Tuberculosis: 2021ರ ಕೋವಿಡ್ ಸಮಯದಲ್ಲಿ 1.6 ಮಿಲಿಯನ್ ಮಂದಿ ಕ್ಷಯ ರೋಗದಿಂದ ಮೃತಪಟ್ಟಿದ್ದರು: WHO ವರದಿ

ಎರಡು ವರ್ಷಗಳ ಕಾಲ ಕೋವಿಡ್ 19 ಇಡೀ ವಿಶ್ವವನ್ನೇ ಕಾಡಿತ್ತು. ಆ ಸಂದರ್ಭದಲ್ಲಿ ಕೋವಿಡ್ ಹೊರತುಪಡಿಸಿ ಬೇರೆ ಯಾವ ಕಾಯಿಲೆಯ ಬಗ್ಗೆಯೂ ಯಾರೂ ಮಾತನಾಡುತ್ತಿರಲಿಲ್ಲ.

Tuberculosis: 2021ರ ಕೋವಿಡ್ ಸಮಯದಲ್ಲಿ 1.6 ಮಿಲಿಯನ್ ಮಂದಿ ಕ್ಷಯ ರೋಗದಿಂದ ಮೃತಪಟ್ಟಿದ್ದರು: WHO ವರದಿ
Tuberculosis
Follow us
| Updated By: ನಯನಾ ರಾಜೀವ್

Updated on: Oct 27, 2022 | 10:20 AM

ಎರಡು ವರ್ಷಗಳ ಕಾಲ ಕೋವಿಡ್ 19 ಇಡೀ ವಿಶ್ವವನ್ನೇ ಕಾಡಿತ್ತು. ಆ ಸಂದರ್ಭದಲ್ಲಿ ಕೋವಿಡ್ ಹೊರತುಪಡಿಸಿ ಬೇರೆ ಯಾವ ಕಾಯಿಲೆಯ ಬಗ್ಗೆಯೂ ಯಾರೂ ಮಾತನಾಡುತ್ತಿರಲಿಲ್ಲ. ಆದರೆ ಆ ಸಂದರ್ಭದಲ್ಲಿ 1.6 ಮಿಲಿಯನ್ ಮಂದಿ ಕ್ಷಯರೋಗ(Tuberculosis) ದಿಂದ ಮೃತಪಟ್ಟಿರುವ ವಿಚಾರವನ್ನು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದ್ದು, ಆತಂಕ ಮೂಡಿದೆ.

2021 ರಲ್ಲಿ ಅಂದಾಜು 10.6 ಮಿಲಿಯನ್ ಮಂದಿ ಕ್ಷಯರೋಗದಿಂದ (ಟಿಬಿ) ಅನಾರೋಗ್ಯಕ್ಕೆ ಒಳಗಾದರು, 2020 ರಿಂದ ಶೇ.4.5ರಷ್ಟು ಹೆಚ್ಚಳವಾಗಿದೆ ಮತ್ತು ವಿಶ್ವ ಆರೋಗ್ಯದ ಪ್ರಕಾರ 1.6 ಮಿಲಿಯನ್ ಜನರು ಟಿಬಿಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

2021 ರಲ್ಲಿ 4,50,000 ಹೊಸ ರಿಫಾಂಪಿಸಿನ್-ನಿರೋಧಕ ಟಿಬಿ (RR-TB) ಪ್ರಕರಣಗಳೊಂದಿಗೆ 2020 ಮತ್ತು 2021 ರ ನಡುವೆ ಡ್ರಗ್-ರೆಸಿಸ್ಟೆಂಟ್ ಟಿಬಿ (ಡಿಆರ್-ಟಿಬಿ) ಯ ಹೊರೆಯು ಶೇ.3 ರಷ್ಟು ಹೆಚ್ಚಾಗಿದೆ.

ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕ್ಷಯ ರೋಗ ಹೆಚ್ಚಳವಾಗಿರುವ ಕುರಿತು ವರದಿಯಾಗಿದೆ. 2021ರಲ್ಲಿ ಕೊರೊನಾ ಸೋಂಕಿನಿಂದಾಗಿ ಕ್ಷಯದಂತಹ ರೋಗಗಳಿಗೆ ತುರ್ತು ಚಿಕಿತ್ಸೆ ದೊರೆಯಲಿಲ್ಲ.

ಸಾಂಕ್ರಾಮಿಕವು ನಮಗೆ ಏನನ್ನಾದರೂ ಕಲಿಸಿದ್ದರೆ, ಅದು ಒಗ್ಗಟ್ಟು, ನಿರ್ಣಯ, ನಾವೀನ್ಯತೆ ಮತ್ತು ಉಪಕರಣಗಳ ಸಮಾನ ಬಳಕೆಯಿಂದ ನಾವು ಎಂಥದ್ದೇ ಕಷ್ಟವನ್ನು ನಿವಚಾರಿಸಬಹುದು ಎಂದು ಹೇಳಲಾಗಿದೆ. ಆ ಪಾಠಗಳನ್ನು ಕ್ಷಯರೋಗಕ್ಕೆ ಅನ್ವಯಿಸಬೇಕು. ಒಟ್ಟಾಗಿ ಕೆಲಸ ಮಾಡುವ ಮೂಲಕ ನಾವು ಟಿಬಿಯನ್ನು ಕೊನೆಗೊಳಿಸಬಹುದು ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

ಅಗತ್ಯ ಟಿಬಿ ಸೇವೆಗಳನ್ನು ಒದಗಿಸುವುದರೊಂದಿಗೆ ಜನರ ಜೀವವನ್ನು ಕಾಪಾಡಬೇಕಿದೆ. 2019ರಲ್ಲಿ 7.1 ಮಿಲಿಯನ್​ ಟಿಬಿಯ ಹೊಸ ಪ್ರಕರಣಗಳು ಪತ್ತೆಯಾಗಿತ್ತು.

2020 ರಲ್ಲಿ ಇದು 5.8 ಮಿಲಿಯನ್‌ಗೆ ಇಳಿದಿದೆ. 2021 ರಲ್ಲಿ 6.4 ಮಿಲಿಯನ್‌ಗೆ ಭಾಗಶಃ ಚೇತರಿಕೆ ಕಂಡುಬಂದಿದೆ. 2019 ಮತ್ತು 2020 ರ ನಡುವೆ RR-TB ಮತ್ತು ಮಲ್ಟಿಡ್ರಗ್-ರೆಸಿಸ್ಟೆಂಟ್ TB (MDR-TB) ಗಾಗಿ ಚಿಕಿತ್ಸೆಯನ್ನು ಪಡೆದವರ ಸಂಖ್ಯೆಯು ಇಳಿಮುಖವಾಗಿದೆ.

ಇನ್ನು ಭಾರತದ ವಿಚಾರಕ್ಕೆ ಬಂದಾಗ 2008ರಲ್ಲಿ, ಪುರಾತತ್ವಶಾಸ್ತ್ರಜ್ಞರು 9000 ವರ್ಷಗಳಷ್ಟು ಹಳೆಯದಾದ ಎರಡು ಅಸ್ಥಿಪಂಜರಗಳನ್ನು ಹೊರತೆಗೆದಿದ್ದರು, ಅವು ಕ್ಷಯರೋಗ ಅಥವಾ ಟಿಬಿಗೆ ಕಾರಣವಾಗುವ ಮೈಕೋಬ್ಯಾಕ್ಟೀರಿಯಂ ಟ್ಯೂಬಬರ್ ಕ್ಯುಲೋಸಿಸ್ ಸೋಂಕಿಗೆ ಒಳಗಾಗಿತ್ತು ಎಂಬುದು ಕಂಡುಬಂತು.

ಇಂದಿಗೂ, ಕ್ಷಯ ಇನ್ನೂ ಅತ್ಯಂತ ಮಾರಣಾಂತಿಕವಾದ ಸಾಂಕ್ರಾಮಿಕಗಳಲ್ಲಿ ಒಂದಾಗಿದೆ, ಇದು ಮಲೇರಿಯಾ ಅಥವಾ ಏಡ್ಸ್ ಗಿಂತ ಹೆಚ್ಚಿನ ಸಾವುಗಳಿಗೆ ಕಾರಣವಾಗುತ್ತದೆ. ಜೊತೆಗೆ, ವಿಶ್ವದಾದ್ಯಂತದ ಒಟ್ಟು ಕ್ಷಯರೋಗ ಪ್ರಕರಣಗಳಲ್ಲಿ ಭಾರತದಲ್ಲಿ ಸುಮಾರು ಶೇ.26ರಷ್ಟಿದೆ.

ಕ್ಷಯ ರೋಗದ ಔಷಧಗಳನ್ನು ರೋಗಿಗಳಿಗೆ ನೇರವಾಗಿ ನೀಡಲಾಗುವುದಿಲ್ಲ, ಅವುಗಳನ್ನು ಮೇಲ್ವಿಚಾರಣೆಯಲ್ಲಿ ನೀಡಲಾಗುತ್ತದೆ, ಇದನ್ನು ನೇರ ನಿಗಾ ಚಿಕಿತ್ಸೆ, ಶಾರ್ಟ್-ಕೋರ್ಸ್ (ಡಾಟ್ಸ್) ಚಿಕಿತ್ಸೆ ಎಂದು ಕರೆಯಲಾಗುತ್ತದೆ.

ಏಕೆಂದರೆ, ಎಲ್ಲಾ ದೀರ್ಘಕಾಲದ ಕಾಯಿಲೆಗಳಂತೆ, ರೋಗಲಕ್ಷಣಗಳು ಕಡಿಮೆಯಾಗುವವರೆಗೆ ಮಾತ್ರ ಕ್ಷಯರೋಗದ ಔಷಧಗಳನ್ನು ತೆಗೆದುಕೊಳ್ಳಬೇಕು. ಅದರ ನಂತರ ಔಷಧಗಳನ್ನು ಮುಂದುವರಿಸಬಾರದು. ಹೀಗಾಗಿ ಚಿಕಿತ್ಸೆಗೆ ರೋಗಿ-ಕೇಂದ್ರಿತ ವಿಧಾನದ ಅಗತ್ಯವಿದೆ. ಈ ವ್ಯವಸ್ಥೆಯ ಅಡಿಯಲ್ಲಿ, ಚಿಕಿತ್ಸೆಯ ಬೆಂಬಲಿಗರು ಔಷಧಗಳನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ ಮತ್ತು ರೋಗಿಯು ಪ್ರತಿದಿನ ಭೇಟಿ ನೀಡಿ ಅವರಿಂದ ಔಷಧಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಕ್ಷಯರೋಗ ಮರುಕಳಿಸಬಹುದೇ? ಚೇತರಿಸಿಕೊಂಡ ಸುಮಾರು ಶೇ.10 ರಿಂದ 12ರಷ್ಟು ರೋಗಿಗಳಲ್ಲಿ ಮತ್ತೆ ಕ್ಷಯರೋಗ ಕಾಣಿಸಿಕೊಳ್ಳಬಹುದು; ಇದನ್ನು ಮರುಕಳಿಸಿದ ಕ್ಷಯ /ಸಂಚಯಿತ ಕ್ಷಯ ಎಂದು ಕರೆಯಲಾಗುತ್ತದೆ.

ಇದು ಧೂಮಪಾನಿಗಳು, ಮದ್ಯವ್ಯಸನಿಗಳು ಮತ್ತು ಅನಿಯಂತ್ರಿತ ಮಧುಮೇಹ ಹೊಂದಿರುವ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಅಪೌಷ್ಟಿಕತೆಯೂ ಮತ್ತೊಂದು ಕಾರಣವಾಗಿದೆ.

ಇದಕ್ಕಾಗಿಯೇ , ಚಿಕಿತ್ಸೆ ಪೂರ್ಣಗೊಂಡ ನಂತರವೂ, ಯಾವುದೇ ರೋಗ ಲಕ್ಷಣವಿಲ್ಲದಿದ್ದರೂ ಸಹ, ರೋಗಿಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ಎರಡು ವರ್ಷಗಳ ಅವಧಿವರೆಗೆ ಚಿಕಿತ್ಸೆಯ ನಂತರದ ಅನುಸರಣೆಗಾಗಿ ಭೇಟಿ ಮಾಡಲಾಗುತ್ತದೆ.

ಕ್ಷಯ ಮತ್ತು ಕೋವಿಡ್-19 ನಡುವೆ ಏನಾದರೂ ಸಂಬಂಧವಿದೆಯೇ? ಇಲ್ಲಿಯವರೆಗೆ ಕೋವಿಡ್-19 ಮತ್ತು ಕ್ಷಯರೋಗದ ನಡುವೆ ನೇರ ಸಂಬಂಧದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಆದರೆ ಕುತೂಹಲ ಇರುವ ಏಕೈಕ ಕ್ಷೇತ್ರ ಹೆಚ್ಚುವರಿ ಪಲ್ಮನರಿ ಕ್ಷಯ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳ. ಎಲ್ಲೆಲ್ಲಿ ಹೆಚ್ಚು ಕೋವಿಡ್-19 ಪ್ರಕರಣಗಳು ಇವೆಯೋ ಅಲ್ಲಿ, ಹೆಚ್ಚಿನ ಶ್ವಾಸಕೋಶದ ಕ್ಷಯ ಪ್ರಕರಣಗಳೂ ವರದಿಯಾಗುತ್ತಿವೆ.

ಕೋವಿಡ್-19 ರಾಷ್ಟ್ರೀಯ ಕ್ಷಯರೋಗ ಕಾರ್ಯಕ್ರಮದ ಮೇಲೆ ಹೆಚ್ಚಿನ ಪರಿಣಾಮ ಬೀರಿತು, ಏಕೆಂದರೆ ಸಾಂಕ್ರಾಮಿಕ ರೋಗ ಮತ್ತು ಅದರ ಪರಿಣಾಮವಾಗಿ ಲಾಕ್ ಡೌನ್ ಗಳಿಂದಾಗಿ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುವುದನ್ನು ನಿಲ್ಲಿಸಿದರು ಅಥವಾ ಆಸ್ಪತ್ರೆಗಳಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ.

ಕ್ಷಯರೋಗಕ್ಕೆ ನಿಯೋಜಿಸಲಾದ ಸಂಪನ್ಮೂಲಗಳು ಮತ್ತು ಸಿಬ್ಬಂದಿಯನ್ನು ಕೋವಿಡ್ -19 ನಿರ್ವಹಣೆಗೆ ನಿಯೋಜಿಸಲಾಯಿತು. ಎರಡೂ ರೋಗಗಳಿಗೆ ರೋಗಲಕ್ಷಣವೂ ಒಂದೇ ಆಗಿರುತ್ತದೆ ಕೆಮ್ಮು. ಆದ್ದರಿಂದ ಕೋವಿಡ್ -19 ರ ಆರಂಭಿಕ ಹಂತದಲ್ಲಿ, ಭಾರತ ಸರ್ಕಾರವು ಸುತ್ತೋಲೆಯನ್ನು ಹೊರಡಿಸಿ, ಅಲ್ಲಿ ಕೋವಿಡ್ ನ ಯಾವುದೇ ರೋಗಲಕ್ಷಣ ವರದಿ ಮಾಡುವ ರೋಗಿಗಳಿಗೆ ಕ್ಷಯರೋಗಕ್ಕಾಗಿಯೂ ಪರೀಕ್ಷೆ ನಡೆಸಬೇಕು ಎಂದು ತಿಳಿಸಿತ್ತು.

ಅದರ ಹೊರತಾಗಿಯೂ, ಕ್ಷಯರೋಗದ ರೋಗನಿರ್ಣಯವು ತೀವ್ರವಾಗಿ ಕಡಿಮೆಯಾಯಿತು. ಜನರು ಕೆಮ್ಮು ಇದ್ದರೂ ಸಹ, ಕೋವಿಡ್ ವರದಿ ಬರುವ ಅಥವಾ ಪ್ರತ್ಯೇಕವಾಗಿರಬೇಕು ಎಂಬ ಭಯದಿಂದ ಆಸ್ಪತ್ರೆಗಳಿಗೆ ಭೇಟಿ ನೀಡುವುದನ್ನು ನಿಲ್ಲಿಸಿದರು ಇದು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿತು.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ