Horoscope Today 02 November: ಇಂದು ಈ ರಾಶಿಯವರ ಮಾರ್ಗದರ್ಶನಕ್ಕೆ ಫಲ ಲಭ್ಯ, ಸಂತಸ
ದಿನ ಭವಿಷ್ಯ: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸ, ಶುಕ್ಲ ಪಕ್ಷದ ದ್ವಾದಶೀ ತಿಥಿ, ಭಾನುವಾರ. ಸ್ಪರ್ಧೆಯಲ್ಲಿ ಪೈಪೋಟಿ, ದುರ್ಬಲದ ಅರಿವು, ಎಲ್ಲರ ವಿಮರ್ಶೆ, ಅನಿರೀಕ್ಷಿತ ತಿರುಗಾಟ, ಮಾತಿನಲ್ಲಿ ದೋಷ, ದೇಹದಂಡನೆ, ಅನಾರೋಗ್ಯ ಇವೆಲ್ಲ ಇಂದಿನ ಭವಿಷ್ಯ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಸ್ವಾತಿ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ವ್ಯಾಘಾತ, ಕರಣ : ಗರಜ, ಸೂರ್ಯೋದಯ – 06 – 14 am, ಸೂರ್ಯಾಸ್ತ – 05 – 51 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:24 – 17:51, ಗುಳಿಕ ಕಾಲ 14:57 – 13:30 ಯಮಗಂಡ ಕಾಲ 12:03 – 13:30.
ಮೇಷ ರಾಶಿ: ನಿಮ್ಮ ದುರ್ಬಲ ಕೇಂದ್ರಗಳನ್ನು ಜೊತೆಗಾರರು ಕಂಡುಕೊಳ್ಳುವರು. ನಿಮ್ಮ ಹೆಚ್ಚುಗಾರಿಕೆಯನ್ನು ಸಹಿಸಿಕೊಳ್ಳಲಾಗದು. ಮಕ್ಕಳ ವರ್ತನೆಗಳು ನಿಮಗೆ ಕಷ್ಟಕೊಡಬಹುದು. ಅನಿವಾರ್ಯ ಕಾರಣದಿಂದ ನಿಮಗೆ ಅಧಿಕಾರ ಲಾಭವಾಗಬಹುದು. ಉದ್ಯೋಗದಲ್ಲಿ ಒತ್ತಡದಿಂದ ಕೆಲವು ಸಮಸ್ಯೆಗಳು ಆಗಬಹುದು. ಜವಾಬ್ದಾರಿಗಳು ನಿಮ್ಮನ್ನು ಕಟ್ಟಿಹಾಕಬಹುದು. ವ್ಯಾಪಾರದಲ್ಲಿ ಲಾಭದ ಅಂಶವು ಕಡಿಮೆ ಇರಬಹುದು. ಸಮಯವನ್ನು ನಿರ್ಧರಿಸಿಕೊಂಡು ಕೆಲಸವನ್ನು ಆರಂಭಿಸಿದರೆ ಸಕಾಲಕ್ಕೆ ಎಲ್ಲವೂ ಮುಗಿಯಲಿದೆ. ಆಸಕ್ತಿಯು ಇಲ್ಲದಿದ್ದರೂ ಕೆಲಸವನ್ನು ನೀವು ಆರಂಭಿಸಿದರೆ ಉಳಿದವರು ಕೈ ಜೋಡಿಸುತ್ತಾರೆ. ಆಪತ್ತಿನಲ್ಲಿ ಇದ್ದರೆ ಸ್ನೇಹಿತರ ಸಹಾಯ ಸಿಗಬಹುದು. ಖರ್ಚಿಗೆ ಇಂದು ಬಹಳ ಆತಂಕಪಡುವಿರಿ. ಭೂಮಿಗೆ ಸಂಬಂಧಿಸಿದ ನಿಮ್ಮ ಕಲಹವು ನ್ಯಾಯಾಲಯಕ್ಕೆ ಹೋಗಬಹುದು. ನಿಮ್ಮ ಬಳಿ ಯಾರಾದರೂ ಕೇಳಿ ಬರಬಹುದು. ಪ್ರೀತಿಯಲ್ಲಿ ನಿಮಗೆ ಸೋಲಾಗಬಹುದು.
ವೃಷಭ ರಾಶಿ: ಸಹೋದ್ಯೋಗಿಗಳ ಮಾತಿಗೆ ಆಕಸ್ಮಿಕವಾಗಿ ರೇಗುವಿರಿ. ನಿಮ್ಮ ಗುರಿಯ ದಿಕ್ಕನ್ನು ತಪ್ಪಿಸಬಹುದು. ನಿಮ್ಮವರ ಪಾಲಿಗೆ ನೀವು ಯಃಕಶ್ಚಿತ್ ನಂತೆ ತೋರುವಿರಿ. ವೃತ್ತಿಯ ಕಾರಣಕ್ಕೆ ನೀವು ವಿದೇಶಪ್ರಯಾಣವನ್ನು ಮಾಡಲಿದ್ದೀರಿ. ಬಂಧುಗಳ ನೋವಿಗೆ ಸ್ಪಂದಿಸುವಿರಿ. ಪ್ರಯಾಣದಿಂದ ನಿಮಗೆ ಆಲಸ್ಯವಿರಲಿದೆ. ನಿಮ್ಮ ಅಪಮಾನವನ್ನು ಸಹಿಸಲಾರಿರಿ. ಕೋಪವನ್ನು ಮಾಡಿಕೊಳ್ಳಲು ನಿಮಗೆ ಕಾರಣವೇ ಬೇಕಾಗದು. ನೌಕರರಿಂದ ನಿಮಗೆ ಎದುರುತ್ತರ ಸಿಗಲಿದೆ. ಉಚಿತವಾಗಿ ಸಿಕ್ಕಿದ್ದಕ್ಕೆ ವಿಮರ್ಶೆ ಬೇಡ. ವಿವೇಚನೆ ಇಲ್ಲದೇ ಆಡಿದ ನಿಮ್ಮ ಮಾತುಗಳು ಕಲಹಕ್ಕೆ ಕಾರಣವಾಗಬಹುದು. ನಿಮ್ಮ ಪ್ರತಿಭೆಯನ್ನು ತೋರಿಸಲು ಇದು ಸೂಕ್ತ ಸಮಯ. ನಿಮ್ಮ ವಸ್ತುವನ್ನು ಇನ್ನೊಬ್ಬರ ಉಪಯೋಗಕ್ಕೆ ದಾನವಾಗಿ ಕೊಡುವಿರಿ. ಇಂದು ಕೆಲಸವನ್ನು ಮುಗಿಸಿ ಆರಾಮಾಗಿ ಇರಬೇಕು ಎಂದು ಅಂದುಕೊಳ್ಳುವಿರಿ. ಸಂಗಾತಿಯನ್ನು ತಮಾಷೆ ಮಾಡಲು ಹೋಗಿ ವೈಮನಸ್ಸು ಉಂಟಾಗಬಹದು. ಎಲ್ಲ ಸಂದರ್ಭಗಳೂ ಆಸ್ವಾದನೀಯವಾಗಿ ಇರುವಂತೆ ಮಾಡುವಿರಿ.
ಮಿಥುನ ರಾಶಿ: ನಿಮಗೆ ಸಿಗಬೇಕಾದ ಹಣವು ನಿನಗೆ ಬೇರೆ ರೀತಿಯಲ್ಲಿ ಬಂದು ಸೇರಲಿದೆ. ವಿರುದ್ಧ ಏನನ್ನೂ ಮಾತನಾಡದೇ ಒಪ್ಪಿಕೊಂಡುಬಿಡಿ. ಸಾಮಾನ್ಯತೆಯೇ ನಿಮಗೆ ಹೆಚ್ಚಿನ ಶ್ರೇಯಸ್ಸನ್ನು ಕೊಡುವುದು. ದೈಹಿಕ ಆರೋಗ್ಯದಲ್ಲಿ ಏರುಪೇರಾಗಬಹುದು. ಉದ್ಯೋಗದ ಸ್ಥಳದಲ್ಲಿ ಪಕ್ಷಪಾತವನ್ನು ಮಾಡಿ ದ್ವೇಷವನ್ನು ಬಿತ್ತುವ ಸಾಧ್ಯತೆ ಇದೆ. ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಗಲಿದೆ. ಆರ್ಥಿಕ ವ್ಯವಹಾರವನ್ನು ನಡೆಸುವಾಗ ನಿಮ್ಮವರೆನಿಸಿಕೊಂಡವರನ್ನು ಕೇಳಿ, ಮುಂದುವರಿಯಿರಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳೇ ಬಹಳ ಇರಲಿದ್ದು ಇನ್ನೊಂದರ ಕುರಿತು ಯೋಚನೆಯು ನಿಮಗೆ ಸಾಧ್ಯವಾಗದು. ಇಂದು ನಿಮ್ಮ ಗೌರವವನ್ನು ಕಂಡು ಕೆಲವು ಮಿತ್ರರೂ ಶತ್ರುಗಳಾದಾರು. ನಿಮ್ಮ ಆಲೋಚನೆಯನ್ನು ಯಾರ ಬಳಿಯೂ ಹೇಳಿಕೊಳ್ಳದೇ ಕಾರ್ಯರೂಪಕ್ಕೆ ತರುವುದು ಒಳ್ಳೆಯದು. ಏಕಾಂತವನ್ನು ಇಂದು ಹೆಚ್ಚು ಇಷ್ಟಪಡುವಿರಿ. ನಿಮ್ಮ ತೂಕ ಎಷ್ಟೇ ಇದ್ದರೂ ಮಾತಿನಲ್ಲಿ ಬರುವಂತೆ ನೋಡಿಕೊಳ್ಳಿ. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು.
ಕರ್ಕಾಟಕ ರಾಶಿ: ಬಿಡುವನ್ನು ಮಾಡಿಕೊಂಡು ಇಷ್ಟ ದೇವರ ದರ್ಶನಕ್ಕೆ ಹೋಗುವಿರಿ. ಅವಶ್ಯಕ ವಸ್ತುಗಳನ್ನು ಜಾಗರೂಕರಾಗಿ ಖರೀದಿ ಮಾಡಿ. ಸಂಸಾರದ ಸೂಕ್ಷ್ಮತೆಗಳು ನಿಮಗೆ ಅರ್ಥವಾಗದು. ನಿಮ್ಮ ಕೆಲಸದಲ್ಲಿ ನಿಮಗೆ ತಪ್ಪು ಕಾಣಿಸಬಹುದು. ಸಮ್ಮಾನವನ್ನು ನೀವು ಇಷ್ಟಪಡುವುದಿಲ್ಲ. ಇನ್ನೊಬ್ಬರ ಕುರಿತಾದ ನಿಮ್ಮ ಕಲ್ಪನೆಗಳು ಸುಳ್ಳಾಗುವುದು. ಮನಸ್ಸಿನ ನಿಯಂತ್ರಣವನ್ನು ಸಾಧಿಸಲು ನಿಮಗೆ ಆಗದು. ಕ್ಷಿಪ್ರ ನಿರ್ಧಾರಗಳನ್ನು ಹೇಳಿದರೆ ನಿಮ್ಮ ಉಸಗಯೋಗ ವೇಗ ಪಡೆಯುವುದು. ನಿಮಗೆ ಸಿಕ್ಕ ಯೋಗ್ಯವಾದ ಸ್ಥಾನವನ್ನು ಅನುಭವಿಸಿ. ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು. ನಿಮ್ಮ ನೌಕರರು ಸರಿಯಾಗಿ ಕೆಲಸ ಮಾಡದೇ ಕೊನೆಗೆ ನಿಮ್ಮ ಮೇಲೇ ಭಾರವು ಬರುವುದು. ನಿಮ್ಮ ಮಾತು ಇನ್ನೊಬ್ಬರಿಗೆ ನೋವುಂಟುಮಾಡುವಂತೆ ಇರಲಿದೆ. ವಿದ್ಯಾಭ್ಯಾಸಕ್ಕೆ ನೀವು ಇಷ್ಟಪಟ್ಟ ವಿಚಾರವೇ ಸಿಗಲಿದೆ. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ಕೋಪವನ್ನು ಬಲವಂತವಾಗಿ ತಡೆಯುವಿರಿ.
ಸಿಂಹ ರಾಶಿ: ಇನ್ನೊಬ್ಬರ ಸಂತೋಷಕ್ಕಾಗಿಯಾದರೂ ನೀವು ಅವರ ಜೊತೆ ಹೋಗಿ, ಅವರು ಹೇಳಿದಂತೆ ನಡೆದುಕೊಳ್ಳುವರು. ಇಂದು ನಗುವವರೆದುರು ಎಡವಿದಂತೆ ಆಗುವುದು. ಮನೆಯ ತುರ್ತು ಕಾರ್ಯಗಳನ್ನು ಮಾಡಲು ಆಗದು. ತಾಯಿಯ ಪ್ರೀತಿಯನ್ನು ಕಳೆದುಕೊಳ್ಳಬೇಕಾದೀತು. ಯಾರನ್ನಾದರೂ ರಕ್ಷಿಸಿ ನೆಮ್ಮದಿ ಪಡೆಯುವಿರಿ. ನಿಮ್ಮ ಆಸೆಯನ್ನು ಪೂರೈಸಲು ಇಂದಿನಿಂದ ಆರಂಭಸುವಿರಿ. ಹೊಸ ಉದ್ಯಮಕ್ಕೆ ಆಪ್ತರ ಹಾಗೂ ಅನುಭವಿಗಳ ಸಲಹೆಯನ್ನು ಪಡೆಯಿರಿ. ದಾಂಪತ್ಯದ ಒಡಕು ಎಲ್ಲರಿಗೂ ಗೊತ್ತಾಗುವ ಮೊದಲೇ ಸರಿ ಮಾಡಿಕೊಳ್ಳಿ. ಎಲ್ಲಿಯೋ ವಸ್ತುವನ್ನು ಇಟ್ಟುಕೊಂಡು ತುಂಬ ಹುಡುಕಾಡುವಿರಿ. ಅದಾಯವು ಹೆಚ್ಚಾಗಲಿದೆ. ಖುಷಿಯನ್ನು ಮನೆಯವರ ಜೊತೆ ಹಂಚಿಕೊಳ್ಳುವಿರಿ. ಕಲಹಕ್ಕೆ ಯಾರಾದರೂ ಬಂದರೆ ಮೌನ ವಹಿಸಿ. ಸಣ್ಣ ಪ್ರಯಾಣವಾದರೂ ಆಯಾಸವಾಗಲಿದೆ. ಮಕ್ಕಳಿಲ್ಲದೇ ಬೇಸರವಾಗಲಿದೆ. ಏಕಾಂಗಿಯಾಗಿ ಇರುವುದು ಕಷ್ಟವಾಗುವುದು. ಅಚಾನಕ್ ತಿರುಗಾಟ ಮಾಡಬೇಕಾಗುವುದು.
ಕನ್ಯಾ ರಾಶಿ: ನೀವೇ ಮಾಡಿದ ತಪ್ಪನ್ನು ನಿಮ್ಮದಲ್ಲವೆಂದೇ ವಾದಿಸಿ, ಸಮರ್ಥಿಸಿಕೊಳ್ಳುವಿರಿ. ನಿಮ್ಮದಾದ ಜಾಗವನ್ನು ಪಡೆಯಲು ಬೇರೆ ರೀತಿಯಲ್ಲಿ ಪ್ರಯತ್ನಿಸುವಿರಿ. ಕೈಗೊಂಡ ಕಾರ್ಯಗಳಲ್ಲಿ ನಿಮಗೆ ಜಯವು ಸಿಗಲಿದೆ. ಪ್ರಾಮಾಣಿಕತೆಗೆ ನಿಮಗೆ ಪ್ರಶಂಸೆಯು ಸಿಗಲಿದೆ. ಯಾರನ್ನೋ ಮೆಚ್ಚಿಸಲು ನೀವು ದೇಹವನ್ನು ದಂಡಿಸಿ ಕೆಲಸ ಮಾಡುವಿರಿ. ಪ್ರಾರಬ್ಧಕರ್ಮವನ್ನು ಪೂರ್ಣಫಲವನ್ನು ಕೊಟ್ಟು ಮುಕ್ತಾಯ ಆಗುವುದು. ಆರ್ಥಿಕತೆಯನ್ನು ಬಲ ಮಾಡಿಕೊಳ್ಳಲು ಉದ್ಯೋಗವನ್ನು ಬದಲಿಸಬೇಕಾದೀತು. ನಿಮ್ಮ ಮಾತುಗಳು ಹಾಸ್ಯದಿಂದ ಕೂಡಿದ್ದು ಎಲ್ಲರೂ ನಗುವರು. ಹಠದ ಸ್ವಭಾವದಿಂದ ನೀವು ಪಡೆದುಕೊಳ್ಳಬಹುದಾದ ಉಪಯೋಗದಿಂದ ವಂಚಿತರಾಗುವಿರಿ. ಕಾರ್ಯದಲ್ಲಿ ನಿರಾಸಕ್ತಿಯು ಇರಲಿದೆ. ಕಾರ್ಯದ ನಡುವೆ ವಿಶ್ರಾಂತಿ ಇರಲಿ. ನಿಮ್ಮವರ ಜೊತೆ ಕಾಲ ಕಳೆಯಲು ಇಷ್ಟವಾಗದು. ನಿಮಗೆ ಆಗದುದನ್ನು ನೇರವಾಗಿ ಹೇಳುವಿರಿ. ವ್ಯಾಪಾರದ ನಷ್ಟವನ್ನು ಹೇಗಾದರೂ ತೂಗಿಸಿಕೊಳ್ಳುವಿರಿ.
ತುಲಾ ರಾಶಿ: ಒಳ್ಳೆಯ ಫಲಿತಾಂಶಕ್ಕೆ ಪೂರ್ವರಂಗವೂ ಹೆಚ್ಚು ಶ್ರಮದಿಂದ ಕೂಡಿರುವುದು. ಅಸಭ್ಯರ ಜೊತೆ ಅವರಂತೆಯೇ ವರ್ತಿಸುವಿರಿ. ನಿಮ್ಮ ಮಾತನಂತೆ ನಡೆಯುತ್ತಿಲ್ಲ ಎಂಬ ಬೇಸರ ಇರುವುದು. ತಾಯಿ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿಕೊಳ್ಳುವುದು. ನಿಮಗೆ ಇಷ್ಟವಾಗದ ಕೆಲಸವನ್ನೇ ಮಾಡಬೇಕಾದ ಸ್ಥಿತಿಯು ಬರಬಹುದು. ಕಾನೂನಾತ್ಮಕವಾಗಿ ನಿಮ್ಮ ಹೋರಾಟವಿರುವುಧು. ಉದ್ಯೋಗವನ್ನು ನಿರೀಕ್ಷಿತ ಹಂತಕ್ಕೆ ಕೊಂಡೊಯ್ಯಲು ಶ್ರಮಿಸುವಿರಿ. ನಿಮ್ಮ ಬಳಿ ಆಗದ ಕಾರ್ಯವನ್ನು ಇನ್ನೊಬ್ಬರು ಮಾಡಿ ಮುಗಿಸುವರು. ಮಕ್ಕಳಿಂದ ನಿಮಗೆ ಉಡುಗೊರೆಯು ಸಿಗಲಿದೆ. ಅಧ್ಯಾತ್ಮದ ಸುಖದ ಕಡೆ ಒಲವು ಹೆಚ್ಚಾಗಲಿದೆ. ಇನ್ನೊಬ್ಬರ ಸಂಕಷ್ಟಕ್ಕೆ ನೀವು ಬಲಿಯಾಗಬಹುದು. ಸಹನೆಯನ್ನು ನೀವು ರೂಢಿಸಿಕೊಳ್ಳುವಿರಿ. ಏಕಾಂಗಿಯಾಗಿ ಪುಣ್ಯಸ್ಥಳಗಳಿಗೆ ಹೋಗುವಿರಿ. ವಿದ್ಯಾರ್ಥಿಗಳು ಬಹಳ ಸೋಮಸರಿಗಳಾಗುವರು. ನಿಮ್ಮನ್ನು ಚುಚ್ಚುವ ಹಾಗೆ ನಿಮ್ಮವರು ಮಾತನಾಡುವರು. ಸಂಗಾತಿಯ ಜೊತೆ ನಿಮಗಾದ ಸುಖ ಹಾಗೂ ದುಃಖವನ್ನು ಹಂಚಿಕೊಳ್ಳುವಿರಿ.
ವೃಶ್ಚಿಕ ರಾಶಿ: ಮಾತಿನಿಂದ ವ್ಯಕ್ತಪಡಿಸಿದ್ದನ್ನು ದೇವರಿಗೆ ಅರ್ಪಿಸುವುದನ್ನು ನೆನಪಿಡಿ. ಸುಕೃತವು ನಿಮ್ಮನ್ನು ಅಪಾಯದಿಂದ ರಕ್ಷಿಸುವುದು. ನಿಮಗೆ ಇಂದು ಅಶಕ್ತರ ಬಗ್ಗೆ ಕರುಣೆ ಹೆಚ್ಚುವುದು. ಉದ್ಯೋಗದಲ್ಲಿ ಒತ್ತಡ ಜೀವನವು ನಿಮಗೆ ಅಭ್ಯಾಸವಾಗಿ ಹೋಗಲಿದೆ. ಬಲವಂತ ವಿಚಾರಕ್ಕೆ ನೀವು ಒಪ್ಪಲಾರಿರಿ. ನಿಮ್ಮ ಕಷ್ಟಗಳಿಗೆ ದೈವದ ಮೊರೆ ಹೋಗುವುದು ಉತ್ತಮ. ಆಸ್ತಿಯನ್ನು ಉಳಿಸಿಕೊಳ್ಳ ಬಹಳ ಶ್ರಮವಹಿಸಬೇಕಾದೀತು. ಅದ್ಭುತವನ್ನು ಸಾಧಿಸಲು ಕೆಲವು ವಿಫಲವಾಗುವುದು. ನಿಮ್ಮ ತಪ್ಪುಗಳಿಗೆ ಸಮಜಾಯಿಷಿ ನೀಡುವುದು ಸರಿಯಾಗದು. ವಿದೇಶದ ಕನಸನ್ನು ನನಸುಮಾಡಿಕೊಳ್ಳಲು ಕಷ್ಟವಾಗುವುದು. ನಿಮ್ಮ ಒಂದು ತಪ್ಪಿಗೆ ನಿಮ್ಮ ವೃತ್ತಿಯ ಸಿಬ್ಬಂದಿಗಳು ಕಷ್ಟಪಡಬೇಕಾದೀತು. ಎಲ್ಲವನ್ನೂ ಸರಳವಾಗಿ ಸ್ವೀರಿಸುವ ಮನೋಭಾವದಲ್ಲಿನಿರಲಿದೆ. ನಿಮ್ಮ ದೃಷ್ಟಿ ನೇರವಾಗಿ ಇರಲಿ, ಕಿವಿಯ ಕಡೆ ಗಮನಬೇಡ. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು. ವಿದೇಶದ ಉತ್ಪನ್ನಗಳು ನಿಮ್ಮ ಕೈಸೇರಬಹುದು.
ಧನು ರಾಶಿ: ಆತುರಾತುರದಲ್ಲಿ ಇಂದು ನಿಮ್ಮ ತಯಾರಿ ಮಾಡಿಕೊಳ್ಳುವಿರಿ. ನಿಮ್ಮ ಕೋಪವು ದೀರ್ಘಕಾಲದ ವರೆಗೆ ಇರುವುದು. ಹೆಚ್ಚು ಶ್ರಮ ಹಾಗು ಕಡಿಮೆ ಆದಾಯದಿಂದ ನೀವು ತೃಪ್ತರಾಗಬೇಕಾಗುವುದು. ಆರ್ಥಿಕತೆಯ ಬಗ್ಗೆಯೇ ಹೆಚ್ಚಿನ ಒಲವು ಇಲ್ಲದ್ದರಿಂದ ಒತ್ತಡವೂ ಸಹಜವಾಗಿ ಇರಲಿದೆ. ನಿಮ್ಮ ವಸ್ತುಗಳನ್ನು ಕಳೆದುಕೊಂಡು ಪಶ್ಚಾತ್ತಾಪ ಪಡುವಿರಿ. ನೀವು ಇಡುವ ಹೆಜ್ಜೆಗಳು ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಮನೆಯ ವಾತಾವರಣದಲ್ಲಿ ನೀವು ಸಂಭ್ರಮಿಸುವಿರಿ. ಅಪರಿಚಿತರ ಜೊತೆ ಅವಶ್ಯಕತೆಯಷ್ಟೇ ವ್ಯವಹಾರವಿರಲಿ. ಭವಿಷ್ಯದ ಗೊಂದಲವು ನಿಮಗೆ ಪರಿಹಾರವಾಗದೇ ಹೋಗಬಹುದು. ಅತಿಯಾದ ನಂಬಿಕೆಯಿಂದ ನಿಮಗೆ ತೊಂದರೆ ಆಗಬಹುದು. ಹೇಳಿ ಕೊಟ್ಟಿದ್ದನ್ನು ಚಾತು ತಪ್ಪದೇ ನಡೆಸುವಿರಿ. ವಿದ್ಯಾರ್ಥಿಗಳ ಆರೋಗದ ಬಗ್ಗೆ ಗಮನ ಅವಶ್ಯಕ. ಸಂಗಾತಿಯ ಜೊತೆ ಮುನಿಸು ಕಡಿಮೆ ಮಾಡಿಕೊಳ್ಳಿ. ಪ್ರೇಮಕ್ಕಾಗಿ ಹೆಚ್ಚು ಖರ್ಚನ್ನು ಮಾಡಬೇಕಾದೀತು. ಹಿತಶತ್ರುಗಳ ಬಗ್ಗೆ ನಿಮ್ಮ ಊಹೆಯು ಸುಳ್ಳಾಗಬಹುದು.
ಮಕರ ರಾಶಿ: ಮಕ್ಕಳ ಮೇಲೆ ಬೋಧಕರ ದೂರು ನಿಮಗೆ ಬರಲಿದೆ. ಬಂಧುಗಳಿಂದ ನಿಮಗೆ ಹಣಕಾಸಿನಲ್ಲಿ ವಂಚನೆ ಆಗಬಹುಸು. ನಿಮ್ಮ ಅಧಿಕಾರವನ್ನು ಹಿಡಿತಕ್ಕೆ ತಂದುಕೊಳ್ಳುವದೇ ಸಾಹಸವಾಗಬಹುದು. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾದ ಸವಾಲು ಬರಬಹುದು. ಹಣದ ಹೊಂದಾಣಿಯು ಸ್ವಲ್ಪ ಕಷ್ಟವಾದೀತು. ಉನ್ನತ ಹುದ್ದೆಗೆ ಹೋಗಲು ಅವಕಾಶವಿದ್ದರೂ ನೀವು ಹೋಗದಿರುವಿರಿ. ಸರಿ ಹಾಗೂ ತಪ್ಪುಗಳ ತುಲನೆಯು ಕಷ್ಟವಾದೀತು. ನಿತ್ಯಕರ್ಮದಲ್ಲಿ ವ್ಯತ್ಯಾಸವು ಬರಬಹುದು. ಎಷ್ಟೇ ಹೊತ್ತಾದರೂ ನಿಮ್ಮ ಕಾರ್ಯವನ್ನು ಮಾಡಿಯೇ ವಿಶ್ರಾಂತಿ ಪಡೆಯುವಿರಿ. ಕಿರಿಕಿರಿ ಎನಿಸಿದ ಕಾರ್ಯಗಳನ್ನು ನೀವು ಮುಂದೂಡುವಿರಿ. ಸಂಗಾತಿಯ ಮನೋಭಾವಕ್ಕೆ ತಕ್ಕಂತೆ ವರ್ತಿಸುವುದು ಕಷ್ಟವಾದೀತು. ಸಿಕ್ಕಷ್ಟು ವಸ್ತುವನ್ನು ಜೋಪಾನವಾಗಿ ಇಟ್ಟಕೊಳ್ಳಿ. ಯಾವುದೇ ನಿರ್ಧಾರಗಳನ್ನು ಆ ಕ್ಷಣದಲ್ಲಿಯೇ ತೆಗೆದುಕೊಂಡು ಆಮೇಲೆ ಚಿಂತೆಗೆ ಒಳಗಾಗುವಂತೆ ಮಾಡಿಕೊಳ್ಳಬೇಡಿ.
ಕುಂಭ ರಾಶಿ: ಪೋಷಕರ ಜೊತೆಗಿನ ಬಾಂಧವ್ಯ ಕಗ್ಗಂಟಾಗಲಿದೆ. ಇಂದು ಹಣ ಗಳಿಕೆಯ ಬಗ್ಗೆ ಆಸಕ್ತಿ ಹೆಚ್ಚಾಗುವುದು. ನಿಮ್ಮ ನೋವುಗಳನ್ನು ಹೇಳಿಕೊಂಡು ಕಡಿಮೆ ಮಾಡಿಕೊಳ್ಳಬಹುದು. ಮೃದುವಾದ ಮಾತೂ ನಿಮ್ಮಿಂದ ಬರಲಿದೆ. ನಿಮ್ಮ ಕೆಲಸಗಳ ಎಲ್ಲರನ್ನೂ ಮರೆಯುವಿರಿ. ಬಂಧುಗಳ ಸಹಯೋಗವು ನೀವು ದೂರ ಪ್ರಯಾಣವನ್ನು ಮಾಡಲಿದ್ದೀರಿ. ಸಣ್ಣ ಉದ್ಯೋಗಕ್ಕೆ ಸೇರಿ ನಿರುದ್ಯೋಗಕ್ಕೆ ವಿರಾಮ ಹೇಳುವಿರಿ. ಬಂಡವಾಳವನ್ನು ಸರಿಯಾದ ಕಡೆಯಲ್ಲಿ ಹೂಡಿ. ಡೋಲಾಯಮಾನವಾದ ಸ್ಥಿತಿಗೆ ಸರಿಯಾದ ಉತ್ತರದ ಅವಶ್ಯಕತೆ ಇರಲಿದೆ. ಇಂದು ವೇಗದ ನಡಿಗೆ ಇರಲಿದೆ. ಸಂಬಂಧಗಳು ಇನ್ನಷ್ಟು ಹತ್ತಿರವಾಗಬಹುದು. ಕುಲಕ್ಕೆ ಯೋಗ್ಯವಾದ ಕಾರ್ಯವನ್ನು ಮಾಡಿದ್ದಕ್ಕೆ ಪ್ರಶಂಸೆಯು ಸಿಗಬಹುದು. ವ್ಯಾಪಾರದ ತಂತ್ರವು ಫಲಿಸುವುದು. ದುರಭ್ಯಾಸವನ್ನು ರೂಢಿಸಿಕೊಳ್ಳುವಿರಿ. ವಾಹನದ ವಿಚಾರಕ್ಕೆ ದಂಪತಿಗಳ ನಡುವೆ ಕಲಹವಾಗಬಹುದು. ಕಳೆದುಕೊಂಡ ವಸ್ತುವನ್ನು ಪಡೆಯಲಿದ್ದೀರಿ. ವಿದ್ಯಾಭ್ಯಾಸಕ್ಕೆ ಪ್ರೇರಣೆ ಸಿಗಬಹುದು.
ಮೀನ ರಾಶಿ: ಕ್ರೀಡಾ ಚಟುವಟಿಕೆಯಲ್ಲಿ ನಿರಂತರ ತೊಡಗುವಿರಿ. ಬಂಧುಗಳ ಸಮಾಗಮದಿಂದ ಮನೆಯಲ್ಲಿ ಸಂತೋಷ. ನಿಮ್ಮ ಆತುರದ ಕಾರಣ ನಿಮ್ಮ ಜೊತೆ ಇತರರು ವ್ಯವಹರಿಸುವುದು ಕಷ್ಟವಾಗಲಿದೆ. ನಿಮ್ಮ ಬಳಿಯ ಸಂಪತ್ತನ್ನು ಕೊಟ್ಟು ಬಿಡಬೇಕಾಗುವುದು. ಹೊಸ ಉದ್ಯೋಗಕ್ಕೆ ವಿವರಗಳನ್ನು ಕೇಳಿ ಪಡೆಯುವಿರಿ. ಅಲಭ್ಯವಾದ ಸಮಯದಲ್ಲಿ ನಿಮ್ಮ ಬೇಡಿಕೆ ಹೆಚ್ಚಾಗಲಿದೆ. ನಿಮ್ಮ ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಚಟುವಟಿಕೆಯಿಂದ ನೀವು ಇರುವಿರಿ. ಸಂಗಾತಿಯ ಮನೋಭಾವವು ನಿಮಗೆ ಗೊತ್ತಾಗದೇ ಹೋದೀತು. ಸಾಮಾಜಿಕ ಸಹಕಾರವನ್ನು ನೀವು ನೀಡಲಿದ್ದೀರಿ. ನಿಮ್ಮವರನ್ನು ನೀವು ದೂರ ಮಾಡಿಕೊಳ್ಳಬಹುದು. ಅವಶ್ಯಕತೆ ಇದ್ದರೆ ಮಾತ್ರ ಮುಂದುವರಿಯುವುದು ಉತ್ತಮ. ಗೃಹ ಬಳಕೆಯ ವಸ್ತುಗಳು ಹೆಚ್ಚು ಮಾರಾಟವಾಗುವುವು. ಭವಿಷ್ಯದ ನಾಳೆಯ ಕುರಿತು ಅತಿಯಾದ ಯೋಚನೆ ಬೇಕಾಗಿಲ್ಲ, ಖುಷಿಯಿಂದ ಸ್ವೀಕರಿಸಿ ಎಲ್ಲವನ್ನೂ.
ಲೋಹಿತ ಹೆಬ್ಬಾರ್ – 8762924271 (what’s app only)




