AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀರ್ಘ ಕೋವಿಡ್ ಲಕ್ಷಣ ಎಂದುಕೊಂಡಿದ್ದು ಬುದ್ಧಿಮಾಂದ್ಯತೆ ಆಗಿದ್ದು ಹೇಗೆ? ವೈದ್ಯರ ಅಭಿಪ್ರಾಯವೇನು ? ಇಲ್ಲಿದೆ ಮಾಹಿತಿ

ಆರಂಭದಲ್ಲಿ, ದೀರ್ಘ ಕೋವಿಡ್ ಲಕ್ಷಣವೆಂದು ಭಾವಿಸಲಾಗಿದ್ದು ಬಳಿಕ ಬುದ್ಧಿಮಾಂದ್ಯತೆ ಎಂದು ತಿಳಿದು ಬಂದಿದೆ. ಏಕೆಂದರೆ ಅವರು ಜೂನ್ 2020 ರಲ್ಲಿ ಕರೋನಾ ವೈರಸ್ನಿಂದ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಇದು ಸಂಶೋಧನೆಗಳಿಂದ ಬಹಿರಂಗಗೊಂಡಿದೆ. ಹಾಗಾದರೆ ಏನೆನ್ನುತ್ತೇ ಫಲಿತಾಂಶ ಇಲ್ಲಿದೆ ಮಾಹಿತಿ.

ದೀರ್ಘ ಕೋವಿಡ್ ಲಕ್ಷಣ ಎಂದುಕೊಂಡಿದ್ದು ಬುದ್ಧಿಮಾಂದ್ಯತೆ ಆಗಿದ್ದು ಹೇಗೆ? ವೈದ್ಯರ ಅಭಿಪ್ರಾಯವೇನು ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: May 22, 2023 | 1:56 PM

Share

ಬುದ್ಧಿಮಾಂದ್ಯತೆಯು ಅಸಹಜ ಮೆದುಳಿನ ಕ್ಷೀಣತೆಯಾಗಿದ್ದು, ಇದು ವ್ಯಕ್ತಿಯ ಸಾಮಾನ್ಯ ದೈನಂದಿನ ಚಟುವಟಿಕೆಗಳಲ್ಲಿ ಯೋಚಿಸುವ, ಮಾತನಾಡುವ ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಮರ್ಥ್ಯದಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಇದು ಹೆಚ್ಚಾಗಿ ವಯಸ್ಸಾದವರ ಮೇಲೆ ಪರಿಣಾಮ ಬೀರುತ್ತದೆ, ಮಕ್ಕಳು ಮತ್ತು ಹದಿಹರೆಯದವರಿಗೆ ಈ ಸಿಂಡ್ರೋಮ್ ಇರುವುದು ತುಂಬಾ ಅಪರೂಪ. ಆದರೆ, ಅಂತಹ ಒಂದು ಅಪರೂಪದ ಘಟನೆ, ಯುಎಸ್ನಲ್ಲಿ 19 ವರ್ಷದ ಹುಡುಗಿಗೆ ಬುದ್ಧಿಮಾಂದ್ಯತೆ ಇರುವುದು ಪತ್ತೆಯಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಆರಂಭದಲ್ಲಿ, ಜಿಯಾನಾ ಕ್ಯಾಬೊ ಅವರ ಮೆದುಳಿನ ಮಂಜು ದೀರ್ಘ ಕೋವಿಡ್ನ ಲಕ್ಷಣವೆಂದು ಭಾವಿಸಲಾಗಿತ್ತು, ಏಕೆಂದರೆ ಅವರು ಜೂನ್ 2020 ರಲ್ಲಿ ಕರೋನಾ ವೈರೆಸ್ನಿಂದ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಬಳಿಕ ಕ್ಯಾಬೊ ಅವರ ಕಾಲೇಜು ಶ್ರೇಣಿ ಕುಸಿಯಲು ಪ್ರಾರಂಭಿಸಿದಾಗ, ಅವರ ತಾಯಿ ರೆಬೆಕ್ಕಾ ರಾಬರ್ಟ್ಸನ್ ಏನೋ ಆಗಿರಬಹುದು ಎಂದು ಗಮನಿಸಿ, ವೈದ್ಯರ ಬಳಿ ಕರೆದುಕೊಂಡು ಹೋದರು.

ಇದಲ್ಲದೆ, ಅವಳು ಮೆಮೊರಿ ನಷ್ಟ ಮತ್ತು ಕ್ಯಾನ್ ಓಪನರ್ ಆಪರೇಟಿಂಗ್ ನಂತಹ ಸರಳ ಕಾರ್ಯಗಳನ್ನು ನಿರ್ವಹಿಸುವ ಅಸಮರ್ಥಳಾಗಿದ್ದಳು. ಅದೆಷ್ಟೋ ದಿನಗಳು ಇದೆಲ್ಲದರಿಂದ ಹೋರಾಡಿದಳು. ಇವೆಲ್ಲದರಿಂದ ಕ್ಯಾಬೊ ತನ್ನ ಸ್ನೇಹಿತರಿಂದ ಹಿಂದೆ ಸರಿಯಲು ಪ್ರಾರಂಭಿಸಿದಳು, ತನ್ನ ಮನೆಕೆಲಸವನ್ನು ಮಾಡುವುದನ್ನು ನಿಲ್ಲಿಸಿದಳು. ಮನೆಗೆ ಬಂದ ಕೂಡಲೇ ನಿದ್ರೆ ಮಾಡಲು ಪ್ರಾರಂಭಿಸಿದಳು. ಆಕೆಯ ಆರೋಗ್ಯದ ಬಗ್ಗೆ ಚಿಂತಿತರಾದ ಅವರ ತಾಯಿ ರೆಬೆಕಾ ರಾಬರ್ಟ್ಸನ್ ಅವರು ನವೆಂಬರ್ 2022 ರಲ್ಲಿ ನರವಿಜ್ಞಾನಿಯ ಬಳಿಗೆ ಕರೆದೊಯ್ದರು. ಸರಣಿ ವೈದ್ಯಕೀಯ ಪರೀಕ್ಷೆಗಳ ನಂತರ, ವೈದ್ಯರು ಅವಳ ಬಲ ಕೇಂದ್ರ ಲೋಬ್ನಲ್ಲಿ ಯಾವುದೇ ಚಟುವಟಿಕೆಯನ್ನು ಕಂಡುಹಿಡಿಯಲಿಲ್ಲ ಅವಳು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಾಳೆ ಎಂದರು.

ಇದನ್ನೂ ಓದಿ:Dementia: ಈ ಐದು ಲಕ್ಷಣಗಳು ನಿಮ್ಮನ್ನು ಕಾಡುತ್ತಿದ್ದರೆ ಬುದ್ಧಿಮಾಂದ್ಯತೆ ಇರಬಹುದು.. ಇರಲಿ ಎಚ್ಚರ

ಇದೆಲ್ಲದನ್ನು ಕೇಳಿ ಯಾರೋ ನನ್ನ ಹೃದಯಕ್ಕೆ ಗುದ್ದಿದ್ದಾರೆ ಎಂದು ನನಗೆ ಅನಿಸಿತು. ನಾನು ದಿಗ್ಭ್ರಮೆಗೊಂಡು ಅಲ್ಲೇ ಕುಳಿತೆ. ಇದು ನಿಜವಾಗಲು ನನ್ನಿಂದ ಸಾಧ್ಯವಿಲ್ಲ ಎಂದು ಭಾವಿಸಿದೆ, ಅವಳು ಕೇವಲ 19 ವರ್ಷದವಳು. ಇದು ಬುದ್ಧಿಮಾಂದ್ಯತೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ನನ್ನ ಕನಸಿನಲ್ಲಿಯೂ ಕೂಡ” ಎಂದು ಅವರ ತಾಯಿ ರೆಬೆಕ್ಕಾ ರಾಬರ್ಟ್ಸನ್ ಎಸ್ಡಬ್ಲ್ಯೂಎನ್ಎಸ್ಗೆ ತಿಳಿಸಿದರು.

ವಿಶೇಷವೆಂದರೆ, ತಾಯಿ, ಮಗಳು 2019 ರಲ್ಲಿ ಕಾರು ಅಪಘಾತಕ್ಕೆ ಒಳಗಾಗಿದ್ದರು, ಆಗ ಕ್ಯಾಬೊ ಅವರ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿತ್ತು. ಅವರ ತಾಯಿಯ ಪ್ರಕಾರ, ಅವರ ಮಗಳ ಮಾನಸಿಕ ಆರೋಗ್ಯಕ್ಕೂ ಈ ಅಪಘಾತವೇ ಅಡ್ಡಿಯಾಗಿದೆ ಎಂಬ ಅನುಮಾನ. ಈಗ 20 ವರ್ಷದ ಕ್ಯಾಬೊಗೆ ತನ್ನ ಅತ್ಯಂತ ಅಮೂಲ್ಯವಾದ ಮತ್ತು ಸಂತೋಷದ ಬಾಲ್ಯದ ನೆನಪುಗಳನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತನ್ನ ಮಗಳು ಜಾರಿ ಹೋಗುತ್ತಿರುವಂತೆ ಭಾಸವಾಗುತ್ತಿದೆ ಎಂದು ಆಕೆಯ ತಾಯಿ ನೋವಿನಿಂದ ತಮ್ಮ ಸಂಕಟ ತೋಡಿಕೊಳ್ಳುತ್ತಾರೆ. “ನನಗೆ ಸ್ವಲ್ಪ ಭರವಸೆ ಎಂದರೆ ಅವಳಿಗಾಗಿ ಯಾವುದಾದರೂ ಚಿಕಿತ್ಸೆ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅವಳು ಇನ್ನು ಮುಂದೆ ನಗುವುದಿಲ್ಲ. ಅವಳು ಹಾಸಿಗೆಯಿಂದ ಎದ್ದೇಳುವುದಿಲ್ಲ. ದುಃಖಕರ ಭಾಗವೆಂದರೆ ಅವಳಲ್ಲಿ ಯಾವ ಭಾವನೆಯೂ ಇಲ್ಲ. ಅವಳು 100 ಪ್ರತಿಶತ ಎಲ್ಲ ಕೆಲಸದಲ್ಲಿಯೂ ನಿರಾಸಕ್ತಿ ಹೊಂದಿದ್ದಾಳೆ, “ಎಂದು ಅವಳ ತಾಯಿ ಹೇಳುತ್ತಾರೆ.

ಬಾಲ್ಯದ ಬುದ್ಧಿಮಾಂದ್ಯತೆ ಪ್ರಗತಿಶೀಲ ಮೆದುಳಿನ ಹಾನಿಯಿಂದ ಉಂಟಾಗುತ್ತದೆ ಮತ್ತು 70 ಕ್ಕೂ ಹೆಚ್ಚು ಅಪರೂಪದ ಆನುವಂಶಿಕ ಅಸ್ವಸ್ಥತೆಗಳೊಂದಿಗೆ ಸಂಬಂಧ ಹೊಂದಿದೆ. ಹಾಗಾಗಿ ಚಿಕ್ಕ ಮಕ್ಕಳಲ್ಲಿ ಅಥವಾ ಹದಿಹರೆಯದವರಲ್ಲಿ ಯಾವುದೇ ಬದಲಾವಣೆ ಕಂಡರೂ ನಿರ್ಲಕ್ಷ ವಹಿಸದೇ ವೈದ್ಯರ ಬಳಿ ಕರೆದುಕೊಂಡು ಹೋಗಿ. ಏಕೆಂದರೆ ಪ್ರತಿದಿನವೂ ಮುಖ್ಯವಾಗಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!