಸಿಕೊಳ್ಳುತ್ತದೆ, ಶಸ್ತ್ರ ಚಿಕಿತ್ಸೆ ಮಾಡಿಸದಿದ್ದರೆ ಕ್ರಮೇಣವಾಗಿ ಕಣ್ಣು ಮಂಜಾಗುತ್ತಾ ದೃಷ್ಟಿ ಕಡಿಮೆಯಾಗುತ್ತದೆ. ಮೊದ ಮೊದಲು ದೂರದೃಷ್ಟಿ ಕಡಿಮೆಯಾಗುತ್ತಾ ಹತ್ತಿರದಿಂದಲೂ ವಸ್ತುಗಳನ್ನು ಗುರುತಿಸಲಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

Cataract Eye: ಕಣ್ಣಿನ ಪೊರೆ ಹೋಗಲಾಡಿಸಲು ಶಸ್ತ್ರ ಚಿಕಿತ್ಸೆ ಬೇಡ ಔಷಧಿ ಸಾಕು
Cataract
TV9 Web
| Edited By: |

Updated on: May 18, 2022 | 11:06 AM

Share

ಸಾಮಾನ್ಯವಾಗಿ 50 ವರ್ಷ ಮೇಲ್ಪಟ್ಟವರ ಕಣ್ಣಿನಲ್ಲಿ ಪೊರೆ( Cataract Eye) ಕಾಣಿಸಿಕೊಳ್ಳುತ್ತದೆ, ಶಸ್ತ್ರ ಚಿಕಿತ್ಸೆ ಮಾಡಿಸದಿದ್ದರೆ ಕ್ರಮೇಣವಾಗಿ ಕಣ್ಣು ಮಂಜಾಗುತ್ತಾ ದೃಷ್ಟಿ ಕಡಿಮೆಯಾಗುತ್ತದೆ. ಮೊದ ಮೊದಲು ದೂರದೃಷ್ಟಿ ಕಡಿಮೆಯಾಗುತ್ತಾ ಹತ್ತಿರದಿಂದಲೂ ವಸ್ತುಗಳನ್ನು ಗುರುತಿಸಲಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಕಣ್ಣಿನ ಪೊರೆ ಆರಂಭವಾಗುವ ಸೂಚನೆ ದೊರೆತ ತಕ್ಷಣವೇ ಚಿಕಿತ್ಸೆ ಮಾಡಿಸುವುದು ಒಳಿತು. ಇದೀಗ ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲ, ಔಷಧಿಯಿಂದಲೇ ಕಣ್ಣಿನ ಪೊರೆಯನ್ನು ತೆಗೆಯಬಹುದಾಗಿದೆ.

ಹೌದು ಅಮೆರಿಕದ ಆಂಗ್ಲಿಯಾ ರಸ್ಕಿನ್ ಯೂನಿವರ್ಸಿಯು ಈ ಸಂಶೋಧನೆ ನಡೆಸಿದೆ. ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವು ಕಣ್ಣಿನ ಪೊರೆ ಹೋಗಲಾಡಿಸಲು ಆಕ್ಸಿಸ್ಟರಾಲ್ ಕಾಂಪೌಂಡ್​ ಮೇಲೆ ಸುಧಾರಿತ ಆಪ್ಟಿಕಲ್ ಪರೀಕ್ಷೆಗಳನ್ನು ನಡೆಸುತ್ತಿದೆ.

ಸಂಶೋಧಕರು ಇಲಿಗಳ ಮೇಲೆ ಪ್ರಯೋಗ ನಡೆಸಿದ್ದಾರೆ, ಶೇ.46 ರಷ್ಟು ಮಂದಿಯಲ್ಲಿ ಕಣ್ಣಿನ ಪೊರೆ ಕಡಿಮೆಯಾಗಿ ಮೊದಲಿನಂತೆಯೇ ಎಲ್ಲವೂ ಕಾಣಿಸುವಂತಾಗಿದೆ. ಇಂಗ್ಲೆಂಡ್​ನಲ್ಲಿ ಸುಮಾರು 330,000 ಲಕ್ಷ ಮಂದಿ ಪ್ರತಿ ವರ್ಷವೂ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾರೆ.

ಕಣ್ಣಿನಲ್ಲಿರುವ ಪೊರೆಯನ್ನು ತೆಗೆದು ಹಾಕಿ ದೃಷ್ಟಿಯನ್ನು ಮರಳಿಸುವ ವಿಧಾನವೇ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ. ಕಣ್ಣಿನ ಪೊರೆಯನ್ನು ಸುಲಭವಾಗಿ ತೆಗೆದುಹಾಕಲು ಹೊಸ ಚಿಕಿತ್ಸೆಯನ್ನು ಕಂಡು ಹಿಡಿಯಲಾಗಿದೆ. ಪ್ರಯೋಗಾಲಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆದುಕೊಂಡಿದೆ.

ಪ್ರಯೋಗಾಲಯದ ಪ್ರಯೋಗಗಳಲ್ಲಿ, ಆಕ್ಸಿಸ್ಟರಾಲ್ ಕಾಂಪೌಂಡ್​ನ VP1-001 ನೊಂದಿಗೆ ಚಿಕಿತ್ಸೆಯ ಫಲಿತಾಂಶ ಉತ್ತಮವಾಗಿದೆ.

ಕಣ್ಣಿನ ಪೊರೆಗೆ ಕಾರಣಗಳು ಮಧುಮೇಹ ಕಣ್ಣಿನ ಆಘಾತ ಕಣ್ಣಿನ ಶಸ್ತ್ರಚಿಕಿತ್ಸೆ ಕಣ್ಣಿನ ಪೊರೆಗಳ ಕುಟುಂಬದ ಇತಿಹಾಸ ಧೂಮಪಾನ ಕೆಲವು ಔಷಧಿ UV ಒಡ್ಡುವಿಕೆ

ಯಾವಾಗ ವೈದ್ಯರ ಬಳಿ ತೆರಳಬೇಕು ನಿಮ್ಮ ದೃಷ್ಟಿ ಗುಣಮಟ್ಟವು ನಿಮ್ಮ ಜೀವನಶೈಲಿ ಮತ್ತು ದೈನಂದಿನ ಚಟುವಟಿಕೆಗಳ ಮೇಲೆ ಪ್ರಭಾವ ಬೀರಿದಾಗ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಅಗತ್ಯವಿದೆ.

ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯ ಮೂಲಕ ನಿಮ್ಮ ದೃಷ್ಟಿ ಸುಧಾರಿಸಬಹುದೆಂದು ನೀವು ಭಾವಿಸಿದರೆ, ಕಣ್ಣಿನ ಪರೀಕ್ಷೆಗಾಗಿ ಅಪಾಯಿಂಟ್ಮೆಂಟ್ ಅನ್ನು ನಿಗದಿಪಡಿಸಿ. ನಿಮ್ಮ ಕಣ್ಣಿನ ಪರೀಕ್ಷೆಯ ಸಮಯದಲ್ಲಿ, ನಿಮ್ಮ ಕಣ್ಣಿನ ವೈದ್ಯರು ನಿಮ್ಮ ಕಣ್ಣಿನ ಪೊರೆಗಳ ತೀವ್ರತೆಯನ್ನು ನಿರ್ಧರಿಸಲು ಅನೇಕ ರೋಗನಿರ್ಣಯದ ಪರೀಕ್ಷೆಗಳನ್ನು ಮಾಡುತ್ತಾರೆ.

ಆರಂಭದಲ್ಲಿ, ಕಣ್ಣಿನ ಪೊರೆ ದೃಷ್ಟಿಯ ಗಮನಾರ್ಹ ಕ್ಷೀಣತೆಗೆ ಕಾರಣವಾಗುತ್ತದೆ. ಇದರ ಜೊತೆಯಲ್ಲಿ ದೃಶ್ಯ ಕ್ಷೇತ್ರದ ಮಧ್ಯಭಾಗದಲ್ಲಿರುವ ಮಂಜು, ಇದು ಕಾಲಾನಂತರದಲ್ಲಿ ಸಾಂದ್ರವಾಗುತ್ತದೆ ಮತ್ತು ಗ್ರಹಿಕೆ ಮಸುಕಾಗುತ್ತದೆ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್