ನೀವು ಇಂದು ಆಪ್ತರಿಂದ ಹಲವು ದಿನಗಳ ಅನಂತರ ಹಣವನ್ನು ಪಡೆಯುವಿರಿ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ಷಷ್ಠೀ ತಿಥಿ, ಭಾನುವಾರ ಮನೋರಂಜನೆಯಲ್ಲಿ ಭಾಗಿ, ಅಧ್ಯಾತ್ಮದಲ್ಲಿ ಆಸಕ್ತಿ, ಕ್ರೀಡೆಯಲ್ಲಿ ನಿರಾಶೆ ಇವೆಲ್ಲ ಇರಲಿದೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಭಾನುವಾರ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಶುಕ್ಲ, ಕರಣ: ಗರಜ, ಸೂರ್ಯೋದಯ – 06 : 05 am, ಸೂರ್ಯಾಸ್ತ 06 : 52 pm, ಇಂದಿನ ಶುಭಾಶುಭಕಾಲ: ರಾಹು ಕಾಲ 17:17 – 18:53, ಯಮಘಂಡ ಕಾಲ 12:29 – 14:05, ಗುಳಿಕ ಕಾಲ 15:41-17:17
ಮೇಷ ರಾಶಿ: ವಿಶ್ರಾಂತಿಯಿಂದ ಆಲಸ್ಯ ಅಧಿಕವಾಗಲಿದೆ. ನಿಮ್ಮ ಬಹಳ ದಿನಗಳಿಂದ ಹಾಗೆಯೇ ಇದ್ದ ಸರ್ಕಾರದ ಕೆಲಸಗಳು ಮುಕ್ತಾಯ ಮಾಡಬೇಕಾದ ಸ್ಥಿತಿ ಇರುವುದು. ಹತ್ತಿರದ ಸಂಬಂಧಿಗಳೊಂದಿಗೆ ಪ್ರಮುಖ ಚರ್ಚೆಯನ್ನು ಮಾಡುವಿರಿ. ಮಕ್ಕಳಿಂದ ಲಾಭ, ಹೆಮ್ಮೆ ಸಿಗಬಹುದು. ಸಮಯವನ್ನು ಸಮಾಜಮುಖಿ ಕಾರ್ಯಗಳಲ್ಲಿ ಬಳಸಿದರೆ ಒಳಿತು. ಪ್ರೀತಿಯಲ್ಲಿ ತಿಳಿವಳಿಕೆ ಹೆಚ್ಚಾಗುತ್ತದೆ. ಯಾರ ಸ್ನೇಹವನ್ನೂ ವೇಗವಾಗಿ ಒಪ್ಪಿಕೊಳ್ಳಲಾರಿರಿ. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿರಿ. ಅಪರಿಚಿತರನ್ನು ನಂಬಿ ಹಣವನ್ನು ಕಳೆದುಕೊಳ್ಳಬೇಡಿ. ನೋವನ್ನು ಮನಸ್ಸನಲ್ಲಿ ಇಟ್ಟುಕೊಂಡು ಸಂಕಟಪಡುವಿರಿ. ಬಾಂಧವರ ಸಂಪರ್ಕದಿಂದ ದೂರವಿರುವಿರಿ. ಹೊಸ ವಸ್ತ್ರಗಳನ್ನು ಧರಿಸುವಿರಿ. ಯಾರದೋ ಮಾತಿಗೆ ಕುಣಿಯುವುದು ಬೇಡ. ನಿಮ್ಮ ಮನಸ್ಸಿಗೆ ಸರಿ ಎನಿಸಿದ್ದರೆ ಮುಂದುವರಿಯಿರಿ. ಉಡುಗೊರೆಯನ್ನು ಸ್ನೇಹಿತರಿಂದ ಸ್ವೀಕರಿಸುವಿರಿ. ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಇಂದಿನ ಸಮಯವು ವ್ಯರ್ಥವಾಗುವುದು.
ವೃಷಭ ರಾಶಿ: ನಿಮಗೆ ಉಂಟಾದ ಬೇಸರವನ್ನು ಹೇಳಿಕೊಳ್ಳಲಾರಿರಿ. ಇಂದು ನೀವು ಅಪರೂಪದ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವಿರಿ. ಅದರಿಂದ ನಿಮ್ಮ ಸ್ಥಾನಮಾನ, ಅಲೋಚನಾ ಕ್ರಮಗಳು ಬದಲಾಗುವುದು. ಹೊಸ ಸ್ನೇಹಿತರು ನಿಮ್ಮ ವ್ಯಕ್ತಿತ್ವದಿಂದ ಆಕರ್ಷಿತರಾಗುತ್ತಾರೆ. ಸಂಗಾತಿಯ ಭಾವನೆಗಳ ಬಗ್ಗೆ ನಿಮ್ಮ ನಿರ್ಲಕ್ಷ್ಯ ತೊಂದರೆ ಉಂಟುಮಾಡಬಹುದು. ನಿಮ್ಮನ್ನು ಕೆಟ್ಟವರ ಸಹವಾಸದಿಂದ ಮನೆಯವರು ದೂರಮಾಡುವರು. ಸಂಭಾಷಣೆಯ ಕೊರತೆ ಮದುವೆಯ ಸಂಬಂಧದಲ್ಲಿ ಬಿರುಕು ತರಬಹುದು. ಸಂಯಮದಿಂದ ನಡೆದುಕೊಳ್ಳುವುದು ಉತ್ತಮ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಮುಖ್ಯ. ಪ್ರಯೋಜನವಿಲ್ಲದೇ ಯಾವ ಕಾರ್ಯವನ್ನೂ ಮಾಡು ಪ್ರಯತ್ನಿಸುವುದಿಲ್ಲ. ಸಾಹಸ ಕಾರ್ಯಕ್ಕೆ ಒಮ್ಮೆಲೇ ಮುಂದಾಗುವುದು ಬೇಡ. ಅಸತ್ಯವನ್ನು ಹೇಳುವುದು ಗೊತ್ತಾದೀತು. ಹಿತವಚನದಿಂದ ಯಾವ ಪರಿವರ್ತನೆಯೂ ಆಗದು. ಒಗ್ಗಟ್ಟಿನ ಕೆಲಸದಲ್ಲಿ ಜಯವಿರಲಿದೆ. ನಿಮ್ಮ ನಡೆವಳಿಕೆಯು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು.
ಮಿಥುನ ರಾಶಿ: ಹಣವಿದೆ ಎಂಬ ಅಹಂಕಾರ ಬದಲಾಗಲಿದೆ. ಇಂದು ನಿಮ್ಮ ಅರ್ಹತೆಗೆ ಯೋಗ್ಯವಾದ ಕೆಲವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಮಕ್ಕಳ ಯಶಸ್ಸಿನಿಂದಾಗಿ ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಮನೆಯಲ್ಲಿ ಕಲಹದಿಂದ ಮನಸ್ಸು ಹಾಳಾಗಲಿದೆ. ಹಣದ ವಿಚಾರದಲ್ಲಿ ತ್ವರಿತ ನಿರ್ಧಾರದಿಂದ ದೂರವಿರಿ. ಮಕ್ಕಳು ನಿಮ್ಮನ್ನು ಪ್ರೀತಿಸುವರು. ಅತಿಥಿಗಳ ಬಳಿ ಉಗ್ರವಾಗಿ ವರ್ತಿಸದಿರಿ. ಸಂಬಂಧಗಳ ಕಾಳಜಿ ಇಟ್ಟುಕೊಳ್ಳಿ. ಪ್ರೇಮ ಸಂಬಂಧದಲ್ಲಿ ಕಠಿಣತೆ ಹಚ್ಚಬೇಡಿ. ಹೊಸ ಕಾರ್ಯಯೋಜನೆಗಳು ತಕ್ಷಣ ಕೈಗೆತ್ತಿಕೊಳ್ಳಬೇಡಿ. ಸಮರ್ಥ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಸಿ. ಸಮಾರಂಭಗಳಲ್ಲಿ ಹೆಚ್ಚಿನ ದಿನವನ್ನು ಕಳೆಯುವಿರಿ. ಹೆಚ್ಚು ಚಿಂತಿಸುವುದರಿಂದ ಯಾವ ಪ್ರಯೋಜನವಾಗದು. ಹಿರಿಯರಿಗೆ ಅಗೌರವದ ಮಾತುಗಳನ್ನು ಆಡಬೇಕಾದೀತು. ನಿಮ್ಮ ಮೇಲೆ ಸಂದೇಹವು ಬರಬಹುದು. ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವಿರಿ. ನಿಮ್ಮ ಮನೆಯ ಸಮಸ್ಯೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು ಬೇಡ.
ಕರ್ಕಾಟಕ ರಾಶಿ: ಆಹಾರಕ್ಕಾಗಿ ದೂರ ಪ್ರಯಾಣ ಮಾಡುವಿರಿ. ಇಂದು ನಿಮಗೆ ಏನನ್ನೂ ಸಾಧಿಸುತ್ತೇನೆ ಎಂಬ ಉತ್ಸಾಹವಿರುವುದು. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಿಕೊಂಡು ನಿರಾಳವಾಗುವಿರಿ. ಸಮಾನ ಮನಸ್ಕರ ಜೊತೆಗೆ ವಾದವಾಗಲಿದೆ. ಹಿರಿಯರ ಒತ್ತಡದಿಂದ ಕೆಲಸಕ್ಕೆ ಏಕಾಗ್ರತೆ ಕಡಿಮೆಯಾಗಬಹುದು. ಹಣದ ಬಗ್ಗೆ ತುರ್ತು ನಿರ್ಧಾರ ತೆಗೆದುಕೊಳ್ಳುವುದು ತೊಂದರೆ ತರಬಹುದು. ಅತಿಥಿಗಳಿಂದ ದೂರವಿರಲು ಶಿಸ್ತಿನಿಂದ ನಡೆದುಕೊಳ್ಳಿ. ಪ್ರೀತಿಯಲ್ಲಿ ತಾಳ್ಮೆ ಮತ್ತು ಸಹನಶೀಲತೆ ಮುಖ್ಯ. ಕೊನೆಯಲ್ಲಿ ಆಯಾಸದಿಂದ ಕೋಪ ಉಂಟಾಗುತ್ತದೆ. ಹೇಳಬೇಕಾದ ವಿಚಾರವನ್ನು ನೇರವಾಗಿ ಹೇಳಿ. ಹಳೆಯ ಪ್ರೀತಿಯು ನೆನಪಾಗಿ ಮೌನವಾಗುವಿರಿ. ನಿಮ್ಮ ಮಾತು ಚೌಕಟ್ಟನ್ನು ಮೀರಬಹುದು. ಎಲ್ಲರ ದೃಷ್ಟಿಯಲ್ಲಿ ಸ್ವಾರ್ಥಿಯಂತೆ ಕಾಣಿಸುವಿರಿ. ನಿಮ್ಮದಲ್ಲದ್ದನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು. ಯಾವುದನ್ನೂ ಅನುಭವಿಸಲೂ ಯೋಗ್ಯವಾದ ಕಾಲವು ಬೇಕಾಗುವುದು. ಇಂದು ನೀವು ಯಾವುದಾದರೂ ವಿಚಾರವನ್ನು ಮಾತಿನಿಂದ ನೀವು ಗೆಲ್ಲವುದು ಸುಲಭವಲ್ಲ.
ಸಿಂಹ ರಾಶಿ: ಹೊಸ ಮನೆಯಲ್ಲಿ ವಾಸ ಮಾಡುವಿರಿ. ಇಂದು ಜಗಳವಾಡಿಯಾದರೂ ಬೇಕಾದುದನ್ನು ಪಡೆಯುವಿರಿ. ಆಸ್ತಿಗೆ ಸಂಬಂಧಿಸಿದಂತೆ ಪ್ರಕರಣವಿಂದು ಹಲವು ವರ್ಷಗಳಿಂದ ನಡೆಯುತ್ತಿದ್ದು, ಇಂದು ಅದರ ಫಲವು ಗೊತ್ತಾಗಲಿದೆ. ಆಭರಣ ವಿಷಯದಲ್ಲಿ ಮನೆಯಲ್ಲಿ ಕಲಹವಾಗಬಹುದು. ಪ್ರೀತಿಯಲ್ಲಿನ ಶೂನ್ಯತೆ ಇಂದು ಕಾಡಬಹುದು. ವೃತ್ತಿಜೀವನದಲ್ಲಿ ಹಡವಿಟ್ಟ ನಿರ್ಧಾರ ತಪ್ಪು ತರುವ ಸಾಧ್ಯತೆ. ಸಮಸ್ಯೆಗಳ ಪರಿಹಾರದಲ್ಲಿ ನಿಮ್ಮ ಬುದ್ಧಿಮತ್ತೆ ಸ್ಪಷ್ಟ ಸಂಗಾತಿಯ ಆರೋಗ್ಯ ಸಮಸ್ಯೆಯಿಂದ ಕೆಲಸದಲ್ಲಿ ಅಡಚಣೆ. ತಾಳ್ಮೆಯಿಂದ ದಿನ ಕಳೆಯಿರಿ. ಸಂತೃಪ್ತಿಯಿಂದ ಇರಲಿದ್ದೀರಿ. ಬೇಕಾದವರ ಸಂಪರನಮ್ಮ ಇಷ್ಟದ ಕೆಲಸದತ್ತ ಹೆಚ್ಚು ಗಮನ ಹರಿಸುವಿರಿ. ದಾಖಲೆಗಳನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ವೃತ್ತಿಪರರು ಗೌರವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವರು. ಉದ್ಯೋಗದ ಅವಕಾಶಗಳ ನಿರೀಕ್ಷೆಯಲ್ಲಿ ಇರುವಿರಿ. ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ಸಂಗಾತಿಯ ಇಂಗಿತವನ್ನೇ ಅರಿತು ಕಾರ್ಯವನ್ನು ಮಾಡುವಿರಿ.
ಕನ್ಯಾ ರಾಶಿ: ಹಣವನ್ನು ಪಡೆದು ಮಾಲಿಕರಿಂದ ನಿಂದನೆ ಬರಬಹುದು. ನೀವು ಇಂದು ಆಪ್ತರಿಂದ ಹಲವು ದಿನಗಳ ಅನಂತರ ಹಣವನ್ನು ಪಡೆಯುವಿರಿ. ಪರಸ್ಪರ ಸಂವಹನದ ಮೂಲಕ ವ್ಯಾಪಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ಮನೆಯ ಕೆಲಸಗಳಲ್ಲಿ ಗಮನ ಹರಿಸಿ. ಪ್ರೇಮ ಸಂಬಂಧದಲ್ಲಿ ನಿರೀಕ್ಷೆಯಂತಿಲ್ಲದ ಪರಿಣಾಮ ಸಿಗಬಹುದು. ತಮಾಷೆಯ ಆಟದಲ್ಲಿ ಗೆಲುವಾಗದು. ಕಚೇರಿಯಲ್ಲಿ ಒಬ್ಬ ಮೋಸವಾಗಬಹುದು. ರವಾನೆಯಾದ ವ್ಯಕ್ತಿಯಿಂದ ನಿಮಗೆ ದಿನದ ಶಕ್ತಿಯನ್ನು ನೀವೇ ಕಡಿಮೆಯಾಗಿಸಿಕೊಳ್ಳಬೇಡಿ. ಸಂಗಾತಿಯೊಂದಿಗೆ ಸಂವಹನ ತಪ್ಪಿಸದಿರಿ. ಯಶಸ್ಸು ತಾನಾಗಿಯೇ ಬರಲಿದೆ. ವ್ಯವಹಾರದಲ್ಲಿ ಬಂಧುಗಳನ್ನು ಇಟ್ಟುಕೊಳ್ಳುವ ಮನಸ್ಸು ಬೇಡ. ಕರಕುಶಲತೆಗಳಿಗೆ ಹೆಚ್ಚು ಸಮಯ ಕೊಡುವಿರಿ. ಕುಟುಂಬದ ಜೊತೆ ಸೌಹಾರ್ದತೆ ಉಂಟಾಗುವುದು. ಇತರರ ಜೊತೆ ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಕಾಣಲಿದೆ. ವಾಹನವನ್ನು ಚಲಾಯಿಸುವಾಗ ಆತುರ ಬೇಡ. ದೂರ ಹೋಗುವವರಿದ್ದರೆ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ.




