AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 01 November: ಕರ್ನಾಟಕ ರಾಜ್ಯೋತ್ಸವದಂದು ಯಾವೆಲ್ಲಾ ರಾಶಿಯವರಿಗೆ ಶುಭದಿನ ತಿಳಿಯಿರಿ

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸ ಶುಕ್ಲ ಪಕ್ಷದ ಏಕಾದಶೀ ತಿಥಿ ಶನಿವಾರ ಅಧಿಕ ಕಾರ್ಯ, ಪ್ರತಿನಿಧಿಯಾಗಿ ಭಾಗ, ಸೋಲಿಗೆ ಸಂತಾಪ, ಕಾರ್ಯದ ಮಾರ್ಗ ಬದಲಾವಣೆ, ಆತ್ಮಾವಲೋಕನ, ಕುಟುಂಬ ಪ್ರೀತಿ, ಉದ್ಯಮದಲ್ಲಿ ಲಾಭ, ಇವೆಲ್ಲ ಇಂದಿನ ಭವಿಷ್ಯ.

Horoscope Today 01 November: ಕರ್ನಾಟಕ ರಾಜ್ಯೋತ್ಸವದಂದು ಯಾವೆಲ್ಲಾ ರಾಶಿಯವರಿಗೆ ಶುಭದಿನ ತಿಳಿಯಿರಿ
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ|

Updated on: Nov 01, 2025 | 12:02 AM

Share

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಚಿತ್ರಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ಗಂಡ, ಕರಣ : ಕೌಲವ, ಸೂರ್ಯೋದಯ – 06 – 14 am, ಸೂರ್ಯಾಸ್ತ – 05 – 51 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:09 – 10:36, ಗುಳಿಕ ಕಾಲ 06:14 – 07:42 ಯಮಗಂಡ ಕಾಲ 13:30 – 14:57.

ಮೇಷ ರಾಶಿ: ನಿಮಗೆ ಪರರ ಆಸ್ತಿಯನ್ನು ನೋಡಿಕೊಂಡು ಜೀವಿಸುವ ಸ್ಥಿತಿ ಬರಬಹುದು. ಮಾತಿನಿಂದ ಗೆಲ್ಲುವುದು ಕಷ್ಟವಾದೀತು. ಕಾನೂನಿಗೆ ಯೋಗ್ಯವಾದ ದಾರಿಯಲ್ಲಿ ಸಂಪಾದನೆಯನ್ನು ಆಲೋಚಿಸಿ. ಮನಸ್ಸು ಬಿಚ್ಚಿ ಇಂದು ನೀವು ಯಾವ ಕಾರ್ಯವನ್ನೂ ಮಾಡುವುದಿಲ್ಲ. ಎಲ್ಲದಕ್ಕೂ ನಿಮ್ಮೊಳಗೆ ಭಯವಿರುವುದು. ಅತಿಯಾದ ಸುಖವು ನಿಮ್ಮ‌ ಕ್ರಿಯಾತ್ಮಕತೆಯನ್ನು ಕೊಲ್ಲುವುದು. ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವುದು ನಿಮ್ಮ ಸ್ವಭಾವವಗಳಲ್ಲಿ ಒಂದು. ಆಯುಧವನ್ನು ಬಹಳ ಜಾಗರೂಕತೆಯಿಂದ ಬಳಸಿ. ವಾಹನದ ಖರೀದಿಯನ್ನು ಮಾಡಬೇಕಾಗಿ ಬಂದಿರುವುದುರಿಂದ ಅನಿವಾರ್ಯವಾಗಿ ಸಾಲವನ್ನು ಮಾಡುವಿರಿ. ಇಂದು ಮನೆಯ ಕೆಲಸಗಳು ಪರ್ವತಾಕಾರದಲ್ಲಿ ಹಾಗೆಯೇ ಇರುವುದು. ಆಯಾಸದ ಕಾರಣ ಅಲ್ಪ ವಿಶ್ರಾಂತಿ ಬೇಕಾಗುವುದು. ನಿಮ್ಮವರಾದರೂ ಅವರನ್ನು ಅಧೀನದಲ್ಲಿ ಇಟ್ಟುಕೊಳ್ಳಲಾಗದು. ಸಂಗಾತಿಯ ಮೇಲೆ ನಿಮಗೆ ಅನುಮಾನ ಹೊಗೆ ಕಾಣಿಸಬಹುದು. ಪ್ರೇಮವು ಕೌತುಕರಹಿತವಾದ ಕಾರಣ ಮುರಿದು ಹೋಗುವ ಸಾಧ್ಯತೆ ಇದೆ.

ವೃಷಭ ರಾಶಿ: ಪ್ರಿಯವಾದವರಿಗೆ ಕೊಟ್ಟ ಭರವಸೆಯನ್ನು ಈಡೇರಿಸುವಿರಿ. ನಿಮಗೆ ಆಗದವರಿಂದಲೇ ಸಹಕಾರವನ್ನು ಪಡೆಯಬೇಕಾಗಬಹುದು. ಕೆಲವು ಪ್ರತಿನಿಧಿಗಳಿಂದ ನಿಮಗೆ ಮಾನಸಿಕ ತೊಂದರೆಯಾಗಲಿದೆ. ಸಹೋದರರ ಶೀತಲ ಸಮರವು ಇಂದು ಎಲ್ಲರಿಗೂ ತಿಳಿಯಬಹುದು. ವ್ಯಾಪಾರವನ್ನು ನಿರ್ಲಕ್ಷ್ಯದಿಂದ ನಷ್ಟ ಮಾಡಿಕೊಳ್ಳುವಿರಿ. ಬಂಧುಗಳ ಮನೆಯಲ್ಲಿ ವಾಸಮಾಡಬೇಕಾದ ಸ್ಥಿತಿಯು ಬರಬಹುದು. ರಾಜಕೀಯದ ಹೊಡೆತದ ನೋವು ಬಾಧಿಸುವುದು. ಒಟ್ಟಾಗಿ ಇದ್ದಷ್ಟೂ ನಿಮಗೇ ಲಾಭ. ಅಲ್ಪ ಆದಾಯಕ್ಕೆ ತೃಪ್ತಿಪಡಬೇಕಾಗುವುದು. ಇಂದು ಖುಷಿಯಿಂದ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ದಾಂಪತ್ಯವು ಆನಂದದಿಂದ ಇರಲು ಒಂದು ಕಡೆಯಿಂದ ಮಾತ್ರ ಸಹಕಾರ ಸಾಲದು. ಅಕ್ಷಮ್ಯ ತಪ್ಪಿಗೂ ಕ್ಷಮೆಯನ್ನು ನೀಡಿ ದೊಡ್ಡವರಾಗುವಿರಿ. ಹೊಗಳಿಕೆಯಿಂದ ನಿಮ್ಮ ದುಃಖಕ್ಕೆ ವಿರಾಮ ಸಿಗುವುದು. ನಿಮ್ಮನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು. ಉದಗವೇಗಕ್ಕೆ ಒಳಗಾಗದೇ ಇರಲು ನೀವು ಪ್ರಯತ್ನಿಸುವಿರಿ.

ಮಿಥುನ ರಾಶಿ: ಬುದ್ಧಿವಾದಗಳು ನಿಮಗೆ ಇಂದು ಕಹಿಯಾಗುವುದು. ಕಾರ್ಯವನ್ನು ನೋಡಿಕೊಂಡು ಬೇರೆಯವರಿಗೆ ಸಮಯವನ್ನು ಕೊಡಿ. ನೀವು ಇಂದು ಆಡಿದ ದುಡುಕಿನ ಮಾತಿನಿಂದ ನಿಮ್ಮ ನೆಮ್ಮದಿ ಕೆಡುವುದು. ವಿದ್ಯಾಭ್ಯಾಸದಲ್ಲಿ ಒಂದು ಮಟ್ಟಿನ ಪ್ರಗತಿಯು ಇರಲಿದೆ. ಹಣದ ಹೊಂದಾಣಿಕೆಯು ಇಂದು ಕಷ್ಟವಾಗಬಹುದು. ವ್ಯಾವಹಾರಿಕ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ಕೃಷಿ‌ಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹೆಚ್ಚು ಮಾಡುವಿರಿ. ಮಾಧ್ಯಮದಲ್ಲಿ‌ ಮಿತ್ರತ್ವದಲ್ಲಿ ಭಿನ್ನತೆ ಬರಲಿದೆ. ನಿಮಗೆ ಸಂಬಂಧಿಸಿದ ಕಾರ್ಯವನ್ನಷ್ಟೇ ಮಾಡಿ. ಎಲ್ಲವು ಸರಿ ಇದ್ದರೂ ತಪ್ಪನ್ನು ಹುಡುಕುವವರು ಇರುತ್ತಾರೆ. ಇಂದಿನ ಕೆಲವು ಸಂದರ್ಭವನ್ನು ನೀವು ನಿಭಾಯಿಸಲು ಕಷ್ಟವಾದೀತು. ಅತಿಯಾದ ಕೋಪವು ನಿಮ್ಮ ದಿನವನ್ನು ಕೆಡಿಸುವುದು. ವಾಹನವನ್ನು ಬಹಳ ಎಚ್ಚರಿಕೆಯಿಂದ ಚಲಾಯಿಸಿ. ಬಹಳ ದಿಮಗಳ ಅನಂತರ ನಿಮ್ಮ ಮನಸ್ಸು ಎಲ್ಲಿಲ್ಲದ ಉತ್ಸಾಹದಲ್ಲಿ ಇರುವುದು.

ಕರ್ಕಾಟಕ ರಾಶಿ: ಉಪಕಾರವನ್ನು ಪಡೆದೂ ಪಡೆಯದೇ ಇರುವಂತೆ ತೋರಿಸುವುದು ಅಪಕೀರ್ತಿಗೆ ಕಾರಣ. ಮಾತುಗಾರರಿಗೆ ಒಳ್ಳೆಯ ಅವಕಾಶಗಳು ಲಭ್ಯವಾಗುವುದು. ನಿಮ್ಮ ಬದಲಾವಣೆಯನ್ನು ಕುಟುಂಬವು ಸ್ವೀಕರಿಸುವುದು ಕಷ್ಟ. ಬಂಧುಗಳ ಸ್ಥಿರಾಸ್ತಿಯ ಖರೀದಿಯನ್ನು ಮಾಡಲಿದ್ದೀರಿ. ಆರಂಭಿಸಿದ ಕಾರ್ಯವು ಪೂರ್ಣ ಸಫಲವಾಗುವವರೆಗೂ ನೀವು ನಿಲ್ಲಿಸುವುದಿಲ್ಲ. ನಿಮ್ಮ ಗಾಂಭಿರ್ಯವು ನಿಮ್ಮರಿಗೆ ಭಯವನ್ನು ತರಿಸುವುದು. ಮಾತು ಬಲ್ಲವರನ್ನು ಸೋಲಿಸಿ ಆನಂದಿಸುವಿರಿ. ಆಸ್ತಿಗೆ ಸಂಬಂಧಪಟ್ಟ ಹಳೆಯ ದಾಖಲೆಗಳನ್ನು ನೀವು ಪರಿಶೀಲಿಸುವಿರಿ. ಕೆಲವರ ಸಲಹೆಗಳು ನಿಮ್ಮ ಮನಸ್ಸಿಗೆ ಹೊಡಿಸದೇ ಇರಬಹುದು. ಇಂದಿನ‌ ನಿಮ್ಮ‌ ಕೆಲಸಗಳು ಮಂದಗತಿಯಲ್ಲಿ ಸಾಗುವುದು. ಯಾರ ಮಾತನ್ನೂ ಕೇಳುವ ಮನಃಸ್ಥಿತಿಯು ನಿಮ್ಮದಾಗಿ ಇರುವುದಿಲ್ಲ. ಯಾವುದನ್ನೂ ಆಗದು ಎಂಬ ಮಾತು ನಿಮ್ಮಿಂದ ಬರುವುದು ಬೇಡ. ಒಳ್ಳೆಯದರ ನಿರೀಕ್ಷೆಯಿಂದ ನಿಮಗೆ ಸಂತೋಷವಿದೆ. ನೀವು ಗೌಪ್ಯವಾಗಿ ಮಾಡುವ ಧನಸಂಪಾದನೆಯು ವ್ಯಕ್ತವಾಗಬಹುದು.

ಸಿಂಹ ರಾಶಿ: ಸಾಕಾಷ್ಟು ಹಣವಿದ್ದೂ ಭೂಮಿಯನ್ನು ಪಡೆಯಲಾಗದೇ ಇರುವುದು ಕಾಲ ಬರಲಿಲ್ಲ ಎಂಬುದನ್ನು ತೋರಿಸುತ್ತದೆ. ಎಂದೇ ಆದ ಪರಿಚಯದಿಂದ ನಿಮಗೆ ಸಹಾಯವಾಗಲಿದೆ. ವ್ಯವಹಾರವನ್ನು ತೂಗಿಸಿಕೊಂಡು ಹೋಗುವ ತಂತ್ರಗಳನ್ನು ಅರಿಯುವುದು ಉತ್ತಮ. ಉದ್ಯೋಗದ ನಿಮಿತ್ತ ಹೆಚ್ಚು ತಿರುಗಾಟವು ಆಗಲಿದೆ. ಸಂಗಾತಿಯ ಮಾತುಗಳು ನಿಮ್ಮ‌ ಸ್ವಾಭಿಮಾನಕ್ಕೆ ತೊಂದರೆಯನ್ನು ಉಂಟುಮಾಡುವುದು. ನೀವು ಅಪಮಾನವನ್ನೂ ಸಹಿಸಿಕೊಂಡು ಕೆಲಸದಲ್ಲಿ ಮಗ್ನರಾಗುವಿರಿ. ತಿರುಗೇಟು ನೀಡಲು ನೀವಾಗಿಯೇ ಪ್ರಯತ್ನ ಪಡುವುದು ಬೇಡ. ನಿಮ್ಮ ಶ್ರೇಯಸ್ಸನಲ್ಲಿ ಬಂಧುಗಳ‌ ಪಾತ್ರವು ಬಹಳ ಇರಲಿದೆ. ಸಾಮಾಜಿಕವಾಗಿ ಉತ್ತಮ‌ ಬಾಂಧವ್ಯವು ಇರಲಿದೆ‌. ನಿಮ್ಮ ಆಸಕ್ತಿಯ‌ ವಿಚಾರವು ಬದಲಾಗುವುದು. ನಿಮ್ಮ ವ್ಯಾಕುಲತೆಯನ್ನು ಒಳಗೇ ಬಂಧಿಸಿಟ್ಟುಕೊಳ್ಳುವಿರಿ. ನಿಮ್ಮ ಸ್ವಭಾವವು ದುರುಪಯೋಗ ಆಗುವುದು. ಕೃಷಿಯಲ್ಲಿ ಸಾಧಿಸಿದ ಖುಷಿ ಇರಲಿದೆ. ಅಕಾರಣವಾಗಿ ದುಃಖದ ಸನ್ನಿವೇಶಗಳು ಎದುರಾಗಬಹುದು. ಮನಸ್ಸಿಗೆ ಹಿಡಿಸಿದ ಕೆಲಸವನ್ನೇ ಪ್ರೀತಿಯಿಂದ ಮಾಡುವಿರಿ.

ಕನ್ಯಾ ರಾಶಿ: ಕಾಲೆಡುವುದು ನಡೆಯುವುದರ ಸಂಕೇತ. ಎಡವುತ್ತಿದ್ದರೆ ಓಡುವುದಕ್ಕೆ ತಯಾರಿ ಎಂದರ್ಥ. ಪುಣ್ಯ ಕರ್ಮಗಳು ನಿಮಗೆ ಫಲವನ್ನು ಕೊಡಲಿವೆ. ವಿಶ್ವಾಸವನ್ನು ಗಳಿಸದೇ ನೀವು ವ್ಯವಹಾರದಲ್ಲಿ ಯಶಸ್ಸು ಸಾಧ್ಯವಾಗದು. ಆರ್ಥಿಕತೆಯನ್ನು ನೀವು ಬಲಗೊಳಿಸಿಕೊಳ್ಳುವಿರಿ. ದುರಭ್ಯಾಸದಿಂದ ಧನನಷ್ಟವನ್ನು ಮಾಡಿಕೊಳ್ಳುವಿರಿ. ಮಿತ್ರರಿಂದ ನಿಮಗೆ ಮೋಸವಾಗುವುದು. ವ್ಯಾವಹಾರಿಕ ಸಂಬಂಧಗಳನ್ನು ಹಾಗೆಯೇ ಉಳಿಸಿಕೊಳ್ಳಿ. ಧಾರ್ಮಿಕ ವಿಚಾರದಲ್ಲಿ ನೀವು ಹೆಚ್ಚು ತಿಳಿವಳಿಕೆಯು ಇರಲಿದೆ. ವಿದೇಶವನ್ನು ಸುತ್ತುವ ಮನಸ್ಸಾಗಲಿದೆ. ಸ್ಥಿರಾಸ್ತಿಯನ್ನು ಸ್ವಲ್ಪ ನಷ್ಟಕೊಳ್ಳುವಿರಿ. ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವಿರಿ. ಕೊಟ್ಟ ಸಾಲವನ್ನು ಕೇಳದೇ ಇರುವಷ್ಟು ಒಳ್ಳೆಯರೆಲ್ಲ ಆಗುವುದು ಬೇಡ. ಸಕಾರಾತ್ಮಕ ವಿಚಾರಕ್ಕೆ ನಿಮಗೆ ಪ್ರಶಂಸೆಯು ಸಿಗಬಹುದು. ವಿನ್ಯಾಸಕಾರರಿಗೆ ಇಂದು ಬಿಡುವು ಇರದು. ಸಹೋದ್ಯೋಗಿಯ ಜೊತೆ ಪ್ರೇಮವಾಗುವುದು. ಪೆಟ್ಟು ತಿನ್ನದ ಶಿಲೆಯು ಶಿಲ್ಪವಾಗದು ಎಂಬ ಮಾತು ನೆನಪಿರಲಿ.

ತುಲಾ ರಾಶಿ: ದೂರದೃಷ್ಟಿಯ ಕೊರತೆಯಿಂದಾಗಿ ಯೋಜನೆಯ ಒಟ್ಟು ಸ್ವರೂಪವನ್ನು ಅರ್ಥಮಾಡಿಕೊಳ್ಳಲಾರಿರಿ. ನಿಮ್ಮ ದ್ವಂದ್ವಗಳಿಗೆ ಕೂಡಲೇ ಪರಿಹಾರ ಸಿಗುತ್ತದೆ. ಆದೇ ಅದನ್ನು ಕಾಣುವ ದೃಷ್ಟಿ ಬೇಕು. ಇಂದು ನಿಮ್ಮ ಮನಸ್ಸನ್ನು ಒಂದೇ ಕಾರ್ಯದಲ್ಲಿ ನಿಲ್ಲಿಸಲಾಗದು. ನಾಜೂಕಾದ ಕಾರ್ಯಗಳಿಗೆ ನಿಮಗೆ ಪ್ರಶಂಸೆಯೂ ಅಪಹಾಸ್ಯವೂ ಸಿಗಲಿದೆ. ಕೋಪದಿಂದ ನಿಮ್ಮ‌ ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ಕುಟುಂಬದ ಕಲಹಕ್ಕೆ ಹೆದರಿ ಹೊಸ ಜೀವನವನ್ನು ನಡೆಸಲು ಇಚ್ಛಿಸುವಿರಿ. ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಗುವುದು. ವ್ಯಾವಹಾರಿಕ ಸತ್ಯವನ್ನು ಅಧಿಕಾರಿಗಳಿಗೆ ತಿಳಿಸಿ ವಿಚಾರಣೆಗೆ ಸಹಕರಿಸಿ. ಖರ್ಚಿನ ಬಗ್ಗೆ ಸರಿಯಾದ ಚಿತ್ರಣವಿರಲಿ.‌ ನಿಮ್ಮ ವಸ್ತುಗಳು ಕಾಣಿದಸದೇ ಉದ್ವೇಗಕ್ಕೆ ಸಿಕ್ಕಿಕೊಳ್ಳುವಿರಿ. ಎಲ್ಲವೂ ನಿಮಗೆ ದುರದೃಷ್ಟದಂತೆ ತೋರುವುದು. ಸ್ನೇಹಿತರ ನೋವಿಗೆ ಸ್ಪಂದಿಸಿದೇ ಇರಲು ಆಗದು. ನಿಮ್ಮ ಅಭಿರುಚಿಗೆ ಪ್ರೋತ್ಸಾಹವು ಸಿಗಲಿದೆ. ಅದಕ್ಕೆ ಇಂದು ಪಶ್ಚಾತ್ತಾಪವನ್ನು ಅನುಭವಿಸುವಿರಿ. ಉದ್ಯಮದಲ್ಲಿ ನಿಮಗೆ ಆಗದವರನ್ನು ಕೈ ಬಿಡುವಿರಿ.

ವೃಶ್ಚಿಕ ರಾಶಿ: ನಿಮ್ಮದಲ್ಲದ ವಸ್ತುವನ್ನು ನಿಮ್ಮದೆಂದೇ ವಾದಿಸುವಿರಿ. ಭೂ ವ್ಯವಹಾರದಲ್ಲಿ ಒಬ್ಬರಿಗೂ ಹೊಂದಾಣಿಕೆ ಆಗದೇ ತಪ್ಪು ಹೋಗಬಹುದು. ಸಭ್ಯತೆಯನ್ನು ನೀವು ಉಳಿಸಿಕೊಳ್ಳುವುದು ಕಷ್ಟ. ಜಾಣ್ಮೆಯಿಂದ ಮಾಡುವ ಸರ್ಕಾರದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಸ್ವಂತ ವಾಹನದ ದುರಸ್ತಿಯ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಬರುವ ಅಡೆತಡೆಗಳನ್ನು ನೀವು ಧೈರ್ಯವಾಗಿ ಎದುರಿಸುವಿರಿ. ಕೆಲವನ್ನು ಉದ್ವಿಗ್ನತೆಯಿಂದ ಮಾಡುವಿರಿ. ಒಂದೇ ವಿಚಾರವನ್ನು ಮತ್ತೆ ಹೇಳಿ ಹಿಂಸಿಸುವುದು ಬೇಡ. ಮನೆಯವರ ಸಂತೋಷದಲ್ಲಿ ಪಾಲ್ಗೊಳ್ಳಲಾಗದು. ನಿಮ್ಮ‌ ಕನಸನ್ನು ಸಾಕಾರಗೊಳಿಕೊಳ್ಳುವತ್ತ ನಿಮ್ಮ ಆಲೋಚನೆಯು ಇರಲಿದೆ. ಪ್ರೇಮ‌ಸಂಬಂಧವು ಸಡಿಲವಾಗಬಹುದು. ಯಾರಿಗಾದರೂ ನಿಮ್ಮ ಯೋಗ್ಯತೆಗೆ ಅನುಸಾರವಾಗಿ ಧನ ಸಹಾಯವನ್ನು ಮಾಡುವಿರಿ. ತಾನು ಕಂಡಿದ್ದು ಮಾತ್ರ ಸರಿ ಎಂಬ ವಾದವು ನಿಮ್ಮವರಿಗೆ ಬೇಸರ ತರಿಸೀತು. ದಾಂಪತ್ಯದಲ್ಲಿ ಉಂಟಾದ ಕಲಹವು ಮಕ್ಕಳ‌ ಮೇಲೆ ಪ್ರಭಾವವನ್ನು ಬೀರುವುದು.

ಧನು ರಾಶಿ: ಮುರಿದ ವಿವಾಹ ಸಂಬಂಧವನ್ನು ಜೋಡಿಸುವ ಕೆಲಸ ಮಾಡುವಿರಿ. ಯಾವ ಗಾಯವೇ ಆದರೂ ಆರಲು ದಿನ ಬೇಕು. ಅದನ್ನು ಕೆರಳಿಸಲು ಹೋಗುವುದು ಬೇಡ. ಈಗ ಮಾಡುತ್ತಿರುವ ಉದ್ಯೋಗದಲ್ಲಿ ನಿಮಗೆ ಪೂರ್ಣ ತೃಪ್ತಿ ಇರದು. ಆರ್ಥಿಕಸ್ಥಿತಿಯಲ್ಲಿ ಚೇತರಿಕೆ ಇರಲಿದೆ‌. ಮಹಿಳೆಯರಿಗೆ ಹೆಚ್ಚಿನ ಸಹಕಾರವು ಸಿಕ್ಕಿ ಇಂದಿನ‌ ಕಾರ್ಯವು ಅನಾಯಾಸವಾಗಿ ಮುಗಿಯುವುದು. ಉನ್ನತ ಅಧಿಕಾರದ ಆಸೆಯನ್ನು ಆಪ್ತರು ನಿಮ್ಮೊಳಗೆ ತುಂಬುವರು. ಅನಪೇಕ್ಷಿತ ಮಾತುಗಳಿಂದ ನಿಮ್ಮ ಸಮಯವು ವ್ಯರ್ಥವಾಗಬಹುದು. ಇಂದಿನ ನಿಮ್ಮ ಕಾರ್ಯಕೌಶಲಕ್ಕೆ ಬೆರಗಾಗಬಹುದು. ಶಿಕ್ಷೆಯಿಂದ ತಪ್ಪು ತಿದ್ದಿಕೊಳ್ಳುವಿರಿ. ಸಂತೋಷವನ್ನು ಹೆಚ್ಚಿಸಿಕೊಳ್ಳಲು ಆಗದು. ನಿಮ್ಮ ಕನಸುಗಳು ಭಗ್ನವಾಗಬಹುದು. ನಿಮ್ಮ ಮನಸ್ಸು ಹತಾಶೆಯಿಂದ ಇರುವುದು. ನಕಾರಾತ್ಮಕ ಚಿಂತನೆಯನ್ನು ಬಿಟ್ಟು ಯೋಚಿಸುವುದು ಒಳ್ಳೆಯದು. ನಿಮ್ಮ ಭಾವವನ್ನು ಯಾರೂ ಅರ್ಥಮಾಡಿಕೊಳ್ಳಲಾರರು. ನಿಮ್ಮ ಉದ್ದೆಶವು ದಾರಿ ತಪ್ಪುವ ಸಾಧ್ಯತೆ ಇದೆ. ಖುಷಿಪಡುವ ಸಂಗತಿಗಳಿದ್ದರೂ ದುಃಖಿಗಳಾಗುವ ಸಾಧ್ಯತೆ ಇದೆ.

ಮಕರ ರಾಶಿ: ಮನೋರಂಜನೆಗೆ ಹಲವು ದಾರಿಗಳಿರುವುವು. ಪ್ರಯತ್ನಿಸಿದ ಕಾರ್ಯದಲ್ಲಿ ನಿಮಗೆ ಸಮಾಧಾನ ಇರುವುದು. ಅವಕಾಶಗಳನ್ನು ನೀವು ಪರೀಕ್ಷಿಸಿ ಒಪ್ಪಿಕೊಳ್ಳುವಿರಿ. ಊಹಿಸದ ಘಟನೆಗಳು ನಿಮ್ಮ ಜೀವನದಲ್ಲಿ ನಡೆಯಬಹುದು. ಗಣ್ಯರ ಭೇಡಿಯಾಗಲಿದೆ. ಅಧಿಕಾರಿಗಳ ಜೊತೆ ಉದ್ಯೋಗದ ವಿಚಾರವನ್ನು ಚರ್ಚಿಸುವಿರಿ. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಬರುವುದು ನಿಮಗೆ ಕಷ್ಟವಾಗುವುದು. ಸಂಗಾತಿಯಿಂದ ಮಾನಸಿಕ ಒತ್ತಡ ಎನಿಸಬಹುದು. ನಿಮ್ಮ‌ನ್ನು ಅರ್ಥಮಾಡಿಕೊಳ್ಳದೇ ನಿಮ್ಮಿಂದ ದೂರಾಗಬಹುದು. ಇಂದು ನಿಮ್ಮ ರೂಪಕ್ಕೆ ಆಕರ್ಷಣೆ ಇರಲಿದೆ. ವಾಹನದ ಓಡಾಟವನ್ನು ನೀವು ನಿಲ್ಲಿಸಿ. ಆಹಾರದ ಸ್ವೀಕಾರದ ಸಮಯವು ವಿಳಂಬವಾಗಬಹುದು. ನೆರೆಹೊರೆಯ ಜೊತೆ ವಾಗ್ವಾದ ನಡೆಯಬಹುದು. ಯಾರನ್ನು ಬೆರಳು ಮಾಡಿ ತೋರಿಸಬೇಡಿ. ನಿಮ್ಮ ಕೊರತೆಯನ್ನು ನೀವು ಮುಚ್ಚಿಡುವಿರಿ. ಬೇರೆಯವರ ತಪ್ಪಿನಿಂದ ನಿಮಗೆ ತೊಂದರೆಗಳು ಆಗಬಹುದು.

ಕುಂಭ ರಾಶಿ: ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಸೂಚನೆ ಬರಲಿದೆ. ಉದ್ಯೋಗಕ್ಕಾಗಿ ದೂರ ತೆರಳುವುದು ನಿಮ್ಮವರಿಗೆ ಇಷ್ಟವಾಗದು. ಸುಮ್ಮನೆ ಮನೆಯಿಂದ ಎಲ್ಲಿಗಾದರೂ ಹೋಗುವಿರಿ. ನಿಮ್ಮ ಸ್ಥಿತಿಯನ್ನು ಕೆಲವರು ಆಡಿಕೊಂಡಾರು. ನಿಮ್ಮದಾದ ವಸ್ತುವನ್ನು ನೀವು ಪಡೆಯಲು ಕಷ್ಟವಾಗುವುದು. ದೇವತಾಕಾರ್ಯದಲ್ಲಿ ಆಸಕ್ತಿ ಕಡಿಮೆ ಇದ್ದರೂ ಅನವಾರ್ಯವಾಗುವುದು. ಆರ್ಥಿಕತೆಯ ಬಗ್ಗೆ ನಿಮ್ಮನ್ನು ಯಾರಾದರೂ ಪ್ರಶ್ನಿಸಬಹುದು. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಮಾಹಿತಿ ಇರಲಿ. ಹಳೆಯ ನೆನಪುಗಳನ್ನು ನಿಮ್ಮನ್ನು ಕಾಡಬಹುದು. ಗಾಯವನ್ನು ಕೆರೆದು ಹುಣ್ಣು ಮಾಡಿಕೊಳ್ಳುವಿರಿ. ಇಂದಿನ ಪ್ರಯಾಣವು ಬಹಳ ಕಷ್ಟಕರ ಎನಿಸಬಹುದು. ದಾಂಪತ್ಯಕ್ಕೆ ಹೆಚ್ಚಿನ ಸಮಯವನ್ನು ಕೊಡುವಿರಿ. ಪುಣ್ಯ ಸ್ಥಳಗಳ ಬಗ್ಗೆ ಮಾಹಿತಿಯು ಸಿಗುವುದು. ಸಾಲದ ಮುಕ್ತಾಯವು ಕಷ್ಟವಾಗಬಹುದು. ಯಾವುದಾದರೂ ಘಟನೆಯು ನಿಮ್ಮನ್ನು ಇಂದು ಹೆಚ್ಚು ಕಾಡಬಹುದು. ತಾಯಿಯಿಂದ ನಿಮಗೆ ಏನಾದರೂ ಉಡುಗೊರೆಯಾಗಿ ಸಿಗಬಹುದು.

ಮೀನ ರಾಶಿ: ಸುತ್ತಲೂ ವಿರೋಧಿಗಳಿರುವಾಗ ನಿಮ್ಮ ಅಸ್ತಿತ್ವವನ್ನು ಸ್ಥಾಪಿಸಲಾಗದು. ಇಂದು ನಿಮ್ಮನ್ನು ಭೇಟಿಯಾಗಲು ಬಂದವರನ್ನು ಅಗೌರವದಿಂದ ಕಾಣುವುದು ಬೇಡ. ತಾಳ್ಮೆಯಿಂದ ಕೆಲಸಗಳನ್ನು ಪೂರ್ಣ ಮಾಡಿ ನೀವು ಯಶಸ್ವಿಯಾಗುವಿರಿ. ಶುಭಾಶುಭಗಳಿಗೆ ಎಲ್ಲದಕ್ಕೂ ಕಾರಣವು ಇರಲಿದೆ. ಅನಾಯಾಸವಾಗಿ ಸಿಕ್ಕ ಅವಕಾಶಗಳು ನಿಮಗೆ ಇಷ್ಟವಾಗದು. ಯಾರ ಪ್ರಭಾವವನ್ನೂ ನೀವು ಬಳಸಿಕೊಳ್ಳಲು ಇಷ್ಟಪಡುವುದಿಲ್ಲ. ಕಲಹಸಂಧಾನದ ಮಧ್ಯಸ್ತಿಕೆಯನ್ನು ನೀವೇ ವಹಿಸುವಿರಿ. ನಿಮ್ಮ ಕಾರ್ಯದ ಮೇಲೆ ನಿಮಗೆ ಗಮನವು ಕಡಿಮೆ ಆಗಬಹುದು. ನಿಮ್ಮ ವಿರುದ್ಧದ ಮಾತುಗಳಿಗೆ ನೀವು ಸಿಟ್ಟಾಗುವಿರಿ. ನಿಮ್ಮ ಉತ್ಸಾಹವು ಮಿತಿ ಮೀರುವುದು ಬೇಡ. ಕಳೆದುಕೊಂಡಿದ್ದನ್ನು ಪುನಃ ಪಡೆದುಕೊಳ್ಳುವಿರಿ. ಉದ್ಯೋಗದ ದೃಢತೆಯನ್ನು ನೀವು ಸಾಬೀತುಮಾಡಿಸಿಕೊಳ್ಳುವಿರಿ. ಸುಳ್ಳಾಡುವವರ ಮೇಲೆ ಅತಿಯಾದ ಕೋಪ ತೋರಿಸುವಿರಿ. ನಿಮ್ಮ ಯೋಜನೆಗಳು ಎಣಿಸಿದಂತೆ ಆಗದೇ ಇರಬಹುದು. ಆದಷ್ಟು ಬೇರೆ ಚಟುವಟಿಕೆಗಳ ಮೂಲಕ ಒತ್ತಡದಿಂದ ಹೊರಬರುವ ಪ್ರಯತ್ನಮಾಡುವಿರಿ.

ಲೋಹಿತ ಹೆಬ್ಬಾರ್ – 8762924271 (what’s app only)