AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope – ವಾರ ಭವಿಷ್ಯ: ಈ ವಾರ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

Weekly Horoscope - ವಾರ ಭವಿಷ್ಯ: ಈ ವಾರ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Skanda

Updated on:Aug 29, 2021 | 6:52 AM

ವಾರಭವಿಷ್ಯ: ತಾ.30-08-2021 ರಿಂದ ತಾ.05-09-2021 ರವರೆವಿಗೆ.

ಮೇಷ: ಸಾಂಸಾರಿಕವಾಗಿ ನಿಮ್ಮ ಮನಸ್ಸು ಸದಾ ಯೋಚಿಸುವಂತಾಗಲಿದೆ. ಆಗಾಗ ಶುಭಮಂಗಲ ಕಾರ್ಯಗಳಿಗಾಗಿ ಓಡಾಟವು ಕಂಡು ಬರುವುದು. ದೈಹಿಕ ಆರೋಗ್ಯವು ಏರುಪೇರಾದರೂ ತಾತ್ಕಾಲಿಕವೆನ್ನಬಹುದು. ಸಾಂಸಾರಿಕವಾಗಿ ನೆಮ್ಮದಿ ಇದ್ದರೂ ಅನಾವಶ್ಯಕವಾಗಿ ಕಿರಿಕಿರಿ ತಪ್ಪಲಾರದು. ಅನೇಕ ವೇಳೆ ಸೃಜನಾತ್ಮಕವಾಗಿ ವಿಚಾರ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಬಗೆಹರಿಯಲಿವೆ. ಆರೋಗ್ಯ ಭಾಗ್ಯಕ್ಕಾಗಿ ಆಹಾರ ಪದ್ಧತಿ ಹಾಗೂ ಶಾರೀರಿಕವಾಗಿ ಸ್ವತ್ಛತೆಗೆ ಹೆಚ್ಚಿನ ಗಮನ ಹರಿಸಬೇಕಾದೀತು. ಅದೃಷ್ಟ ಬಣ್ಣ: ಆರೆಂಜ್ ಅದೃಷ್ಟ ಸಂಖ್ಯೆ: 1

ವೃಷಭ: ವೃತ್ತಿರಂಗದಲ್ಲಿ ಹೆಚ್ಚು ಕೆಲಸ ಬಂದರೂ ಅವೆಲ್ಲವನ್ನು ನಿಭಾಯಿಸುವ ಸಾಧ್ಯತೆ ಬರುತ್ತದೆ. ನೀರಸವಾದ ನಿರುದ್ಯೋಗಿಗಳ ದೈನಂದಿನ ಬದುಕಿನಲ್ಲಿ ಆಶಾಕಿರಣ ಮೂಡಿ ಬರುತ್ತದೆ. ಕಿಟಕಿ ಪ್ರೇಮಿಗಳಿಗೆ ಮದುವೆ ಅನಿವಾರ್ಯವಾಗಲಿದೆ. ವಿದ್ಯಾರ್ಥಿಗಳಾದವರು ದುಶ್ಚಟ ಹಾಗೂ ದುವ್ಯಸನಗಳ ಬಗ್ಗೆ ಜಾಗ್ರತೆ ವಹಿಸಬೇಕಾದೀತು. ಮದುವೆಯ ಮುಂಚಿನ ಪರೀಕ್ಷಾರ್ಥ ಹೊಂದಾಣಿಕೆಗಳು ಅವಿವಾಹಿತರಿಗೆ ಕಂಕಣಬಲಕ್ಕೆ ಪೂರಕವಾಗಲಿವೆ. ವ್ಯಾಪಾರ, ವ್ಯವಹಾರಗಳಲ್ಲಿ ಚೇತರಿಕೆಯು ವ್ಯಾಪಾರಸ್ಥರಿಗೆ ಸಮಾಧಾನ ತಂದೀತು. ಅದೃಷ್ಟ ಬಣ್ಣ: ಗೋದಿ ಅದೃಷ್ಟ ಸಂಖ್ಯೆ: 2

ಮಿಥುನ: ಕಣ್ಣೆದುರೇ ನಡೆಯುವ ಮೋಸ, ವಂಚನೆಯನ್ನು ಎದುರಿಸುವ ಛಾತಿ ನಿಮಗೆ ಇಲ್ಲವಾದೀತು. ಸಾಮಾಜಿಕವಾಗಿ ಜನ ಮನ್ನಣೆಗೆ ಪಾತ್ರರಾಗುವಿರಿ. ವಿದ್ಯಾರ್ಥಿಗಳು ಮಿತ್ರರ ಸಹವಾಸದಿಂದ ಅಡ್ಡದಾರಿ ಹಿಡಿಯುವ ಪ್ರವೃತ್ತಿ ತೋರಿಬಾರದಂತೆ ಕಾಳಜಿ ವಹಿಸಿರಿ. ಸೋಲನ್ನು ಒಪ್ಪಿ ಗುರಿಯನ್ನು ಸಾಧಿಸಿದಲ್ಲಿ ಯಶಸ್ಸು ನಿಮ್ಮದಾದೀತು. ಗೃಹಗಳ ಪ್ರತಿಕೂಲತೆಯಿಂದ ಆಲಸಿಯಾದವನ ಕಾರ್ಯಶೀಲತೆ ಕ್ಷೀಣಿಸುತ್ತಲೇ ಹೋಗುತ್ತದೆ. ಅವಿವಾಹಿತರಿಗೆ ವೈವಾಹಿಕ ಸಂಬಂಧಿತ ಮಾತುಕತೆಗಳು ಕಂಕಣ ಬಲದಲ್ಲಿ ಪೂರ್ಣವಾಗಲಿವೆ. ಅದೃಷ್ಟ ಬಣ್ಣ: ಬಿಳಿ ಅದೃಷ್ಟ ಸಂಖ್ಯೆ: 9

ಕಟಕ: ವಿದ್ಯಾಭ್ಯಾಸದ ಬಗ್ಗೆ ಶಿಸ್ತು ಪಾಲಿಸುವಂತೆ ಹೇಳುವ ಪ್ರಸಂಗ ಬರುತ್ತದೆ. ದುಂದುವೆಚ್ಚವನ್ನು ಮಾಡುವ ಸಂದರ್ಭದಲ್ಲಿ ವೆಚ್ಚದ ಮೇಲೆ ಕಡಿವಾಣ ಹಾಕುವುದನ್ನು ಕಲಿಯಬೇಕಾಗುವುದು. ಉದ್ಯೋಗಿಗಳು ಕೆಲಸದ ಮಹತ್ವವನ್ನು ತಿಳಿಯುವುದು ಲೇಸು. ಯುವಕ, ಯುವತಿಯರು ಪರಸ್ಪರ ಪ್ರೇಮದ ಸುಳಿಯಲ್ಲಿ ಸಿಲುಕಿಯಾರು. ಒಂಟಿಯಾದ ಯೋಗ್ಯ ವಯಸ್ಕರಿಗೆ ಮದುವೆಯ ಆಸರೆಯು ಬೇಕೆನಿಸುವುದು. ಅದೃಷ್ಟ ಬಣ್ಣ: ಕೇಸರಿ ಅದೃಷ್ಟ ಸಂಖ್ಯೆ: 8

ಸಿಂಹ: ಹೊಸ ಚಿಂತನೆ, ಹೊಸ ಕಾರ್ಯಗಳ ಆರಂಭಗಳಿಗೆ ಇದು ಸೂಕ್ತವಾದ ಸಮಯವಾದೀತು. ವ್ಯಾಪಾರ, ವ್ಯವಹಾರಗಳಲ್ಲಿ ಹೂಡಿಕೆ, ದುಡುಕು ನಿರ್ಧಾರಗಳು ಆರ್ಥಿಕ ಸ್ಥಿತಿಯನ್ನು ಏರುಪೇರು ಮಾಡಲಿದೆ. ಸತ್ಯವನ್ನು , ಬಿಚ್ಚುಮಾತುಗಳನ್ನು ಹೇಳಿ ನಿಷ್ಠುರಕ್ಕೆ ಕಾರಣರಾಗದಂತೆ ಗಮನವನ್ನು ಹರಿಸಿರಿ. ಆರೋಗ್ಯ ಭಾಗ್ಯಕ್ಕಾಗಿ ನಿಗದಿಪಡಿಸಿದ ಸಮಯದಲ್ಲಿ ಆಹಾರ ಸೇವನೆ ಅಗತ್ಯವಿರುತ್ತದೆ. ಸಂಭಾವಿತರೆಂದು ತೋರಿಸಿಕೊಳ್ಳುವ ಹಿತಶತ್ರುಗಳಿಂದ ಮೋಸ ಹೋಗುವ ಪ್ರಸಂಗವು ಎದುರಾದೀತು. ಅದೃಷ್ಟ ಬಣ್ಣ: ಕೆಂಪು ಅದೃಷ್ಟ ಸಂಖ್ಯೆ: 4

ಕನ್ಯಾ: ಭೂತಕಾಲದ ತಪ್ಪುಗಳಿಂದ ಪಾಠ ಕಲಿತು, ವರ್ತಮಾನ ಕಾಲದ ಕಡೆ ಲಕ್ಷ್ಯ ಹಾಕದೆ ಇರುವವರು ಮೂರ್ಖರಾದಾರು. ಕಾರ್ಯ ಕ್ಷೇತ್ರದ ಕಿಟಕಿ ಸದಾ ತೆರೆದಿರಲಿ. ನಿಮ್ಮ ಸಂಕುಚಿತತೆಯ ಅರಿವೂ ಉಂಟಾದೀತು. ಸಮಯ, ಅವಕಾಶಗಳನ್ನು ಒದಗಿಸುತ್ತದೆ. ಆದರೆ, ಸಾಧಿಸಬೇಕಾದುದನ್ನು ಸಮಯ ವ್ಯರ್ಥಮಾಡದೆ ಸಾಧಿಸಿದರೆ ಯಶಸ್ಸು ಹುಡುಕಿ ಕೊಂಡು ಬರಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಲಾಭಕರವಾದ ಆದಾಯವಿದ್ದರೂ ಪೈಪೋಟಿಯ ವಾತಾವರಣವನ್ನು ಎದುರಿಸಬೇಕಾಗುತ್ತದೆ. ಅದೃಷ್ಟ ಬಣ್ಣ: ತಿಳಿ ನೀಲಿ ಅದೃಷ್ಟ ಸಂಖ್ಯೆ: 6

ತುಲಾ: ಕೌಟುಂಬಿಕ ಜೀವನದಲ್ಲಿ ಏರಿಳಿತಗಳ ಅನುಭವ ತಂದು ಕೊಡಲಿದೆ. ಹಾಗೇ ಹೆಚ್ಚಿನ ಉಸ್ತುವಾರಿ ಅಗತ್ಯವಿದೆ. ಧಾರ್ಮಿಕ ಹಾಗೂ ಆಧ್ಯಾತ್ಮಿಕ ವಿಷಯದತ್ತ ಮನಸ್ಸು ಹೆಚ್ಚು ವಾಲುವುದು. ಆರ್ಥಿಕ ಸಂಗ್ರಹ ಬಹಳಷ್ಟಿರುತ್ತದೆ. ಸ್ತ್ರೀಯರಿಗೆ ಹಲವು ಖರ್ಚುಗಳು ಎದುರಾಗುತ್ತವೆ. ನೂತನ ವಧೂವರರಿಗೆ ಸಿಹಿವಾರ್ತೆ ಇದೆ. ಬಂಧುಮಿತ್ರರಿಂದ ಪ್ರಶಂಸೆಗೆ ಒಳಗಾಗುವಿರಿ. ಪ್ರಯತ್ನಿಸುವ ಅನೇಕ ಕೆಲಸಕಾರ್ಯಗಳಲ್ಲಿ ಸಾಫ‌ಲ್ಯ ಕಾಣುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ತಂದು ಕೊಡಲಿದೆ. ಅದೃಷ್ಟ ಬಣ್ಣ: ಗುಲಾಬಿ ಅದೃಷ್ಟ ಸಂಖ್ಯೆ: 1

ವೃಶ್ಚಿಕ: ವೃತ್ತಿರಂಗದಲ್ಲಿ ಅನುಕರಣೆ ಸ್ವಂತಿಕೆಯ ಅಭಿವ್ಯಕ್ತಿಯಲ್ಲ. ಸಾವಕಾಶವಾಗಿ ತಮ್ಮದೇ ಆದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿರಿ. ಯಶಸ್ಸು ನಿಮ್ಮದಾದೀತು. ವಿವಾಹ ಬಂಧನಕ್ಕೆ ಒಳಗಾಗುವ ವಾತಾವರಣ ಯೋಗ್ಯವಯಸ್ಕರಿಗೆ ಒದಗಿ ಬರಲಿದೆ. ದಾಂಪತ್ಯದಲ್ಲಿ ಸಾಮರಸ್ಯದ ಬುನಾದಿ ಭದ್ರವಾಗಲಿದೆ. ಧಾರ್ಮಿಕ ಕ್ಷೇತ್ರದಲ್ಲಿ ದೇವರ ಸೇವೆ, ಪ್ರಸಿದ್ಧಿಗಾಗಿ ನಿಮ್ಮ ಧನವ್ಯಯವಾಗಲಿದೆ. ಆರೋಗ್ಯದ ಬಗ್ಗೆ ದೈಹಿಕ ತಪಾಸಣೆ ತೋರಿಬಂದೀತು. ಸತತ ಸಾಧನೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಲಿದೆ. ಅದೃಷ್ಟ ಬಣ್ಣ: ಬೂದು ಅದೃಷ್ಟ ಸಂಖ್ಯೆ: 3

ಧನು: ಘಟಿಸಬಹುದಾದ ಸಮಸ್ಯೆಗಳು ಹಂತ ಹಂತವಾಗಿ ತಮ್ಮಷ್ಟಕ್ಕೆ ತಾವೇ ಇಲ್ಲದಂತಾಗುತ್ತವೆ. ನಿರುದ್ಯೋಗಿಗಳು ಒದಗಿಬಂದ ಉದ್ಯೋಗ ಲಾಭವನ್ನು ಸ್ವೀಕರಿಸುವ ಮನೋಭಾವವನ್ನು ತೋರಿಸಬೇಕಾಗುತ್ತದೆ. ನಿಮ್ಮ ನೆರೆಹೊರೆಯವರ ಯೋಗಕ್ಷೇಮದಲ್ಲಿ ಆಸಕ್ತಿ ವಹಿಸುವ ಸಂದರ್ಭಗಳು ಬರಲಿವೆ. ಪ್ರತಿಷ್ಠಿತರ ಭೇಟಿ ಕಾರ್ಯಾನುಕೂಲಕ್ಕೆ ಸಾಧಕವಾಗಲಿದೆ. ದೈಹಿಕ ಹಾಗೂ ಮಾನಸಿಕ ದೃಢತೆ ಮುಂದಿನ ಮುನ್ನಡೆಗೆ ಸಹಕಾರಿಯಾಗಲಿದೆ. ಅದೃಷ್ಟ ಬಣ್ಣ: ಕಂದು ಅದೃಷ್ಟ ಸಂಖ್ಯೆ: 8

ಮಕರ: ನಿರುದ್ಯೋಗಿಗಳಿಗೆ ಅನಿಶ್ಚಿತತೆ ದೂರವಾಗಲಿದೆ. ಆಕಸ್ಮಿಕ ರೀತಿಯಲ್ಲಿ ಖರ್ಚು-ವೆಚ್ಚಗಳು ಆತಂಕ ತಂದರೂ ಧನಾಗಮನದಿಂದ ಅನುಕೂಲವಾದೀತು. ದೈಹಿಕ, ಆರ್ಥಿಕ ಹಾಗೂ ಮಾನಸಿಕ ವಿಷಯಗಳನ್ನು ಸುವ್ಯವಸ್ಥೆಯಲ್ಲಿ ಇಟ್ಟುಕೊಳ್ಳಬೇಕಾದರೆ ಮರ್ಕಟ ಮನಸ್ಸನ್ನು ಕಡಿವಾಣ ಹಾಕಿ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ. ಕೌಟುಂಬಿಕವಾಗಿ ಪರಸ್ಪರ ಕೊಡುವ ಮನೋಭಾವನೆಯಿಂದ ಒಂದು ಥರದ ಹೇಳಲಾಗದ ಸಮಾಧಾನ ಸಿಗಲಿದೆ. ಸಾರ್ವಜನಿಕ ಸೇವಾಕಾರ್ಯಗಳಲ್ಲಿ ಆಸಕ್ತಿ ತೋರಿಬಂದೀತು. ಅದೃಷ್ಟ ಬಣ್ಣ: ಹಸಿರು ಅದೃಷ್ಟ ಸಂಖ್ಯೆ: 7

ಕುಂಭ: ಬದಲಾವಣೆ ಜೀವನದ ನಿಯಮ. ಬದಲಾಗುತ್ತಿರುವ ಬಾಳಿನೊಡನೆ ಹೊಂದಿಕೊಂಡು ಹೋಗಬೇಕಾಗುತ್ತದೆ. ಇಲ್ಲವಾದರೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಕುಳಿತಿರಬೇಕಾಗುತ್ತದೆ. ಕಾರ್ಯಕ್ಷೇತ್ರದ ಜವಾಬ್ದಾರಿಯನ್ನು ನೀವೇ ಹೊರಬೇಕಾದೀತು. ಮನೆಯಲ್ಲಿ ಚಿಕ್ಕ ಮಕ್ಕಳ ತುಂಟ ನಗೆಯಿಂದ ನಿಮ್ಮ ಮನಸ್ಸು , ಹೃದಯ ಅರಳಬಹುದಾಗಿದೆ. ಹಿರಿಯರ ಬಾಳಿನ ಅನುಭವ ನಿಮಗೆ ಪಾಠವಾದೀತು. ಕನ್ಯಾಪಿತೃಗಳ ಪ್ರಯತ್ನಬಲ ಸದ್ಯದಲ್ಲೇ ಸಾಧಕವಾಗಲಿದೆ. ಅದೃಷ್ಟ ಬಣ್ಣ: ನೀಲಿ ಅದೃಷ್ಟ ಸಂಖ್ಯೆ: 5

ಮೀನ: ಆರ್ಥಿಕವಾಗಿ ಸಂಪನ್ಮೂಲಗಳನ್ನು ಪ್ರಕಟಿಸಲು ಹೆಚ್ಚು ಹೆಚ್ಚು ಶ್ರಮವನ್ನು ಕೈಗೊಳ್ಳಬೇಕಾದೀತು. ಸಮತೋಲನ ಜೀವನವನ್ನು ನಡೆಸಿಕೊಂಡು ಹೋಗಲು ಅಧ್ಯಾತ್ಮಿಕತೆಯ ಚಿಂತನೆ ಅನಿವಾರ್ಯವಾದೀತು. ವಿದ್ಯಾರ್ಥಿಗಳ ಓದಿನ ಪ್ರಾಪ್ತಿ ಮುಂದಿನ ಭವಿಷ್ಯಕ್ಕೆ ಸಾಧಕವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಅವಿವೇಕಿಗಳ ಮಾತಿಗೆ ಕಿವಿಗೊಡದಿರಿ. ನಿಮ್ಮ ಮಕ್ಕಳಿಂದ ನಿಮ್ಮ ಗೌರವವು ಹೆಚ್ಚಾಗಲಿದೆ. ಅವಿವಾಹಿತರಿಗೆ ಅದೃಷ್ಟಬಲವು ಖುಲಾಯಿಸಲಿದೆ. ಅದೃಷ್ಟ ಬಣ್ಣ: ಹಳದಿ ಅದೃಷ್ಟ ಸಂಖ್ಯೆ: 3

Dina Bhavishya

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

Published On - 6:51 am, Sun, 29 August 21

ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು