AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಕೂದಲಿಗೆ ರೇಷ್ಮೆಯಂಥಾ ಹೊಳಪು ಬೇಕೇ? ಕೂದಲು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಟಿಪ್ಸ್

ಬದಲಾದ ಜೀವನಶೈಲಿಯಿಂದಾಗಿ ಕೂದಲು ಉದುರುವ ಸಮಸ್ಯೆಗಳು ಕೂಡ ಹೆಚ್ಚಾಗುತ್ತಿವೆ. ಆದರೆ ಕೂದಲಿನ ಆರೋಗ್ಯ ಕಾಪಾಡುತ್ತಾ, ಕೂದಲಲ್ಲಿ ರೇಷ್ಮೆಯಂಥಾ ಹೊಳಪು ಬರುವಂತೆ ಕೂಡ ಮಾಡಬಹುದು.

ನಿಮ್ಮ ಕೂದಲಿಗೆ ರೇಷ್ಮೆಯಂಥಾ ಹೊಳಪು ಬೇಕೇ? ಕೂದಲು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಟಿಪ್ಸ್
Hair
TV9 Web
| Edited By: |

Updated on: Jun 17, 2022 | 8:00 AM

Share

ಬದಲಾದ ಜೀವನಶೈಲಿಯಿಂದಾಗಿ ಕೂದಲು (Hair)ಉದುರುವ ಸಮಸ್ಯೆಗಳು ಕೂಡ ಹೆಚ್ಚಾಗುತ್ತಿವೆ. ಆದರೆ ಕೂದಲಿನ ಆರೋಗ್ಯ ಕಾಪಾಡುತ್ತಾ, ಕೂದಲಲ್ಲಿ ರೇಷ್ಮೆಯಂಥಾ ಹೊಳಪು ಬರುವಂತೆ ಕೂಡ ಮಾಡಬಹುದು. ಆಧುನಿಕ ಜೀವನಶೈಲಿಯಿಂದ ಕೆಲವು ಹಾರ್ಮೋನುಗಳ, ಅದರಲ್ಲೂ ಮುಖ್ಯವಾಗಿ ಕಾರ್ಟಿಸೋಲ್ ಎಂಬ ಹಾರ್ಮೋನಿನ ಕಾರ್ಯನಿರ್ವಹಣೆಯಲ್ಲಿ ವ್ಯತಿರಿಕ್ತತೆ ಉಂಟಾಗಿ ‘ಮೆಲನಿನ್’ ಎಂಬ ವರ್ಣದ್ರವ್ಯವನ್ನು ಸೂಸುವ ಜೀವಕೋಶಗಳಲ್ಲಿನ ಕೆಲವು ವಂಶವಾಹಿನಿಗಳು ಕಾರ್ಯವನ್ನು ನಿಲ್ಲಿಸಬಹುದು.

ಇನ್ನೂ ಕೆಲವು ಬಾರಿ ನಾವು ತಿನ್ನುವ ಆಹಾರದಲ್ಲಿ ಕೂದಲ ಬೆಳವಣಿಗೆಗೆ ಬೇಕಾಗುವ ವಿಟಮಿನ್‌ಗಳ ಅಥವಾ ಅಮೈನೊ ಆಮ್ಲಗಳ ಕೊರತೆ ಇರಬಹುದು. ಕೂದಲು ಬೆಳೆಯದೆ ಇರಬಹುದು. ಈ ಎಲ್ಲಾ ಕಾರಣಗಳಿಂದ ಕೂದಲು ಬಹುಬೇಗ ಬಿಳಿಯಾಗಬಹುದು ಅಥವಾ ಉದುರಬಹುದು.

ಕೂದಲು ನುಣುಪಾಗಿ ಹೊಳೆಯುವಂತಾಗಲು ಹೀಗೆ ಮಾಡಿ ತೆಂಗಿನ ಎಣ್ಣೆ ಹಾಗೂ ನಿಂಬೆಹಣ್ಣು: ಕೋಕೋನಟ್ ಹೇರ್ ಆಯಿಲ್ ಜತೆಗೆ ನಿಂಬೆ ಹಣ್ಣಿನ ರಸವನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಬೇಕು. ಕೇವಲ 5-7 ನಿಮಿಷಗಳ ಬಳಿಕ ಬಾಚಣಿಗೆ ತೆಗೆದುಕೊಂಡು ಕೂದಲು ಬಾಚಿ ರಾತ್ರಿಇಡೀ ಹಾಗೆಯೇ ಇಡಿ ಮರುದಿನ ತಲೆಸ್ನಾನ ಮಾಡಿ.

ತೆಂಗಿನ ಎಣ್ಣೆ ಹಾಗೂ ಜೇನುತುಪ್ಪ: ತೆಂಗಿನ ಎಣ್ಣೆ ಹಾಗೂ ಜೇನುತುಪ್ಪವನ್ನು ಮಿಕ್ಸ್ ಮಾಡಿ ಒಲೆಯಮೇಲಿಟ್ಟು ಸ್ವಲ್ಪ ಬೆಚ್ಚಗೆ ಮಾಡಿ ಬಳಿಕ ತಲೆಗೆ ಹಾಕಿ, ಒಣಗುವವರೆಗೆ ಹಾಗೆಯೇ ಬಿಡಿ ಬಳಿಕ ಟವಲ್​ ಒದ್ದೆ ಮಾಡಿಕೊಂಡು ಒರೆಸಿ, ಬಳಿಕ ತಲೆಸ್ನಾನ ಮಾಡಿ.

ಬಾಳೆಹಣ್ಣು, ಅವಕಾಡೋ ಹಾಗೂ ಕೋಕೋನಟ್ ಆಯಿಲ್: ಬಾಳೆಹಣ್ಣು, ಅವಕಾಡೋ ಹಾಗೂ ಕೋಕೋನಟ್ ಹೇರ್ ಆಯಿಲ್ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ, 2-3 ನಿಮಿಷಗಳ ಕಾಲ ಮುಟ್ಟದೇ ಹಾಗೆಯೇ ಬಿಡಿ ಬಳಿಕ ಬಾಚಣಿಗೆ ತೆಗೆದುಕೊಂಡು ಕೂದಲನ್ನು ಬಾಚಿ ಹಾಗೆಯೇ 10 ನಿಮಿಷಗಳ ಕಾಲ ತಲೆಗೆ ಮಸಾಜ್ ಮಾಡಿ. ಬಳಿಕ ಕೂದಲು ತೊಳೆಯಿರಿ.

ಕೋಕೋನಟ್ ಹಾಗೂ ಪೆಪ್ಪರ್​ಮೆಂಟ್ ಮಾಸ್ಕ್​: ಎರಡು ಚಮಚದಷ್ಟು ಕೋಕೋನಟ್ ಆಯಿಲ್, ಹಾಗೂ ಪೆಪ್ಪರ್​ಮೆಂಟ್ ಆಯಿಲ್ ಮಿಕ್ಸ್ ಮಾಡಿ ಮಿಕ್ಸ್ ಮಾಡಿ ಸ್ವಲ್ಪ ಬಿಸಿ ಮಾಡಿ ಬಳಿಕ ಅದು ತಣ್ಣಗಾಗುವವರೆಗೆ ಫ್ರಿಜ್​ನಲ್ಲಿರಿಸಬೇಕು. ಮರುದಿನ ಕೂದಲಿಗೆ ಹಚ್ಚಿ 20-25 ನಿಮಿಗಳ ಬಳಿಕ ತಲೆ ಸ್ನಾನ ಮಾಡಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?