Weekly Horoscope: ವಾರ ಭವಿಷ್ಯ: ಮಾ 9 ರಿಂದ 16 ರವರೆಗೆ ವಾರ ಭವಿಷ್ಯ
ಇದು ಮಾರ್ಚ್ ತಿಂಗಳ ಮೂರನೇ ವಾರವಿದಾಗಿದೆ. ೯-೦೩-೨೦೨೫ರಿಂದ ೧೬-೦೩-೨೦೨೫ರವರೆಗೆ ಇರಲಿದೆ. ರವಿ, ಶುಕ್ರ, ರಾಹು, ಬುಧರು ಮೀನ ರಾಶಿಯಲ್ಲಿ ಇರುವರು. ಈ ಗ್ರಹಗಳ ಬಲ ದುರ್ಬಲಗಳ ಆಧಾರದ ಮೇಲೆ ಶುಭಾಶುಭಫಲಗಳು ಬರಲಿದ್ದು, ಅಶುಭಫಲವುಳ್ಳವರು ದೈವಬಲವನ್ನು ತುಂಬಿಕೊಳ್ಳಬೇಕು. ಸಂಗಾತಿಯಾಗುವವರ ಜೊತೆ ಸ್ವಲ್ಪ ಕಾಲ ಕಳೆಯಲು ಅವಕಾಶ ಸಿಗಲಿದೆ.

ಬೆಂಗಳೂರು, ಮಾರ್ಚ್ 9: ಇದು ಮಾರ್ಚ್ ತಿಂಗಳ ಮೂರನೇ ವಾರವಿದಾಗಿದೆ. ೯-೦೩-೨೦೨೫ರಿಂದ ೧೬-೦೩-೨೦೨೫ರವರೆಗೆ ಇರಲಿದೆ. ರವಿ, ಶುಕ್ರ, ರಾಹು, ಬುಧರು ಮೀನ ರಾಶಿಯಲ್ಲಿ ಇರುವರು. ಈ ಗ್ರಹಗಳ ಬಲ ದುರ್ಬಲಗಳ ಆಧಾರದ ಮೇಲೆ ಶುಭಾಶುಭಫಲಗಳು ಬರಲಿದ್ದು, ಅಶುಭಫಲವುಳ್ಳವರು ದೈವಬಲವನ್ನು ತುಂಬಿಕೊಳ್ಳಬೇಕು.
ಮೇಷ ರಾಶಿ: ಇದು ಮಾರ್ಚ್ ತಿಂಗಳ ಮೂರನೇ ವಾರವಾಗಿದ್ದು ದ್ವಾದಶದಲ್ಲಿ ರವಿ, ಶುಕ್ರ, ಬುಧರಿರುವರು. ಕರ್ಮದಿಂದ ಭ್ರಷ್ಟತೆ ಬರಲಿದೆ. ಬಂದಿರುವುದು ಧೈರ್ಯದಿಂದ ಎದುರಿಸಿ, ಆತಂಕಪಡುವ ಅವಶ್ಯಕತೆಯಿಲ್ಲ. ನಿಮ್ಮನ್ನು ನೋಡಿಕೊಳ್ಳುವರಾರಿಲ್ಲ ಎಂದೆನಿಸಬಹುದು. ಇದ್ದಲ್ಲೇ ಇರುವ ಬದಲು ಏನನ್ನಾದರೂ ಮಾಡು. ನಿಮ್ಮ ಬುದ್ಧಿ, ಮನಸ್ಸುಗಳಿಗೆ ಕೆಲಸವನ್ನು ಕೊಡಿ. ದುರ್ಬುದ್ದಿಯಿಂದ ಪಡೆದುದಕ್ಕಿಂತ ಅಧಿಕ ಕಳೆದುಕೊಳ್ಳಬೇಕಾಗುವುದು. ಸಂಗಾತಿಯಾಗುವವರ ಜೊತೆ ಸ್ವಲ್ಪ ಕಾಲ ಕಳೆಯಲು ಅವಕಾಶ ಸಿಗಲಿದೆ. ಯಾವುದೇ ವಿವಾದವನ್ನು ಎಳೆದುಕೊಳ್ಳಬೇಡಿ. ನಿಮಗೆ ಕೊಟ್ಟಿರುವ ಜವಾಬ್ದಾರಿಯನ್ನು ಯೋಗ್ಯರೀತಿಯಲ್ಲಿ ಮಾಡಿ ಮುಗಿಸುವಿರಿ. ಹಣವನ್ನು ಉಳಿಸಲು ಪ್ರಯತ್ನಿಸಿದಷ್ಟೂ ಅನಿರೀಕ್ಷಿತವಾದ ದಾರಿಯಲ್ಲಿ ಖರ್ಚಾಗುವುದು. ಸುಬ್ರಹ್ಮಣನ ಬಲಕ್ಕಾಗಿ ಅವನ್ನು ಆರಾಧನೆ ಮಾಡಿ.
ವೃಷಭ ರಾಶಿ: ಮಾರ್ಚ್ ತಿಂಗಳ ಈ ವಾರದಲ್ಲಿ ನಿಮಗೆ ಶುಭ. ನಾನಾ ರೀತಿಯ ಆದಾಯವನ್ನು ಪಡೆಯುವರು. ರವಿ ಹಾಗೂ ಶುಕ್ರ ದಶೆ ಉತ್ತಮ. ನಿಮ್ಮ ಯೋಜನೆಗೆ ಎಲ್ಲವೂ ವಿರುದ್ಧವಾಗಬಹುದು. ಯಾರ ಮೇಲೂ ದ್ವೇಷವನ್ನು ಸಾಧಿಸುತ್ತ ಕೂರಬೇಡಿ. ಮನಸ್ಸು ಕೆಡುತ್ತದೆಯಷ್ಟೇ. ದ್ವಿತೀಯದಲ್ಲಿ ಕುಜನಿಂದ ನಿಮ್ಮ ಮಾತುಗಳು ಅಸತ್ಯವೆನಿಸುವುದು. ನಿಮ್ಮವರನ್ನು ಮೊದಲು ಪ್ರೀತಿಸಿ, ಆಗದಿದ್ದರೆ ಸುಮ್ಮನಿರಿ. ನಿಮಗೆ ಬರಬೇಕಾ ಹಣ ಬರಬಹುದು. ಸಂಗಾತಿಯ ಜೊತೆ ಸಣ್ಣ ವಿಚಾರಕ್ಕೆ ಮನಸ್ತಾಪ ಏಳಬಹುದು. ನಿಮ್ಮ ಮಾತನ್ನು ಕುಟುಂಬವು ತಿರಸ್ಕರಿಸಬಹುದು. ಇಷ್ಟವಾದ ವಸ್ತುಗಳನ್ನು ಖರೀದಿಸುವಿರಿ. ಉದ್ಯೋಗದ ಕಾರಣಕ್ಕೆ ದೂರಪ್ರಯಾಣವನ್ನು ಮಾಡುವಿರಿ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಅವಕಾಶವಿದೆ ನಿಮ್ಮನ್ನು ಸಮರ್ಥಿಕೊಳ್ಳಲು ಹೆಣಗಾಡುವಿರಿ. ಮಹಾಕಾಳಿಯನ್ನು ಸ್ತುತಿಸಿ.
ಮಿಥುನ ರಾಶಿ: ತಿಂಗಳ ಮೂರನೇ ವಾರದಲ್ಲಿ ನೀವು ಶೌರ್ಯ ಪರಾಕ್ರಮವನ್ನು ತೋರಿಸುವಿರಿ. ಉದ್ಯಮದಿಂದ ಸಿಗಬೇಕಾದ ಗೌರವ ಸಿಗಲಿದೆ. ಕಲಾವಿದರಿಗೆ ಸಮ್ಮಾನಗಳು ಸಿಗಲಿವೆ. ದೂರ ಪ್ರಯಾಣವು ನಿಮಗೆ ಸುಖವಲ್ಲ. ನಿರಾಶಾಭಾವದಿಂದ ಹೊರಬಂದು ಒಳ್ಳೆಯ ಕಾರ್ಯದವನ್ನು ಮಾಡುವತ್ತ ಗಮನಹರಿಸಿ. ನಕಾರಾತ್ಮಕ ಭಾವನೆಗಳಿಗೆ ದಾರಿ ಮಾಡಿ ಕೊಡಬೇಡಿ. ಎಲ್ಲವನ್ನೂ ಸಮಾಧಾನಚಿತ್ತದಿಂದ ಸ್ವೀಕರಿಸುವುದನ್ನು ಬೆಳೆಸಿಕೊಳ್ಳಿ. ಮಾನಸಿಕ ನೆಮ್ಮದಿಯೂ ಸಿಗುವುದು. ಜೀವನೂ ಸರಳವಾಗುವುದು. ಕುಟುಂಬದವರ ಜೊತೆಗೆ ಆನಂದದಿಂದ ಇರುವಿರಿ. ಕಾರ್ಯದ ಒತ್ತಡವು ಅಧಿಕವಾಗಿ ಇರಲಾರದು. ಸೀತಾಕಲ್ಯಾಣೋತ್ಸವದ ಗಳಿಗೆಯಲ್ಲಿ ಪಾಲ್ಗೊಳ್ಳುವಿರಿ.
ಕರ್ಕಾಟಕ ರಾಶಿ: ಈ ತಿಂಗಳ ಮೂರನೇ ವಾರದಲ್ಲಿ ದ್ವಿತೀಯಾಧಿಪತಿ ನವಮದಲ್ಲಿ ನಿಮ್ಮ ಮಾತಿಗೆ ಬೆಲೆ ಬರುವಂತೆ ಮಾಡುವನು. ನಿಮಗಾದ ವಂಚನೆಯನ್ನು ಸರಿ ಮಾಡಿಕೊಳ್ಳಲು ಕಾನೂನಿಗೆ ವಿರುದ್ಧವಾಗಿ ಹೋಗಬೇಡಿ, ಹುಲಿಯ ಸವಾರಿಯಾದೀತು. ವ್ಯಾಪಾರದಲ್ಲಿ ಅಧಿಕಲಾಭವನ್ನು ಗಳಿಸಲಿದ್ದೀರಿ. ಬುಧನೂ ನವಮದಲ್ಲಿ ಹಿರಿಯರಿಗಾಗಿ ಅಥವಾ ಬಂಧುಗಳಿಗಾಗಿ ಸಂಪತ್ತು ನೀಡಬೇಕಾಗುವುದು. ಸರ್ಕಾರಿ ಅಧಿಕಾರಿಗಳು ಸಂಕಷ್ಟದಲ್ಲಿ ಸಿಲುಕಿಕೊಳ್ಳುವರು. ತಂದೆ ಹಾಗೂ ತಾಯಿಯರ ಜೊತೆ ಸ್ವಲ್ಪ ಸಮಯವನ್ನು ಕಳೆಯಿರಿ. ಪ್ರೇಮನಿವೇದನೆ ಮಾಡಿದರೆ ನಕಾರಾತ್ಮಕ ಪ್ರತಿಕ್ರಿಯೆಗಳು ಬರಲಿದೆ. ಯಾವುದೂ ನಿಮ್ಮ ಆಲೋಚನೆಗೆ ಅನುಸಾರವಾಗಿ ನಡೆಯುತ್ತಿಲ್ಲವೆಂಬ ಬೇಸರವೂ ಆಗಬಹುದು.
ಸಿಂಹ ರಾಶಿ: ರವಿಯು ಈ ವಾರ ಅಷ್ಟಮದಲ್ಲಿ ಇರುವ ಕಾರಣ ಕಣ್ಣಿನ ತೊಂದರೆ, ಪೀಡೆ ಕಾಣಿಸುವುದು. ಆರೋಗ್ಯದ ಬಗ್ಗೆ ಗಮನವೂ ಹೆಚ್ಚಿರಲಿ. ವೈದ್ಯರ ಸಲಹೆಗಳನ್ನು ತಿರಸ್ಕರಿಸಬೇಡಿ. ನಿಮ್ಮ ಪ್ರತಿಭೆಯ ಪ್ರದರ್ಶನವಾಗಲಿದೆ. ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ಕಳೆಯಿರಿ. ಕುಜನು ಏಕಾದಶದಲ್ಲಿ ನಿಮಗೆ ಯಂತ್ರವಿಚಾರಕ್ಕೆ ಸಂಬಂಧಿಸಿದ್ದರಿಂದ ಲಾಭವಾಗಲಿದೆ. ಅವರು ನಿಮ್ಮ ನೋವನ್ನು ಹಂಚಿಕೊಳ್ಳುವರು. ಬಹಳ ದಿನಗಳಿಂದ ಹೋಗಬೇಕೆಂದುಕೊಂಡ ಸ್ಥಳಕ್ಕೆ ಹೋಗುವಿರಿ. ನಿಮ್ಮ ಬಗ್ಗೆ ಪೂರ್ವಾಗ್ರಹದಿಂದ ಇಟ್ಟುಕೊಂಡವರಿಗೆ ನಿಮ್ಮ ನಿಜಸ್ಥಿತಿಯನ್ನು ತಿಳಿಸುವಿರಿ. ಆರ್ಥಿಕಸ್ಥಿತಿಯು ಸುಧಾರಿಸುವುದು. ನಿಮ್ಮ ನೆಚ್ಚಿನ ವ್ಯಕ್ತಿಯನ್ನು ಭೇಟಿ ಮಾಡುವಿರಿ. ಸೂರ್ಯಾಷ್ಟಕವನ್ನು ಪಠನೆ ಮಾಡಿ.
ಕನ್ಯಾ ರಾಶಿ: ಈ ವಾರ ರಾಶಿಯ ಅಧಿಪತಿ ನೀಚಾನಾಗಿ ಒಳ್ಳೆಯ ಕಾರ್ಯವನ್ನು ಮಾಡುವ ಅವಕಾಶ ಇದ್ದರೂ ಮಾಡುವ ಮನಸ್ಸು ಇರದು. ಆಲಸ್ಯವು ನಿಮ್ಮ ಕೆಲಸವನ್ನು ಮತ್ತಷ್ಟು ವಿಳಂಬವಾಗಿಸುವುದು. ಸರ್ಕಾರದಿಂದ ಆಗಬೇಕಾಗಿದ್ದ ಕಾರ್ಯಗಳು ನಿಧಾನವಾಗಲಿದೆ. ಮನಸ್ಸು ಅತಿಯಾದ ಗೊಂದಲದಿಂದ ಇರುವುದಿ. ಕಾರ್ಯದ ನಿಮಿತ್ತ ವ್ಯರ್ಥ ಓಡಾಟವನ್ನು ಮಾಡುವಿರಿ. ರವಿಯು ಸಪ್ತಮದಲ್ಲಿ ಇದ್ದು ಸ್ತ್ರೀಯರ ನಡುವೆ ವಿರೋಧ ಬರಲಿದೆ. ಕೆಲಸವನ್ನು ಮುಗಿಸುವ ವೇಗದಲ್ಲಿ ಖರ್ಚನ್ನು ಹೆಚ್ಚು ಮಾಡಬೇಕಾಗಿಬರಬಹುದು. ಸಂಗಾತಿಯೊಡನೆ ಸಂತೋಷದಿಂದ ಸಲ್ಲಾಪಮಾಡುತ್ತ ಸಮಯವು ಕಳೆದುಹೋಗುವುದು. ಮಕ್ಕಳಿಗೆ ಪ್ರೀತಿ ತೋರಿಸಿ, ಅವರು ನಿಮ್ಮ ಮಾತನ್ನು ಕೇಳುತ್ತಾರೆ. ಜೊತೆಗೆ ಭೀತಿಯೂ ಇರಲಿ. ಅತಿಯಾದ ಸಿಹಿಯನ್ನು ತಿಂದು ದೇಹವನ್ನು ಕೆಡಿಸಿಕೊಳ್ಳಬೇಡಿ. ಹರಿನಾಮ ಸ್ಮರಣೆಯನ್ನು ಮಾಡಿ ಕೆಲಸ ಕಾರ್ಯಗಳಿಗೆ ತೆರಳಿ.
ತುಲಾ ರಾಶಿ: ಮಾರ್ಚ್ ತಿಂಗಳ ಮೂರನೇ ವಾರದಲ್ಲಿ ಅಧಿಕಾರ ವರ್ಗದಿಂದ ಪೀಡೆ ಅಧಿಕ. ವಿರೋಧವನ್ನೂ ಕಟ್ಟಿಕೊಳ್ಳಬೇಕಾಗುವುದು. ಕುಟುಂಬದಲ್ಲಿ ಸಣ್ಣ ಮಟ್ಟಿನ ಕಲಹವೂ ಆದೀತು. ಔಷಧೀಯ ವಸ್ತುಗಳ ಮಾರಾಟದಿಂದ ಹೆಚ್ಚು ಲಾಭವಾಗಲಿದೆ. ಯಾವ ಮಾತನ್ನೂ ಯೋಚಿಸದೇ ಆಡಬೇಡಿ. ಮುಂದೆ ಇದೇ ತಪ್ಪಾದೀತು. ಸಂಗಾತಿಯ ಸೌಂದರ್ಯಕ್ಕೆ ಮರುಳಾಗಿ ಹೋಗುವಿರಿ. ಕಛೇರಿಯಲ್ಲಿ ಸಂವಹನವನ್ನು ಜಾಗರೂಕತೆಯಿಂದ ನಿಭಾಯಿಸಬೇಕು. ವಕೀಲವೃತ್ತಿಯಲ್ಲಿ ಇರುವವರಿಗೆ ಜಯವು ಸಿಗಲಿದೆ. ಮಹಾದೇವಿಯ ಆರಾಧನೆಯಿಂದ ಸಕಲವೂ ಒಂದೊಂದಾಗಿಯೇ ನಿವಾರಣೆಯಾಗಲಿದೆ.
ವೃಶ್ಚಿಕ ರಾಶಿ: ಈ ರಾಶಿಗೆ ಮಾರ್ಚ್ ತಿಂಗಳ ಮೂರನೇ ರವಿಯು ಪಂಚಮದಲ್ಲಿ ಇದ್ದು ವಿದ್ಯಾಭ್ಯಾಸ ಉತ್ತಮ ರೀತಿಯಲ್ಲಿ ಸಾಗಲಿದೆ. ಹಿತಶತ್ರುಗಳಿಂದಲೂ ಸಹಕಾರ ಅನಾಯಾಸವಾಗಿ ಸಿಗಲಿಸೆದೆ. ಹೊಸ ಉದ್ಯೋಗವನ್ನು ಆರಂಭಿಸುವುದಿದ್ದರೆ ಒಳ್ಳೆಯದು. ಹೆಚ್ಚು ಮಾತನಾಡಿ ನಿಮ್ಮನ್ನು ನೀವೇ ಸಣ್ಣವರನ್ನಾಗಿ ಮಾಡಿಕೊಳ್ಳಬೇಡಿ. ವಿನ್ಯಾಸಕಾರರು ಪ್ರಶಂಸೆ ಪಡೆಯುವರು. ವ್ಯಾಪಾರದ ಕಾರಣದಿಂದ ದೂರ ಸಂಚಾರವನ್ನು ಮಾಡಲಿದ್ದೀರಿ. ನೀಮ್ಮ ವಾಹನವನ್ನು ನೀವೇ ಮಾಡುವುದು ಬೇಡ. ಪರರ ದೃಷ್ಟಿ ನಿಮ್ಮ ಮೇಲೆ ಬೀಳಲಿದೆ. ಅಸೂಯೆಪಡಲಿದ್ದಾರೆ. ನಿಮ್ಮ ಸೋಲನ್ನು ಪಾಠವಾಗಿ ಸ್ವೀಕರಿಸಿ. ಸಾಧಿಸುವ ಛಲವಿರುವವಗೆ ಯಾವುದು ಸಾಧ್ಯವಿಲ್ಲವಾಗುತ್ತದೆ? ನೆರೆ-ಹೊರೆಯವರ ಜೊತೆ ಕಲಹಕ್ಕೆ ಹೋಗಬೇಡಿ. ಏನೆಂದರೂ ಕೇಳಿಸಿಕೊಂಡು ಬನ್ನಿ. ಸುಬ್ರಹ್ಮಣ್ಯನ ಜಪ ಮಾಡಿ.
ಧನು ರಾಶಿ: ಈ ವಾರ ನಿಮಗೆ ರವಿಯು ಚತುರ್ಥದಲ್ಲಿ ಇದ್ದು ತಂದೆಯಿಂದ ಕುಟುಂಬಕ್ಕೂ ನಿಮಗೂ ಬೆಂಬಲ ದೊರೆಯುವುದು. ಅನವಶ್ಯಕ ವೆಚ್ಚವು ಇಂದಾಗಲಿದೆ. ಗಮನಿಸಿಕೊಂಡು ನಿಯಂತ್ರಿಸಿ. ಹೆಚ್ಚು ಕೋಪವನ್ನು ತೋರಿಸಲಿದ್ದೀರಿ. ಯಾರ ಒತ್ತಾಯಕ್ಕೋ ಮಣಿದು ನಿಮ್ಮ ನಿರ್ಧಾರಗಳನ್ನು ಬದಲಿಸಿಕೊಳ್ಳಬೇಡಿ. ದೀಪದ ಬುಡ ಎಂದಿಗೂ ಕತ್ತಲಾಗಿರುತ್ತದೆ. ಇನ್ನೊಂದು ದೀಪವನ್ನು ಹಚ್ಚಿ. ಕತ್ತಲೆ ದೂರವಾಗುತ್ತದೆ. ಹಿಡಿದ ಕೆಲಸವನ್ನು ಬಿಡದೆ ಮುನ್ನಡೆಸುವ ಜಾಯಮಾನವು ನಿಮ್ಮ ಯಶಸ್ಸಿನ ಗುಟ್ಟುಗಳಲ್ಲೊಂದು. ಹುಟ್ಟಿದ ಪ್ರೇಮವು ಕೆಲವು ಸಮಯದ ವೆರೆಗೆ ಕುಂಟುವುದು. ಶುಕ್ರದೆಶೆ ಶುಭದಾಯಕ. ಎಂತಹ ಸಂದರ್ಭದಲ್ಲಿಯೂ ಉದ್ವೇಗಕ್ಕೆ ಒಳಗಾಗಬೇಡಿ. ಎದೆ ನೋವು ಕಾಣಿಸಿಕೊಂಡೀತು. ಶಸ್ತ್ರಚಿಕಿತ್ಸೆಯವರೆಗೂ ಹೋಗಬಹುದು. ನಾಗ ದೇವರಿಗೆ ಹಾಲೆರೆದು ಪ್ರದಕ್ಷಿಣೆ ಬನ್ನಿ.
ಮಕರ ರಾಶಿ: ರಾಶಿ ಚಕ್ರದ ಈ ರಾಶಿಯವರಿಗೆ ರವಿಯ ಬದಲಾವಣೆಯು ನಿಮ್ಮ ಕಾರ್ಯದಲ್ಲಿ ಬುದ್ಧಿವಂತಿಕೆಯಿಂದ ಮಾಡುವವನು. ಅಪರೂಪಕ್ಕೆ ಸಿಕ್ಕ ಸ್ನೇಹಿತರು ನಿಮ್ಮ ಬಳಿ ಹಣವನ್ನು ಖಾಲಿಮಾಡಿಸುವರು. ದಾಂಪತ್ಯಜೀವನವು ಜೀವನ್ಮರಣದ ಮಧ್ಯದಲ್ಲಿ ಒದ್ದಾಗುತ್ತಿದ್ದು ಬದುಕಿಸಿಕೊಳ್ಳಿ. ಸಹೋದರ ಸಹೋದರಿಯರ ನಡುವಿನ ಬಾಂಧವ್ಯ ಚೆನ್ನಾಗಿರುವುದು. ನಿಮ್ಮ ನ್ಯೂನತೆಗಳನ್ನು ಇನ್ನೊಬ್ಬರಿಗೆ ಹೇಳಬೇಡಿ. ಅವರು ಬಾಯಿಗೆ ಸಿಕ್ಕ ರಸಗವಳದಂತೆ ಚಪ್ಪರಿಸಿ ಸೇವಿಸುತ್ತಿರುತ್ತಾರೆ. ಉದ್ಯೋಗವನ್ನು ಚೆನ್ನಾಗಿ ನಿರ್ವಹಣೆ ಮಾಡುವಿರಿ. ಹನುಮಾನ್ ಚಾಲೀಸ್ ಪಠಿಸಿ.
ಕುಂಭ ರಾಶಿ: ಮೂರನೇ ವಾರದಲ್ಲಿ ನಿಮಗೆ ಮಿಶ್ರಫಲ. ಶನಿಯು ಇದೇ ರಾಶಿಯಲ್ಲಿ ಇದ್ದು ಅನ್ಯ ಸ್ತ್ರೀಯರ ಒಡನಾಟ ಹೆಚ್ಚಾಗಿರುವುದು. ನಿಮ್ಮ ಗಟ್ಟಿಯಾದ ಸಂಕಲ್ಪವು ಯಶಸ್ಸಿನ ಗುಟ್ಟೂ ಆಗಿರಲಿದೆ. ಹಣವನ್ನು ಗಳಿಸುವ ಆಸೆಯು ತೀರ್ವವಾಗಿದ್ದರೂ ಸಫಲವಾಗುವುದಿಲ್ಲ. ಸಾಲದ ವಿಚಾರ ಬಂದರೆ ಮೌನವಹಿಸಿ, ಎದ್ದು ಹೋಗಿ ಅಥವಾ ವಿಷಯಾಂತರಿಸಿ. ಕಲಹಕ್ಕೆ ದಾರಿ ಮಾಡಿ ಕೊಡಬೇಡಿ. ಪಿತ್ರಾರ್ಜಿತ ಸಂಪತ್ತು ನಿಮಗೆ ಉಪಯೋಗಕ್ಕೆ ಬರಲಿದೆ. ಸಂಗಾತಿಯು ನಿಮ್ಮ ಮೇಲೆ ಬೇಸರಗೊಂಡಾನು. ನಿಮಗೆ ಸಿಗುವ ಸಂಪತ್ತು ನಿಮ್ಮ ಶ್ರಮಕ್ಕೆ ಅನುಸಾರವಾಗಿ ಸಿಗಲಿದೆ. ಬರೆವಣಿಗೆ ಅಥವಾ ಮಾತಿನಿಂದ ನಿಮಗೆ ಕೀರ್ತಿಯು ಲಭಿಸುವುದು. ಸಾಲ ಮಾಡಿಯೋ ಅನ್ಯರ ಸಂಪತ್ತಿನಿಂದಲೋ ಬದುಕುವಿರಿ. ಶನೈಶ್ಚರನ ಸ್ತೋತ್ರ ಪಠಿಸಿ.
ಮೀನ ರಾಶಿ; ಮಾರ್ಚ್ ತಿಂಗಳ ಮೂರನೇ ವಾರದಲ್ಲಿ ನಿಮ್ಮ ರಾಶಿಗೆ ರವಿಯ ಪ್ರವೇಶವಾಗಲಿದೆ. ನೀರಿನ ವ್ಯಾಪಾರದಲ್ಲಿ ಆದಾಯ ಅಧಿಕ. ಬದುಕು ಸುಂದರವಾದ ಮನೆಯ ಕಿಟಕಿ ಇದ್ದಂತೆ. ತೆರೆದರೆ ಬೆಳಕು, ತೆರೆಯದಿದ್ದರೆ ಕತ್ತಲು ಇರುತ್ತದೆ ಎನ್ನುವುದನ್ನು ಅರಿತುಕೊಳ್ಳಿ. ಆಯ್ಕೆಯನ್ನು ನೀವೇ ಮಾಡಿ. ಹಾಗೆಯೇ ಶ್ರಮಪಟ್ಟರೆ ಸುಖ, ಶ್ರಮಪಡದಿದ್ದರೆ ಕಷ್ಟ. ವಿವೇಚನೆಯನ್ನು ಮೀರಿ ಕೆಲಸವನ್ನು ಮಾಡಬೇಡಿ. ಜೀವನದಲ್ಲಿ ಮನುಷ್ಯ ಎಷ್ಟು ನೋವು ಅವಮಾನ ಪಡುತ್ತಾನೋ, ಅಷ್ಟೇ ಚೆನ್ನಾಗಿ ಬದುಕುತ್ತಾನೆ ಎಂಬುದು ಸತ್ಯವಿಚಾರವಾಗಿದೆ. ಛಲವನ್ನು ಇಟ್ಟುಕೊಳ್ಳಿ. ಬದಲಾವಣೆಯೇ ಶಾಶ್ವತ ಎನ್ನುವ ವಾಕ್ಯವನ್ನು ಸ್ಮರಿಸುತ್ತ ಮುಂದಡಿಯಿಡಿ. ನೆಮ್ಮದಿ ನಿಮ್ಮೆದುರು ಇರಲಿದೆ. ಸಹಜತೆಗೆ ಹೆಚ್ಚು ಒತ್ತು ಕೊಡುವಿರಿ. ಶಿವಪಂಚಾಕ್ಷರಸ್ತೋತ್ರವನ್ನು ಪಠಿಸಿ.
– ಲೋಹಿತ ಹೆಬ್ಬಾರ್ – 8762924271 (what’s app only)