AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ರಾಶಿ ಭವಿಷ್ಯ ಹೀಗಿದೆ

ನೀವು ಧನು, ಮಕರ, ಕುಂಭ, ಮೀನಾ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 04) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ರಾಶಿ ಭವಿಷ್ಯ ಹೀಗಿದೆ
ಇಂದಿನ ರಾಶಿ ಭವಿಷ್ಯ
Rakesh Nayak Manchi
|

Updated on: Apr 04, 2023 | 6:30 AM

Share

ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಏಪ್ರಿಲ್​ 04) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು  ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ವೃದ್ಧಿ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 27 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ. ರಾಹು ಕಾಲ ಮಧ್ಯಾಹ್ನ 03:40 ರಿಂದ 05:12ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:31 ರಿಂದ 11:03ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:35 ರಿಂದ 02:07ರ ವರೆಗೆ.

ಧನುಸ್ಸು: ಇಂದು ಆರೋಗ್ಯದಲ್ಲಿ ವ್ಯತ್ಯಾಸವು ಕಂಡುಬರಬಹುದು. ಇಂದು ಎಲ್ಲರೊಡನೆ ಸಂತೋಷದಿಂದ ಕಾಲ ಕಳೆಯುವಿರಿ. ಮಗನ ಓದಿಗೆ ಧನಸಹಾಯವನ್ನು ಕೇಳಬೇಕಾಗಿಬರಬಹುದು. ಅನಗತ್ಯವಾಗಿ ಖರ್ಚನ್ನು ತಂದುಕೊಳ್ಳುವಿರಿ. ಕುಟುಂಬದವರ ಅನಾರೋಗ್ಯವು ನಿಮಗೆ ಓಡಾಟವಾಗಲಿದೆ. ಧಾರ್ಮಿಕವಿಚಾರದಲ್ಲಿ ಆಸಕ್ತಿ ಇರಲಿದೆ. ಮನೆಯಿಂದ ದೂರವಿರಬೇಕಾಗಿರಬಹುದು. ಹಸಿದುಕೊಂಡು ಇರಬೇಕಾಗಬಹುದು.

ಮಕರ: ಪ್ರಯಾಣಗಳು ನಿಮಗೆ ಆಹ್ಲಾದಕರವಾಗಿರುತ್ತದೆ. ಸತ್ಯವನ್ನೇ ಹೇಳಿದರೂ ನಂಬದ ಸ್ಥಿತಿ ನಿಮ್ಮದಾಗಿರುತ್ತದೆ. ಸಾಕಷ್ಟು ಹಣವನ್ನು ಆರಾಮದಾಯಕ ವಿಷಯಗಳಿಗೆ ಖರ್ಚು ಮಾಡಬಹುದು. ಇಂದು ನೀವು ಮಕ್ಕಳಿಗೆ ತಿಳಿಹೇಳುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳಿಗೆ ಕೃತಜ್ಞರಾಗಿರುವಿರಿ. ಇಂದು ನಿಮಗೆ ಸಂಗಾತಿಯ ಬೆಂಬಲ ಸಿಗಲಿದೆ. ಬಹಳ ದಿನಗಳ ಅನಂತರ ಪ್ರೀತಿಪಾತ್ರರನ್ನು ಭೇಟಿಯಾಗುವಿರಿ.

ಕುಂಭ: ದಿನದ ಆರಂಭವು ವ್ಯಥೆಯಿಂದ ಆರಂಭವಾದರೂ ಸಂಜೆ ಮುಕ್ತಾಯವಾಗುವಾಗ ಖುಷಿಯಿಂದ ಇರುವಿರಿ. ಹತ್ತಿರದವರನ್ನು‌ ಕಳೆದುಕೊಳ್ಳುವವರಿದ್ದೀರಿ. ಕೊನೆಯಲ್ಲಿ, ನ್ಯಾಯಾಲಯದ ಪ್ರಕರಣವು ನಿಮ್ಮ ಪರವಾಗಿಬರಬಹುದು. ಅನಂತರ ನೆಮ್ಮದಿಯ ನಿಟ್ಟುಸಿರು ಬಿಡುವಿರಿ. ಇಂದು ನಿಮ್ಮ ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲು. ಕಷ್ಟವೆನಿಸಿದರೆ ಸುಮ್ಮನಾಗಿ. ಅತಿಯಾದ ಸಲಹೆಯಿಂದ ಆತಂಕ ಬಂದೀತು.

ಮೀನ: ಕೆಲಸ‌ ಮಾಡುವುದೊಂದೇ ನಿಮ್ಮ ಗುರಿಯಾಗಿದ್ದು ಬೇರೆ ಗಮನವನ್ನು ಕೊಡಲಾರಿರಿ. ಹಿಂದೆ ಸಿಕ್ಕಿಬಿದ್ದ ಹಣ ಸಿಗಲಿದೆ. ಹೊಸ ಆಸ್ತಿ, ವಾಹನಗಳು ಮತ್ತು ವ್ಯವಹಾರಗಳಲ್ಲಿ ಹೊಸ ಲಾಭದಾಯಕ ವ್ಯವಹಾರಗಳ ಸಾಧ್ಯತೆಗಳಿವೆ. ಓದಿನ ಬಗ್ಗೆ ಅಧಿಕ ವ್ಯಾಮೋಹ ಇರಲಿಲ್ಲ ದೆ. ಈ ಸಮಯದಲ್ಲಿ, ಚಿಲ್ಲರೆ ವ್ಯಾಪಾರ ಮಾಡುವವರಿಗೆ ಲಾಭವಾಗುತ್ತದೆ. ಬಂಧುಗಳು ತಮ್ಮ ಕೈಲಾದ ಸಹಾಯವನ್ನು ಮಾಡುವರು. ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ. ಖುಷಿಯನ್ನು ಹಂಚಿಕೊಳ್ಳಿ.

-ಲೋಹಿತಶರ್ಮಾ ಇಡುವಾಣಿ