Horoscope Today 31 August : ಇಂದು ಈ ರಾಶಿಯವರನ್ನು ಯಾವ ಕಾರ್ಯಕ್ಕೂ ತೊಡಗಿಸಲಾಗದು, ಹಠಸ್ವಭಾವ ಹೆಚ್ಚು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಭಾದ್ರಪದ ಮಾಸ ಶುಕ್ಲ ಪಕ್ಷದ ಅಷ್ಟಮೀ ತಿಥಿ ಭಾನುವಾರ ದೇವರ ಸೇವೆ, ಭೂಮಿಯ ಪರಿಶೀಲನೆ, ಪ್ರಗತಿಗೆ ಮನಸ್ಸು, ವಿಶೇಷ ತರಬೇತಿ, ಪಶ್ಚಾತ್ತಾಪ, ಸಾಲದ ಅಪೇಕ್ಷೆ, ದಾಖಲೆ ನಿರ್ಮಾಣ ಇವೆಲ್ಲ ಇಂದಿನ ವಿಶೇಷ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಅಷ್ಟಮೀ ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ಶುಕ್ಲ, ಕರಣ : ಭದ್ರ, ಸೂರ್ಯೋದಯ – 06 – 21 am, ಸೂರ್ಯಾಸ್ತ – 06 – 44 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:11 – 18:44, ಗುಳಿಕ ಕಾಲ 15:38 – 17:11, ಯಮಗಂಡ ಕಾಲ 12:33 – 14:06
ಮೇಷ ರಾಶಿ: :ನಿಮ್ಮ ಆರಂಭವು ದೃಢವಾಗಿದ್ದರಿಂದ ಮುಂದಿನ ಎಲ್ಲ ಹೆಜ್ಜೆಯೂ ನಿಮಗೆ ಬೇಕಾದಂತೆ ಆಗುವುದು. ಇಂದು ನಿಮ್ಮನ್ನು ನೀವು ಪ್ರಶಂಸಿಸಿಕೊಳ್ಳುವುದು ಇತರರಿಗೆ ಇಷ್ಟವಾಗದು. ಉಪಯೋಗಕ್ಕೆ ಬಾರದ ಎಲ್ಲ ಸಂದರ್ಭದಲ್ಲಿ ನಿಮ್ಮ ಪರಿಸ್ಥಿತಿಯು ಒಂದೇ ರೀತಿಯಲ್ಲಿ ಇರದು. ಸಂಗಾತಿಯ ಮಾತುಗಳು ನಿಮ್ಮನ್ನು ಚುಚ್ಚಿದಂತೆ ಆಗುವುದು. ಚಿಂತೆಯಿಂದ ಹೊರಬರಲು ದಾರಿಗಳನ್ನು ಹುಡುಕಿಕೊಳ್ಳುವಿರಿ. ಇಂದು ನಿಮ್ಮ ವಿರುದ್ಧ ಮಾತನಾಡುವವರಿಗೆ ಸರಿಯಾದ ಉತ್ತರವನ್ನು ಕೊಡಲಿದ್ದೀರಿ. ಉದ್ಯೋಗದ ಸ್ಥಳದಲ್ಲಿ ನಂಬಿಕೆ ಬರುವಂತೆ ಕೆಲಸವನ್ನು ಮಾಡುವಿರಿ. ಎದುರಾಳಿಗಳ ಬಲವನ್ನು ಅರಿತು ನಿಮ್ಮ ತಂತ್ರವಿರಲಿ. ಹಣದ ವಿಚಾರದಲ್ಲಿ ಪಾದರ್ಶಕತೆ ಇರಲಿ. ನಿಮ್ಮ ಆಯ್ಕೆಯ ವಿಚಾರದಲ್ಲಿ ಆಪ್ತರನ್ನು ಕೇಳಿ ಸರಿ ಮಾಡಿಕೊಳ್ಳುವಿರಿ. ಇಷ್ಟವಿಲ್ಲದಿದ್ದರೂ ಕೆಲವು ಕೆಲಸಗಳನ್ನು ಮಾಡಬೇಕಾಗಬಹುದು. ಅತಿಯಾದ ಚಿಂತೆಯಲ್ಲಿ ಮನಸ್ಸನ್ನು ಹಾಳುಮಾಡಿಕೊಳ್ಳಬೇಡಿ. ನಿಮ್ಮನ್ನು ದಿಕ್ಕು ತಪ್ಪಿಸಿ ವೇಗವನ್ನು ಕಡಿಮೆ ಮಾಡಿಸಬಹುದು. ನಿಮ್ಮ ಕಾರ್ಯದ ಮೇಲೆ ಕಾರಣಾಂತರಗಳಿಂದ ಗಮನ ಕಡಿಮೆ.
ವೃಷಭ ರಾಶಿ: :ನಿಮ್ಮ ಭೂಮಿಯ ಗಡಿಯ ಪರಿಶೀಲನೆಯನ್ನು ಇಂದು ಮಾಡುವಿರಿ. ಒತ್ತಡದಿಂದ ಮಾತ್ರ ಕಾರ್ಯವು ಸಾಧ್ಯ ಎಂಬ ಭ್ರಮೆಯಲ್ಲಿ ಇರುವಿರಿ. ನೀವು ಸೇವನೋಭಾವದಿಂದ ಹೊರಬರುವಿರಿ. ಇಂದು ಕಳೆದುಕೊಂಡ ಸಂಪತ್ತು ನಿಮಗೆ ಸಿಗದು. ನಿಮ್ಮ ಸಂತೋಷಕ್ಕೆ ಕಾರಣದ ಅವಶ್ಯಕತೆ ಇಲ್ಲ. ಹಣದ ಹೂಡಿಕೆಯನ್ನು ಸರಿಯಾದ ಕಡೆ ಸರಿಯಾ ಮಾಹಿತಿಯನ್ನು ಪಡೆದು ಮಾಡಿ. ನಿಮ್ಮ ಮಾತನ್ನು ಯಾರೂ ಪಾಲಿಸರು ಎಂಬ ಬೇಸರ ಇರಲಿದೆ. ವಾಹನ ಖರೀದಿಗೆ ಬೇಕಾದ ಮಾಹಿತಿಯನ್ನು ಕಲೆಹಾಕುವಿರಿ. ನಿಮ್ಮ ಅವಲೋಕನ ಅತ್ಯಗತ್ಯ. ನಿಮ್ಮವರಲ್ಲಿಯೇ ನಿಮ್ಮ ಬಗ್ಗೆ ನಕಾರಾತ್ಮಕ ಭಾವವು ಬರಬಹುದು. ಸ್ಪರ್ಧೆಯಲ್ಲಿ ನಿಮ್ಮ ತೊಡಗುವಿಕೆ ಕಡಿಮೆಯಾಗಿ ಸೋಲುವಿರಿ. ಜನರ ಜೊತೆ ಬೆರೆಯುವಿಕೆ ಕಡಿಮೆ ಆಗಬಹುದು. ಸಂಗಾತಿಯ ಮಾತನ್ನು ಪೂರ್ಣವಾಗಿ ಬೆಂಬಲಿಸಲಾರಿರಿ. ದಾಂಪತ್ಯದಲ್ಲಿ ಹಳೆಯ ವಿಚಾರವನ್ನು ಮತ್ತೆ ಕೆದಕುವುದು ಬೇಡ.
ಮಿಥುನ ರಾಶಿ: :ದೈವಾನುಗ್ರಹದಿಂದ ಸಕಾರಾತ್ಮಕ ಶಕ್ತಿಯ ಸಂಚಲನವಾಗಲಿದೆ. ರಾಜಕೀಯದಲ್ಲಿ ಹೊಸದಾಗಿ ಪ್ರವೇಶವನ್ನು ಪಡೆಯುವವರಿಗೆ ಮೇಲಧಿಕಾರಿಗಳು ತೋರಿಸುವ ಪಕ್ಷಪಾತದ ಧೋರಣೆಯು ನೀವು ಸಹಿಸಲಾರಿರಿ. ಹಿರಿಯರಿಂದ ನಿಮಗೆ ಪ್ರಶಂಸೆ ಸಿಗಲಿದೆ. ನೀವಾಡುವ ಸತ್ಯದ ಮಾತಿನಿಂದ ಸಹೋದ್ಯೋಗಿಯ ಕೆಲಸವು ಹೋಗಬಹುದು. ನಿಮಗೆ ಸಿಕ್ಕ ಪ್ರೇರಣೆ ಕೊನೆಯ ತನಕ ಬಾರದು. ಸಾಹಿತ್ಯಕ್ಷೇತ್ರದಲ್ಲಿ ವಿಶೇಷ ಸ್ಥಾನದ ಪ್ರಾಪ್ತಿ. ನಿಮ್ಮ ದಿನಚರ್ಯೆಯಿಂದ ನಿಮ್ಮ ಆರೋಗ್ಯಕ್ಕೆ ಲಾಭವಾಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣವು ಇರಬಹುದು. ಆಪ್ತರನ್ನು ನೀವು ಕಳೆದೊಳ್ಳುವ ಸಂಭವವಿದೆ. ಅಧಿಕ ಒತ್ತಡವು ಕಂಡು ಬಂದಲ್ಲಿ ಸ್ವಲ್ಪಕಾಲ ಏಕಾಂತದಲ್ಲಿ ಇರಿ. ಆರ್ಥಿಕವಾಗಿ ದುರ್ಬಲವಲ್ಲದಿದ್ದರೂ ಸಮಯಕ್ಕೆ ಸರಿಯಾಗಿ ಹಣವಂತೂ ಸಿಗದು. ತಿದ್ದಿಕೊಳ್ಳುವ ಅಂಶಗಳನ್ನು ಗಮನಿಸುವುದು ಮುಖ್ಯವಾದೀತು. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು.
ಕರ್ಕಾಟಕ ರಾಶಿ: :ನೀವು ಹಾಕಿಕೊಂಡು ಬಜೆಟ್ ವ್ಯತ್ಯಾಸವಾಗಲಿದೆ. ಉದ್ಯಮದ ಕಾರಣಕ್ಕೆ ಮಾಡಿದ ಪ್ರಯಾಣವು ಸಫಲವಾಗುವುದು. ಎಲ್ಲ ಸಂದರ್ಭವನ್ನೂ ಆರ್ಥಿಕ ದೃಷ್ಟಿಯಿಂದ ಅಳೆಯುವುದು ಕಷ್ಟವೇ ಆದೀತು. ಸ್ವಾವಲಂಬಿಯಾಗಲು ನಿಮಗೆ ಇಷ್ಟವಿದ್ದರೂ ಅದನ್ನು ಮಾಡಲಾಗದು. ನೀವು ಎಲ್ಲವನ್ನೂ ಹೇಳಬೇಕು ಎಂದು ಅಂದುಕೊಂಡರೂ ನಿಮಗೆ ಹೇಳಲಾಗದೇ ದುಃಖವು ಬರಬಹುದು. ವಾಹನದ ದುರಸ್ತಿಯು ಅನಿವಾರ್ಯವಸದೀತು. ಎಚ್ಚರಿಕೆಯಿಂದ ಹೆಜ್ಜೆ ಇಡಿ. ಪ್ರೇಮವನ್ನು ತಪ್ಪಿಸಿ ಸಂತೋಷಪಡಿಸುವಿರಿ. ನಿಮ್ಮ ಮೇಲಿಟ್ಟ ವಿಶ್ವಾಸವು ಭಂಗವಾಗುವುದು ಬೇಡ. ವ್ಯಾಪಾರವನ್ನು ನಿಮ್ಮ ಮಿತಿಯಲ್ಲಿ ಮಾಡಿ. ದೈವಭಕ್ತಿಯು ನಿಮಗೆ ದಾರಿ ತೋರಿಸುವುದು. ಆರ್ಥಿಕವಾಗಿ ಸುಧಾರಣೆ ಮಾಡಿಕೊಳ್ಳಲು ನಿಮಗೆ ದಾರಿಗಳು ಸಿಗಬಹುದು. ವಿದ್ಯಾರ್ಥಿಗಳು ಸಮಯ ಪಾಲನೆ ಮಾಡುವುದು ಮುಖ್ಯ. ಕೈ ಬಂದ ಉದ್ಯೋಗವನ್ನು ಅಹಂಕಾರದಿಂದ ಕಳೆದುಕೊಳ್ಳುವಿರಿ. ತಂದೆಯಿಂದ ಕೇಳಿದ್ದು ಸಿಗಲಿಲ್ಲ ಎಂದು ಬೇಸರ.
ಸಿಂಹ ರಾಶಿ: :ಹಿಂದುಳಿದ ಕಾರ್ಯಗಳಲ್ಲಿ ಪ್ರಗತಿಶೀಲರಾದಂತೆ ವರ್ತಿಸುವಿರಿ. ಇನ್ನೊಬ್ಬರಿಗಾಗಿ ನೀವು ನಿಮ್ಮ ತುರ್ತಿನ ಕಾರ್ಯವನ್ನು ಬಿಡಬೇಕಾದೀತು. ಇಂದು ಮನೆಯ ನಿರ್ಮಾಣದ ಕಾರ್ಯಕ್ಕೆ ನಿಮ್ಮವರಿಂದ ತೊಂದರೆ ಬರಬಹುದು. ಧಾರ್ಮಿಕ ಕಾರ್ಯಕ್ರಮಗಳನ್ನು ಇಂದು ಅನಿವಾರ್ಯವಾಗಿ ಮಾಡುವಿರಿ. ಆಮದಿಗೆ ಬೇಕಾದ ದಾಖಲೆಗಳು ಸಿದ್ಧಪಡಿಸಿ. ನಿಮ್ಮ ಯೋಜನೆಯನ್ನು ಯಾರ ಬಳಿಯೂ ಹೇಳಿಕೊಳ್ಳುವುದು ಬೇಡ. ರಮ್ಯವಾದ ಸ್ಥಳಗಳನ್ನು ನೋಡುವ ಬಯಕೆ ಇರುವುದು. ಸಂಕೋಚದ ಸ್ವಭಾವವು ನಿಮ್ಮ ಅನೇಕ ಸಮಸ್ಯೆಗಳನ್ನು ಹಾಗೆಯೇ ಉಳಿಸುತ್ತದೆ. ಸಂಬಂಧಗಳನ್ನು ನೀವು ಇಂದು ಬಿಡಲು ಪ್ರಯತ್ನಿಸುವಿರಿ. ತಲುಪಬೇಕಾದ ಸ್ಥಳ ಬೇಗನೆ ತಲುಪುವಿರಿ. ವಾಹನ ಸಂಚಾರಕ್ಕೆ ನಿಮಗೆ ತೊಂದರೆಯಾಗಬಹುದು. ಸ್ತ್ರೀಯರ ಉದ್ಯಮಕ್ಕೆ ತೊಂದರೆಯಾಗುವುದು. ಶುಭ ಸುದ್ದಿಯು ನಿಮಗೆ ಸ್ವಲ್ಪ ಸಂತೋಷವನ್ನು ತರಬಹುದು. ಮಕ್ಕಳ ಜೊತೆ ಇರುವಿರಿ. ಒಂದಿಷ್ಟು ಬದಲಾವಣೆಗಳು ಆಗಬಹುದು. ಇಂದು ಸ್ಥೈರ್ಯವನ್ನು ಕಳೆದುಕೊಳ್ಳುವಿರಿ.
ಕನ್ಯಾ ರಾಶಿ: :ನಿಮ್ಮಲ್ಲಿಲ್ಲದೇ ಇರುವುದನ್ನು ಯಾರಿಗೆ ತಾನೆ ಕೊಡುವಿರಿ. ಯಾರೋ ಮಾಡಿದ ಸಾಲವನ್ನು ನೀವು ತೀರಿಸಬೇಕಾಗಬಹುದು. ಇಂದು ನಿಮಗೆ ಗೊಂದಲಗಳಿಂದ ವೃತ್ತಿಯನ್ನು ನಿರ್ಧರಿಸಲು ಕಷ್ಟವಾದೀತು. ಹೊಸ ಕೆಲಸಗಳನ್ನು ಹುಡುಕಲು ಪ್ರಯತ್ನಿಸಿ. ಸಂಗಾತಿಯ ವಿಚಾರವಾಗಿ ನೀವು ಹೆಚ್ಚು ಚಿಂತಯಲ್ಲಿ ಇರುವಿರಿ. ಇಂದು ಹೆಚ್ಚಿನ ಸಮಯವನ್ನು ನೀವು ಖರೀದಿಗೆಂದು ತೆಗೆದಿಡುವಿರಿ. ನಿಮಗೆ ಅಂಟಿದ ಅಪವಾದವು ನಿರಾಧಾರ ಎಂದು ಸಾಬೀತಾಗಬಹುದು. ಸಹೋದರರ ಮೇಲಿನ ಬೇಸರವನ್ನು ಹೊರಹಾಕುವಿರಿ. ತಿಳಿವಳಿಕೆ ಇರುವಾಗ ಯಾವುದನ್ನಾದರೂ ನಿಭಾಯಿಸುವಿರಿ. ಸಮಯಸ್ಫೂರ್ತಿಯಿಂದ ತೊಂದರೆಯ ಸನ್ನಿವೇಶವನ್ನು ದಾಟುವಿರಿ. ಸುಮ್ಮನೇ ಅನುಮಾನದಿಂದ ಸ್ನೇಹವನ್ನು ಹಾಳುಮಾಡಿಕೊಳ್ಳುವಿರಿ. ಸಿಗಬೇಕಾದ ಸಮಯಕ್ಕೆ ಗೌರವವು ಸಿಗಲಿದೆ. ದುಡುಕಿ ನಿರ್ಧಾರವನ್ನು ತೆಗೆದುಕೊಳ್ಳುವುದು ಬೇಡ. ನೇರವಾದ ಮಾತುಗಳು ನಿಮಗೆ ಒಪ್ಪಿಗೆ ಆಗದೇಹೋಗಬಹುದು. ವಿದ್ಯಾರ್ಥಿಗಳು ವಿಶೇಷ ತರಬೇತಿಯನ್ನು ಪಡೆಯಬೇಕಾಗಬಹುದು.
ತುಲಾ ರಾಶಿ: :ಪ್ರವೇಶ ನಿಷಿದ್ಧದ ಸ್ಥಳಕ್ಕೆ ಹೋಗಿ ಅರಿವಿಲ್ಲದೇ ಹೋಗುವಿರಿ. ಬಂಧುಗಳು ಹಳೆಯ ದ್ವೇಷವನ್ನು ತೀರಿಸಿಕೊಳ್ಳುವ ಸಾಧ್ಯತೆ ಇದೆ. ಇಂದು ಮಕ್ಕಳ ವಿಚಾರದಲ್ಲಿ ವಾಗ್ವಾದವು ದಾಂಪತ್ಯದಲ್ಲಿ ನಡೆದು ಇಬ್ಬರೂ ವೈಮನಸ್ಸಿನಿಂದ ಇರಬೇಕಾದೀತು. ಆಗಿಹೋದ ವಿಷಯವನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವಿರಿ. ಪ್ರಯಾಣವು ಇಂದು ಕಷ್ಟಕರವಾಗಬಹುದು. ವೃತ್ತಿಯ ಅನ್ವೇಷಣೆ ಬಹಳ ವೇಗದಿಂದ ಸಾಗುವುದು. ಹೆಚ್ಚು ಪರಿಶ್ರಮದಿಂದ ಕೆಲಸವನ್ನು ಮಾಡುವಿರಿ. ಯಾರ ಸಹಕಾರವನ್ನೂ ಬಯಸದೇ ನಿಮ್ಮ ಜವಾಬ್ದಾರಿಯಲ್ಲಿ ನೀವು ಇರುವಿರಿ. ಮಹಾತ್ಮರ ಸಹವಾಸದಿಂದ ಮನಸ್ಸಿಗೆ ನೆಮ್ಮದಿ. ಸಮಯವನ್ನು ವ್ಯರ್ಥ ಮಾಡಿ ಸಂಕಟಪಡುವಿರಿ. ದಾನ ಮಾಡುವ ಮನಸ್ಸು ನಿಮಗೆ ಇರದು. ಅವಕಾಶವನ್ನು ಬಿಟ್ಟಕೊಂಡು ದುಃಖಿಸುವಿರಿ. ವೃತ್ತಿಗಾಗಿ ಅಪರಿಚಿತರು ಹಣವನ್ನು ಕೇಳಬಹುದು. ಮಕ್ಕಳಿಂದ ಅಲ್ಪ ಸಂತೋಷವು ಸಿಗಬಹುದು. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು.
ವೃಶ್ಚಿಕ ರಾಶಿ: :ಸಾರ್ವಜನಿಕವಾಗಿ ಮಾತನಾಡುವಾಗ ಸಮತೋಲನ ಅವಶ್ಯಕ. ಇಂದು ನೀವು ಯಾರಿಗೂ ನೋವಾಗದಂತೆ ವರ್ತಿಸುವ ಯೋಚನೆ ಮಾಡುವಿರಿ. ನಿಮ್ಮ ಎಲ್ಲ ಆಸೆಗಳೂ ಪೂರ್ಣಗೊಳ್ಳದು. ಜೀವನದಲ್ಲಿ ಉತ್ತಮವಾದ ಗುರಿಯನ್ನು ಇಟ್ಟುಕೊಳ್ಳಲು ಯಾರಾದರೂ ಸಹಾಯ ಮಾಡುವರು. ಅದೃಷ್ಟವನ್ನು ನೀವು ಹುಡುಕಿಕೊಂಡು ಹೋಗಬೇಡಿ. ನಿಮ್ಮ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಯಾರೊಂದಿಗೂ ಮಾತನಾಡಲು ಮನಸ್ಸೇ ಇರದು. ವಾಹನವನ್ನು ಯಾರದೋ ಕಾರ್ಯಕ್ಕೆ ಕೊಡಬೇಕಾಗುವುದು. ನಿಮಗೆ ಹೆಚ್ಚಿನ ಆದಾಯದ ಅವಶ್ಯಕತೆ ಇರಲಿದೆ. ಅದಕ್ಕಾಗಿ ನೀವು ಏನನ್ನಾದರೂ ಆದಾಯದ ಮೂಲವನ್ನು ಪಡೆದುಕೊಳ್ಳಿ. ಹೊಸತನ್ನು ಯೋಚಿಸಿ ಅದನ್ನು ಕ್ರಿಯಾರೂಪಕ್ಕೆ ತೆಗೆದುಕೊಂಡು ಬನ್ನಿ. ಅಧಿಕೃತವಲ್ಲದ ಕಾರ್ಯಕ್ಕೆ ನಿಮ್ಮ ಸಹಾಯವು ಸಿಗದು. ಪ್ರಾಯೋಗಿಕ ವಿಚಾರಕ್ಕೆ ಅತಿಯಾದ ಪ್ರವೇಶ ಬೇಡ. ದಿನದ ಬಹಳ ಹೊತ್ತನ್ನು ಏಕಾಂತದಲ್ಲಿ ಇರಬೇಕೆಂದು ನೀವಿಂದು ಬಯಸಬಹುದು. ಹೊಸ ವಸ್ತುಗಳನ್ನು ನೀವು ಯಾರದೋ ಮೂಲಕ ಪಡೆದುಕೊಳ್ಳುವಿರಿ.
ಧನು ರಾಶಿ: :ಹೊಸ ಸಾಲದ ಅಪೇಕ್ಷೆ ಇಲ್ಲದೇ ಇದ್ದರೂ ಕೊಡುವರು. ಇಂದು ನಿಮಗೆ ಹಣದ ಅಗತ್ಯತೆಗಳು ತುಂಬಾ ಎದುರಾಗಬಹುದು. ತಪ್ಪನ್ನು ನೀವೇ ಒಪ್ಪಿಕೊಂಡರೆ ದಂಡನೆಯಲ್ಲಿಯೂ ವಿನಾಯಿತಿ ಸಿಗಬಹುದು. ನಿಮ್ಮ ಹಣವೂ ಖಾಲಿಯಾಗಿ ಸಂಗಾತಿಯಿಂದ ಹಣವನ್ನು ಪಡೆಯುವಿರಿ. ಅಧಿಕ ಒತ್ತಡದಿಂದ ಕೆಲಸವು ನಿಮಗೆ ಸೂಚಿಸದೇ ಹೋಗಬಹುದು. ವ್ಯಾವಹಾರಿಕ ಒತ್ತಡವನ್ನು ಬೇರೆಲ್ಲಿಯೂ ತೋರಿಸಬೇಡಿ. ಸಜ್ಜನರ ಸಹವಾಸದಿಂದ ನಿಮ್ಮಲ್ಲಿ ಸಣ್ಣ ಬದಲಾವಣೆ ಆಗಲಿದೆ. ವಿದ್ಯಾಭ್ಯಾಸದ ಕೊರತೆಯಿಂದ ಕಾರ್ಯದ ಸ್ಥಳದಲ್ಲಿ ಅಪಮಾನವಗುವುದು. ವೃತ್ತಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳು ಕೇಳಿಬರಬಹುದು. ಸಿಗಬೇಕಾದವರು ನಿಮ್ಮಿಂದ ದೂರವಾಗಬಹುದು. ಮನೆಗೆ ಬಂದವರಿಗೆ ಒಳ್ಳೆಯ ಆತಿಥ್ಯವನ್ನು ಕೊಡಯವಿರಿ. ವಿದ್ಯಾಭ್ಯಾಸದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ನಿಮ್ಮ ಅತಿಯಾದ ಮಾತು ಕಿರಿಕಿರಿಯನ್ನು ಕೊಟ್ಟೀತು. ಹಿರಿಯರ ಕೋಪಕ್ಕೆ ತುತ್ತಾಗುವಿರಿ. ಇಂದು ಹೆಚ್ಚಿನ ಸಮಯವನ್ನು ನಿದ್ರೆಯಿಂದ ಕಳೆಯುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು.
ಮಕರ ರಾಶಿ: :ವ್ಯಾವಹಾರಿಕ ವೈರುಧ್ಯವು ಅಲ್ಲಿ ಮಾತ್ರ ಇರಲಿ. ಇಂದು ನಿಮ್ಮ ದುಡಿಮೆಯನ್ನು ಸರಿಯಾದ ಕಡೆ ವಿನಿಯೋಗಿಸುವಿರಿ. ಏನನ್ನಾದರೂ ಕೇಳಿ ಬಂದವರಿಗೆ ಇಲ್ಲವೆನದೇ ನೀಡಿ. ಅವರ ಸಂತೋಷದಲ್ಲಿ ಭಾಗಿಯಾಗುವಿರಿ. ಉಪಕಾರ ಮಾಡುವುದು ನಿಮಗೆ ಖುಷಿ ಕೊಡುವುದು. ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ತಾಯಿಯಿಂದ ನಿಮಗೆ ಹಿತವಚನವು ಸಿಗಬಹುದು. ಪ್ರೀತಿಯನ್ನು ಉಳಿಸಿಕೊಳ್ಳಲು ನೀವು ಪ್ರಯತ್ನಶೀಲರಾಗುವಿರಿ. ಹಣಕಾಸಿಗೆ ಸಂಬಂಧಿಸಿದಂತೆ ನಿಮ್ಮ ಕ್ರಮವು ಬಹಳ ಚೆನ್ನಾಗಿರುವುದು. ಭರವಸೆ ಸಿಗುವ ಉದ್ಯೋಗದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವುದು ಬೇಡ. ತಾಳ್ಮೆಯ ಪರೀಕ್ಷೆ ಇಂದು ಆಗಬಹುದು. ಕಛೇರಿಯ ಒತ್ತಡದಿಂದ ನಿಮಗೆ ಸ್ವಂತ ಕಾರ್ಯವು ಮರೆಯುವುದು. ದೈವಭಕ್ತಿಯು ಕಡಿಮೆ ಆಗಲಿದೆ. ಶ್ರಮದ ಕೆಲಸಕ್ಕೆ ನೀವು ಹೋಗುವುದಿಲ್ಲ. ಕೃಷಿಯ ವ್ಯವಹಾರದಲ್ಲಿ ಲಾಭವು ಬರವಂತೆ ಆಲೋಚನೆ ಮಾಡುವಿರಿ. ತುಂಬಾ ಎತ್ತರದ ಪ್ರದೇಶವನ್ನು ಹತ್ತುವುದು ಬೇಡ.
ಕುಂಭ ರಾಶಿ: :ಆರ್ಥಿಕತೆಯಲ್ಲಿ ಸಬಲತೆ ಕಾಣಲು ಕಷ್ಟವಾದರೂ ಮಾಡಲೇಬೇಕಾಗುವುದು. ಬರುವ ಕಷ್ಟಗಳು ನಿಮ್ಮ ಕರ್ಮದ್ದು ಎನ್ನುವ ವಿಚಾರ ನೆನಪಿರಲಿ. ವ್ಯವಹಾರದ ದೃಷ್ಟಿಯಿಂದ ನಿಮಗೆ ಸೋಲಾಗುವುದು. ಅದನ್ನು ಸಹಿಸುವ ಎದುರಿಸುವ ಶಕ್ತಿಯನ್ನು ಕೊಡು ಎಂದು ಕೇಳಿಕೊಳ್ಳಿ. ನಿಮಗೆ ಯಾವದೋ ಪ್ರೇರಣೆಯಿಂದ ನಿಮ್ಮ ಜೀವನವನ್ನು ಬದಲಿಸಿಕೊಳ್ಳುವಿರಿ. ಪ್ರೀತಿಯನ್ನು ಒಡೆಯಲು ನೀವು ಬಹಳ ಹಾತೊರೆಯುವಿರಿ. ಸಣ್ಣ ವ್ಯಾಪರವು ಲಾಭದಾಯಕವಾಗಲಿದೆ. ಭಾವ ಬಲದಿಂದ ಗೆಲ್ಲಲು ಪ್ರಯತ್ನಿಸಿ. ಕೊಟ್ಟ ಜವಾಬ್ದಾರಿಯನ್ನು ಸ್ವ ಇಚ್ಛೆಯಿಂದ ಮಾಡುವಿರಿ. ನಿಮಗೆ ಭವಿಷ್ಯವನ್ನು ನಿರ್ಧರಿಸಲು ಕಷ್ಟವಾದೀತು. ನಿಮ್ಮ ಕಾಮಗಾರಿಯ ಪ್ರಗತಿಶೀಲನೆಯನ್ನು ಮಾಡಲು ಅಧಿಕಾರಿಗಳು ಹೋಗುವರು. ಇಂದಿನ ನಿಮ್ಮ ಸಮಯವು ಸದುಪತೋಗವಾಗಲಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೊಸತನ್ನು ಮಾಡಲು ಯತ್ನಿಸುವಿರಿ. ಯವುದನ್ನೋ ಇನ್ನಾವುದಕ್ಕೋ ತಳಕುಹಾಕುವಿರಿ. ವಾಹನವನ್ನು ನಿಧಾನವಾಗಿ ಚಲಾಯಿಸಿ. ಇಂದು ಕುಟುಂಬದ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ನಿಮ್ಮ ಅನನುಕೂಲತೆಯನ್ನು ಹೇಳಬೇಡಿ. ನೌಕರರನ್ನು ಉದ್ಯಮದಲ್ಲಿ ಕಡಿಮೆ ಮಾಡಿಕೊಳ್ಳಬೇಕಾಗುವುದು.
ಮೀನ ರಾಶಿ: :ಸ್ನೇಹಿತರ ಜೊತೆ ಆರಂಭವಾದ ಸಂವಾದವು ವಿವಸದವಾಗಿ ಕೊನೆಯಾಗಲಿದೆ. ನಿಮ್ಮನ್ನು ಗುಪ್ತವಾಗಿ ಗಮನಿಸಿದಂತೆ ತಿಳಿದೀತು. ಸ್ವಂತಿಕೆಯನ್ನು ಸಂಪಾದಿಸಬೇಕು ಎನ್ನುವ ನಿಮ್ಮ ತೀವ್ರತರವಾದ ಪ್ರಯತ್ನಕ್ಕೆ ಇಂದು ಕೆಲವು ಅಡ್ಡಿಗಳು ಬರಬಹುದು. ನಿಮ್ಮಿಂದ ಆಗಬೇಕಾದ ಕೆಲಸಗಳು ಬಹಳ ಇದ್ದರೂ ಯಾವುದೇ ಚಿಂತೆ ಇಲ್ಲದೇ ಇರುವಿರಿ. ದೊಡ್ಡ ವ್ಯಕ್ತಿಗಳಾದರೂ ಜನಸಾಮಾನ್ಯರಂತೆ ಇರಲಿದ್ದೀರಿ. ಆಪ್ತರು ನಿಮ್ಮಿಂದ ದೂರವಾಗಬಹುದು. ಇದು ನಿಮ್ಮನ್ನು ವಿಚಲಿತ ಗೊಳಿಸಬಹುದು. ನಿಮ್ಮ ಬಳಿ ಆಗದೇ ಇರುವ ಕಾರ್ಯಕ್ಕೆ ಮರಳಿ ಯತ್ನವ ಮಾಡುವಿರಿ. ನೀವು ಯಾರನ್ನಾದರೂ ಬಹಳ ಇಷ್ಟಪಡುವಿರಿ. ಮನೆಯಿಂದ ದೂರವಿರಲು ನೀವು ಬಯಸುವಿರಿ. ಉದ್ಯೋಗದಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರುವುದು. ಮನೆಯ ಚಿಂತೆಯೂ ನಿಮ್ಮನ್ನು ಕಾಡಬಹುದು. ನಿರೀಕ್ಷಿತ ವಿಳಂಬವನ್ನು ಬೇರೆ ರೀತಿಯಲ್ಲಿ ಸರಿದೂಗಿಸಿಕೊಳ್ಳಿ. ಕೆಲಸದ ವಿಚಾರದಲ್ಲಿ ಉಭಯ ಸಂಕಟವಾಗಬಹುದು. ಒತ್ತಾಯದಿಂದ ಒಲಿಸಿಕೊಂಡಿದ್ದು ನಿಮಗೆ ಸಿಗದು. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟ.
-ಲೋಹಿತ ಹೆಬ್ಬಾರ್ – 8762924271 (what’s app only)




