Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಕೂದಲಿಗೆ ರೇಷ್ಮೆಯಂಥಾ ಹೊಳಪು ಬೇಕೇ? ಕೂದಲು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಟಿಪ್ಸ್

ಬದಲಾದ ಜೀವನಶೈಲಿಯಿಂದಾಗಿ ಕೂದಲು ಉದುರುವ ಸಮಸ್ಯೆಗಳು ಕೂಡ ಹೆಚ್ಚಾಗುತ್ತಿವೆ. ಆದರೆ ಕೂದಲಿನ ಆರೋಗ್ಯ ಕಾಪಾಡುತ್ತಾ, ಕೂದಲಲ್ಲಿ ರೇಷ್ಮೆಯಂಥಾ ಹೊಳಪು ಬರುವಂತೆ ಕೂಡ ಮಾಡಬಹುದು.

ನಿಮ್ಮ ಕೂದಲಿಗೆ ರೇಷ್ಮೆಯಂಥಾ ಹೊಳಪು ಬೇಕೇ? ಕೂದಲು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಟಿಪ್ಸ್
Hair
Follow us
TV9 Web
| Updated By: ನಯನಾ ರಾಜೀವ್

Updated on: Jun 17, 2022 | 8:00 AM

ಬದಲಾದ ಜೀವನಶೈಲಿಯಿಂದಾಗಿ ಕೂದಲು (Hair)ಉದುರುವ ಸಮಸ್ಯೆಗಳು ಕೂಡ ಹೆಚ್ಚಾಗುತ್ತಿವೆ. ಆದರೆ ಕೂದಲಿನ ಆರೋಗ್ಯ ಕಾಪಾಡುತ್ತಾ, ಕೂದಲಲ್ಲಿ ರೇಷ್ಮೆಯಂಥಾ ಹೊಳಪು ಬರುವಂತೆ ಕೂಡ ಮಾಡಬಹುದು. ಆಧುನಿಕ ಜೀವನಶೈಲಿಯಿಂದ ಕೆಲವು ಹಾರ್ಮೋನುಗಳ, ಅದರಲ್ಲೂ ಮುಖ್ಯವಾಗಿ ಕಾರ್ಟಿಸೋಲ್ ಎಂಬ ಹಾರ್ಮೋನಿನ ಕಾರ್ಯನಿರ್ವಹಣೆಯಲ್ಲಿ ವ್ಯತಿರಿಕ್ತತೆ ಉಂಟಾಗಿ ‘ಮೆಲನಿನ್’ ಎಂಬ ವರ್ಣದ್ರವ್ಯವನ್ನು ಸೂಸುವ ಜೀವಕೋಶಗಳಲ್ಲಿನ ಕೆಲವು ವಂಶವಾಹಿನಿಗಳು ಕಾರ್ಯವನ್ನು ನಿಲ್ಲಿಸಬಹುದು.

ಇನ್ನೂ ಕೆಲವು ಬಾರಿ ನಾವು ತಿನ್ನುವ ಆಹಾರದಲ್ಲಿ ಕೂದಲ ಬೆಳವಣಿಗೆಗೆ ಬೇಕಾಗುವ ವಿಟಮಿನ್‌ಗಳ ಅಥವಾ ಅಮೈನೊ ಆಮ್ಲಗಳ ಕೊರತೆ ಇರಬಹುದು. ಕೂದಲು ಬೆಳೆಯದೆ ಇರಬಹುದು. ಈ ಎಲ್ಲಾ ಕಾರಣಗಳಿಂದ ಕೂದಲು ಬಹುಬೇಗ ಬಿಳಿಯಾಗಬಹುದು ಅಥವಾ ಉದುರಬಹುದು.

ಕೂದಲು ನುಣುಪಾಗಿ ಹೊಳೆಯುವಂತಾಗಲು ಹೀಗೆ ಮಾಡಿ ತೆಂಗಿನ ಎಣ್ಣೆ ಹಾಗೂ ನಿಂಬೆಹಣ್ಣು: ಕೋಕೋನಟ್ ಹೇರ್ ಆಯಿಲ್ ಜತೆಗೆ ನಿಂಬೆ ಹಣ್ಣಿನ ರಸವನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಬೇಕು. ಕೇವಲ 5-7 ನಿಮಿಷಗಳ ಬಳಿಕ ಬಾಚಣಿಗೆ ತೆಗೆದುಕೊಂಡು ಕೂದಲು ಬಾಚಿ ರಾತ್ರಿಇಡೀ ಹಾಗೆಯೇ ಇಡಿ ಮರುದಿನ ತಲೆಸ್ನಾನ ಮಾಡಿ.

ತೆಂಗಿನ ಎಣ್ಣೆ ಹಾಗೂ ಜೇನುತುಪ್ಪ: ತೆಂಗಿನ ಎಣ್ಣೆ ಹಾಗೂ ಜೇನುತುಪ್ಪವನ್ನು ಮಿಕ್ಸ್ ಮಾಡಿ ಒಲೆಯಮೇಲಿಟ್ಟು ಸ್ವಲ್ಪ ಬೆಚ್ಚಗೆ ಮಾಡಿ ಬಳಿಕ ತಲೆಗೆ ಹಾಕಿ, ಒಣಗುವವರೆಗೆ ಹಾಗೆಯೇ ಬಿಡಿ ಬಳಿಕ ಟವಲ್​ ಒದ್ದೆ ಮಾಡಿಕೊಂಡು ಒರೆಸಿ, ಬಳಿಕ ತಲೆಸ್ನಾನ ಮಾಡಿ.

ಬಾಳೆಹಣ್ಣು, ಅವಕಾಡೋ ಹಾಗೂ ಕೋಕೋನಟ್ ಆಯಿಲ್: ಬಾಳೆಹಣ್ಣು, ಅವಕಾಡೋ ಹಾಗೂ ಕೋಕೋನಟ್ ಹೇರ್ ಆಯಿಲ್ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ, 2-3 ನಿಮಿಷಗಳ ಕಾಲ ಮುಟ್ಟದೇ ಹಾಗೆಯೇ ಬಿಡಿ ಬಳಿಕ ಬಾಚಣಿಗೆ ತೆಗೆದುಕೊಂಡು ಕೂದಲನ್ನು ಬಾಚಿ ಹಾಗೆಯೇ 10 ನಿಮಿಷಗಳ ಕಾಲ ತಲೆಗೆ ಮಸಾಜ್ ಮಾಡಿ. ಬಳಿಕ ಕೂದಲು ತೊಳೆಯಿರಿ.

ಕೋಕೋನಟ್ ಹಾಗೂ ಪೆಪ್ಪರ್​ಮೆಂಟ್ ಮಾಸ್ಕ್​: ಎರಡು ಚಮಚದಷ್ಟು ಕೋಕೋನಟ್ ಆಯಿಲ್, ಹಾಗೂ ಪೆಪ್ಪರ್​ಮೆಂಟ್ ಆಯಿಲ್ ಮಿಕ್ಸ್ ಮಾಡಿ ಮಿಕ್ಸ್ ಮಾಡಿ ಸ್ವಲ್ಪ ಬಿಸಿ ಮಾಡಿ ಬಳಿಕ ಅದು ತಣ್ಣಗಾಗುವವರೆಗೆ ಫ್ರಿಜ್​ನಲ್ಲಿರಿಸಬೇಕು. ಮರುದಿನ ಕೂದಲಿಗೆ ಹಚ್ಚಿ 20-25 ನಿಮಿಗಳ ಬಳಿಕ ತಲೆ ಸ್ನಾನ ಮಾಡಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PSL 2025: ಟಿ20 ಪಂದ್ಯದಲ್ಲಿ ಟೆಸ್ಟ್ ಆಡಿದ ಬಾಬರ್ ಆಝಂ
PSL 2025: ಟಿ20 ಪಂದ್ಯದಲ್ಲಿ ಟೆಸ್ಟ್ ಆಡಿದ ಬಾಬರ್ ಆಝಂ
ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ
ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ
VIDEO: ಔಟಾ... ನಾಟೌಟಾ... ಇದು ಕನ್ನಡಿಗನ ಕೂಲ್ ಕ್ಯಾಚ್​
VIDEO: ಔಟಾ... ನಾಟೌಟಾ... ಇದು ಕನ್ನಡಿಗನ ಕೂಲ್ ಕ್ಯಾಚ್​
ಸುಬ್ರಹ್ಮಣ್ಯನ ಲಹರಿಯುಳ್ಳ ಈ ದಿನದ ರಾಶಿ ಭವಿಷ್ಯ ಇಲ್ಲಿದೆ ನೋಡಿ
ಸುಬ್ರಹ್ಮಣ್ಯನ ಲಹರಿಯುಳ್ಳ ಈ ದಿನದ ರಾಶಿ ಭವಿಷ್ಯ ಇಲ್ಲಿದೆ ನೋಡಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ