AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Job Horoscope: ನಿಮ್ಮ ರಾಶಿಗನುಗುಣವಾಗಿ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ

ಜನವರಿ 11-17, 2026ರ ವಾರದಲ್ಲಿ ಉದ್ಯೋಗದಲ್ಲಿ ಆರಂಭಿಕ ಸವಾಲುಗಳ ನಂತರ ಸಮತ್ವ ಉಂಟಾಗಲಿದೆ. ನಿರುದ್ಯೋಗಿಗಳಿಗೆ ಅವಕಾಶ ಸೂಚನೆಗಳು ಕಂಡರೂ, ಮನಸ್ಸಿನ ಮೇಲೆ ಈ ವಾರದ ಪ್ರಭಾವ ಹೆಚ್ಚಿರಲಿದೆ. ಪ್ರತಿಯೊಂದು ರಾಶಿಗೂ ವೃತ್ತಿಜೀವನದಲ್ಲಿ ಹೊಸ ಹೊಣೆಗಾರಿಕೆ, ಆರ್ಥಿಕ ಸ್ಥಿರತೆ, ಅಥವಾ ಸಂದರ್ಶನ ಯೋಗವಿದ್ದು, ಆತ್ಮವಿಶ್ವಾಸ ಮತ್ತು ಸರಿಯಾದ ನಿರ್ಧಾರಗಳಿಂದ ಮಾತ್ರ ಪ್ರಗತಿ ಸಾಧ್ಯ.

Weekly Job Horoscope: ನಿಮ್ಮ ರಾಶಿಗನುಗುಣವಾಗಿ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ
ಉದ್ಯೋಗ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jan 09, 2026 | 11:09 AM

Share

11-01-2026ರಿಂದ 17-01-2026ರವರಗೆ ಉದ್ಯೋಗದಲ್ಲಿ ನಾನಾ ಬಗೆಯ ವಿಷಮತೆಗಳು ಕಂಡುಬಂದರೂ ಅಂತ್ಯದಲ್ಲಿ ಸಮತ್ವ ಉಂಟಾಗಲಿದೆ.‌ ನಿರುದ್ಯೋಗಿಗಳಿಗೆ ಅವರಿಗೆ ಬೇಕಾದ ಕೆಲಸವಿಲ್ಲ ಎಂಬ ಬೇಸರವೇ ಅಧಿಕ. ನಿಮ್ಮ ಮನಸ್ಸಿನ ಮೇಲೆ ಈ ವಾರ ಹೆಚ್ಚು ಪರಿಣಾಮಕಾರಿಯಾದ ಪ್ರಭಾವ ಬೀರಲಿದೆ.

ಮೇಷ ರಾಶಿ:

ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ವಾರ ಉದ್ಯೋಗದಲ್ಲಿರುವವರಿಗೆ ಹೊಸ ಹೊಣೆಗಾರಿಕೆಗಳಿಂದ ಮೆಚ್ಚುಗೆ ಸಿಗುತ್ತದೆ, ನಿರುದ್ಯೋಗಿಗಳಿಗೆ ಅವಕಾಶ ಸೂಚನೆ ಇದ್ದರೂ ಆತುರದ ನಿರ್ಧಾರ ಮತ್ತು ಅಸಮಾಧಾನ ಪ್ರಗತಿಯನ್ನು ಸ್ವಲ್ಪ ತಡೆಯಬಹುದು.

ವೃಷಭ ರಾಶಿ:

ಈ ವಾರದಲ್ಲಿ ಉದ್ಯೋಗಸ್ಥರಿಗೆ ಸ್ಥಿರತೆ ಹಾಗೂ ಆದಾಯ ವೃದ್ಧಿಯ ಸೂಚನೆ, ನಿರುದ್ಯೋಗಿಗಳಿಗೆ ಸಹಾಯ ಸಿಗಬಹುದು, ಆದರೆ ನಿಧಾನಗತಿ ಮತ್ತು ಬದಲಾವಣೆ ಭಯ ಅವಕಾಶಗಳನ್ನು ಕೈ ತಪ್ಪಿಸಬಹುದು.

ಮಿಥುನ ರಾಶಿ:

ಮೂರನೇ ರಾಶಿಯವರಿಗೆ ಈ ವಾರ ಉದ್ಯೋಗದಲ್ಲಿರುವವರಿಗೆ ಹೊಸ ಯೋಜನೆ, ನಿರುದ್ಯೋಗಿಗಳಿಗೆ ಸಂದರ್ಶನ ಯೋಗ ಇದ್ದರೂ ಏಕಾಗ್ರತೆಯ ಕೊರತೆ ಮತ್ತು ಗೊಂದಲ ಸಂಪೂರ್ಣ ಯಶಸ್ಸಿಗೆ ಅಡ್ಡಿಯಾಗಬಹುದು.

ಕರ್ಕಾಟಕ ರಾಶಿ:

ಚಂದ್ರನ ಆಧಿಪತ್ಯದ ಈ ರಾಶಿಯ ಉದ್ಯೋಗಸ್ಥರಿಗೆ ಅಧಿಕೃತ ಕೆಲಸಗಳಲ್ಲಿ ಅನುಕೂಲ, ನಿರುದ್ಯೋಗಿಗಳಿಗೆ ಪ್ರಯತ್ನ ಫಲ ನೀಡಬಹುದು, ಆದರೆ ಮಾತಿನ ಅಸಾವಧಾನತೆ ಮತ್ತು ಮನಸ್ತಾಪ ಮಾನಸಿಕ ಒತ್ತಡ ತರುತ್ತದೆ.

ಸಿಂಹ ರಾಶಿ:

ಈ ವಾರದಲ್ಲಿ ಉದ್ಯೋಗದಲ್ಲಿರುವವರಿಗೆ ನಾಯಕತ್ವ ಮತ್ತು ಗೌರವ, ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಇದ್ದರೂ ಅಹಂಕಾರ ಮತ್ತು ಇತರರ ಅಸೂಯೆ ವಿಳಂಬಕ್ಕೆ ಕಾರಣವಾಗಬಹುದು.

ಕನ್ಯಾ ರಾಶಿ:

ಈ ರಾಶಿಯರಿಗೆ ಎರಡನೇ ವಾರ ಉದ್ಯೋಗಸ್ಥರಿಗೆ ಶಿಸ್ತಿನ ಕೆಲಸದಿಂದ ಮೆಚ್ಚುಗೆ, ನಿರುದ್ಯೋಗಿಗಳಿಗೆ ಅವಕಾಶದ ಸೂಚನೆ ಇದ್ದರೂ ಅಧಿಕ ಒತ್ತಡ ಮತ್ತು ದಣಿವು ಉತ್ಸಾಹ ಕಡಿಮೆ ಮಾಡಬಹುದು.

ತುಲಾ ರಾಶಿ:

ಏಳನೇ ರಾಶಿಯವರಿಗೆ ಉದ್ಯೋಗದಲ್ಲಿರುವವರಿಗೆ ಹೊಸ ಒಪ್ಪಂದ ಲಾಭ, ನಿರುದ್ಯೋಗಿಗಳಿಗೆ ಪರಿಚಯದಿಂದ ಅವಕಾಶ ಸಿಗಬಹುದು, ಆದರೆ ನಿರ್ಧಾರದಲ್ಲಿ ಗೊಂದಲ ಮತ್ತು ವಿಳಂಬವು ಪ್ರಗತಿಯನ್ನು ಕುಗ್ಗಿಸುತ್ತದೆ.

ವೃಶ್ಚಿಕ ರಾಶಿ:

ಕುಜನ ಆಧಿಪತ್ಯದ ಈ ರಾಶಿಯವರಿಗೆ ಉದ್ಯೋಗಸ್ಥರಿಗೆ ಸ್ಪರ್ಧೆಯಲ್ಲಿ ಗೆಲುವು, ನಿರುದ್ಯೋಗಿಗಳಿಗೆ ಅವಕಾಶ ಕಾಣಿಸಿಕೊಳ್ಳಬಹುದು, ಆದರೆ ಶತ್ರುಕಾಟ ಮತ್ತು ರಹಸ್ಯ ವಿಚಾರಗಳು ಒತ್ತಡ ಹೆಚ್ಚಿಸಬಹುದು.

ಧನು ರಾಶಿ:

ಎರಡನೇ ವಾರ ಉದ್ಯೋಗದಲ್ಲಿರುವವರಿಗೆ ಬದಲಾವಣೆ ಅಥವಾ ವಿದೇಶ ಸಂಪರ್ಕ ಲಾಭ, ನಿರುದ್ಯೋಗಿಗಳಿಗೆ ಅವಕಾಶ ಇದ್ದರೂ ಅತಿಯಾದ ನಿರೀಕ್ಷೆ ಅಸ್ಥಿರತೆ ಉಂಟುಮಾಡಬಹುದು.

ಮಕರ ರಾಶಿ:

ಈ ವಾರ ಉದ್ಯೋಗಸ್ಥರಿಗೆ ಶ್ರಮದಿಂದ ಸ್ಥಾನಮಾನ ಹೆಚ್ಚಳ, ನಿರುದ್ಯೋಗಿಗಳಿಗೆ ನಿಧಾನವಾಗಿ ಅವಕಾಶ ಸಿಗುತ್ತದೆ, ಆದರೆ ಫಲ ತಡ ಮತ್ತು ಮಾನಸಿಕ ಒತ್ತಡ ಸಹನೆ ಪರೀಕ್ಷಿಸುತ್ತದೆ.

ಕುಂಭ ರಾಶಿ:

ಜನವರಿಯ ಈ ವಾರ ಉದ್ಯೋಗದಲ್ಲಿರುವವರಿಗೆ ತಾಂತ್ರಿಕ ಪ್ರಗತಿ, ನಿರುದ್ಯೋಗಿಗಳಿಗೆ ಹೊಸ ಆಲೋಚನೆಗಳಿಂದ ಅವಕಾಶ, ಆದರೆ ತಂಡದ ಅಸಮಂಜಸತೆ ಮತ್ತು ವಿಳಂಬ ಅಡ್ಡಿಯಾಗಬಹುದು.

ಮೀನು ರಾಶಿ:

ಈ ವಾರದಲ್ಲಿ ಉದ್ಯೋಗಸ್ಥರಿಗೆ ಸಮಸ್ಯೆ ಪರಿಹಾರ, ನಿರುದ್ಯೋಗಿಗಳಿಗೆ ಕೆಲಸದ ಸೂಚನೆ ಕಂಡರೂ ಆತ್ಮವಿಶ್ವಾಸ ಕೊರತೆ ಮತ್ತು ನಿರ್ಧಾರ ವಿಳಂಬ ಪ್ರಗತಿಯನ್ನು ನಿಧಾನಗೊಳಿಸಬಹುದು.

– ಲೋಹಿತ ಹೆಬ್ಬಾರ್ – 8762924271 (what’s app only)

KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ
ಸಚಿವ ಮಲ್ಲಿಕಾರ್ಜುನ್ ರಾಜೀನಾಮೆ ಪ್ರಸ್ತಾಪದ ಹಿಂದಿನ ಅಸಲಿ ಕಾರಣ ಇಲ್ಲಿದೆ
ಸಚಿವ ಮಲ್ಲಿಕಾರ್ಜುನ್ ರಾಜೀನಾಮೆ ಪ್ರಸ್ತಾಪದ ಹಿಂದಿನ ಅಸಲಿ ಕಾರಣ ಇಲ್ಲಿದೆ
ದಲಿತರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ನೀಡಬಾರದು: ಕೆ.ಎನ್. ರಾಜಣ್ಣ
ದಲಿತರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ನೀಡಬಾರದು: ಕೆ.ಎನ್. ರಾಜಣ್ಣ
ಭೂಸ್ವಾಧೀನ ಮಾಡಿ ವರ್ಷ ಕಳೆದರೂ ಪರಿಹಾರ ನೀಡದ KBJNL ಕಚೇರಿ ಜಪ್ತಿ
ಭೂಸ್ವಾಧೀನ ಮಾಡಿ ವರ್ಷ ಕಳೆದರೂ ಪರಿಹಾರ ನೀಡದ KBJNL ಕಚೇರಿ ಜಪ್ತಿ
ಇದೆಂತಹ ಅವಮಾನ... ಪಾಕಿಸ್ತಾನ್ ತಂಡಕ್ಕೆ 'ಬಾಬರ್' ಭಯ
ಇದೆಂತಹ ಅವಮಾನ... ಪಾಕಿಸ್ತಾನ್ ತಂಡಕ್ಕೆ 'ಬಾಬರ್' ಭಯ