AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುರುಗ್ರಹದ ಸ್ಥಾನ ಬದಲಾವಣೆಯಿಂದ, ಯಾರ ಗ್ರಹಚಾರ ಬದಲಾಗಲಿದೆ

ಗ್ರಹಗಳ ಪರಿವರ್ತನೆಯಿಂದ ಗುರುಗ್ರಹದ ಸ್ಥಾನ ಬದಲಾವಣೆ ಆಗಲಿದೆ. ಈ ಬದಲಾವಣೆಯಿಂದ ಯಾರ ಗ್ರಹಚಾರ ಬದಲಾಗಲಿದೆ.ಖಗೋಲದಲ್ಲಿ ನೂರಾರು ಗ್ರಹಗಳಿದ್ದರೂ ಸೂರ್ಯನು ಸಂಚರಿಸುವ ಕ್ರಾಂತಿ ಪಥದಲ್ಲಿ ಸಂಚರಿಸುವ ಗ್ರಹಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವುದು ವಿಶೇಷ. ಈ ಗ್ರಹ ಬದಲಾವಣೆಯಿಂದ ಯಾವೆಲ್ಲ ರಾಶಿಗಳಿಗೆ ಪರಿಣಾಮ ಉಂಟಾಗಲಿದೆ.

ಗುರುಗ್ರಹದ ಸ್ಥಾನ ಬದಲಾವಣೆಯಿಂದ, ಯಾರ ಗ್ರಹಚಾರ ಬದಲಾಗಲಿದೆ
ಸಾಂದರ್ಭಿಕ ಚಿತ್ರ Image Credit source: Tv9 kannada
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​

Updated on:May 13, 2025 | 12:11 PM

ಗ್ರಹಮಂಡಲದಲ್ಲಿ ( position of Jupiter) ಉಂಟಾಗುವ ಗ್ರಹಗಳ ಪರಿವರ್ತನೆಯಿಂದ ಸೃಷ್ಟಿಯ ಜೀವ ರಾಶಿಗಳ ಮೇಲೆ ಸಕಾರಾತ್ಮಕ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡುತ್ತವೆ. ಹಾಗಾಗಿಯೇ ಗ್ರಹ ಎಂಬುದು ಕರೆಯುವುದು. ಖಗೋಲದಲ್ಲಿ ನೂರಾರು ಗ್ರಹಗಳಿದ್ದರೂ ಸೂರ್ಯನು ಸಂಚರಿಸುವ ಕ್ರಾಂತಿ ಪಥದಲ್ಲಿ ಸಂಚರಿಸುವ ಗ್ರಹಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವುದು ವಿಶೇಷ.

ಒಟ್ಟು ಖಗೋಲವನ್ನು ಹನ್ನೆರಡು ಭಾಗವಾಗಿ ವಿಭಾಗಿಸಿದ್ದಾರೆ. ಅವುಗಳಿಗೆ ಮೇಷಾದಿ ಹೆಸರುಗಳನ್ನು ಇಡಲಾಗಿದೆ‌. ಚಂದ್ರ ಮೊದಲಾದ ಗ್ರಹಗಳು ತಮ್ಮ ಸುತ್ತ ಹಾಗೂ ಸೂರ್ಯನ ಸುತ್ತ ನಿರಂತರವಾಗಿ ಭ್ರಮಣ ಮಾಡುತ್ತಲೇ ಇರುತ್ತವೆ. ಹೀಗೆ ಭ್ರಮಣ ಮಾಡುವಾಗ ಅವುಗಳಿಗೆ ಸಮಯ ನಿರ್ಧಾರವನ್ನು ಮಾಡಲಾಗಿದೆ. ಅದು ಭೂಮಿಯ ಆಧಾರದ ಮೇಲಾಗಿದೆ. ಚಂದ್ರನು ಮೂವತ್ತು ದಿನದಲ್ಲಿ ಸೂರ್ಯನನ್ನು ಸುತ್ತಿದರೆ ಭೂಮಿ ಮೂರನೂರಾ ಅರವತ್ತು ದಿನಗಳಲ್ಲಿ ಸುತ್ತುತ್ತದೆ. ಹೀಗೆ ಅನ್ಯಾನ್ಯ ಗ್ರಹಗಳಿಗೆ ದಿನ, ವರ್ಷಗಳಿವೆ.

ಪ್ರಸ್ತುತ ಗುರುವಿನ ವಿಚಾರ ಬರುವುದಾದರೆ ಒಂದು ವರ್ಷಗಳ ಕಾಲ ವೃಷಭ ರಾಶಿಯಲ್ಲಿದ್ದ ಗುರುವು ಮಿಥುನ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಒಂದು ವರ್ಷ ಒಂದೇ ರಾಶಿಯಲ್ಲಿ ಇದ್ದು ಸೂರ್ಯನ ಸುತ್ತಿ ಬರಲು ಹನ್ನೆರಡು ವರ್ಷ ತೆಗೆದುಕೊಳ್ಳುತ್ತಾನೆ. ಗ್ರಹಗಳಲ್ಲಿ ಅತ್ಯಂತ ಶುಭಗ್ರಹ ಗುರುವಾದ ಕಾರಣ ವಿಶೇಷ ಗಮನ ಅದರ ಮೇಲಿರಲಿದೆ.

ಇದನ್ನೂ ಓದಿ
Image
ಹೆಣ್ಣಿನ ಸಿಂಧೂರ ಮುಟ್ಟಿದವರು ಅಂದು ಪುರಾಣದಲ್ಲೂ ಉಳಿದಿಲ್ಲ, ಇಂದು ಉಳಿದಿಲ್ಲ
Image
ಈ ನಾಲ್ಕು ರಾಶಿಯವರಿಗೆ ಚಿನ್ನ ಧರಿಸುವುದು ಅತ್ಯಂತ ಶುಭ
Image
ಮೇ 8 ಮೋಹಿನಿ ಏಕಾದಶಿ; ಪೂಜಾ ವಿಧಾನ ಮತ್ತು ಮಹತ್ವ
Image
ಶಿವನ ವಿಶೇಷ ಅನುಗ್ರಹ ಪಡೆಯಲು ಈ ಸರಳ ಪರಿಹಾರವನ್ನು ಪ್ರಯತ್ನಿಸಿ

ಈ ಗ್ರಹದ ಬದಲಾವಣೆಯಿಂದ ಶುಭ ಕಾರ್ಯವನ್ನು ಮಾಡಲು ಮತ್ತು ಸಂಸ್ಕಾರವನ್ನು ಮಾಡಲು ಉಪಯುಕ್ತವಾಗಲಿದೆ. ಇದು ಒಂದು ಭಾಗವಾದರೆ, ಯಾರಿಗೆಲ್ಲ ಈ ಗ್ರಹದ ಬದಲಾವಣೆಯಿಂದ ಶುಭವಿದೆ ಎನ್ನುವುದನ್ನು ನೋಡುವುದಾದರೆ ಒಟ್ಟಾರೆಯಾಗಿ ಹೆಚ್ಚು ಗುರುಬಲ ಬರುವುದು ವೃಷಭ, ಸಿಂಹ, ತುಲಾ, ಧನು, ಕುಂಭ ರಾಶಿಗೆ. ಇದಲ್ಲದೇ ಮಿತ್ರ, ಅಧಿಮಿತ್ರ ರಾಶಿಯವರಿಗೂ ಗುರುವಿನ ಅನುಗ್ರಹ ಇರಲಿದೆ.

ವೃಷಭ ರಾಶಿ :

ಈ ರಾಶಿಯವರಿಗೆ ಗುರುವಿನ ಬದಲಾವಣೆಯಿಂದ ಅರ್ಥಿಕ ಸಬಲತೆ, ಕೌಟುಂಬಿಕ ಶಾಂತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಾತಿನಿಂದ‌ ಯಶಸ್ಸು ಇವೆಲ್ಲವೂ ಸಿಗಲಿದೆ.

ಸಿಂಹ ರಾಶಿ :

ಇವರಿಗೆ ಏಕಾದಶದಲ್ಲಿ ಇರುವ ಗುರುವು ಸ್ಥಾನಮಾನ ಪ್ರಾಪ್ತಿ, ಹೂಡಿಕೆ ಮಾಡಿದ್ದರೆ ಲಾಭ, ಸರ್ಕಾರಿ ಉದ್ಯೋಗ, ಉದ್ಯಮದಲ್ಲಿ ಉನ್ನತಿ ಯಶಸ್ಸು ಪಡೆಯಬಹುದು.

ತುಲಾ ರಾಶಿ :

ಸಾಧನೆಗೆ ಪುರಸ್ಕಾರವನ್ನು ಈ ರಾಶಿಯವರು ಪಡೆಯಲಿದ್ದಾರೆ. ತಂದೆಯ ಕಡೆಯಿಂದ ಧನಸಹಾಯ, ಕುಟುಂಬದವರ ಮೇಲೆ ಪ್ರೀತಿ, ವಿಶ್ವಾಸ, ಧರ್ಮ ಕಾರ್ಯದಲ್ಲಿ ಶ್ರದ್ಧೆ, ದೇವತಾಕಾರ್ಯದಲ್ಲಿ ಸಕ್ರಿಯವಾಗಿ ಭಾಗಿಯಾಗಲಿದ್ದಾರೆ‌.

ಧನು ರಾಶಿ :

ಈ ರಾಶಿಯವರಿಗೆ ವಿವಾಹಕ್ಕೆ ಕಾಲ ಕೂಡಿ ಬಂದಿದ್ದು, ಗುರು ಹಿರಿಯರ ನಿಶ್ಚಯದಂತೆ ಆಗಲಿದೆ. ಮಾನಸಿಕ ಸಂತೋಷ ನೆಮ್ಮದಿ ಈ ರಾಶಿಯವರಿಗೆ ಸಿಗಲಿದೆ. ದಾಂಪತ್ಯದಲ್ಲಿ ಕಲಹ, ವಿವಾದಗಳಿದ್ದರೆ ಪ್ರಶಾಂತವಾಗಿ ಸುಖೀ ಜೀವನ ಇರುವುದು. ಹೊಂದಾಣಿಕೆಯ ಮನೋಭಾವ ಬರಲಿದೆ.

ಕುಂಭ ರಾಶಿ :

ವಿದ್ಯಾಭ್ಯಾಸಕ್ಕೆ ಉತ್ತಮ‌ ಅವಕಾಶ ಹಾಗೂ ಅಭ್ಯಾಸದಲ್ಲಿ ಪ್ರಗತಿಯನ್ನು ಈ ರಾಶಿಯವರು ಕಾಣುವರು. ಪ್ರತಿಭೆಯ ಅನಾವರಣಕ್ಕೆ ಅವಕಾಶ ಲಭ್ಯ. ವಿವಾಹಿತರಿಗೆ ಸಂತತಿಯ ಸಂತೋಷದಿಂದ ಬೀಗಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿದ್ದರೆ ಒಳ್ಳೆಯ ಫಲಿತಾಂಶವನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ: ಆತ್ಮವಿಶ್ವಾಸದಿಂದ ನೀವು ದಿನವನ್ನು ಸುಗಮವಾಗಿ ಕಳೆಯುತ್ತೀರಿ

ಗುರುವು ಜಾತಕದಲ್ಲಿ ಶುಭಸ್ಥಾನದಲ್ಲಿ ಇದ್ದು, ಈಗ ಗುರು ದಶೆಯೂ ನಡೆಯುತ್ತಿದ್ದರೆ ಅಂತಹ ಈ ರಾಶಿಯವರಿಗೆ ಅತ್ಯಂತ ಸಂತೋಷದ ವರ್ಷವಾಗಲಿದೆ. ಉಳಿದ ರಾಶಿಯವರು ಇದ್ದುದರಲ್ಲಿ ಸಮಾಧಾನ ಮಾಡಿಕೊಳ್ಳಬೇಕು. ಅಶುಭ ಫಲವನ್ನು ಅನುಭವಿಸುತ್ತಿದ್ದರೆ, ಗುರು ಚರಿತ್ರೆ, ಗುರುಸೇವೆ, ಗುರುಪೂಜೆಯನ್ನು ಮಾಡಿ. ಮಹಾವಿಷ್ಣುವಿನ ಆರಾಧನೆಯೂ ಉತ್ತಮ. ಕಡಲೆ ದಾನ ಮಾಡಿ. ಆಗಾಗ ಅತಿಥಿ ಸತ್ಕಾರವನ್ನು ಮಾಡಿ. ಗೋಪೂಜೆ ಇಂತಹ ಯಾವುದೆರ ಕರ್ಮವನ್ನು ಮಾಡಿದರೂ ಸರಿಯಾದ ಸಂಕಲ್ಪದ ಜೊತೆ ಮಾಡಿ. ಸುಮ್ಮನೆ ಮಾಡುವುದರಿಂದ ನಿಮಗೆ ಸಿಗಬೇಕಾದ ಫಲ ಸಿಗದು.

– ಲೋಹಿತ ಹೆಬ್ಬಾರ್ – 8762924271

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:55 am, Tue, 13 May 25

ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?
ಈಶ್ವರಪ್ಪರ ಪ್ರಕಾರ ಅಲ್ಪಸಂಖ್ಯಾತರು ಅನ್ನೋದು ಕೂಡ ಒಂದು ಧರ್ಮ!
ಈಶ್ವರಪ್ಪರ ಪ್ರಕಾರ ಅಲ್ಪಸಂಖ್ಯಾತರು ಅನ್ನೋದು ಕೂಡ ಒಂದು ಧರ್ಮ!
ತಾಯಿಗೆ ಹೊಡೆಯುವಾಗ ತಂದೆಗೆ ಕೈಮುಗಿದು ಬೇಡಿದ ಮಗಳು
ತಾಯಿಗೆ ಹೊಡೆಯುವಾಗ ತಂದೆಗೆ ಕೈಮುಗಿದು ಬೇಡಿದ ಮಗಳು