Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon Foods:ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳಿವು

ಮಳೆಗಾಲದಲ್ಲಿ ಹಲವು ರೀತಿಯ ಸೋಂಕುಗಳು ಜನರನ್ನು ಕಾಡುತ್ತದೆ, ಕಲುಷಿತವಾದ, ನಿಂತ ನೀರಿನಿಂದಲೇ ಹಲವು ರೋಗಗಳು ನಿಮ್ಮನ್ನು ಆವರಿಸುತ್ತದೆ. ಮಳೆಗಾಲದಲ್ಲಿ ಶುಂಠಿ ಚಹಾದೊಂದಿಗೆ ಬಿಸಿ ಬಿಸಿ ಪಕೋಡಾ, ಬಜ್ಜಿ ಸೇರಿದಂತೆ ಎಣ್ಣೆ ಪದಾರ್ಥಗಳನ್ನೇ ಹೆಚ್ಚು ಸೇವನೆ ಮಾಡುತ್ತೇವೆ.

Monsoon Foods:ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳಿವು
Lemongrass Tea
Follow us
TV9 Web
| Updated By: ನಯನಾ ರಾಜೀವ್

Updated on: Jul 02, 2022 | 3:14 PM

ಮಳೆಗಾಲದಲ್ಲಿ ಹಲವು ರೀತಿಯ ಸೋಂಕುಗಳು ಜನರನ್ನು ಕಾಡುತ್ತದೆ, ಕಲುಷಿತವಾದ, ನಿಂತ ನೀರಿನಿಂದಲೇ ಹಲವು ರೋಗಗಳು ನಿಮ್ಮನ್ನು ಆವರಿಸುತ್ತದೆ. ಮಳೆಗಾಲದಲ್ಲಿ ಶುಂಠಿ ಚಹಾದೊಂದಿಗೆ ಬಿಸಿ ಬಿಸಿ ಪಕೋಡಾ, ಬಜ್ಜಿ ಸೇರಿದಂತೆ ಎಣ್ಣೆ ಪದಾರ್ಥಗಳನ್ನೇ ಹೆಚ್ಚು ಸೇವನೆ ಮಾಡುತ್ತೇವೆ. ಇದರಿಂದ ಅಸಿಡಿಟಿ, ವಾಕರಿಕೆ, ತೂಕ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗಬಹುದು.

ಹೀಗಾಗಿ ಮಳೆಗಾಲದಲ್ಲಿ ಸಾಧ್ಯವಾದಷ್ಟು ಆರೋಗ್ಯವನ್ನು ಕಾಪಾಡಿಕೊಳ್ಳುವ ಆಹಾರಗಳನ್ನು ಸೇವನೆ ಮಾಡಬೇಕು. ನೀವು ಸಕ್ಕರೆ ಹಾಕಿ ಚಹಾ ಕುಡಿಯುವ ಬದಲು ನಿಂಬೆ ಹುಲ್ಲಿನ ಚಹಾ ಕುಡಿಯಿರಿ. ಚಿಪ್ಸ್ ಹಾಗೂ ಇತರೆ ಕರಿದ ಎಣ್ಣೆ ಪದಾರ್ಥಗಳ ಬದಲು ಪಾಪ್​ಕಾರ್ನ್​ ತಿನ್ನಿ.

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಗಳನ್ನು ವೃದ್ಧಿಸುವ ಆಹಾರಗಳು ಪಾಪ್​ಕಾರ್ನ್​: ಮಳೆಗಾಲದಲ್ಲಿ ಹೆಚ್ಚು ಪಾಪ್​ಕಾರ್ನ್​ ಸೇವನೆ ಮಾಡಿ, ಹಳದಿ ಬಣ್ಣದ ಅಮೆರಿಕನ್ ಕಾರ್ನ್​ ಅಲ್ಲ ಲೋಕನ್ ಕಾರ್ನ್​ ಬಳಕೆ ಮಾಡಿ ಅದಕ್ಕೆ ಕಪ್ಪು ಸಾಲ್ಟ್​ ಬಳಸಿ ತಿನ್ನಿ. ಪಾಪ್​ಕಾರ್ನ್​ ಹೃದಯಾಘಾತ, ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆಗಳಿಂದ ದೂರ ಇಡುತ್ತದೆ.

ನೇರಳೆ ಹಣ್ಣು: ಆಯುರ್ವೇದದಲ್ಲಿ ಹಲವು ರೋಗಗಳನ್ನು ಗುಣಪಡಿಸಲು ನೇರಳೆ ಹಣ್ಣನ್ನು ಬಳಕೆ ಮಾಡಲಾಗುತ್ತದೆ. ಹೃದಯ ಸಂಬಂಧಿಕಾಯಿಲೆ, ಅಸ್ತಮಾ, ಆರ್ಥ್ರೈಟಿಸ್, ಡೀಸೆಂಟ್ರಿ ಸೇರಿದಂತೆ ಹಲವು ಸಮಸ್ಯೆಗಳ ನಿವಾರಣೆಗೆ ಬಳಕೆ ಮಾಡಲಾಗುತ್ತದೆ. ಇದಕ್ಕೆ ಕಿಡ್ನಿಯಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವ ಶಕ್ತಿ ಇರುತ್ತದೆ.

ಉಪ್ಪಿನಲ್ಲಿ ನೆನೆಸಿರುವ ನೆಲ್ಲಿಕಾಯಿ: ಉಪ್ಪಿನಲ್ಲಿ ನೆನೆಸಿರುವ ನೆಲ್ಲಿಕಾಯಿಯಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು. ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಸಿಗುವುದು, ಇದು ನಿಮ್ಮನ್ನು ಯಂಗ್ ಹಾಗೂ ಫ್ರೆಶ್​ ಆಗಿರಿಸುತ್ತದೆ.

ನಿಂಬೆಹುಲ್ಲಿನ ಚಹಾ: ನಿಂಬೆ ಹುಲ್ಲಿನಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ, ಒತ್ತಡವನ್ನು ಕೆಲವೇ ಕ್ಷಣಗಳಲ್ಲಿ ಕಡಿಮೆ ಮಾಡಬಹುದು. ಮುಂಗಾರಿನಲ್ಲಿ ಕಾಣಿಸಿಕೊಳ್ಳುವ ಹಲವು ಸೋಂಕುಗಳಿಂದ ದೂರವಿಡಬಹುದು.

ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ